Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಎಲ್ಲಾ 82 ರೋಗಿಗಳಿಗೂ ಒಂದೇ ಕ್ಯಾತಿಟರ್ ಬಳಸುತ್ತಿದ್ದ ವೈದ್ಯರು!
ನಾವು ವೈದ್ಯರ ಬಳಿಗೆ ಹೋಗುವುದು ಯಾಕೆ ಎಂದು ಹೇಳಿ? ನಮಗೆ ಉಂಟಾಗಿರುವ ಅನಾರೋಗ್ಯವನ್ನು ದೂರ ಮಾಡಬೇಕೆಂದು ವೈದ್ಯರ ಬಳಿಗೆ ತೆರಳುತ್ತೇವೆ. ಆದರೆ ವೈದ್ಯರಿಂದಲೇ ನಮಗೆ ಕಾಯಿಲೆಗಳು ಬಂದರೆ ಆಗ ಅದು ದೊಡ್ಡ ಮಟ್ಟದ ಸಮಸ್ಯೆ. ವೈದ್ಯರು ಯಾವಾಗಲೂ ಸ್ವಚ್ಛವಾಗಿರುವರು ಮತ್ತು ಅವರಿಂದ ಯಾವುದೇ ರೀತಿಯ ವೈರಸ್ ಗಳು ನಮಗೆ ತಗಲುವುದಿಲ್ಲವೆಂದು ನಾವು ಭಾವಿಸಿರುತ್ತೇವೆ. ಆದರೆ ಈ ಘಟನೆಯನ್ನು ಓದಿದ ಬಳಿಕ ನಿಮ್ಮ ಆಲೋಚನೆಗಳೆಲ್ಲವೂ ಬುಡಮೇಲು ಆಗಲಿದೆ. ತುಂಬಾ ರೇಜಿಗೆ ಹುಟ್ಟಿಸುವಂತಹ ವೈದ್ಯರ ನಡವಳಿಕೆಯಿಂದ ರೋಗಿಗಳಿಗೆ ಅಪಾಯವು ಎದುರಾಗಿದೆ. ಈ ಬಗ್ಗೆ ಓದುತ್ತಾ ಸಾಗಿ...

ವೈದ್ಯರು ಕರುಳು ಮತ್ತು ಗುದನಾಳ ಸರ್ಜನ್
ಆರೋಪ ಹೊರಿಸಲಾಗಿರುವ ವೈದ್ಯರು ಕರುಳು ಮತ್ತು ಗುದನಾಳದ ಸರ್ಜನ್. ಈ ವೈದ್ಯರು ನ್ಯೂಜೆರ್ಸಿಯಲ್ಲಿರುವ ರಾಬರ್ಟ್ ವುಡ್ ಜಾನ್ಸನ್ ಯೂನಿವರ್ಸಿಟಿ ಹಾಸ್ಪಿಟಲ್ ನಲ್ಲಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೈದ್ಯರು ವರ್ಷದಲ್ಲಿ ಕೇವಲ ಐದು ಕ್ಯಾತಿಟರ್(ತೂರುನಾಳ) ನ್ನು ಮಾತ್ರ ಬಳಸುತ್ತಿದ್ದರು. ಇದನ್ನು ಅವರು ಸುಮಾರು 82 ರೋಗಿಗಳಿಗೆ ಬಳಸುತ್ತಿದ್ದರು.

ಈ ಸಾಧನವನ್ನು ತೊಳೆದು ಮತ್ತೆ ಬಳಸಿಕೊಳ್ಳುತ್ತಿದ್ದರು
ವರದಿಗಳ ಪ್ರಕಾರ ವೈದ್ಯರು ಈ ಸಾಧನವನ್ನು ತೊಳೆದು, ಮತ್ತೆ ಕ್ಯಾತಿಟರ್ ನ್ನು ಮರುಬಳಕೆ ಮಾಡಿಕೊಳ್ಳುತ್ತಿದ್ದರು. ಒಬ್ಬ ರೋಗಿಯ ವೈದ್ಯಕೀಯ ಪರೀಕ್ಷೆಯ ಬಳಿಕ ಇದನ್ನು ಮತ್ತೊಬ್ಬರಿಗೆ ಬಳಸಲಾಗುತ್ತದೆ. ವೈದ್ಯರು ಇದನ್ನು ಸೋಪ್ ಮತ್ತು ನೀರಿನಲ್ಲಿ ತೊಳೆದ ಬಳಿಕ ಅರ್ಧ ಗಂಟೆ ಕಾಲ ಬ್ಲೀಚ್ ಸೊಲ್ಯೂಷನ್ ನಲ್ಲಿ ಹಾಕಿಡುತ್ತಿದ್ದರು. ಇದರ ಬಳಿಕ ಒಣಗಿಸಿ ಬಳಸಿಕೊಳ್ಳುತ್ತಿದ್ದರು. ರೋಗಿಗಳನ್ನು ವಂಚಿಸಲು ಈ ವೈದ್ಯರ ಸಿಬ್ಬಂದಿಯು ಅದನ್ನು ಮರು ಪ್ಯಾಕ್ ಮಾಡಿ ಹೊಸದರಂತೆ ಕಾಣುವಂತೆ ಮಾಡುತ್ತಿದ್ದರು.

ಈ ಸಾಧನದ ಬಗ್ಗೆ
ಕರುಳನ್ನು ಪರೀಕ್ಷೆ ಮಾಡಲು ಬಳಸುವಂತಹ ಗುದ ಕ್ಯಾತಿಟರ್ ಒಮ್ಮೆ ಮಾತ್ರ ಬಳಸಬಹುದಾದ ಸಾಧನವಾಗಿದೆ. ಇದು ಒಂದು ರೀತಿಯ ಪ್ಲಾಸ್ಟಿಕ್ ಬ್ಯೂಬ್ ಗಳಾಗಿದ್ದು, ಇದನ್ನು ಗುದನಾಳದೊಳಗೆ ಹಾಖಿಕೊಂಡು ಅಲ್ಲಿಂದ ಮಲ ತೆಗೆಯಲಾಗುತ್ತದೆ ಅಥವಾ ಗುದಕುಳಿ ಮತ್ತು ಕರುಳಿಗೆ ದ್ರವ ಹಾಕಲಾಗುವುದು. ಈ ಸಾಧನವನ್ನು ರೋಗಿಯ ಕರುಳಿನಲ್ಲಿ ಲವಣಯುಕ್ತ ದ್ರಾವಣ ಸಿಂಪಡಿಕೆಗೆ ಕೂಡ ಬಳಸಿಕೊಳ್ಳಲಾಗುತ್ತದೆ.

ಆ ವೈದ್ಯರನ್ನು ಅಮಾನತು ಮಾಡಲಾಯಿತು!
ಈ ಸರ್ಜನ್ ವೈದ್ಯಕೀಯ ಲೈಸನ್ಸ್ ನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಮತ್ತು ಇದರ ಬಗ್ಗೆ ಹೆಚ್ಚಿನ ತನಿಖೆಗೂ ಆದೇಶಿಸಲಾಗಿದೆ. ಆತ ವೈದ್ಯರನ್ನು ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳಿರುವುದೇ ಇದಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.



Click it and Unblock the Notifications