For Quick Alerts
ALLOW NOTIFICATIONS  
For Daily Alerts

27-10-2018: ಶನಿವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಶನಿವಾರದ ದಿನ ಶನಿಯು ಮನುಷ್ಯ ಜೀವನದ ಒಂದೊಂದೂ ಕಾರ್ಯದ ನಂತರವೂ ಫಲವನ್ನು ಅಥವಾ ಶಿಕ್ಷೆಯನ್ನು ಯೋಗ್ಯತೆಗನುಸಾರವಾಗಿ ನೀಡುತ್ತಾನೆ .ಶನಿಗೆ ಶಿವ ಎಂದರೆ ಪ್ರಿಯ ಆದ್ದರಿಂದ ಶಿವನ ಆರಾಧನೆ ಮಾಡುವುದು. ಕಶ್ಯಪರಿಗೆ ಅದಿತಿಯಲ್ಲಿ ಜನಿಸಿದ ಮಗ ಜಗತ್ತನ್ನೇ ಬೆಳಗುವ ಸೂರ್ಯ. ಇಂತಹ ಸೂರ್ಯನ ಪತ್ನಿ ಸಂಜ್ಞೆಯ ಛಾಯೆಯಿಂದ ಸೃಷ್ಟಿ ಹೊಂದಿದ ಅವಳನ್ನೇ ಹೋಲುವ ಛಾಯಾದೇವಿ ಪುತ್ರನೇ ಶನಿ ಅರ್ಥಾತ್ ಸೂರ್ಯ ಪುತ್ರ.

your daily horoscope-27-october-2018

ಶನಿಯು ನ್ಯಾಯಾಧೀಶನು ಹೌದು ಪಾಪ ಕರ್ಮಗಳನ್ನು ಅಳೆಯುತ್ತಾನೆ, ಆದ್ದರಿಂದ ಶನಿದೇವನನ್ನು ಒಲಿಸಿಕೊಳ್ಳಲು ನಾನಾ ಬಗೆಯ ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ. ಈ ಶನಿವಾರದಿಂದ ಹನ್ನೆರಡು ರಾಶಿಗಳಿಗೆ ಲಾಭತರುವನಾಗಿರುತ್ತಾನೆ. ಶನಿ ದೈವನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ಶು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ

ಮೇಷ

ಅನ್ಯರು ನಿಮ್ಮ ದಾರಿಯನ್ನು ತಪ್ಪಿಸಲು ಹೊಂಚು ಹಾಕುತ್ತಿದ್ದಾರೆ. ದೂರ್ತರನ್ನು ನಯವಾಗಿಯೇ ದೂರವಿಡುವಲ್ಲಿ ಗುರುವಿನ ಆಶೀರ್ವಾದ ಸಹಕಾರ ದೊರೆಯುವುದು. ನಿಮ್ಮ ದಾರಿಯನ್ನು ತಪ್ಪಿಸಲು ಬರುವವರೇ ದಾರಿ ತಪ್ಪುವರು. ನಿಮ್ಮ ನಡೆ ನುಡಿಯನ್ನು ಪರೀಕ್ಷಿಸಿ ಮುಂದಿನ ವಿಚಾರ ನಿಷ್ಕರ್ಶಿಸಲು ಜನರು ಕಾದಿದ್ದಾರೆ. ನಿಮ್ಮ ತಾಳ್ಮೆಯ ಜೀವನ ಇತರರಿಗೆ ಮಾದರಿಯಾಗಲಿದೆ. ರಾಜಕೀಯ ನೇತಾರರಿಗೆ ಹರ್ಷ ತಂದುಕೊಡುವ ದಿನವಾಗಿದೆ. ನಿಮ್ಮ ನಡೆನುಡಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಪರ್ಕಿಸುವ ಮತ್ತು ಸಂವಹನ ನಡೆಸುವ ಕ್ರಿಯೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನಿಮ್ಮಿಂದ ನಿಮ್ಮ ಕುಟುಂಬದ ಜನರು ನಾಲ್ಕು ಒಳ್ಳೆಯ ಮಾತುಗಳನ್ನು ನಿರೀಕ್ಷಿಸಿರುತ್ತಾರೆ. ಆದರೆ ಎಲ್ಲಾ ವಿಷಯದಲ್ಲೂ ತಪ್ಪನ್ನು ಹುಡುಕುವ ನಿಮ್ಮ ಸ್ವಭಾವದಿಂದಾಗಿ ನಿಮ್ಮ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಹಾಗಾಗದಂತೆ ಎಚ್ಚರ ವಹಿಸಿ.ಹಿಡಿದ ಕೆಲಸವನ್ನು ಶತಾಯ, ಗತಾಯ ಪೂರೈಸಬೇಕೆಂಬ ತುಡಿತಕ್ಕೆ ಭಗವಂತನು ಸಹಾಯ ಮಾಡುವನು. ಇದರ ಸಾಫಲ್ಯತೆಗಾಗಿ ಹೊಸದಾದ ದಾರಿಗಳು ಗೋಚರಿಸುವವು. ಆದರೆ ಇದಕ್ಕೂ ಮುನ್ನ ಸಂಗಾತಿಯ ಒಪ್ಪಿಗೆ ಪಡೆಯಿರಿ.ನಿಮ್ಮ ದ್ವಂದ್ವ ನಿಲುವಿನ ವಿಚಾರಧಾರೆಯಿಂದ ನಿಮ್ಮನ್ನು ಇತರರು ತಪ್ಪಾಗಿ ಅರ್ಥೈ‍ಸಿಕೊಳ್ಳುವ ಸಾಧ್ಯತೆ ಇದೆ. ಮನಸ್ಸಿನ ಏಕಾಗ್ರತೆಗಾಗಿ ಪರಮಶಿವನ ಧ್ಯಾನ ಮಾಡಿ. ಯಾರೊಟ್ಟಿಗೂ ಅನವಶ್ಯಕ ಮಾತುಗಳನ್ನು ಆಡದಿರಿ. ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ನಿಮಗೆ ಕಾಲ ಕಾಲಕ್ಕೆ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗುವುದರಿಂದ ನಿಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಅವಕಾಶಗಳು ದೊರೆಯುವವು. ಅಂತಹ ಸುಂದರ ಅವಕಾಶಗಳನ್ನು ಹಾಳು ಮಾಡಿಕೊಳ್ಳಬೇಡಿ.ಅತಿ ಬುದ್ಧಿಚಾತುರ‍್ಯವುಳ್ಳವರಾದ ನೀವು ವಿನಾಕಾರಣ ಇನ್ನೊಬ್ಬರ ವಿಚಾರದಲ್ಲಿ ತಲೆ ಹಾಕಿ ಅವಮಾನಕ್ಕೆ ಒಳಗಾಗುವಿರಿ. ಕೆಲವರು ಇದನ್ನೆ ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಆದರೆ ಗುರುವಿನ ಕೃಪಾಶೀರ್ವಾದ ಇರುವುದರಿಂದ ತೊಂದರೆಯಿಲ್ಲ.ಕಾಲಚಕ್ರದ ಉರುಳುವಿಕೆಯ ದೆಸೆಯಿಂದ ಕೆಲವು ಕಾರ್ಯಗಳು ದಿಢೀರನೆ ಯಶಸ್ಸನ್ನು, ಬದಲಾವಣೆಯನ್ನು ತಂದುಕೊಡುವುದು. ಇದರಿಂದ ಮಾನಸಿಕ ನೆಮ್ಮದಿ ಸಂತೋಷ ಉಂಟಾಗುವುದು. ಮಡದಿ ಮಕ್ಕಳ ಸಂಭ್ರಮಕ್ಕೆ ಕಾರಣವಾಗುವುದು ಅದೃಷ್ಟ ಸಂಖ್ಯೆ:2

ಕಟಕ

ಕಟಕ

ತಾಳ್ಮೆಯೊಂದೇ ನಿಮ್ಮನ್ನು ರಕ್ಷಿಸುವ ವಜ್ರಾಯುಧವಾಗಿರುತ್ತದೆ. ಸಹೋದರ ಸಂಗಡ ಮನಸ್ತಾಪ, ಕಲಹಗಳು ಸಂಭವಿಸುವ ಸಂದರ್ಭವಿದೆ. ಆತ್ಮೀಯರ ಸಂಗಡ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡು, ತಾಳ್ಮೆಯಿಂದ ವರ್ತಿಸಿ. ಶುಭವಾಗುವುದು. ವಿವಿಧ ತರಹದ ಜನರು ನಿಮ್ಮನ್ನು ಭೇಟಿ ಆಗಲಿದ್ದಾರೆ. ಅವರು ನೀವು ಮಾಡುವ ಕೆಲಸದಲ್ಲಿನ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸುವರು. ಇದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿಯತ್ತ ಸಾಗುವುದು. ಹಣಕಾಸು ಕೂಡಾ ಉತ್ತಮವಾಗಲಿದೆ. ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದು ಅನಿವಾರ್ಯ. ಗ್ರಹಗಳು ನಿಮ್ಮನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸಲು ಕಾದಿವೆ. ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎಂದು ಭಗವಂತನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ. ಅದೃಷ್ಟ ಸಂಖ್ಯೆ:3

ಸಿಂಹ

ಸಿಂಹ

ಒಳಿತಿಗಾಗಿನ ದಾರಿಯನ್ನು ಅರಸುತ್ತಿರುವಿರಾದರೆ ಬಾಳಸಂಗಾತಿಯ ಅನಿಸಿಕೆಯನ್ನು ಆಲಿಸಿ ಅವರ ಮಾತಿಗೂ ಬೆಲೆ ಕೊಟ್ಟಲ್ಲಿ ಹೆಚ್ಚಿನ ಅನುಕೂಲವಾಗುವುದು. ಧಾರ್ಮಿಕ ಕ್ಷೇತ್ರದಲ್ಲಿನ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವುದು.

ಯಾವುದೇ ವಿಚಾರದಲ್ಲೂ ಸೂಕ್ಷ್ಮ ಒತ್ತಡಗಳನ್ನು ಕಾಣುವಿರಿ. ಆದರೆ ಅದನ್ನು ಅರ್ಧದಲ್ಲಿಯೇ ನಿಲ್ಲಿಸದಿರಿ. ಕೌಟುಂಬಿಕ ಜೀವನದಲ್ಲಿ ಮಡದಿ ಮಕ್ಕಳು ನಿಮಗೆ ಸಹಾಯ ಮಾಡುವರು. ನೀವು ಬಯಸಿದ ಕಾರ್ಯಗಳು ಶೀಘ್ರದಲ್ಲಿಯೇ ಕೈಗೂಡುವವು. ನಿಮ್ಮ ಸುತ್ತಮುತ್ತಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳುವಿರಿ ಮತ್ತು ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು. ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ಅಪಮಾನ ಮಾಡುವ ಜನರನ್ನು ಅಸಮಾಧಾನ ತೋರದೆ ಉಪೇಕ್ಷಿಸಿರಿ. ಧೈರ್ಯಂ ಸರ್ವತ್ರ ಸಾಧನಂ. ಅಪಮಾನವಾದರೆ ಒಳ್ಳೆಯದು ಎಂದು ದಾಸರು ಹಾಡಿದ್ದಾರೆ. ಇದರಿಂದ ನಿಮಗೆ ಸತ್ಯದ ದಾರಿ ತಿಳಿಯುವುದು. ಮಹತ್ತರ ಯೋಜನೆಗಳಿಗೆ ಅಲ್ಪ ವಿಘ್ನಗಳು ತಲೆದೋರಿದರೂ ಭಗವಂತನ ಕೃಪೆಯಿಂದ ಆ ವಿಘ್ನಗಳನ್ನು ದಾಟುವಿರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಬಂಧುಗಳಿಂದ ಪ್ರಶಂಸೆಯನ್ನು ಪಡೆಯುವಿರಿ. ಭಗವಂತನ ಕೃಪೆ ನಿಮ್ಮ ಮೇಲಿರುವುದರಿಂದ ನಿಮಗೆ ಬರುವ ಅಪವಾದಗಳಿಂದ ಮುಕ್ತರಾಗುವಿರಿ ಮತ್ತು ನಿಮ್ಮ ಸಹಪಾಠಿಗಳು ಹಾಗೂ ಸಹೋದ್ಯೋಗಿಗಳ ನಡುವೆ ಗೌರವವನ್ನು ಸಂಪಾದಿಸುವಿರಿ.

ಅದೃಷ್ಟ ಸಂಖ್ಯೆ:7

ತುಲಾ

ತುಲಾ

ದೂರದ ಊರಿನ ಪ್ರವಾಸವನ್ನು ಕೈಬಿಡುವುದೇ ಒಳ್ಳೆಯದು. ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿದರೆ ಉತ್ತಮ. ಹಣಕಾಸಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುವುದು. ಕೆಲಸದ ಒತ್ತಡವು ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸುವುದು. ಎಲ್ಲಾ ಬಿಟ್ಟು ಎಲ್ಲಾದರೂ ಹೋಗಿ ಬಿಡಬೇಕೆಂದು ಅನಿಸುವುದು. ಆದರೆ ಎಲ್ಲೇ ಹೋದರು ನೀವು ಜವಾಬ್ದಾರಿಯ ಸ್ಥಾನವನ್ನು ಬಿಡಲು ಆಗುವುದಿಲ್ಲ. ತಾಳ್ಮೆಯಿಂದ ಎದುರಿಸಿ ಒಳಿತಾಗುವುದು. ಪದೇ ಪದೇ ನಿಮ್ಮ ವಿರುದ್ಧದ ಮಾತುಗಳು ಕೇಳಿಸುವುದು. ಅದನ್ನು ಕೇಳಿ ನಕ್ಕುಬಿಡಿ. ನೀವು ಬದಲಾಗಿರುವ ವಿಚಾರ ಅವರಿಗೆ ತಿಳಿದಿಲ್ಲ ಅಥವಾ ಹಿಂದಿನ ದಿನಗಳ ಸ್ವಭಾವವನ್ನು ಮೆಲುಕು ಹಾಕಿದರೆ ನಿಮಗೇ ನಗುಬರುವ ಸಂಭವವಿದೆ. ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ಬಾಸ್‌ ಜತೆಗಿನ ಜಗಳ ಕೈಬಿಡಿ. ಕೆಲವು ವಿಚಾರಗಳಲ್ಲಿನ ನಿಮ್ಮ ತಪ್ಪುಗಳೇ ನಿಮ್ಮನ್ನು ಸುತ್ತಿಕೊಳ್ಳುವುದು. ಹಾಗಾಗಿ ಮೇಲಧಿಕಾರಿಗಳ ಒಲುಮೆಯನ್ನು ಗಳಿಸುವುದು ಅತಿ ಮಹತ್ವದ ಕೆಲಸವಾಗಿರುತ್ತದೆ. ಬಾಸ್‌ನ ಬಗ್ಗೆ ಸಹೋದ್ಯೋಗಿಗಳ ಜತೆ ಮಾತನಾಡದಿರಿ. ಕಬ್ಬಿಣದ ವಸ್ತುಗಳ ಮಾರಾಟಗಾರರಿಗೆ ಅನುಕೂಲವಾಗುವುದು. ಕಬ್ಬಿಣ ವಸ್ತು ಎಂದು ತಾತ್ಸಾರ ಮಾಡಬಾರದು. ಶನಿ ದೇವರ ಅನುಗ್ರಹ ಪಡೆಯಲು ಕಬ್ಬಿಣ ಇಲ್ಲವೆ ಎಳ್ಳನ್ನು ದಾನ ಮಾಡುವುದು ಒಳಿತು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಅನೇಕ ರೀತಿಯ ತಾಂತ್ರಿಕ ಪರಿಜ್ಞಾನವು ಪರಿಪಕ್ವವಾಗುತ್ತಿರುವ ಈ ಸಂದರ್ಭದಲ್ಲಿ ನಿಮಗೆ ಅದನ್ನು ನಿಭಾಯಿಸಲು ಹಣದ ಅಡಚಣೆ ಆಗುವುದು. ನಿಮ್ಮ ಆಪ್ತ ಗೆಳೆಯರೆ ನಿಮಗೆ ಸಹಾಯ ಮಾಡಲು ಹಿಂಜರಿಯುವರು. ಅದೃಷ್ಟ ಸಂಖ್ಯೆ:6

ಧನಸ್ಸು

ಧನಸ್ಸು

ಕಟ್ಟ ಕಡೆಗಿನ ಜಯದ ಪತಾಕೆ ನಿಮ್ಮದಾಗುವುದು. ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮಗೆ ಯಶಸ್ಸು ದೊರೆಯುವುದು. ಗುರುವಿನ ಆಶೀರ್ವಾದವಿರುವುದರಿಂದ ನಿಮ್ಮ ಶತ್ರುಗಳು ಶರಣಾಗತಿಯನ್ನು ಹೊಂದುವರು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ಇಟ್ಟ ಗುರಿ ತಲುಪುವಲ್ಲಿ ಯಶಸ್ಸು ಹೊಂದುವಿರಿ. ಗುರುವಿನ ಅನುಗ್ರಹದಿಂದ ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಿರಿ. ಬಡವರಿಗೆ ಆಹಾರ ನೀಡಿ ಮತ್ತು ಆಂಜನೇಯ ಸ್ತೋತ್ರ ಪಠಿಸಿ. ಆಳು ಮಾಡಿದ್ದು ಹಾಳು ಎನ್ನವು ಗಾದೆ ಮಾತನ್ನು ನೆನಪಿಗೆ ತರುವ ಘಟನೆ ಜರುಗುವುದು. ಹಾಗಾಗುವ ಮುನ್ನ ನೀವೇ ಆ ಕೆಲಸವನ್ನು ಮಾಡಲು ತೊಡಗಿದಲ್ಲಿ ಯಶಸ್ಸು ದೊರೆಯುವುದು. ಕಾರ್ಯ ಒತ್ತಡದಲ್ಲಿ ಪರರಿಗೆ ವಹಿಸಿದ ಕೆಲಸವು ಪೂರ್ಣಗೊಳ್ಳುವುದಿಲ್ಲ. ಅದೃಷ್ಟ ಸಂಖ್ಯೆ:6

ಮಕರ

ಮಕರ

ಕೈಗೂಡದೆ ಇದ್ದ ಹಳೆಯ ಒಡಂಬಡಿಕೆಗಳಿಗೆ ಪುನಃ ಚಾಲನೆ ಸಿಗುವುದು. ಆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವ ಆಶಾಭಾವನೆ ಮೂಡುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಭಿಕ್ಷುಕರಿಗೆ ಅನ್ನದಾನ ನೀಡಿ.

ದಶಮ ಸ್ಥಾನದ ಗುರುವು ಉದ್ಯೋಗದಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆ ಇರುತ್ತದೆ. ಕೆಲವರು ನೂತನ ಮನೆಯ ಕಟ್ಟಡದ ಕೆಲಸವನ್ನು ಆರಂಭಿಸುವರು. ಕೆಲವರಿಗೆ ನೂತನ ಉದ್ಯೋಗವು ದೊರೆಯುವ ಸಾಧ್ಯತೆ ಇರುತ್ತದೆ.

ಒಂದನ್ನು ಪಡೆಯಲು ಮತ್ತೊಂದರ ತ್ಯಾಗದ ಅನಿವಾರ್ಯತೆ ಇರುತ್ತದೆ. ಮುಷ್ಟಿ ಕಾಳಗಳನ್ನು ಚೆಲ್ಲಿ ಮೂಟೆ ಕಾಳುಗಳನ್ನು ಬಾಚಿಕೊಳ್ಳುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸು ಸಾಧಿಸಲು ಹಣವು ನೀರಿನಂತೆ ಖರ್ಚಾಗುವುದು. ಈ ಬಗ್ಗೆ ಬೇಸರ ಬೇಡ. ಅದೃಷ್ಟ ಸಂಖ್ಯೆ:9

ಕುಂಭ

ಕುಂಭ

ಸ್ಥಿರಾಸ್ಥಿ ಖರೀದಿಸಲು ಮನಸ್ಸು ಮಾಡುವಿರಿ. ಅಂತೆಯೇ ಈ ಬಗ್ಗೆ ಬ್ಯಾಂಕಿನ ಸಹಕಾರ ದೊರೆಯುವುದು. ಇದಲ್ಲದೆ ಬೆಲೆ ಬಾಳುವ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಬಾಲ್ಯದ ಸ್ನೇಹಿತರು ನಿಮಗೆ ಸಹಕಾರ ನೀಡುವರು. ನಿಮ್ಮ ಯಶಸ್ಸಿನ ಹಾದಿಯು ಸುಗಮವಾಗಲಿದೆ. ಇದುವರೆಗೂ ಪಟ್ಟ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ನೂತನ ಗೆಳೆಯರು ನಿಮ್ಮ ಸ್ನೇಹ ಹಸ್ತವನ್ನು ಬಯಸಿ ಬರುವರು. ಬಂಧು, ಬಾಂಧವರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಬರಹಗಾರರಿಗೆ ಸರ್ಕಾರದಿಂದ ಸನ್ಮಾನ ಹಾಗೂ ಹೆಚ್ಚಿನ ಸೌಲಭ್ಯಗಳು ದೊರೆಯಲಿವೆ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:2

ಮೀನ

ಮೀನ

ನೀವು ಬಹು ಚಾಣಾಕ್ಷ ರು. ಅಂತೆಯೇ ನಿಮ್ಮ ತಾರ್ಕಿಕ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡರೆ ಧನಲಾಭ ತಾನೇ ತಾನಾಗಿ ಬರುವುದು. ಮಕ್ಕಳು ನಿಮ್ಮ ವಿಷಯದ ಬಗ್ಗೆ ಅಸಡ್ಡೆ ತೋರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡಿ. ಮನೋವೇಗದಲ್ಲಿ ಎಲ್ಲವನ್ನು ದಿಢೀರನೆ ಮಾಡಿ ಮುಗಿಸಬೇಕೆಂಬ ತರಾತುರಿಯು ಉತ್ತಮವಲ್ಲ. ಸಾವಧಾನದಿಂದ ಎರಡೆರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ನಿಮ್ಮ ಹೃದಯ ವೈಶಾಲ್ಯಕ್ಕೆ ಯಾವಾಗಲೂ ಬೆಲೆ ಇರುತ್ತದೆ. ಒಂಟಿತನ ನಿಮ್ಮನ್ನು ಕಾಡುವುದು. ಕೆಲಸ ಕಾರ್ಯಗಳಲ್ಲಿನ ಹಿನ್ನಡೆಯಿಂದಾಗಿ ಮನೆಯಿಂದ ಹೊರಗೆ ಹೋಗಲಾರದೆ ಗೃಹಬಂಧನಕ್ಕೆ ಒಳಪಟ್ಟಂತೆ ಆಗುವುದು. ನಿಮ್ಮ ಯೋಜನೆಗಳ ಬಗ್ಗೆ ಪುನರ್‌ ಪರಿಶೀಲಿಸುವುದು ಒಳ್ಳೆಯದು. ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-27-october-2018

Know what astrology and the planets have in store for you today. Choose your zodiac sign and read the details...
Story first published: Friday, October 26, 2018, 16:31 [IST]
X
Desktop Bottom Promotion