Just In
Don't Miss
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
5-10-2018: ಶುಕ್ರವಾರದ ದಿನ ಭವಿಷ್ಯ
ಸಮಾಜದಲ್ಲಿ ಮಹತ್ತರವಾದ ಬದಲಾವಣೆಯನ್ನು ನಾವು ಬಯಸುತ್ತೇವೆ ಎಂದಾದರೆ ಮೊದಲು ನಾವು ನಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಬೇಕು. ಇಂತಹ ಬದಲಾವಣೆ ಉಂಟಾಗಬೇಕೆಂದರೆ ನಮ್ಮ ಗ್ರಹಗತಿಗಳ ಬದಲಾವಣೆಯಿಂದ ಸನ್ನಿವೇಶದ ಅನುಭವಗಳನ್ನು ನಾವು ಅನುಭವಿಸರಬೇಕಾಗಿರುತ್ತದೆ.
ಹಾಗಾದರೆ ಬನ್ನಿ ಶುಕ್ರವಾರವಾದ ಇಂದು ನಿಮ್ಮ ಜೀವನದಲ್ಲಿ ಯಾವೆಲ್ಲಾ ಮಹತ್ತರವಾದ ಬದಲಾವಣೆ ಉಂಟಾಗುತ್ತದೆ ಎನ್ನುವುದನ್ನು ಇಂದಿನ ರಾಶಿ ಭವಿಷ್ಯದ ಮೂಲಕ ಅರಿಯೋಣ...
ಮೇಷ (5 ಅಕ್ಟೋಬರ್ 2018)
ದೇಹಾರೋಗ್ಯದ ಬಗ್ಗೆ ಸಂಗಾತಿಯ ಅತೀವ ಕಾಳಜಿಯಿಂದಾಗಿ ನೆಮ್ಮದಿ.ಹತ್ತಿರದ ಸಂಬಂಧಿಕರೊಂದಿಗೆ ಸುದೀರ್ಘ ಸಮಾಲೋಚನೆಯಿಂದ ಕಾರ್ಯಸಿದ್ಧಿ . ರಾಸಾಯನಿಕ ವಸ್ತು ಮಾರಾಟಗಾರರಿಗೆ ಲಾಭ .ಮಧ್ಯವರ್ತಿಗಳಿಗೆ ಹೆಚ್ಚಿನ ಆರ್ಥಿಕ ಪ್ರಗತಿ ಕಂಡುಬರುವುದು. ಮಾನಸಿಕ ತೊಳಲಾಟ. ಆರೋಗ್ಯದಲ್ಲಿ ಏರಿಳಿತ ಕಂಡುಬರಲಿದೆ.. ವಿದ್ಯಾರ್ಥಿಗಳಿಗೆ ಸಮಾಧಾನ .
ವೃಷಭ
ರಾಜಕಾರಣಿಗಳಿಗೆ ಒತ್ತಡದ ದಿನ .ಸಾರ್ವಜನಿಕ ರಂಗದಲ್ಲಿ ಪುರಸ್ಕಾರ. ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಸಂತಸದ ದಿನವಾಗಲಿದೆ ಹೊರಗಿನ ಶತ್ರುಗಳ ಬಗ್ಗೆ ಗಮನ ಅಗತ್ಯ .ಕಾರ್ಯಕ್ಷೇತ್ರಗಳಲ್ಲಿ ನೆಮ್ಮದಿ ಆರ್ಥಿಕ ವಿಚಾರದಲ್ಲಿ ಏಕತಾನತೆ ಮೂಡಲಿದೆ .ಮಕ್ಕಳಲ್ಲಿ ವಿನಾ ಕಾರಣವಾದ ವಿವಾದಗಳು ಉಂಟಾಗುವ ಸಾಧ್ಯತೆ .ಬೆಲೆ ಬಾಳುವ ಸಾಮಗ್ರಿಗಳ ಖರೀದಿ.
ಮಿಥುನ
ಸಾಮಾಜಿಕ ಕ್ಷೇತ್ರಗಳಲ್ಲಿ ವಿಶೇಷ ಮನ್ನಣೆ ಕೆಲಸದಲ್ಲಿನ ಅತಿಯಾದ ಒತ್ತಡ ನಿವಾರಣೆಯಾಗಿ ಬಿಡುವು ದೊರೆಯಲಿದೆ.ಧಾರ್ಮಿಕ ಕಾರ್ಯ ಅಥವಾ ಗ್ರಂಥ ಪಠಣಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ .ಕಾರ್ಖಾನೆ ಕೆಲಸಗಾರರಿಗೆ ಸಮಾಧಾನಕರವಾದ ದಿನ. ಪ್ರಯತ್ನ ಪೂರಕವಾದ ಸಫಲತೆ ಸಿಗುವುದು. ತಂದೆತಾಯಿಯಿಂದ ಪ್ರೋತ್ಸಾಹ .ಆರೋಗ್ಯ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಕಾಳಜಿ ಅಗತ್ಯ.
ಕರ್ಕಾಟಕ .
ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಶ್ರಮವಹಿಸುವುದು ಅಗತ್ಯ. ವಿವಾಹ ಅಪೇಕ್ಷಿತರಿಗೆ ಸೂಕ್ತ ಸಂಬಂಧ ದೊರೆತು ಕಂಕಣ ಭಾಗ್ಯ ಕೂಡುವುದು. ಸಾಲದಿಂದ ಮುಕ್ತಿ.ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿ ಖರ್ಚು ವೆಚ್ಚಗಳ ವಿಷಯದಲ್ಲಿ ಕಡಿವಾಣವಿರುವುದು ಒಳಿತು ಸಹೋದರರೊಂದಿಗೆ ಹೊಸ ವ್ಯಾಪಾರ ಆರಂಭಿಸುವುದು ಯಶಸ್ಸನ್ನು ಸಾಧಿಸುವಿರಿ.
Most
Read:
ಅಡುಗೆಮನೆಯ
ಪುಟ್ಟ
'ಬೆಳ್ಳುಳ್ಳಿ'ಯ
ಪವರ್ಗೆ
ಬೆರಗಾಗಲೇಬೇಕು!
ಸಿಂಹ
ಹಿರಿಯ ಉದ್ಯೋಗಿಗಳಾಗಿರುವವರು ದೇಹಾಲಸ್ಯದಿಂದಾಗಿ ಕಾರ್ಯ ಬಾಹುಳ್ಯವನ್ನು ಬೇರೆಯವರಿಗೆ ವರ್ಗಾಯಿಸುವ ಸಾಧ್ಯತೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವಿನಿಯೋಗ ಮಾಡಲಿದ್ದೀರಿ .ಕಲಾವಿದರಿಗೆ ಸಮಾಧಾನಕರವಾದ ದಿನ. ಗೌರವ ಪ್ರಾಪ್ತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ಸಾಂಸಾರಿಕವಾಗಿ ಸಮಾಧಾನ, ನೆಮ್ಮದಿ . ಉತ್ತಮ ಆರೋಗ್ಯ ಭಾಗ್ಯ
ಕನ್ಯಾ
ಪುಷ್ಪೋದ್ಯಮದಲ್ಲಿ ತೊಡಗಿದವರಿಗೆ ವಿಶೇಷ ಬೇಡಿಕೆಯಿಂದಾಗಿ ಅಧಿಕ ಆದಾಯ. ಕೃಷಿ ಕಾರ್ಯಗಳಿಗಾಗಿ ಹಣ ಮತ್ತು ಸಮಯ ವಿನಿಯೋಗಿಸಲಿದ್ದೀರಿ. ಕಲಾತ್ಮಕ ವಿನ್ಯಾಸಕರಿಗೆ ಮನೆ ದೊರಕಲಿದೆ.ಓದು ಅಥವಾ ಉದ್ಯೋಗ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ. ರೈತರಿಗೆ ಸಂತೋಷದ ದಿನ. ಹೊಸ ಆಯಾಮಕ್ಕೆ ಸಿದ್ಧತೆ. ಕಾರ್ಯಯೋಜನೆಯೊಂದನ್ನು ನಿರೂಪಿಸಲಿದ್ದೀರಿ. ಆರ್ಥಿಕ ಉನ್ನತಿಗೆ ದಾರಿ ಸುಗಮ.
ತುಲಾ
ಕಾರ್ಯ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳ ರಕ್ಷಣಾ ಇಲಾಖೆಯಲ್ಲಿರುವವರಿಗೆ ತುರ್ತು ಕೆಲಸಗಳು ಎದುರಾಗಲಿವೆ ಮಿತವ್ಯಯ ಮಾಡುವಿರಿ ಆರ್ಥಿಕವಾಗಿ ಸಬಲರಾಗುವಿರಿ.ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ನಿರ್ವಿಘ್ನವಾಗಿ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮಕ್ಕಳು ಮಾಡುವ ಖರ್ಚು ವೆಚ್ಚಗಳ ಗಮನವಹಿಸಿ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ.
Most Read: ಭಗವಾನ್ ಶ್ರೀಕೃಷ್ಣ ಪ್ರತಿ ದಿನ ರಾತ್ರಿ ಈ ವನಕ್ಕೆ ಬರುತ್ತಾನಂತೆ!!
ವೃಶ್ಚಿಕ
ಮಕ್ಕಳೇ ಯಶಸ್ವಿಗಾಗಿ ಅಧಿಕಾರಿಗಳ ಮೊರೆ ಹೋಗಬೇಕಾದೀತು. ಗುತ್ತಿಗೆ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ ತರುವಂತಹ ಅವಕಾಶಗಳು ದೊರಕುವ ಸಾಧ್ಯತೆ. ಮನೆ ಬದಲಾವಣೆ ಸಾಧ್ಯತೆ .ಆರ್ಥಿಕ ಲಾಭ ಶುಭ ಸುದ್ದಿಯನ್ನು ಕೇಳುವಿರಿ. ಭೂ ಲಾಭವಾಗುವ ಸಾಧ್ಯತೆ ಮಾನಸಿಕ ತೊಳಲಾಟಕ್ಕೆ ಹಿರಿಯರಿಂದ ಸೂಕ್ತ ಸಮಾಧಾನದ ಮಾತು ಪ್ರವಾಸಕ್ಕೆ ಹೋಗಿ ಬರುವ ಯೋಜನೆ ಸಫಲವಾಗಲಿದೆ .
