Just In
- 48 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 1 hr ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 13 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
15-7-2019: ಸೋಮವಾರದ ದಿನ ಭವಿಷ್ಯ
ತಿಳುವಳಿಕೆ ಎನ್ನುವುದು ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನಾವು ಮಾತನಾಡುವ ಪ್ರತಿಯೊಂದು ವಿಚಾರವು ನಮ್ಮ ವಯಸ್ಸಿಗೆ ಹಾಗೂ ಪ್ರೌಢಿಮೆಗೆ ತಕ್ಕಂತೆ ಇರಬೇಕು. ವಯಸ್ಸಿಗೆ ಸೂಕ್ತವಲ್ಲದ ರೀತಿಯಲ್ಲಿ, ತಿಳುವಳಿಕೆ ಶೂನ್ಯರಂತೆ ಮಾತನಾಡಿದರೆ ನಮ್ಮ ಮಾತಿಗೆ ಹಾಗೂ ವ್ಯಕ್ತಿತ್ವಕ್ಕೆ ಯಾವುದೇ ಗೌರವ ಇರುವುದಿಲ್ಲ. ನಮ್ಮ ಸ್ಥಾನಕ್ಕೆ ತಕ್ಕಂತೆ ತಿಳುವಳಿಕೆ ಪೂರ್ಣರಾಗಿ ವರ್ತಿಸುವುದರಿಂದ ಸುತ್ತಲಿನ ಜನರಿಗೂ ಯಾವುದೇ ಗೊಂದಲ ಉಂಟಾಗದು.
ಜೊತೆಗೆ ಜೀವನವನ್ನು ಸಂಪೂರ್ಣವಾಗಿ ಆನಂದಿಸಬಹುದು. ವಾರದ ಆರಂಭದ ದಿನವಾದ ಇಂದು ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಬಯಸುವುದು ಸಹಜ. ಆದರೆ ಕೆಲವು ಗ್ರಹಗತಿಗಳಿಗೆ ಅನುಗುಣವಾಗಿ ಭವಿಷ್ಯದಲ್ಲಿ ಬದಲಾವಣೆಯನ್ನು ಕಾಣಲೇ ಬೇಕಾಗುತ್ತದೆ. ಈ ದಿನ ನಿಮ್ಮ ರಾಶಿ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗಲಿದೆ ಎನ್ನುವುದನ್ನು ತಿಳಿಯಲು ಮುಂದೆ ನೀಡಲಿರುವ ರಾಶಿ ಭವಿಷ್ಯವನ್ನು ಅರಿಯಿರಿ... ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 8050559094
ಮೇಷ( 15 july 2019)
ಪದೋನ್ನತಿಗೆ ಕಾರಣವಾಗುವ ಅನೇಕ ವಿಚಾರಗಳು ಅದೃಷ್ಟವಶಾತ್ ನಿಮ್ಮ ಪ್ರಬಲ ಅಸ್ತ್ರಗಳಾಗಿವೆ. ಇವು ನಿಮ್ಮ ವಿರೋಧಿಗಳ ವಿರುದ್ಧ ವಾಗ್ದಾಳಿ ಮಾಡಲು ಸಹಕಾರಿ ಯಾಗುವುವು.ಬಾಳ ಪಯಣದ ಸಂದರ್ಭದಲ್ಲಿ ಶುಭಕ್ಕೆ ಮುನ್ನುಡಿ ಬರೆಯುವ ದಿನವಾಗಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲಿದೆ. ಉಷ್ಣ ಸಂಬಂಧಿ ತೊಂದರೆಗಳ ನಿವಾರಣೆಗಾಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಯಾರನ್ನೋ ಮೆಚ್ಚಿಸುವುದಕ್ಕಾಗಿ ನಿಮ್ಮ ತನವನ್ನು ಬಿಡಲು ಮುಂದಾಗುವಿರಿ. ನಿಮ್ಮ ನಾಯಕನನ್ನು ಆರಿಸುವಲ್ಲಿ ನಿಮ್ಮ ಆತ್ಮಸಾಕ್ಷಿಗೆ ತಕ್ಮಂತೆ ನಡೆದುಕೊಳ್ಳಿ. ಇದರಿಂದ ಸಮಾಜದಲ್ಲಿ ಗೌರವ, ಮನ್ನಣೆ ದೊರೆಯುವುವು. ಅದೃಷ್ಟ ಸಂಖ್ಯೆ:2
ವೃಷಭ
ಶಾಂತರಾಗಲು ನಿಮಗೆ ಹೆಚ್ಚಿನ ಸಮಯ ಬೇಕಾಗುವುದು. ಎದುರಾಳಿಗಳು ಮಾತನಾಡಿದ ರೀತಿ ನಿಮ್ಮ ಮನಸ್ಸಿನಲ್ಲಿ ಕ್ರೋಧವನ್ನು ಹುಟ್ಟುಹಾಕಿದೆ. ಕ್ರೋಧದಿಂದ ಕ್ರೋಧವನ್ನು ಸೋಲಿಸಲು ಆಗುವುದಿಲ್ಲ. ಆದಷ್ಟು ಸಹನೆ, ಪ್ರೀತಿ, ವಾತ್ಸಲ್ಯಗಳನ್ನು ರೂಢಿಸಿಕೊಳ್ಳಿ.ದುಡುಕು ಮಾತುಗಳು ಸಾಕು. ದುಡುಕಿನಿಂದ ಹಲವು ಒಳ್ಳೆಯ ಅವಕಾಶಗಳನ್ನು ಕಳೆದು ಕೊಳ್ಳುವಿರಿ. ಸ್ನೇಹಿತರೊಂದಿಗೆ ವಿರಸ ಸೂಕ್ತವಲ್ಲ. ಪ್ರತಿ ದಿನವೂ ಒಂದೇ ತರಹ ಇರುವುದಿಲ್ಲ. ತಾಳ್ಮೆಯನ್ನು ಕಾಪಾಡಿ ಕೊಳ್ಳಿ.ವಿವೇಕದ ವಿಚಾರವು ಶ್ರೀಮಂತಿಕೆಗಿಂತ ಘನವಾದುದು. ಇದರ ಅರಿವು ನಿಮಗೆ ಲಭ್ಯವಾಗಲಿದೆ. ದೂರ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಬೀದಿಬದಿಯ ಆಹಾರವನ್ನು ಸೇವಿಸದೆ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:1
ಮಿಥುನ
ನಿನ್ನೆಯ ಸೋಲನ್ನು ಮರೆಯಲಾಗದೆ ಪರಿತಪಿಸುತ್ತಿರುವಿರಿ. ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನಿನ್ನೆಯ ಸೋಲು ಇಂದಿನ ಗೆಲುವಿಗೆ ಕಾರಣವಾಗುವುದು. ಹಿರಿಯರ ಆಶೀರ್ವಾದ ಪಡೆಯಿರಿ. ಅಗತ್ಯಕ್ಕೆ ತಕ್ಕಷ್ಟು ಹಣವನ್ನು ಖರ್ಚು ಮಾಡಿ. ಅನ್ಯರ ಮಾತುಗಳನ್ನು ಶಾಂತಚಿತ್ತದಿಂದ ಕೇಳಿಸಿಕೊಳ್ಳಿ. ಯಾರನ್ನೂ ಉದಾಸೀನ ಮಾಡದಿರಿ. ಕೆಲವೊಮ್ಮೆ ನಮಗೆ ಯಾರಿಂದ ಒಳಿತಾಗುವುದಿಲ್ಲ ಎಂದು ಭಾವಿಸಿದ್ದೇವೋ ಅಂತಹವರ ನೆರವು ಸಹಕಾರವನ್ನು ಕೇಳಬೇಕಾಗುವುದು.ಆಳಾಗಿ ದುಡಿವ ವ್ಯಕ್ತಿ ಅರಸನಾಗಿಯೂ ಬಾಳಬಲ್ಲ. ಅಂತೆಯೇ ಸದ್ಯದ ಗ್ರಹಸ್ಥಿತಿಯಿಂದ ನೀವು ಸಮಾಜದಲ್ಲಿ ಕನಿಷ್ಠರು ಎಂದಾದರೂ ಮುಂದೆ ನೀವೇ ರಾಜನಾಗಿ ಮೆರೆಯುವ ಕಾಲ ಬರುತ್ತದೆ. ಚಿಂತೆ ಮಾಡಬೇಡಿ ಚಿನ್ಮಯನಿದ್ದಾನೆ. ಅದೃಷ್ಟ ಸಂಖ್ಯೆ:2
ಕಟಕ
ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ನಿಮ್ಮ ಧೈರ್ಯವೇ ನಿಮ್ಮ ಎಲ್ಲಾ ಕೆಲಸಗಳಲ್ಲೂ ವಿಜಯ ಪತಾಕೆಯನ್ನು ಹಾರಿಸಲು ನೆರವಾಗುವುದು. ಕೆಲವರಿಗೆ ಕೆಲಸದಲ್ಲಿ ಬಡ್ತಿ ಮೂಲಕ ಸಂತಸವುಂಟಾಗುವುದು.ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಮಹಾ ಪರಾಕ್ರಮಶಾಲಿಯಾದ ಆಂಜನೇಯ ಸ್ವಾಮಿಯ ಮಂದಿರಕ್ಕೆ ಭೇಟಿ ಕೊಡಿ. ಸಾಧ್ಯವಾದಲ್ಲಿ ವೀಳ್ಯದೆಲೆ ಸರವನ್ನು ಭಗವಂತನಿಗೆ ಅರ್ಪಿಸಿ ನಿಮ್ಮ ಕಾರ್ಯ ಸಾಧುವಾಗುವುದು. ರಾಜಕಾರಣಿಗಳಿಗೆ ಬಿಕ್ಕಟ್ಟುಗಳು ನಿಶ್ಚಿತ. ನಿಮ್ಮನ್ನು ವಿರೋಧಿಸುವವರ ಎದುರು ನಿಮ್ಮ ದೌರ್ಬಲ್ಯವನ್ನು ಪ್ರದರ್ಶಿಸದಿರಿ. ಅವಿವೇಕದ ಕೂಗಾಟದಿಂದ ಕೆಡುಕಿಗೆ ದಾರಿ ಆಗುವ ಸಂದರ್ಭವಿರುತ್ತದೆ. ಅದೃಷ್ಟ ಸಂಖ್ಯೆ:8
ಸಿಂಹ
ಗುಪ್ತಚರ ಇಲಾಖೆಯಿಂದ ವಿಷಯವೊಂದರ ಕುರಿತು ಆಶ್ಚರ್ಯಕರ ವಾರ್ತೆ ಲಭಿಸಲಿದೆ. ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲ ಗೊಳ್ಳುವುದು. ಇನ್ನೂ ಹೆಚ್ಚಿನ ಉತ್ಸಾಹದಿಂದ ಕಾರ್ಯ ಮಾಡಲು ಉತ್ಸುಕರಾಗುವಿರಿ.ನಿಮ್ಮ ನೆಂಟರು ಆಪ್ತರು ಬಣ್ಣಬಣ್ಣದ ಮಾತುಗಳನ್ನಾಡಿ ನಿಮ್ಮನ್ನು ಮೋಸಗೊಳಿಸಲು ಯತ್ನಿಸುವರು. ಈ ಬಗ್ಗೆ ಎಚ್ಚರದಿಂದ ಇರಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಮಡದಿ ಮಕ್ಕಳು ನಿಮಗೆ ಸಹಾಯಹಸ್ತ ನೀಡುವರು.ಸಂದಿಗ್ಧ ಕ್ಷ ಣಗಳು ಏಕಾಏಕಿ ಎದುರಾಗಿ ನೀವು ವಿಚಲಿತರಾಗುವಿರಿ. ಬಹು ಜಾಣ್ಮೆಯಿಂದ ಪರಿಸ್ಥಿತಿಯನ್ನು ಎದುರಿಸಿ. ಗುರು ಹಿರಿಯರ ಆಶೀರ್ವಾದ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ. ಮಕ್ಕಳು ನಿಮ್ಮ ಮನಸ್ಸಿಗೆ ನೆಮ್ಮದಿ ನೀಡುವರು. ಅದೃಷ್ಟ ಸಂಖ್ಯೆ:9
ಕನ್ಯಾ
ಮನಸ್ಸಿನ ಸಂಕಲ್ಪಿತ ಕೆಲಸವು ಭಗವಂತನ ದಯೆಯಿಂದ ಪೂರ್ಣವಾಗುವುದು. ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ. ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ನಿಮಗೆ ಗೆಲುವು ದೊರೆಯುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುವುದು. ಮನೆಯಲ್ಲಿ ಅಶಾಂತಿ ಬೇಡ ಎಂದಷ್ಟು ನಿಮ್ಮ ಮನೋಧೈರ್ಯ ವನ್ನು ಪರೀಕ್ಷಿಸುವ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಆದಷ್ಟು ತಾಳ್ಮೆಯಿಂದ ಇರಿ. ಪರರ ಲೋಪದೋಷಗಳನ್ನು ಎತ್ತಿ ಆಡದಿರಿ. ಮಡದಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸಿ. ಆತ್ಮ ಸಾಕ್ಷಿಯನ್ನು ಕಾಪಾಡಿಕೊಳ್ಳಿ. ಅಶಿಸ್ತನ್ನು ಎಂದೂ ಸಹಿಸದ ನೀವು ನಿಮ್ಮ ಪ್ರಾಮಾಣಿಕತೆಯಿಂದ ಪ್ರಶಂಸೆ ಗಳಿಸುವಿರಿ. ಬಂಧು ಬಾಂಧವರೊಡನೆ ಉತ್ತಮ ಸ್ನೇಹ ವೃದ್ಧಿಸಿಕೊಳ್ಳುವಿರಿ. ಬರಬೇಕಾಗಿದ್ದ ಹಣ ನಿಮ್ಮ ಕೈಸೇರುವ ಸಾಧ್ಯತೆ ಇದೆ.ಅದೃಷ್ಟ ಸಂಖ್ಯೆ:8
ತುಲಾ
ಆರಂಭದಲ್ಲಿ ಎಲ್ಲವೂ ಸೋಲು ಎಂದು ಕಂಡು ಬಂದರೂ ದಿನದ ಅಂತ್ಯಕ್ಕೆ ಯಶಸ್ಸು ಖಂಡಿತ ದೊರೆಯುತ್ತದೆ. ಮನೆಯಲ್ಲಿ ಮಕ್ಕಳ ಕಲರವ ಹೆಚ್ಚು ಸಂತೋಷ ಕೊಡುವುದು. ಹಾಗೆಯೇ ಖರ್ಚಿನ ದಾರಿ ತೆರೆದುಕೊಳ್ಳಲಿದೆ.ಮಾನಸಿಕವಾಗಿ ಉತ್ಸಾಹದಿಂದ ಇರಲು ಪ್ರಯತ್ನಿಸಿದಷ್ಟು ಕೆಲವು ಹಿನ್ನಡೆಗಳು ಆಗುವವು ಸಾಕ್ಷಿ ಆಗುವುದು. ಇದಕ್ಕಾಗಿ ಯಾರನ್ನು ದೂರಿ ಪ್ರಯೋಜನವಿಲ್ಲ. ಇಂದಲ್ಲ ನಾಳೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ತಾಳ್ಮೆ ಇರಲಿ.ನಿಮ್ಮ ಯೋಜನೆ ಹಾಗೂ ಯೋಚನೆಗಳನ್ನು ಮೀರಿ ಧನಲಾಭಕ್ಕೆ ಅವಕಾಶವಿದೆ. ಆದರೆ ಆತುರ ತೋರದಿರಿ. ಕೂತು ಮಲಗುವ ವ್ಯಕ್ತಿಯು ನಿಶ್ಚಿತವಾಗಿ ಸುಖ ನಿದ್ದೆಯನ್ನು ಹೊಂದುವನು. ಅಂತೆಯೇ ಕಾರ್ಯಗಳು ಯೋಜನಾಬದ್ಧವಾಗಿ ಜಾರಿಗೊಳ್ಳುವವು.
ಅದೃಷ್ಟ ಸಂಖ್ಯೆ:9
ವೃಶ್ಚಿಕ
ನಿರ್ದಿಷ್ಟವಾಗಿ ನಿಮ್ಮ ಧ್ಯೇಯೋದ್ದೇಶಗಳೇನು ಎಂಬುದನ್ನು ಬೆಂಬಲಿರಿಗೆ ಸ್ಪಷ್ಟವಾಗಿ ತಿಳಿಸಿ. ಇಲ್ಲವೆ ಅನಗತ್ಯ ಅಪವಾದಗಳು ನಿಮ್ಮ ಹೇಗಲೇರುವವು. ಸಮಯವನ್ನು ಬಹು ಚಾಣಾಕ್ಷ ತನದಿಂದ ನಿರ್ವಹಿಸುವಿರಿ.ನಿಮ್ಮನ್ನು ನೀವು ವಿಮರ್ಶೆಗೆ ಒಳಪಡಿಸಿ ಕೊಳ್ಳುವುದು ಒಳ್ಳೆಯದು. ಕೆಲವು ಕೆಲಸಗಳನ್ನು ನೀವು ನಿಮ್ಮ ಮನಸ್ಸಿಗೆ ವಿರುದ್ಧವಾಗಿ ಮಾಡಿರುವ ಬಗ್ಗೆ ಮನದಲ್ಲಿ ಅಳುಕಿದೆ. ಅದು ಯಾವ ಮಹತ್ತರವಾದ ಕಾರಣಕ್ಕೆ ಮಾಡಲಾಯಿತು ಎಂದು ಅವಲೋಕಿಸಿಕೊಳ್ಳಿ.ಏನೋ ಮಾಡಲು ಹೋಗಿ ಮತ್ತೇನೋ ಆಯಿತು ಎಂಬಂತೆ ನಿಮ್ಮ ಮನಸ್ಸಿನ ಭಾವನೆಗಳಿಗೆ ಧಕ್ಕೆ ಬರುವ ಸಂದರ್ಭ ಎದುರಾಗಲಿದೆ. ಮಾತಾ ದುರ್ಗಾದೇವಿಯ ಆರಾಧನೆ ಮೂಲಕ ದುಃಖವನ್ನು ಶಮನಗೊಳಿಸಿ ಅದೃಷ್ಟ ಸಂಖ್ಯೆ:6
ಧನುಸ್ಸು
ನಿಮಗೆ ನೀವೇ ಅಪರಿಚಿತರಾಗುವ ಸಂದರ್ಭ ಎದುರಾಗುವುದು. ಹಾಗಾಗಿ ಎಲ್ಲರನ್ನು ನಂಬುವ ಹುಂಬತನಕ್ಕೆ ಇಳಿಯದಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ನಿಮ್ಮ ಅನುಭವದ ಸಾರ್ಥಕತೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಹೊಸ ಅವಕಾಶ ಲಭ್ಯವಾಗಲಿದೆ. ಆರೋಗ್ಯದ ಕಡೆ ಗಮನ ಹರಿಸಿ. ಬೀಗರು ನಿಮ್ಮನ್ನು ಅಭಿನಂದಿಸುವರು. ಮನೆಯಲ್ಲಿ ಹರ್ಷದ ವಾತಾವರಣ ಇರುತ್ತದೆ.ನಿಮ್ಮ ಬಹುಮುಖ್ಯವಾದ ಕಾರ್ಯಕ್ಕೆ ದೂರದ ಪ್ರವಾಸವನ್ನು ಕೈಗೊಳ್ಳುವಿರಿ. ಇದರಿಂದ ಸಾಮಾಜಿಕ ವಾಗಿಯೂ ಸಬಲ ಗೊಳ್ಳುವಿರಿ. ಆಧ್ಯಾತ್ಮಿಕ ಚಿಂತನೆ ಕೂಡ ಹೆಚ್ಚಾಗುವುದು. ಕುಲದೇವರ ದರ್ಶನ ಪಡೆಯುವಿರಿ.ಅದೃಷ್ಟ ಸಂಖ್ಯೆ:5
ಮಕರ
ಎಲ್ಲವೂ ನಿಮ್ಮ ವಿರುದ್ಧ ತಿರುಗಿ ಬೀಳುತ್ತಿದೆ ಎಂದು ಅನಿಸುವುದು. ಈ ಬೇಸರದಲ್ಲೇ ಪ್ರಯಾಣ ಕೈಗೊಳ್ಳಬೇಡಿ. ಒಂದು ವೇಳೆ ಪ್ರಯಾಣ ಕೈಗೊಂಡರೆ ಎಚ್ಚರಿಕೆ ಇರಲಿ. ನಿಮ್ಮ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ ಆಗಲು ಸಮಯ ಬೇಕಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರನ್ನು ಗುಂಪಾಗಿ ಉತ್ತೇಜಿಸುವಿರಿ. ಇದರಿಂದ ಬಹು ಮಹತ್ತರವಾದ ಕಾರ್ಯ ನೆರವೇರಲು ಸಹಕಾರ ದೊರೆಯುವುದು. ಮನೆಯಲ್ಲಿನ ಒಗ್ಗಟ್ಟಿನ ಬಲ ಸಮಾಜದ ದುಷ್ಟ ಶಕ್ತಿಗಳನ್ನು ಎದುರಿಸಲು ಸಹಕಾರಿ ಆಗುವುದು. ಅನಿರೀಕ್ಷಿತವಾಗಿ ನಿಮ್ಮ ಹತ್ತಿರದ ಸಂಬಂಧಿಕರೇ ಮುಜುಗರವನ್ನು ಉಂಟು ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಬುದ್ಧಿಚಾತುರ್ಯದಿಂದ ಎಲ್ಲವನ್ನೂ ಎದುರಿಸುವಿರಿ. ಅಂತಿಮ ಗೆಲುವು ನಿಮ್ಮದಾಗುವುದು. ಅದೃಷ್ಟ ಸಂಖ್ಯೆ:4
ಕುಂಭ
ನಿಮಗೆ ಅನೇಕ ಸಂಶಯ ಸಂದಿಗ್ಧತೆಗಳು ಎದುರಾದರೂ ಬರುವ ಸವಾಲನ್ನು ಗಂಭೀರವಾಗಿ ಸ್ವೀಕರಿಸಿ. ಸ್ನೇಹಿತರು ನಿಮ್ಮ ಕಾರ್ಯಕ್ಕೆ ಸಹಕಾರಿಯಾಗಿ ನಿಲ್ಲುವರು. ಬಹು ಮಹತ್ತರವಾದ ಕಾರ್ಯವನ್ನು ಕೈಗೆತ್ತಿಕೊಳ್ಳಿ.ನಿಮ್ಮ ಸ್ವಂತ ಪ್ರಯತ್ನದ ಬಗ್ಗೆ ನಂಬಿಕೆ ಇರಲಿ. ಧೈರ್ಯಂ ಸರ್ವತ್ರ ಸಾಧನಂ. ನಿಮ್ಮ ಲೆಕ್ಕಾಚಾರ, ಶ್ರಮ, ಯೋಜನೆಗಳು ನಿಖರತೆಯಿಂದ ಕೂಡಿದ್ದರೂ ಕೆಲ ಕಾರ್ಯಗಳಲ್ಲಿ ವಿಘ್ನಗಳು ತೋರುವವು.ಜೀವನದ ಪ್ರತಿ ಹೆಜ್ಜೆಯೂ ಈಗ ಮಹತ್ವದ ಮೈಲುಗಲ್ಲೊಂದನ್ನು ತಲುಪುವ ಶಕ್ತಿ ನೀಡಲಿದೆ. ಯಾರು ಮಿತ್ರರು, ಯಾರು ಶತ್ರುಗಳು ಎಂದು ನಿಮಗೆ ಮನದಟ್ಟಾಗುವುದು. ಹಣಕಾಸು ವಿವಿಧ ಮೂಲಗಳಿಂದ ಬರುವುದು. ಅದೃಷ್ಟ ಸಂಖ್ಯೆ:2
ಮೀನ
ನಿಮ್ಮನ್ನು ಮೂರ್ಖರನ್ನಾಗಿಸುವ ಮಂದಿ ಹತ್ತಿರದಲ್ಲೇ ಸುತ್ತುವರೆದುಕೊಂಡಿದ್ದಾರೆ. ಹಾಗಾಗಿ ನೀವು ನಿಮ್ಮ ಎಚ್ಚರಿಕೆಯಿಂದ ಇರಿ. ಯಾವುದೇ ದಾಖಲಾತಿ ಪತ್ರಗಳಿಗೆ ಸಹಿ ಮಾಡುವ ಮುನ್ನ ಎರಡು ಬಾರಿ ಚಿಂತಿಸಿ. ನಿಮ್ಮದೇ ಆದ ವಿಶಿಷ್ಟ ಮಾತಿನ ಶಕ್ತಿಯಿಂದ ಪ್ರತಿಯೊಬ್ಬರನ್ನೂ ಆಕರ್ಷಿಸುವಿರಿ. ಗಹನವಾದ ವಿಷಯದಲ್ಲಿ ಚರ್ಚೆ ಮಾಡುವಿರಿ. ಇದರಿಂದ ಮುಂದೆ ಅನುಕೂಲ ವಾಗುವುದು. ವೃತ್ತಿಯಲ್ಲಿ ಕೆಲವರಿಗೆ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬರುವುದು. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಅಗತ್ಯಕ್ಕೆ ತಕ್ಕಷ್ಟು ಹಣ ಬರುವುದು. ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು. ಮದುವೆ,ಸಂತಾನಕೊರತೆ, ಶತ್ರುಕಾಟ,ಕುಜದೋಷ ಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮ ವಿಚಾರ, ವಿದೇಶಿ ಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp