Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಾರ್ಚ್ 3ಕ್ಕೆ ಅಮಲಕಿ ಏಕಾದಶಿ: ಏಕಾದಶಿಯಂದು ಹೀಗೆ ಮಾಡಿದರೆ ಸಂಪತ್ತು ಹೆಚ್ಚುವುದು
ವರ್ಷದಲ್ಲಿ 24 ಏಕಾದಶಿಗಳು ಬರುತ್ತದೆ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಮಾರ್ಚ್ 3ಕ್ಕೆ ಅಮಲಕ್ಕಿ ಏಕಾದಶಿ ಆಚರಿಸಲಾಗುವುದು.

ಈ ಅಮಲಕಿ ಏಕಾದಶಿಯನ್ನು ಶುಕ್ರವಾರ, ಮಾರ್ಚ್ 3, 2023 ರಂದು ಆಚರಿಸಲಾಗುತ್ತದೆ. ಈ ಅಮಲಕಿ ಏಕಾದಶಿಯ ಮಹತ್ವವೇನು, ಅಮಲಕಿ ಏಕಾದಶಿಗೆ ಪೂಜಾ ಮುಹೂರ್ತ ಹಾಗೂ ಪಾರಣ ಸಮಯ ಯಾವಾಗ, ಪೂಜಾ ವಿಧಿಗಳೇನು ಎಂದು ನೋಡೋಣ ಬನ್ನಿ:

ಏಕಾದಶಿ ತಿಥಿ
ಏಕಾದಶಿ ತಿಥಿ ಆರಂಭ - ಮಾರ್ಚ್ 02, 2023 ಬೆಳಗ್ಗೆ 06:39ರಿಂದ
ಏಕಾದಶಿ ತಿಥಿ ಮುಕ್ತಾಯ - ಮಾರ್ಚ್ 03, ಬೆಳಗ್ಗೆ 09:11ಕ್ಕೆ
ಪಾರಣ ಸಮಯ: ಮಾರ್ಚ್ 4 ಬೆಳಗ್ಗೆ 06:34ರಿಂದ 08:57ರವರೆಗೆ

ಅಮಲಕಿ ಏಕಾದಶಿ ಮಹತ್ವ
ಅಮಲಕಿ ಏಕಾದಶಿಯನ್ನು ಯಾರು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೋ ಅವರಿಗೆ ಸಂತೋಷ, ನೆಮ್ಮದಿ ಸಿಗುವುದು, ಮನೆಯಲ್ಲಿ ಸಮೃದ್ಧಿ ಹೆಚ್ಚುವುದು, ಅದೃಷ್ಟ ಕೈ ಹಿಡಿಯುವುದು. ಈ ಏಕಾದಶಿಯನ್ನು ಮಾಡಿದರೆ ಪಾಪ ಕಳೆದು ಮೋಕ್ಷ ಸಿಗುವುದು, ಇವರಿಗೆ ಶ್ರೀ ವಿಷ್ಣುವಿನ ಆಶೀರ್ವಾದ ಇರುತ್ತದೆ.
ಆಮ್ಲ ಎಂದರೆ ನೆಲ್ಲಿಕಾಯಿ, ಈ ದಿನ ನೆಲ್ಲಿಕಾಯಿ ಗಿಡಕ್ಕೆ ಪೂಜೆಯನ್ನ ಮಾಡಲಾಗುವುದು. ನೆಲ್ಲಿಕಾಯಿ ಗಿಡವನ್ನು ಪೂಜಿಸುವುದರಿಂದ ಭಕ್ತರ ಬಯಕೆ ಈಡೇರುವುದು, ಸಕ್ಲಪ ನೆರವೇರುವುದು.

ಅಮಲಕಿ ಏಕಾದಶಿ ಉಪವಾಸದ ಪೂಜಾ ವಿಧಾನ
ಏಕಾದಶಿಯ ದಿನ ಬೇಗನೆ ಏಳಬೇಕು. ಎದ್ದು ಸ್ನಾನ ಮಾಡಿ ವಿಷ್ಣು ಮೂರ್ತಿಯನ್ನು ಶುಚಿಗೊಳಿಸಿ, ಪೂಜೆಯ ಸ್ಥಳವನ್ನು ಸ್ವಚ್ಛ ಮಾಡಬೇಕು. ನಂತರ ಉಪವಾಸ ಸಂಕಲ್ಪ ಮಾಡಿ.
* ನೆಲ್ಲಿಕಾಯಿ ಮರಕ್ಕೆ ಅಲಂಕರಿಸಿ ಪೂಜೆ ಮಾಡಬೇಕು.
* ಶ್ರೀ ವಿಷ್ಣುವಿಗೆ ಹೂ ಹಣ್ಣುಗಳನ್ನು ಅರ್ಪಿಸಿ.
* ದೇವರಿಗೆ ಪ್ರಸಾದವನ್ನಾಗಿ ನೆಲ್ಲಿಕಾಯಿ ಅರ್ಪಿಸಿ.
ದಾನ ಮಾಡಿ
* ಈ ದಿನ ಬಡವರಿಗೆ ದಾನ ಮಾಡಿ.
* ಆಹಾರ, ಬಟ್ಟೆಗಳ ದಾನ ಮಾಡಿ

ಅಮಲಕಿ ಏಕಾದಶಿ ವ್ರತ ಕತೆ
ಪೌರಾಣಿಕ ಕತೆಯ ಪ್ರಕಾರ ರಾಜ ಮಂಧಾತನು ಒಮ್ಮೆ ದಧಿಚಿ ಎಂಬ ಋಷಿಯನ್ನು ಭೇಟಿಯಾಗಿ ತನ್ನ ರಾಜ್ಯದ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳುತ್ತಾನೆ. ಆಗ ಋಷಿಯು ಅಮಲಕಿ ಏಕಾದಶಿ ಆಚರಿಸುವಂತೆ ಸೂಚಿಸುತ್ತಾನೆ. ರಾಜ ಭಕ್ತಿಯಿಂದ ಅಮಲಕಿ ಏಕಾದಶಿ ವ್ರತವನ್ನು ಆಚರಿಸಿದಾಗ ಅವನ ರಾಜ್ಯದ ಕಷ್ಟಗಳು ದೂರಾಗುವುದು, ತನ್ನ ಶತ್ರುಗಳ ಮೇಲೆ ಕೂಡ ಜಯ ಸಾಧಿಸುತ್ತಾನೆ.



Click it and Unblock the Notifications