ಧನಸ್ಸು
ಕುಟುಂಬ ಸಂಬಂಧ ಕಲಹದಿಂದ ಮುಕ್ತಿ. ಉದ್ಯೋಗದಲ್ಲಿ ಯಶಸ್ಸು. ಆರೋಗ್ಯದಲ್ಲಿ ಚೇತರಿಕೆ. ವಿದ್ಯಾರ್ಥಿಗಳಲ್ಲಿ ಆಲಸ್ಯ. ಹಿತೈಷಿಗಳಿಂದ ಉತ್ತಮ ಸಹಕಾರ .ರಂಗ ಕಲೆಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು. ಕಾರ್ಯಕ್ರಮವೊಂದರ ನಿರೂಪಕರಾಗಿ ಕಾರ್ಯನಿರ್ವಹಿಸುವ ಅವಕಾಶ. ಮಿತ್ರರ ಸಹಕಾರವನ್ನು ಮರೆಯದಿರುವುದು ಒಳ್ಳೆಯದು .
ಮಕರ
ನಿರುದ್ಯೋಗಿಗಳಿಗೆ ಜಾಹೀರಾತು ಕಂಪೆನಿಗಳಲ್ಲಿ ಉತ್ತಮ ಅವಕಾಶ. ಚಿನ್ನದ ಬೆಳ್ಳಿ ಕೆಲಸದಲ್ಲಿರುವವರು ಹೊಸ ವಿನ್ಯಾಸ ತಯಾರಿಕೆಯಿಂದಾಗಿ ಉತ್ತಮ ಲಾಭ ಗಳಿಸುತ್ತೀರಿ .ಸೈನಿಕರಿಗೆ ಸಂತೋಷದ ದಿನ ಜೀವನದಲ್ಲಿ ಸಾಧನೆಯ ಆತ್ಮ ತೃಪ್ತಿ, ಆರ್ಥಿಕ ವಿಷಯ ,ಅದರಲ್ಲೂ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಗಮನ ವಹಿಸುವುದು ಅಗತ್ಯ. ಸಾಂಸಾರಿಕ ಜೀವನದಲ್ಲಿ ಸಂತೋಷ.
Most Read:ಸಂಬಂಧಗಳ ವಿಷಯದಲ್ಲಿ 'ಕರ್ಕ ರಾಶಿ'ಯವರು ಇಂತಹ ಸಮಸ್ಯೆಗಳನ್ನು ಎದುರಿಸುವರು...
ಕುಂಭ
ವಸ್ತ್ರಾದಿ ವ್ಯವಹಾರಸ್ಥರಿಗೆ ಅಧಿಕ ಲಾಭ. ಸಹೋದ್ಯೋಗಿಗಳಿಂದ ಸಂತೋಷದ ವಾತಾವರಣ. ಮನೆಯವರೊಂದಿಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ. ಆರೋಗ್ಯದಲ್ಲಿ ಕಿರಿಕಿರಿ.ಕೆಲಸಕಾರ್ಯಗಳು ಯಶಸ್ವಿಯಾಗಿ ನೆರವೇರಲಿವೆ. ವಾಹನ, ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆ. ತಂತ್ರಜ್ಞಾನ ಬಳಕೆಯಿಂದ ಮತ್ತು ವ್ಯವಹಾರದಿಂದಾಗಿ ಅಧಿಕ ಲಾಭ ಗಳಿಸುವಿರಿ.
ಮೀನ
ಮಕ್ಕಳ ಆರೋಗ್ಯಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಿದ್ದೀರಿ .ಸ್ನೇಹಿತರಿಂದ ಹಣ ಹೂಡಿಕೆಗಾಗಿ ಒತ್ತಾಯವನ್ನು ಎದುರಿಸಲಿದ್ದೀರಿ. ಹೆಣ್ಣುಮಕ್ಕಳು ತವರಿನಿಂದ ಉಡುಗೊರೆ ಪಡೆದು ಸಂಭ್ರಮಿಸುವ ಸಾಧ್ಯತೆ.ಮನಸ್ಸಿನಲ್ಲಿ ಗೊಂದಲಕರ ವಾತಾವರಣ ಕಂಡುಬರುತ್ತದೆ. ಸಂಸಾರದಲ್ಲಿ ಸಮಾಧಾನ ಮುಖ್ಯ.ಮಕ್ಕಳಿಂದ ಸಂತೋಷ. ದೃಢ ನಿರ್ಧಾರವಿರಲಿ. ದೂರ ಪ್ರಯಾಣದಲ್ಲಿ ಯಶಸ್ಸಿನೊಂದಿಗೆ ಸಂತಸ. ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಸರ್ವ ಗುಪ್ತಸಮಸ್ಯೆಗಳಿಗೆ ಶಾಶ್ವತ ಪರಿಹಾರ call/9845743807 whatsapp.