Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಎಲ್ಲಾ 82 ರೋಗಿಗಳಿಗೂ ಒಂದೇ ಕ್ಯಾತಿಟರ್ ಬಳಸುತ್ತಿದ್ದ ವೈದ್ಯರು!
ನಾವು ವೈದ್ಯರ ಬಳಿಗೆ ಹೋಗುವುದು ಯಾಕೆ ಎಂದು ಹೇಳಿ? ನಮಗೆ ಉಂಟಾಗಿರುವ ಅನಾರೋಗ್ಯವನ್ನು ದೂರ ಮಾಡಬೇಕೆಂದು ವೈದ್ಯರ ಬಳಿಗೆ ತೆರಳುತ್ತೇವೆ. ಆದರೆ ವೈದ್ಯರಿಂದಲೇ ನಮಗೆ ಕಾಯಿಲೆಗಳು ಬಂದರೆ ಆಗ ಅದು ದೊಡ್ಡ ಮಟ್ಟದ ಸಮಸ್ಯೆ. ವೈದ್ಯರು ಯಾವಾಗಲೂ ಸ್ವಚ್ಛವಾಗಿರುವರು ಮತ್ತು ಅವರಿಂದ ಯಾವುದೇ ರೀತಿಯ ವೈರಸ್ ಗಳು ನಮಗೆ ತಗಲುವುದಿಲ್ಲವೆಂದು ನಾವು ಭಾವಿಸಿರುತ್ತೇವೆ. ಆದರೆ ಈ ಘಟನೆಯನ್ನು ಓದಿದ ಬಳಿಕ ನಿಮ್ಮ ಆಲೋಚನೆಗಳೆಲ್ಲವೂ ಬುಡಮೇಲು ಆಗಲಿದೆ. ತುಂಬಾ ರೇಜಿಗೆ ಹುಟ್ಟಿಸುವಂತಹ ವೈದ್ಯರ ನಡವಳಿಕೆಯಿಂದ ರೋಗಿಗಳಿಗೆ ಅಪಾಯವು ಎದುರಾಗಿದೆ. ಈ ಬಗ್ಗೆ ಓದುತ್ತಾ ಸಾಗಿ...

ವೈದ್ಯರು ಕರುಳು ಮತ್ತು ಗುದನಾಳ ಸರ್ಜನ್
ಆರೋಪ ಹೊರಿಸಲಾಗಿರುವ ವೈದ್ಯರು ಕರುಳು ಮತ್ತು ಗುದನಾಳದ ಸರ್ಜನ್. ಈ ವೈದ್ಯರು ನ್ಯೂಜೆರ್ಸಿಯಲ್ಲಿರುವ ರಾಬರ್ಟ್ ವುಡ್ ಜಾನ್ಸನ್ ಯೂನಿವರ್ಸಿಟಿ ಹಾಸ್ಪಿಟಲ್ ನಲ್ಲಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೈದ್ಯರು ವರ್ಷದಲ್ಲಿ ಕೇವಲ ಐದು ಕ್ಯಾತಿಟರ್(ತೂರುನಾಳ) ನ್ನು ಮಾತ್ರ ಬಳಸುತ್ತಿದ್ದರು. ಇದನ್ನು ಅವರು ಸುಮಾರು 82 ರೋಗಿಗಳಿಗೆ ಬಳಸುತ್ತಿದ್ದರು.

ಈ ಸಾಧನವನ್ನು ತೊಳೆದು ಮತ್ತೆ ಬಳಸಿಕೊಳ್ಳುತ್ತಿದ್ದರು
ವರದಿಗಳ ಪ್ರಕಾರ ವೈದ್ಯರು ಈ ಸಾಧನವನ್ನು ತೊಳೆದು, ಮತ್ತೆ ಕ್ಯಾತಿಟರ್ ನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದರು. ಒಬ್ಬ ರೋಗಿಯ ವೈದ್ಯಕೀಯ ಪರೀಕ್ಷೆಯ ಬಳಿಕ ಇದನ್ನು ಮತ್ತೊಬ್ಬರಿಗೆ ಬಳಸಲಾಗುತ್ತದೆ. ವೈದ್ಯರು ಇದನ್ನು ಸೋಪ್ ಮತ್ತು ನೀರಿನಲ್ಲಿ ತೊಳೆದ ಬಳಿಕ ಅರ್ಧ ಗಂಟೆ ಕಾಲ ಬ್ಲೀಚ್ ಸೊಲ್ಯೂಷನ್ ನಲ್ಲಿ ಹಾಕಿಡುತ್ತಿದ್ದರು. ಇದರ ಬಳಿಕ ಒಣಗಿಸಿ ಬಳಸಿಕೊಳ್ಳುತ್ತಿದ್ದರು. ರೋಗಿಗಳನ್ನು ವಂಚಿಸಲು ಈ ವೈದ್ಯರ ಸಿಬ್ಬಂದಿಯು ಅದನ್ನು ಮರು ಪ್ಯಾಕ್ ಮಾಡಿ ಹೊಸದರಂತೆ ಕಾಣುವಂತೆ ಮಾಡುತ್ತಿದ್ದರು.

ಈ ಸಾಧನದ ಬಗ್ಗೆ
ಕರುಳನ್ನು ಪರೀಕ್ಷೆ ಮಾಡಲು ಬಳಸುವಂತಹ ಗುದ ಕ್ಯಾತಿಟರ್ ಒಮ್ಮೆ ಮಾತ್ರ ಬಳಸಬಹುದಾದ ಸಾಧನವಾಗಿದೆ. ಇದು ಒಂದು ರೀತಿಯ ಪ್ಲಾಸ್ಟಿಕ್ ಬ್ಯೂಬ್ ಗಳಾಗಿದ್ದು, ಇದನ್ನು ಗುದನಾಳದೊಳಗೆ ಹಾಖಿಕೊಂಡು ಅಲ್ಲಿಂದ ಮಲ ತೆಗೆಯಲಾಗುತ್ತದೆ ಅಥವಾ ಗುದಕುಳಿ ಮತ್ತು ಕರುಳಿಗೆ ದ್ರವ ಹಾಕಲಾಗುವುದು. ಈ ಸಾಧನವನ್ನು ರೋಗಿಯ ಕರುಳಿನಲ್ಲಿ ಲವಣಯುಕ್ತ ದ್ರಾವಣ ಸಿಂಪಡಿಕೆಗೆ ಕೂಡ ಬಳಸಿಕೊಳ್ಳಲಾಗುತ್ತದೆ.

ಆ ವೈದ್ಯರನ್ನು ಅಮಾನತು ಮಾಡಲಾಯಿತು!
ಈ ಸರ್ಜನ್ ವೈದ್ಯಕೀಯ ಲೈಸನ್ಸ್ ನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಮತ್ತು ಇದರ ಬಗ್ಗೆ ಹೆಚ್ಚಿನ ತನಿಖೆಗೂ ಆದೇಶಿಸಲಾಗಿದೆ. ಆತ ವೈದ್ಯರನ್ನು ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳಿರುವುದೇ ಇದಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications











