Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಾರ್ಚ್ 3ಕ್ಕೆ ಅಮಲಕಿ ಏಕಾದಶಿ: ಏಕಾದಶಿಯಂದು ಹೀಗೆ ಮಾಡಿದರೆ ಸಂಪತ್ತು ಹೆಚ್ಚುವುದು
ವರ್ಷದಲ್ಲಿ 24 ಏಕಾದಶಿಗಳು ಬರುತ್ತದೆ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಮಾರ್ಚ್ 3ಕ್ಕೆ ಅಮಲಕ್ಕಿ ಏಕಾದಶಿ ಆಚರಿಸಲಾಗುವುದು.

ಈ ಅಮಲಕಿ ಏಕಾದಶಿಯನ್ನು ಶುಕ್ರವಾರ, ಮಾರ್ಚ್ 3, 2023 ರಂದು ಆಚರಿಸಲಾಗುತ್ತದೆ. ಈ ಅಮಲಕಿ ಏಕಾದಶಿಯ ಮಹತ್ವವೇನು, ಅಮಲಕಿ ಏಕಾದಶಿಗೆ ಪೂಜಾ ಮುಹೂರ್ತ ಹಾಗೂ ಪಾರಣ ಸಮಯ ಯಾವಾಗ, ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಏಕಾದಶಿ ತಿಥಿ
ಏಕಾದಶಿ ತಿಥಿ ಆರಂಭ - ಮಾರ್ಚ್ 02, 2023 ಬೆಳಗ್ಗೆ 06:39ರಿಂದ
ಏಕಾದಶಿ ತಿಥಿ ಮುಕ್ತಾಯ - ಮಾರ್ಚ್ 03, ಬೆಳಗ್ಗೆ 09:11ಕ್ಕೆ
ಪಾರಣ ಸಮಯ: ಮಾರ್ಚ್ 4 ಬೆಳಗ್ಗೆ 06:34ರಿಂದ 08:57ರವರೆಗೆ

ಅಮಲಕಿ ಏಕಾದಶಿ ಮಹತ್ವ
ಅಮಲಕಿ ಏಕಾದಶಿಯನ್ನು ಯಾರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೋ ಅವರಿಗೆ ಸಂತೋಷ, ನೆಮ್ಮದಿ ಸಿಗುವುದು, ಮನೆಯಲ್ಲಿ ಸಮೃದ್ಧಿ ಹೆಚ್ಚುವುದು, ಅದೃಷ್ಟ ಕೈ ಹಿಡಿಯುವುದು. ಈ ಏಕಾದಶಿಯನ್ನು ಮಾಡಿದರೆ ಪಾಪ ಕಳೆದು ಮೋಕ್ಷ ಸಿಗುವುದು, ಇವರಿಗೆ ಶ್ರೀ ವಿಷ್ಣುವಿನ ಆಶೀರ್ವಾದ ಇರುತ್ತದೆ.
ಆಮ್ಲ ಎಂದರೆ ನೆಲ್ಲಿಕಾಯಿ, ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನ ಮಾಡಲಾಗುವುದು. ನೆಲ್ಲಿಕಾಯಿ ಗಿಡವನ್ನು ಪೂಜಿಸುವುದರಿಂದ ಭಕ್ತರ ಬಯಕೆ ಈಡೇರುವುದು, ಸಕ್ಲಪ ನೆರವೇರುವುದು.

ಅಮಲಕಿ ಏಕಾದಶಿ ಉಪವಾಸದ ಪೂಜಾ ವಿಧಾನ
ಏಕಾದಶಿಯ ದಿನ ಬೇಗನೆ ಏಳಬೇಕು. ಎದ್ದು ಸ್ನಾನ ಮಾಡಿ ವಿಷ್ಣು ಮೂರ್ತಿಯನ್ನು ಶುಚಿಗೊಳಿಸಿ, ಪೂಜೆಯ ಸ್ಥಳವನ್ನು ಸ್ವಚ್ಛ ಮಾಡಬೇಕು. ನಂತರ ಉಪವಾಸ ಸಂಕಲ್ಪ ಮಾಡಿ.
* ನೆಲ್ಲಿಕಾಯಿ ಮರಕ್ಕೆ ಅಲಂಕರಿಸಿ ಪೂಜೆ ಮಾಡಬೇಕು.
* ಶ್ರೀ ವಿಷ್ಣುವಿಗೆ ಹೂ ಹಣ್ಣುಗಳನ್ನು ಅರ್ಪಿಸಿ.
* ದೇವರಿಗೆ ಪ್ರಸಾದವನ್ನಾಗಿ ನೆಲ್ಲಿಕಾಯಿ ಅರ್ಪಿಸಿ.
ದಾನ ಮಾಡಿ
* ಈ ದಿನ ಬಡವರಿಗೆ ದಾನ ಮಾಡಿ.
* ಆಹಾರ, ಬಟ್ಟೆಗಳ ದಾನ ಮಾಡಿ

ಅಮಲಕಿ ಏಕಾದಶಿ ವ್ರತ ಕತೆ
ಪೌರಾಣಿಕ ಕತೆಯ ಪ್ರಕಾರ ರಾಜ ಮಂಧಾತನು ಒಮ್ಮೆ ದಧಿಚಿ ಎಂಬ ಋಷಿಯನ್ನು ಭೇಟಿಯಾಗಿ ತನ್ನ ರಾಜ್ಯದ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳುತ್ತಾನೆ. ಆಗ ಋಷಿಯು ಅಮಲಕಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ರಾಜ ಭಕ್ತಿಯಿಂದ ಅಮಲಕಿ ಏಕಾದಶಿ ವ್ರತವನ್ನು ಆಚರಿಸಿದಾಗ ಅವನ ರಾಜ್ಯದ ಕಷ್ಟಗಳು ದೂರಾಗುವುದು, ತನ್ನ ಶತ್ರುಗಳ ಮೇಲೆ ಕೂಡ ಜಯ ಸಾಧಿಸುತ್ತಾನೆ.



Click it and Unblock the Notifications