Just In
- 6 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 7 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
27-11-2018: ಮಂಗಳವಾರದ ದಿನ ಭವಿಷ್ಯ
ಮಂಗಳವಾರದ ದಿನ ಪ್ರಾಚೀನ ಕಾಲದಲ್ಲಿ ಕೋಲಾ ಎನ್ನುವ ಮಹರ್ಷಿ ಒಂದು ದೈತ್ಯ ರಾಕ್ಷಸನಿಗೆ ಬಲಿಯಾಗುತ್ತಾರೆ. ಆ ರಾಕ್ಷಸನು ಹೆಚ್ಚು ಶಕ್ತಿ ಪಡೆಯುವ ನಿಟ್ಟಿನಲ್ಲಿ ತಪಸ್ಸು ಮಾಡುತ್ತಿದ್ದನು, ಶ್ರೀ ಮೂಕಾಂಬಿಕೆಯು ಸರಸ್ವತಿ ರೂಪದಲ್ಲಿ ಆ ರಾಕ್ಷಸನು ತನ್ನ ಇಚ್ಛೆಯನ್ನು ದೇವರ ಮುಂದೆ ಪ್ರಕಟಗೊಳಿಸದಂತೆ ಆತನನ್ನು ಮೂಕನನ್ನಾಗಿ ಮಾಡಿದಳು.ಮೂಕನಾದರಿಂದ ಆ ರಾಕ್ಷಸನ ಹೆಸರು ಮೂಕಾಸುರವೆಂದಾಯಿತು.
ಮೂಕನಾದ ಕಾರಣ ಆತಂಕಕ್ಕೊಳಗಾಗಿ ಆತನು ಋಷಿಮುನಿಗಳಿಗೆ ಕಾಟ ನೀಡಲಾರಂಭಿಸಿದನು. ಆಗ ಪಾರ್ವತಿಯು ಶಕ್ತಿಯ ರೂಪದಲ್ಲಿ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಹಾಗಾಗಿ ದೇವಿಯ ಹೆಸರು ಮೂಕಾಂಬಿಕೆ ಎಂದಾಯಿತು. ಕೋಲಾ ಮಹರ್ಷಿಯ ಹೆಸರಿನಿಂದ ಊರಿನ ಹೆಸರು ಕೊಲ್ಲೂರು ಎಂದಾಯಿತು.ಕೊಲ್ಲೂರು ಮುಕಾಂಬಿಕೆಯನ್ನು ನೆನೆಯುತ್ತಾಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807....
ಮೇಷ
ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.ಮಕ್ಕಳ ಪ್ರಗತಿ ಕಂಡು ಅವರ ಬೆನ್ನು ತಟ್ಟಿ ಹುರಿದುಂಬಿಸಿ. ಅವರು ನಿಮ್ಮ ಮನೋಭಾವನೆಗಳನ್ನು ಗುರುತಿಸಿ ಗೌರವಿಸುವರು. ಇದರಿಂದ ನಿಮಗೂ ಆನಂದ ಮತ್ತು ಕುಟುಂಬದಲ್ಲಿ ನೆಮ್ಮದಿ ಮೂಡುವುದು.
ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.ಅದೃಷ್ಟ ಸಂಖ್ಯೆ:2
ವೃಷಭ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ. ಹೊಸಬರ ಸಂಗಡ ಚಾಣಾಕ್ಷ ತನದಿಂದ ಮಾತುಗಳನ್ನು ಆಡುವಿರಿ. ಅವರು ನೀವೆಷ್ಟು ವಿವೇಚನಾಶಾಲಿಗಳು ಎಂದು ಕೊಂಡಾಡುವರು. ಆದರೆ ನಿಮ್ಮ ಆಂತರ್ಯವನ್ನು ಅವರ ಎದುರು ಬಹಿರಂಗ ಪಡಿಸದಿರಿ.ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ.ಅದೃಷ್ಟ ಸಂಖ್ಯೆ:1
ಮಿಥುನ
ಒಂದೇ ಸಲಕ್ಕೆ ದೊಡ್ಡ ಬಂಡವಾಳದ ಕಾರ್ಯ ಯೋಜನೆಗೆ ಕೈಹಾಕದಿರಿ. ನೀವು ಮಾಡುತ್ತಿರುವ ಕಾರ್ಯದ ಮೇಲೆ ನಿಗಾ ಇರಲಿ. ಹಣಕಾಸಿನ ವಿಷಯದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ಹಣ ಖರ್ಚು ಮಾಡುವುದು ಸುಲಭ ಗಳಿಸುವುದು ಕಠಿಣ.ಸದ್ಯದ ಪರಿಸ್ಥಿತಿಯಲ್ಲಿ ಹಗ್ಗ ಕೂಡ ಹಾವೆಂದು ಭ್ರಮಿಸಿ ಭಯ ಪಡುವ ಕ್ಷಣಗಳಾಗಿವೆ. ಅದಕ್ಕೆ ಈಗಿರುವ ಆರ್ಥಿಕ ಸಂಕಷ್ಟದ ದಿನಗಳೇ ಕಾರಣ. ಯಾವುದೇ ಬೃಹತ್ ಪ್ರಮಾಣದ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ.ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿಯುವ ದಡ್ಡತನ ತೋರದಿದ್ದರೇ ಕ್ಷೇಮ. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಬಡವರಿಗೆ ಆಹಾರ ನೀಡಿ.ಅದೃಷ್ಟ ಸಂಖ್ಯೆ:2
ಕಟಕ
ಮನೆ ಕಟ್ಟುವ ವಿಚಾರದಲ್ಲಿ ಅತಿಯಾದ ಅವಸರ ಬೇಡ. ಒಂದಿಷ್ಟು ವಿಚಾರಗಳನ್ನು ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ಕಚೇರಿ ಕೆಲಸ ಕಾರ್ಯದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ.ಸಕಲ ಅಭಯಗಳನ್ನು ಒದಗಿಸಿ ಚೈತನ್ಯಕ್ಕೆ ಕಾರಣವಾಗುವಂತಹ ಮಾತಾ ದುರ್ಗಾದೇವಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ.ನಿಮ್ಮದೇ ಆದ ಉತ್ತಮ ಕಾರ್ಯತಂತ್ರಗಳನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದಾರೆ. ಅದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುವುದು. ಮನೆಯಲ್ಲೂ ಮಡದಿ ಮಕ್ಕಳು ಸಂತಸವನ್ನುಂಟು ಮಾಡುವರು.ಅದೃಷ್ಟ ಸಂಖ್ಯೆ:8
ಸಿಂಹ
ಶತ್ರುಗಳು ಮೇಲುಗೈ ಸಾಧಿಸದಂತೆ ಕುಲದೇವರನ್ನು ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪ ನೆರವೇರಿಸಿಕೊಳ್ಳುವ ಅವಕಾಶ ಬರುತ್ತದೆ. ಆದರೂ ಕೆಲವು ಅಡೆತಡೆಗಳು ಉಂಟಾಗುವವು. ಶ್ರಮದಿಂದ ಕಾರ್ಯಸಿದ್ಧಿ ಆಗುತ್ತದೆ.ಯಾವ ರೀತಿ ಫಲ ಸಿಗಬಹುದೆಂದು ಹೇಳಲು ಆಗುವುದಿಲ್ಲ. ಆದರೆ ಆರೋಗ್ಯದ ಮೇಲಂತೂ ಪ್ರಭಾವ ಹೆಚ್ಚಿರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ನಿಮ್ಮ ಸಕಾರಾತ್ಮಕ ಚಿಂತನಾ ಶಕ್ತಿಯ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸಿ.ಅದೃಷ್ಟ ಸಂಖ್ಯೆ:7
ಕನ್ಯಾ
ವ್ಯಾಜ್ಯ ಸಂಬಂಧ ವಿಚಾರದಲ್ಲಿನ ಹೊಂದಾಣಿಕೆಗೆ ವಿರೋಧಿಗಳು ಸಹಕಾರ ನೀಡುತ್ತಾರೆ. ಇದರಿಂದ ಸಮಾಧಾನಕರ ನಿರ್ಣಯ ಒಡಮೂಡಲು ಅವಕಾಶಗಳು ಕೂಡಿ ಬರುತ್ತವೆ. ದೇವಿ ಆರಾಧನೆಯಿಂದ ಒಳಿತಾಗುವುದು.ಧನನಷ್ಟ ಮತ್ತು ಆರೋಗ್ಯದ ವಿಚಾರದಲ್ಲಿ ಹಲವು ಕಿರಿಕಿರಿ ಉಂಟಾಗುವುದು. ಕುಲದೇವರನ್ನು ಆರಾಧನೆ ಮಾಡಿ. ಕೆಲವರಿಗೆ ದೂರದ ಊರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.ಗ್ರಹಗಳ ಸ್ಥಿತಿಗತಿಯಿಂದಾಗಿ ಉತ್ತಮ ಅಧಿಕಾರದ ಸೂತ್ರ ಹಿಡಿಯುವ ಸಾಧ್ಯತೆ ಇದೆ. ನಿಮ್ಮ ಯೋಗ್ಯತೆಯನ್ನು ಸರಕಾರ ಗಮನಿಸಿ ನಿಮಗೆ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇರುತ್ತದೆ.ಅದೃಷ್ಟ ಸಂಖ್ಯೆ:8
ತುಲಾ
ಮನಸ್ಸಿನ ಸಂಕಲ್ಪ ಈಡೇರಿಸಿಕೊಳ್ಳಲು ದುರ್ಗಾದೇವಿಯನ್ನು ಸ್ತುತಿಸಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ತಿನ್ನಿಸಿ. ಉನ್ನತ ಹುದ್ದೆ ಅಲಂಕರಿಸಲು ಅಪರೂಪದ ಅವಕಾಶ ಬರುವುದು. ಅದನ್ನು ಸ್ವೀಕರಿಸಿ.ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೇಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗಳು ನಿಮಗೆ ಸಂಪೂರ್ಣ ಸಿದ್ಧಿ ಕೊಡಲು ಅಸಮರ್ಥವಾಗಿವೆ. ಹಾಗಾಗಿ ಜೀವನದಲ್ಲಿ ಸೋತು ಗೆಲ್ಲುವ ಬಯಕೆಯನ್ನು ಈಡೇರಿಸಿಕೊಳ್ಳುವುದು ಅವಶ್ಯ.ಅದೃಷ್ಟ ಸಂಖ್ಯೆ:7
ವೃಶ್ಚಿಕ
ಯಾರನ್ನೂ ದಿಢೀರನೆ ನಂಬಿ ಮೋಸ ಹೋಗದಿರಿ. ಬ್ಯಾಂಕಿನಿಂದ ತರುವ ಅಥವಾ ಕಟ್ಟಲು ಒಯ್ಯುತ್ತಿರುವ ಹಣದ ಬಗೆಗೆ ಎಚ್ಚರ ಇರಲಿ. ಹದ್ದಿನಂತೆ ಕಾಯುವ ಜನರಿದ್ದಾರೆ. ಅವರು ಹಣ ಲಪಟಾಯಿಸುವ ಸಾಧ್ಯತೆ ಇದೆ.ನೀವು ಮೇಲೇರಲು ಸೂಕ್ತ ಸಮಯವಾಗಿದ್ದು, ಜನರ ನಡುವೆ ವಿಶಿಷ್ಟ ಸ್ಥಾನ ಪಡೆದು ಪ್ರಶಂಸೆ ಗಿಟ್ಟಿಸಿಕೊಳ್ಳುವಿರಿ. ಕೆಲವು ಯೋಜನೆಗಳಿಗೆ ಸೂಕ್ತ ವಹಿವಾಟುದಾರರು ದೊರೆಯುವರು.ನಿಮ್ಮನ್ನು ನೀವು ಬಹುಮುಖ ಕ್ರಿಯಾಶೀಲತೆಯ ಫಲದಿಂದಾಗಿ ಮೇಲಕ್ಕೆ ಏರಿಸಿಕೊಳ್ಳಲು ಸೂಕ್ತವಾದ ದಿನಗಳಾಗಿವೆ. ವ್ಯಾಪಕವಾದ ಜನಬೆಂಬಲ ನಿಮ್ಮ ಬಗೆಗಿನಗೌರವಾದರಗಳು ಸಮಾಜದಲ್ಲಿ ಸ್ಪಷ್ಟವಾಗುವವು. ಕುಲದೇವರನ್ನು ಪ್ರಾರ್ಥನೆ ಮಾಡಿ.ಅದೃಷ್ಟ ಸಂಖ್ಯೆ:4
ಧನುಸ್ಸು
ಎಲ್ಲಾ ರೀತಿ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ನಿಮಗೆ ಶುಭ ದಿನ. ನಿಮಗೆ ಮುದ ನೀಡುವ ಒಂದು ವಾರ್ತೆ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು.ನಿಮ್ಮದೇ ಆದ ವಿಧಾನವನ್ನು ಗುರುತಿಸಿಕೊಳ್ಳಿ. ಈಡೇರಬೇಕಾದ ಹಲವಾರು ವಿಚಾರಗಳು ಬಗೆಹರಿಯುವವು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆ ಉಂಟಾಗುವುದು. ಬದಲಾದ ಕಾಲಧರ್ಮಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ ನೀವು ಅನೇಕ ರೀತಿಯ ಪ್ರಗತಿಯನ್ನು ಸಾಧಿಸಲಿದ್ದೀರಿ. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಿರಿಯರ ಆಶೀರ್ವಾದವೂ ದೊರೆಯುವುದು.ಅದೃಷ್ಟ ಸಂಖ್ಯೆ:6
ಮಕರ
ಮನೆ, ಆಫೀಸ್, ಮಿತ್ರರು, ವ್ಯಾವಹಾರಿಕ ಪ್ರಪಂಚ ಇತ್ಯಾದಿಗಳಲ್ಲಿ ಚುರುಕುತನ ತೋರುವುದರಿಂದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿಯುವವು. ಇದರಿಂದ ಮನಸ್ಸಿನಲ್ಲಿ ಪ್ರಶಾಂತತೆ ಇರುವುದು.ಆತ್ಮವಿಶ್ವಾಸ ಬಹಳ ಉತ್ತಮವಾದುದು. ನಿಮ್ಮ ಧೈರ್ಯ ಸ್ಥೈರ್ಯಗಳು ಅಸಾಧ್ಯ ಎನಿಸಿದ್ದನ್ನು ಸಾಧಿಸಿಕೊಡಲಿವೆ. ಮಕ್ಕಳ ವಿವಾಹದ ವಿಚಾರದಲ್ಲಿ ಒಂದು ದೃಢ ನಿರ್ಧಾರ ತಳೆಯುವುದು ಒಳ್ಳೆಯದು.ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವ ಪೂರ್ಣವಾಗಿರುತ್ತವೆ.ಅದೃಷ್ಟ ಸಂಖ್ಯೆ:2
ಕುಂಭ
ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.ವಾಸಕ್ಕೊಂದು ಮನೆ ಬಯಸುತ್ತಿರುವ ನೀವು ನಿಮ್ಮ ಯೋಜನೆಗೆ ಒಂದು ನಿಶ್ಚಿತವಾದ ರೂಪ ಕೊಡುವುದು ಒಳ್ಳೆಯದು. ಸಾಡೇಸಾತ್ ಶನಿಯ ಪ್ರಭಾವದಲ್ಲಿಯೇ ಮನೆ ಕಟ್ಟುವ ಅಥವಾ ಖರೀದಿಸುವ ಯೋಗ ಬರುವುದು.ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.
ಅದೃಷ್ಟ ಸಂಖ್ಯೆ:2
ಮೀನ
ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆಯನ್ನು ನಿಯಂತ್ರಿಸಿ ಬುದ್ಧಿ ಚಾತುರ್ಯದಿಂದಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.ಊರಿಗೆ ಪ್ರಯಾಣ ಬೆಳೆಸುವಂತಹ ಜರೂರು ಉಂಟಾಗುವುದು. ಆದರೆ ಅದಕ್ಕೆ ಸೂಕ್ತ ತಯಾರಿ ನಡೆಸುವುದು ಮುಖ್ಯ. ಸಹೋದರ ಸಹಾಯ ಅಗತ್ಯವಿದ್ದಲ್ಲಿ ಬಳಸಿಕೊಳ್ಳಿ.ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಕುಲದೇವತಾ ಸ್ಮರಣೆ ಮಾಡಿ.ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807, ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp