Just In
Don't Miss
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
28-11-2018: ಬುಧವಾರದ ದಿನ ಭವಿಷ್ಯ
ಬುಧವಾರ ದಿನ ಬುಧನು ಬೃಹಸ್ಪ್ರತಿಯ ಮಗ . ಅದಲ್ಲದೇ ನಮ್ಮ ಜೀವ-ಜೀವನದ ಬಹುಮುಖ್ಯ ಅಂಗವಾದ ಬುದ್ಧಿ ಮತ್ತು ನರಮಂಡಲವನ್ನು ನಿಯಂತ್ರಿಸುತ್ತಾನೆ. ಬುಧನ ಚಿಹ್ನೆ ಆತ್ಮ, ಜೀವಾತ್ಮ, ದೇಹ, ಮನಸ್ಸು ಅನ್ನು ಒಳಗೊಂಡಿದ್ದು ಇದರಿಂದ ಬುಧನನ್ನು ಬುದ್ಧಿ, ಮನಸ್ಸು, ಇದಕ್ಕೆ ಸಂಬಂಧಿಸಿದಂತೆ ನರಮಂಡಲ ಮತ್ತು ಸಾತ್ವಿಕತೆಯ ಪ್ರತೀಕಾವಾದ ಆತ್ಮವನ್ನೂ ಒಳಗೊಂಡಿದೆ.
ಇದರಿಂದ
ಇವನನ್ನು
ಶುಭನೊಡನೆ
ಶುಭಗ್ರಹವಾಗಿಯೂ
ಅಶುಭ
ನೊಡನೆ
ಪಾಪಗ್ರಹನಾಗಿಯೂ
ವರ್ತಿಸುತ್ತಾನೆ.
ಬುಧನ
ಅಧಿದೇವತೆ,
ಮಹಾವಿಷ್ಣು,
ಪದ್ಮನಾಭನನ್ಶು
ನೆನೆಯುತ್ತಾ
ಈ
ದಿನದ
ರಾಶಿ
ಭವಿಷ್ಯವನ್ನು
ತಿಳಿಯೋಣ.ಪಂಡಿತ್
ಮಂಜುನಾಥ್
ಶಾಸ್ತ್ರೀ.
9845743807
ಮೇಷ
ನಿಮಗೆ ರಾಜಕೀಯ ಅತ್ಯಂತ ಆಸಕ್ತಿ ಇರುವ ಕ್ಷೇತ್ರ. ರಾಜಕೀಯ ವಿದ್ಯಮಾನಗಳು ನಿಮಗೆ ಸಹಾಯ ಮಾಡುವವು. ಸಮಾಜದ ಜನರು ನಿಮ್ಮನ್ನು ಗುರುತಿಸಿ ಆರಾಧಿಸುವರು. ಹಣವೂ ನೀರಿನಂತೆ ಖರ್ಚಾಗುವುದು.
ನಿಮ್ಮ ನಡೆ-ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ನಿಮ್ಮ ಕ್ರಿಯಾಶೀಲತೆಯೇ ನಿಮ್ಮ ಪಾಲಿಗೆ ಶ್ರೀರಕ್ಷೆ ಆಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.ಕೆಲವು ಸಮಸ್ಯೆಗಳು ಎದುರಾಗಲಿವೆಯಾದರೂ ಎದುರಿಸುವ ಶಕ್ತಿಯನ್ನು ತೋರುವಿರಿ. ಜನರೊಡನೆ ಬೆರೆಯುವಾಗ ತಾಳ್ಮೆ ರೂಢಿಸಿಕೊಳ್ಳಿ. ಕೆಲವರು ಅನವಶ್ಯಕ ಪ್ರಶ್ನೆಗಳನ್ನು ಕೇಳಿ ನಿಮಗೆ ಕೋಪ ಬರಿಸುವ ಸಾಧ್ಯತೆ ಇರುತ್ತದೆ.
ಅದೃಷ್ಟ ಸಂಖ್ಯೆ:2
ವೃಷಭ
ಹೆಚ್ಚಿನ ಲವಲವಿಕೆ ಹಾಗೂ ಮುತುವರ್ಜಿಯನ್ನು ಪ್ರದರ್ಶಿಸಿ ಕಾರ್ಯ ಸಾಫಲ್ಯತೆಯನ್ನು ಹೊಂದುವಿರಿ. ಮಕ್ಕಳು ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಕೊಡುವುದರಿಂದ ಆಂತರಿಕವಾಗಿ ಹೆಚ್ಚು ಆನಂದಿತರಾಗುವಿರಿ. ವೈಯಕ್ತಿಕ ಆರೋಗ್ಯದ ಕಡೆ ಗಮನ ನೀಡಿ.ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ಪರಾಕ್ರಮ ರಾಹು ನಿಮ್ಮ ಆತ್ಮಸ್ಥೈರ್ಯವನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಕೆಮ್ಮು, ಕಫದಂತಹ ತೊಂದರೆಗಳು ಬರುವವು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಹಿಂದಿನ ದಿನಗಳ ಅನುಭವಗಳ ನೆಲೆಯಲ್ಲಿ ಜಾಗ್ರತೆಯ ಹೆಜ್ಜೆ ಇರಿಸಿ. ಕಿರಿಕಿರಿ ಮಾಡುವವರನ್ನು ನಿಯಂತ್ರಣಕ್ಕೆ ಒಳಪಡಿಸುವುದು ಒಳ್ಳೆಯದು. ದುಂದುವೆಚ್ಚಗಳಿಗೆ ಕಡಿವಾಣ ಹಾಕದೆ ಇದ್ದಲ್ಲಿ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳುವಿರಿ.
ಅದೃಷ್ಟ ಸಂಖ್ಯೆ:1
ಮಿಥುನ
ಜನರ ಬಳಿ ಮಾತನಾಡುವಾಗ ಬೇಕಾಬಿಟ್ಟಿ ಮನ ಬಂದಂತೆ ಮಾತನಾಡದಿರಿ. ಹಿತಶತ್ರುಗಳು ನಿಮ್ಮನ್ನು ಮಣಿಸಲು ಹೊಂಚು ಹಾಕಿರುವರು. ಆದಷ್ಟು ಕುಲದೇವರನ್ನು ಆರಾಧಿಸಿ. ನೆಮ್ಮದಿ ಪಡೆಯಿರಿ. ಪ್ರೇಮ ಕುರುಡು. ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೆಯೇ ಇರದು. ತಾನು ಅಂದುಕೊಂಡದ್ದೆ ಸತ್ಯ ಎಂದು ತಿಳಿದು ಮುಂದುವರೆಯುವುದರಿಂದ ತೊಂದರೆ ಎದುರಿಸಬೇಕಾಗುವುದು. ಕೆಲವರಿಗೆ ಕಂಕಣಭಾಗ್ಯ ಕೂಡಿ ಬರುವುದು.ಬಂಧುವರ್ಗದರು ಅಥವಾ ಒಡಹುಟ್ಟಿದ ಸಹೋದರ, ಸಹೋದರಿಯರೇ ಆಸ್ತಿ ಪಾಲು ವಿಷಯದಲ್ಲಿ ತಕರಾರು ಮಾಡುವ ಸಾಧ್ಯತೆ. ಗುರು ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು. ನಿಮಗೆ ನ್ಯಾಯಯುತವಾಗಿ ಬರಬೇಕಾದ ಪಾಲು ದೊರೆಯುವುದು.
ಅದೃಷ್ಟ ಸಂಖ್ಯೆ:2
ಕಟಕ
ಕೃಷಿಕರಿಗೆ ಭೂಮಿಗೆ ಸಂಬಂಧಿಸಿದ ಸೃಜನಾತ್ಮಕ ಕಾರ್ಯಯೋಜನೆಗಳಲ್ಲಿ ಇತರೆ ರೈತಾಪಿ ಜನರ ಬೆಂಬಲ ದೊರೆಯುವುದು. ಹಾಗಾಗಿ ಕೆಲವರು ಜಮೀನು, ಆಸ್ತಿ ಖರೀದಿಸಲು ಮುಂದಾಗುವರು. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುವರು.ಒಳ್ಳೆಯ ರೀತಿಯಲ್ಲಿ ಲಾಭಕ್ಕೆ ದಾರಿ ಆಗಬಹುದಾದ ವಹಿವಾಟುಗಳನ್ನು ನೀವು ಹೆಚ್ಚಿನ ಎಚ್ಚರದಿಂದಲೇ ನಡೆಸಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರದಲ್ಲಿ ಅನುಕೂಲವಾಗುವುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಹೆಂಡ ಕುಡಿದರು ಎಂದೇ ಮಾತನಾಡುವರು. ಯಾವುದೇ ಕಾರ್ಯ ಮಾಡುವ ಮೊದಲು ಸ್ಥಾನಬಲ ಮುಖ್ಯ. ಯಾವುದೇ ವಿಷಯದಲ್ಲಿ ಸೂಕ್ತ ನಿರ್ಧಾರ ತಳೆಯುವ ಮುನ್ನ ಎರಡು ಬಾರಿ ಚಿಂತಿಸಿ.
ಅದೃಷ್ಟ ಸಂಖ್ಯೆ:4
ಸಿಂಹ
ಬರೀ ಬಾಯಿ ಮಾತಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ಸ್ವಾರ್ಥದ ಜೀವನ ಎಂದೂ ಉನ್ನತಮಟ್ಟಕ್ಕೆ ತರುವುದಿಲ್ಲ. ಹೃದಯ ವೈಶಾಲ್ಯತೆ ಬೆಳಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನಕ್ಕೆ ಸಹಾಯ ಹಸ್ತ ನೀಡಿ.ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ.
ಸುಲಭವಾಗಿ ಪರಿಹಾರವಾಗುವ ವಿಷಯಕ್ಕೆ ಜಗ್ಗಾಡದೆ ಅಥವಾ ಕಾದಾಡದೆ ಸುಮ್ಮನೆ ಮಾತುಕತೆ ನಡೆಸಿ. ಇದರಿಂದ ಒಳಿತಾಗುವುದು. ನಿಮಗೆ ಇತರರಿಗೆ ಸಹಾಯ ಮಾಡಲು ಮನಸ್ಸು ಇಲ್ಲದಿದ್ದರೆ ಸಹಾಯ ಮಾಡುವವರಿಗೆ ದಾರಿ ತಪ್ಪಿಸಬೇಡಿ.
ಅದೃಷ್ಟ ಸಂಖ್ಯೆ:6
ಕನ್ಯಾ
ನಿಮ್ಮ ಎದುರೇ ಎದುರಾಳಿಗಳನ್ನು ಹೊಗಳುವ ಧೂರ್ತರ ಬಗೆಗೆ ಕಿಡಿಕಾರದಿರಿ. ಸಹನೆಯಿಂದ ಒಳಿತಾಗುವುದು ಮತ್ತು ಇದರಿಂದ ಒಂದು ದೊಡ್ಡ ಪಾಠವನ್ನು ಕಲಿಯುವಿರಿ. ನಿಮ್ಮ ಕೈಲಿ ಆದರೆ ಕೆಲಸಗಳನ್ನು ಒಪ್ಪಿಕೊಳ್ಳಿ. ಇಲ್ಲವೆ ನಯವಾಗಿ ತಿರಸ್ಕರಿಸಿ.ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯವರ್ತಿತನ ಹಾಗೂ ಮಾರಾಟದ ವ್ಯವಹಾರಗಳಲ್ಲಿ ವಿಶೇಷವಾದ ಎಚ್ಚರಿಕೆ ಇರಲಿ. ಸೂಕ್ತವಾದ ದಾಖಲೆಗಳೊಂದಿಗೆ ವ್ಯವಹರಿಸುವುದು ಉತ್ತಮ. ಈ ಸಂಬಂಧ ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ.
ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಸರಿಹೋಗದು ಎಂಬ ಜಾಣ್ಮೆಯ ಗಾದೆ ಮಾತು ನಿಮಗೆ ನೆನಪಾಗುವುದು. ಆದಾಗ್ಯೂ ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಿ. ಎಲ್ಲವೂ ಸುಗಮವಾಗುವುದು.
ಅದೃಷ್ಟ ಸಂಖ್ಯೆ:4
ತುಲಾ
ಮ್ಯಾನೇಜ್ಮೆಂಟ್ಗೆ ಸಂಬಂಧಪಟ್ಟಂತೆ ಉತ್ತಮ ಸಂವಹನಶೀಲರಾದ ನೀವು ಪ್ರಮುಖ ಕಾರ್ಯಾಗಾರದಲ್ಲಿ ಕೇಂದ್ರಬಿಂದುವಾಗುವಿರಿ. ನಿಮ್ಮ ಮಾತುಕತೆ ಮತ್ತು ವಿಚಾರ ಲಹರಿಯ ಪ್ರಭಾವದಿಂದ ಜನರು ನಿಮ್ಮತ್ತ ಆಕರ್ಷಿತರಾಗುವರು.ಸಿನಿಮಾಗೆ ಸಂಬಂಧಿಸಿದ, ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುವುದು ಸೂಕ್ತವಲ್ಲ. ಅಂತೆಯೆ ಕಟ್ಟಡ ಕೆಲಸಗಾರರು, ತಾಂತ್ರಿಕರು ಎಚ್ಚರಿಕೆಯಿಂದ ಕೆಲಸ ತೆಗೆದುಕೊಳ್ಳಿ. ಹಣಕಾಸಿನ ಪರಿಸ್ಥಿತಿ ಬಿಗಡಾಯಿಸುವ ಸಂದರ್ಭ ಇರುತ್ತದೆ.ವಿದೇಶದಿಂದ ಬರುವ ಸ್ನೇಹಿತ ಅಥವಾ ಬಂಧುಗಳ ಅನಿರೀಕ್ಷಿತ ಆಗಮನದಿಂದ ಬಹುದಿನದ ವ್ಯಾಜ್ಯ ಸಮಾಪ್ತಿಯಾಗುವುದು. ಕೆಲಸ ಕಾರ್ಯಗಳಲ್ಲಿನ ನಿಮ್ಮ ನಿಷ್ಠೆ ನಿಮಗೆ ಗೌರವ ತಂದುಕೊಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:8
ವೃಶ್ಚಿಕ
ಮಕ್ಕಳು ಜೀವನಾನುಭವದ ಕೊರತೆಯಿಂದ ಕೆಲ ತಪ್ಪುಗಳನ್ನು ಮಾಡುವರು. ಹಾಗಂತ ಅವರ ಮೇಲೆ ಹೆಚ್ಚು ಕೋಪಗೊಳ್ಳದೆ ಶಾಂತ ರೀತಿಯಿಂದ ಅವರನ್ನು ತಿದ್ದಲು ಪ್ರಯತ್ನಿಸಿ. ಅವರು ತಮ್ಮ ತಪ್ಪನ್ನು ಅರಿತು ತಿದ್ದಿಕೊಳ್ಳುವರು.
ನೆರೆಹೊರೆಯ ಜನರ ಜತೆ ಎಷ್ಟೇ ಸೌಹಾರ್ದತೆಯಿಂದ ಇದ್ದರೂ ಅವರು ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಜಗಳ ತೆಗೆಯುವ ಸಾಧ್ಯತೆ ಇರುತ್ತದೆ. ಸದ್ಯದ ಗ್ರಹಸ್ಥಿತಿ ಸರಿ ಇಲ್ಲದ ಕಾರಣ ಕೆಲವನ್ನು ಕಂಡರೂ ಕಾಣದಂತೆ ಇರಬೇಕಾಗುವುದು.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆ ಮಾತು ತಿಳಿದೂ ದೂರದ ಬಂಧುಗಳು ಸಹಾಯ ಮಾಡುವರೆಂಬ ಭ್ರಮೆಯಲ್ಲಿರಬೇಡಿ. ಸದ್ಯದ ಗ್ರಹಸ್ಥಿತಿಗಳು ಪೂರಕವಾಗಿಲ್ಲದ ಕಾರಣ ಅರಿತು ಸುಮ್ಮನಿರುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ:9
ಧನುಸ್ಸು
ಕಿರಿಕಿರಿಗಳು ಸಮುದ್ರದ ಅಲೆಗಳಂತೆ ಒಂದರ ಹಿಂದೆ ಮತ್ತೊಂದು ಬರುತ್ತಲೇ ಇರುತ್ತವೆ. ಆದರೆ ಅದನ್ನು ಎದುರಿಸಿ ಅದರೊಂದಿಗೆ ಸ್ನೇಹ ಸಂಪರ್ಕವನ್ನು ಬೆಳೆಸಿಕೊಂಡಲ್ಲಿ ಮನಸ್ಸಿಗೆ ಹರ್ಷವುಂಟಾಗುವುದು.
ದುಷ್ಮನ್ ಕಹಾ ಹೇ ಅಂದರೆ ಬಗಲ್ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ. ಹತ್ತಿರದವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಂದರ್ಭ ಇದೆ. ಆದಷ್ಟು ಅಪರಿಚಿತರಿಂದ ದೂರವಿರಿ. ಪ್ರತಿ ಹಣಕಾಸಿನ ವ್ಯವಹಾರಕ್ಕೆ ಲೆಕ್ಕ ಪಕ್ಕಾ ಇಡಿ.ಎಷ್ಟೇ ಕೂಗಾಡಿದರೂ ಕೋಪ ಅನರ್ಥಕ್ಕೆ ಕಾರಣವಾಗುವುದೇ ಹೊರತು ಅದರಿಂದ ಯಾವ ಕೆಲಸ ಕಾರ್ಯವೂ ಕೈಗೂಡುವುದಿಲ್ಲ. ಕುಟುಂಬ ಸದಸ್ಯರ ಭಾವನೆಗಳಿಗೂ ಬೆಲೆ ಕೊಡಿ ಮತ್ತು ತಾಳ್ಮೆಯಿಂದ ಇರಿ.
ಅದೃಷ್ಟ ಸಂಖ್ಯೆ:9
ಮಕರ
ಮನಸ್ಸನ್ನು ಗೊಂದಲಕ್ಕೆ ಈಡು ಮಾಡುವಂತಹ ಅಸಹಜ ಪ್ರೇಮ ಪ್ರಕರಣಗಳಿಂದ ದೂರ ಇರುವುದು ಒಳ್ಳೆಯದು. ಸದ್ಯಕ್ಕೆ ಗ್ರಹಬಲ ಇಲ್ಲದೆ ಇರುವುದರಿಂದ ಮನೆಯ ಹಿರಿಯರಿಂದ ಈ ಬಗ್ಗೆ ವಿರೋಧ ವ್ಯಕ್ತವಾಗುವ ಸಂಭವ ಇರುತ್ತದೆ.ಭಗವಂತನ ಒಲುಮೆ ಇದ್ದರೆ ಸಾಕು ಬೇರೆ ಯಾರ ಹಂಗೂ ಬೇಡ. ಅಂತೆಯೆ ನಿಮ್ಮ ಕಠಿಣ ತಪಸ್ಸಿಗೆ, ಪರಿಶ್ರಮಕ್ಕೆ ತಕ್ಕಂತೆ ವ್ಯಾಪಾರ ವ್ಯವಹಾರದಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬರುವುದು. ಅದನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳಿ.ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವಸರದ ತೀರ್ಮಾನ ಅಪಹಾಸ್ಯಕ್ಕೆ ಗುರಿ ಆಗುವ ಸಂದರ್ಭ ಇರುತ್ತದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಅಧಿಕ ಖರ್ಚಿನ ದಾರಿ ಎದುರಾಗುವುದು.
ಅದೃಷ್ಟ ಸಂಖ್ಯೆ:6
ಕುಂಭ
ವಿಚಿತ್ರವಾದ ರೀತಿಯಲ್ಲಿ ನಿಮ್ಮ ವಿರೋಧಿಗಳೇ ನಿಮ್ಮನ್ನು ಬೆಂಬಲಿಸುವರು. ಹಾಗಾಗಿ ನಿಮ್ಮ ಯಶಸ್ಸಿನ ಹಾದಿಗೆ ಅಡ್ಡಲಾಗಿದ್ದ ಕೆಲವು ವಿಚಾರಗಳು ಅಲ್ಲಿಯೇ ಸ್ಥಗಿತಗೊಂಡು ಯಶಸ್ಸಿನ ಹಾದಿ ಸುಗಮವಾಗಲಿದೆ.
ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ. ಅವರ ಕೃಪಾಶೀರ್ವಾದವನ್ನು ಪಡೆಯಿರಿ.ವಿಷ್ಣು ಸಹಸ್ರನಾಮ ಪಾರಾಯಣದಿಂದ ಇಚ್ಛಿತ ಕಾರ್ಯಗಳು ಬೇಗನೆ ಕೈಗೂಡುವವು. ನೀವು ನಿಮ್ಮ ವಿದ್ಯಾಭ್ಯಾಸದಲ್ಲಿ ಚಾಕಚಕ್ಯತೆ ತೋರಿ ಅಂತಿಮ ಗುರಿ ತಲುಪಲು ಈ ಸ್ತೋತ್ರ ಸಹಕಾರಿಯಾಗುವುದು.
ಅದೃಷ್ಟ ಸಂಖ್ಯೆ:2
ಮೀನ
ನಿರೀಕ್ಷಿತ ವಿಷಯಗಳನ್ನು ಲೀಲಾಜಾಲವಾಗಿ ಎದುರಿಸಬಲ್ಲಿರಿ. ಅನಿರೀಕ್ಷಿತ ವಿಚಾರಗಳ ಬಗೆಗೂ ಗಮನವಿರಲಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವರು. ಅಂತೆಯೆ ಜೇಬಿನಲ್ಲಿರುವ ಹಣಕ್ಕೆ ತಕ್ಕಷ್ಟು ವ್ಯವಹರಿಸುವುದು ಉತ್ತಮ.ವಿಶಿಷ್ಟವಾದ ಮತ್ತು ನಿಗೂಢವಾದ ಅನುಭವವೊಂದು ನಿಮ್ಮ ಪಾಲಿಗೆ ಲಭ್ಯವಾಗಲಿದೆ. ಅದರಿಂದ ಅಧ್ಯಾತ್ಮದ ಹರಿವು ಹೆಚ್ಚಾಗುವುದು. ಅಂತರ್ಮುಖಿಗಳಾಗಿ ದೇವರ ಆರಾಧನೆ ಮಾಡುವಿರಿ.ಕೆಲವು ಪ್ರಮುಖ ಜವಾಬ್ದಾರಿಗಳಿಂದ ನುಣುಚಿಕೊಳ್ಳಲು ಆಗುವುದಿಲ್ಲ. ಅಂತೆಯೇ ಬಹು ಮುಖ್ಯವಾದ ಕಡತವೊಂದನ್ನು ಹುಡುಕಿಕೊಡಲೇ ಬೇಕೆಂದು ನಿಮ್ಮ ಮೇಲಧಿಕಾರಿಗಳು ಆದೇಶ ಹೊರಡಿಸುವರು. ದೇವರನ್ನು ಸ್ಮರಿಸಿ ಕಾರ್ಯ ಪ್ರವೃತ್ತರಾಗಿ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp