Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 3ಕ್ಕೆ ಅಮಲಕಿ ಏಕಾದಶಿ: ಏಕಾದಶಿಯಂದು ಹೀಗೆ ಮಾಡಿದರೆ ಸಂಪತ್ತು ಹೆಚ್ಚುವುದು
ವರ್ಷದಲ್ಲಿ 24 ಏಕಾದಶಿಗಳು ಬರುತ್ತದೆ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಮಾರ್ಚ್ 3ಕ್ಕೆ ಅಮಲಕ್ಕಿ ಏಕಾದಶಿ ಆಚರಿಸಲಾಗುವುದು.

ಈ ಅಮಲಕಿ ಏಕಾದಶಿಯನ್ನು ಶುಕ್ರವಾರ, ಮಾರ್ಚ್ 3, 2023 ರಂದು ಆಚರಿಸಲಾಗುತ್ತದೆ. ಈ ಅಮಲಕಿ ಏಕಾದಶಿಯ ಮಹತ್ವವೇನು, ಅಮಲಕಿ ಏಕಾದಶಿಗೆ ಪೂಜಾ ಮುಹೂರ್ತ ಹಾಗೂ ಪಾರಣ ಸಮಯ ಯಾವಾಗ, ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಏಕಾದಶಿ ತಿಥಿ
ಏಕಾದಶಿ ತಿಥಿ ಆರಂಭ - ಮಾರ್ಚ್ 02, 2023 ಬೆಳಗ್ಗೆ 06:39ರಿಂದ
ಏಕಾದಶಿ ತಿಥಿ ಮುಕ್ತಾಯ - ಮಾರ್ಚ್ 03, ಬೆಳಗ್ಗೆ 09:11ಕ್ಕೆ
ಪಾರಣ ಸಮಯ: ಮಾರ್ಚ್ 4 ಬೆಳಗ್ಗೆ 06:34ರಿಂದ 08:57ರವರೆಗೆ

ಅಮಲಕಿ ಏಕಾದಶಿ ಮಹತ್ವ
ಅಮಲಕಿ ಏಕಾದಶಿಯನ್ನು ಯಾರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೋ ಅವರಿಗೆ ಸಂತೋಷ, ನೆಮ್ಮದಿ ಸಿಗುವುದು, ಮನೆಯಲ್ಲಿ ಸಮೃದ್ಧಿ ಹೆಚ್ಚುವುದು, ಅದೃಷ್ಟ ಕೈ ಹಿಡಿಯುವುದು. ಈ ಏಕಾದಶಿಯನ್ನು ಮಾಡಿದರೆ ಪಾಪ ಕಳೆದು ಮೋಕ್ಷ ಸಿಗುವುದು, ಇವರಿಗೆ ಶ್ರೀ ವಿಷ್ಣುವಿನ ಆಶೀರ್ವಾದ ಇರುತ್ತದೆ.
ಆಮ್ಲ ಎಂದರೆ ನೆಲ್ಲಿಕಾಯಿ, ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನ ಮಾಡಲಾಗುವುದು. ನೆಲ್ಲಿಕಾಯಿ ಗಿಡವನ್ನು ಪೂಜಿಸುವುದರಿಂದ ಭಕ್ತರ ಬಯಕೆ ಈಡೇರುವುದು, ಸಕ್ಲಪ ನೆರವೇರುವುದು.

ಅಮಲಕಿ ಏಕಾದಶಿ ಉಪವಾಸದ ಪೂಜಾ ವಿಧಾನ
ಏಕಾದಶಿಯ ದಿನ ಬೇಗನೆ ಏಳಬೇಕು. ಎದ್ದು ಸ್ನಾನ ಮಾಡಿ ವಿಷ್ಣು ಮೂರ್ತಿಯನ್ನು ಶುಚಿಗೊಳಿಸಿ, ಪೂಜೆಯ ಸ್ಥಳವನ್ನು ಸ್ವಚ್ಛ ಮಾಡಬೇಕು. ನಂತರ ಉಪವಾಸ ಸಂಕಲ್ಪ ಮಾಡಿ.
* ನೆಲ್ಲಿಕಾಯಿ ಮರಕ್ಕೆ ಅಲಂಕರಿಸಿ ಪೂಜೆ ಮಾಡಬೇಕು.
* ಶ್ರೀ ವಿಷ್ಣುವಿಗೆ ಹೂ ಹಣ್ಣುಗಳನ್ನು ಅರ್ಪಿಸಿ.
* ದೇವರಿಗೆ ಪ್ರಸಾದವನ್ನಾಗಿ ನೆಲ್ಲಿಕಾಯಿ ಅರ್ಪಿಸಿ.
ದಾನ ಮಾಡಿ
* ಈ ದಿನ ಬಡವರಿಗೆ ದಾನ ಮಾಡಿ.
* ಆಹಾರ, ಬಟ್ಟೆಗಳ ದಾನ ಮಾಡಿ

ಅಮಲಕಿ ಏಕಾದಶಿ ವ್ರತ ಕತೆ
ಪೌರಾಣಿಕ ಕತೆಯ ಪ್ರಕಾರ ರಾಜ ಮಂಧಾತನು ಒಮ್ಮೆ ದಧಿಚಿ ಎಂಬ ಋಷಿಯನ್ನು ಭೇಟಿಯಾಗಿ ತನ್ನ ರಾಜ್ಯದ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳುತ್ತಾನೆ. ಆಗ ಋಷಿಯು ಅಮಲಕಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ರಾಜ ಭಕ್ತಿಯಿಂದ ಅಮಲಕಿ ಏಕಾದಶಿ ವ್ರತವನ್ನು ಆಚರಿಸಿದಾಗ ಅವನ ರಾಜ್ಯದ ಕಷ್ಟಗಳು ದೂರಾಗುವುದು, ತನ್ನ ಶತ್ರುಗಳ ಮೇಲೆ ಕೂಡ ಜಯ ಸಾಧಿಸುತ್ತಾನೆ.



Click it and Unblock the Notifications