Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಶಾಸ್ತ್ರದ ಪ್ರಕಾರ ಹೀಗೆ ಮಾಡಿದರೆ ನಮ್ಮ ಆಕರ್ಷಣೆ ಹೆಚ್ಚುತ್ತದೆ ಅಂತೆ!
ತಮ್ಮ ಸೌಂದರ್ಯದಿಂದ ಇತರ ಗಮನ ಸೆಳೆಯಲು ಯಾರಿಗೆ ತಾನೇ ಇಷ್ಟವಿಲ್ಲ. ದೇವರು ನೀಡಿರುವ ಅಂದಕ್ಕೆ ಇನ್ನಷ್ಟು ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲು ತರಹೇವಾರಿ ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಜ್ಞಾನದ ಜತೆಗೆ ಸೌಂದರ್ಯ ಹಲವಾರು ಸಂದರ್ಭಗಳಲ್ಲಿ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ.
ಹೀಗೆ ಜೀವನದ ಹಲವಾರು ಹಂತದಲ್ಲಿ ನಮ್ಮ ಸಾಧನೆ, ಗೆಲುವನ್ನು ನಿರ್ಧರಿಸುವ ಹಾಗೂ ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬುದನ್ನು ಜ್ಯೋತಿಶಾಸ್ತ್ರ ಸಹ ಹೇಳುತ್ತದೆ.
ಜ್ಯೋತಿಶಾಸ್ತ್ರದ ಪ್ರಕಾರ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಸೌಂದರ್ಯ ಹಾಗೂ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಬಹುದು, ಹೇಗೆ ಮುಂದೆ ನೋಡೋಣ:

1. ಲಕ್ಷ್ಮಿ ದೇವಿ ಪೂಜಿಸಿ
ವೇದ ಜ್ಯೋತಿಷ್ಯದ ಪ್ರಕಾರ ಲಕ್ಷ್ಮಿ ದೇವಿಯು ಶುಕ್ರ ಗ್ರಹದ ಆಡಳಿತ ದೇವತೆ ಎಂದು ಹೇಳುತ್ತದೆ. ಅವಳನ್ನು ಪೂಜಿಸುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಶುಕ್ರನ ಗುಣಗಳು ಬರುತ್ತದೆ. ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯುತ್ತಾರೆ. ಆದ್ದರಿಂದ, ಇದು ಹಣಕಾಸಿನ ಲಾಭವನ್ನು ಸಹ ನಿಮಗೆ ತರುತ್ತದೆ.

2. ಬೀಜ ಮಂತ್ರ ಪಠಿಸಿ
ಬೀಜ ಮಂತ್ರವು ನಿಮ್ಮಲ್ಲಿ ನಿರ್ದಿಷ್ಟ ತರಂಗಾಂತರದ ಕಾಸ್ಮಿಕ್ ಶಕ್ತಿಯನ್ನು ತುಂಬಲು ಅತ್ಯಂತ ಶಕ್ತಿಯುತ ಸಾಧನವಾಗಿದೆ. ಶುಕ್ರ ಗ್ರಹದ ಬೀಜ್ ಮಂತ್ರವನ್ನು ಸರಿಯಾಗಿ ಜಪಿಸಿದಾಗ, ನಿಮ್ಮನ್ನು ಆಕರ್ಷಕವಾಗಿಸುತ್ತದೆ ಮತ್ತು ಜನರು ನಿಮ್ಮನ್ನು ಸಕಾರಾತ್ಮಕವಾಗಿ ನೋಡಲು ಪ್ರಾರಂಭಿಸುತ್ತಾರೆ. ಇದರ ಸಂಪೂರ್ಣ ಲಾಭ ಪಡೆಯಲು, ಈ ಮಂತ್ರವನ್ನು "ಓಂ ದ್ರಂ ದ್ರಂ ದ್ರೌಂ ಸ ಶುಕ್ರಾಯ ನಮಃ" ಅನ್ನು 40 ದಿನಗಳಲ್ಲಿ 20,000 ಬಾರಿ ಪಠಿಸಿ.

3. ಶುಕ್ರವಾರ ಉಪವಾಸ ಮಾಡಿ
ಶುಕ್ರವಾರವನ್ನು ಶುಕ್ರ ಗ್ರಹ ಆಳುತ್ತದೆ, ಆದ್ದರಿಂದ ಶುಕ್ರವಾರದಂದು ಉಪವಾಸ ಮಾಡಿ. ಈ ದಿನ ಉಪವಾಸ ಮಾಡುವುದರಿಂದ ಶುಕ್ರನ ಧನಾತ್ಮಕ ಶಕ್ತಿ ಬರುತ್ತದೆ.

4. ಶ್ರೀ ಸೂಕ್ತಂ
ಶ್ರೀ ಸೂಕ್ತಂ ಋಗ್ವೇದದ ಅನುಬಂಧಗಳ ಭಾಗವಾಗಿದೆ. ಇದು ಪುರಾತನ ಪಠ್ಯವಾಗಿದ್ದು, ಇದು ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಇದು ನಿಮ್ಮ ಶುಕ್ರ ಗ್ರಹ ವರ್ಧನೆಯ ಮೇಲೆ ಅತ್ಯಂತ ಪ್ರಭಾವಶಾಲಿ ಪರಿಣಾಮವನ್ನು ಹೊಂದಿದೆ. ಇದು ನಿಮ್ಮ ವ್ಯಕ್ತಿತ್ವ, ನೋಟದಿಂದ ಇತರರ ಮೇಲೆ ನೀವು ಪ್ರಭಾವ ಬೀರುವಂತೆ ಮಾಡುತ್ತದೆ.

5. ಆರು ಮುಖದ ರುದ್ರಾಕ್ಷಿ ಧರಿಸಿ
ಪುರಾಣವು ರುದ್ರಾಕ್ಷಿಯನ್ನು ಶಿವನ ಕಣ್ಣೀರು ಎಂದು ಕರೆಯುತ್ತದೆ. ಆರು ಮುಖಿ ರುದ್ರಾಕ್ಷವನ್ನು ಧರಿಸುವುದರಿಂದ ಶುಕ್ರನಿಗೆ ಬಲವನ್ನು ನೀಡುತ್ತದೆ ಮತ್ತು ಅದರ ದೌರ್ಬಲ್ಯದಿಂದ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಸೂಚನೆ: ಮೇಲಿನ ಸಲಹೆಗಳು ಜ್ಯೋತಿಶಾಸ್ತ್ರದ ಪ್ರಕಾರ ಹೇಳಲಾಗಿರುವ ನಂಬಿಕೆಗಳು. ಇದನ್ನು ನಂಬುವುದು ಹಾಗೂ ಪಾಲಿಸುವುದು ಅವರ ಸ್ವಂತ ಇಚ್ಛೆಗೆ ಅನುಗುಣವಾಗಿದೆ.



Click it and Unblock the Notifications