For Quick Alerts
ALLOW NOTIFICATIONS  
For Daily Alerts

23-11-2018: ಶುಕ್ರವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಶುಕ್ರವಾರದ ದಿನ ಜಾತಕದಲ್ಲಿ ಶುಕ್ರ ಪ್ರಭಾವಶಾಲಿಯಾಗಿದ್ದರೆ ಭೌತಿಕ ಸಂತೋಷ ಪ್ರಾಪ್ತಿಯಾಗುತ್ತದೆ. ಅದೇ ಶುಕ್ರ ದುರ್ಬಲ ಅಥವಾ ಹಾನಿಕಾರಕನಾಗಿದ್ದರೆ ಭೌತಿಕ ಸುಖ ಕನಸಿನ ಮಾತು. ಆನಂದ, ಸ್ತ್ರೀ ಸುಖ, ಸಂಪತ್ತು, ವಿವಾಹ, ವಾಹನ ಎಲ್ಲ ಸುಖ-ಸಂತೋಷಕ್ಕೂ ಶುಕ್ರ ದೆಸೆ ಬೇಕು.

horoscope

ಶುಕ್ರವಾರವನ್ನು ಗುರು ಶುಕ್ರಾಚಾರ್ಯ ಮತ್ತು ಧನ ಲಕ್ಷ್ಮಿಯ ಆಶೀರ್ವಾದ ಪಡೆಯಲು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಲಕ್ಷ್ಮಿದೇವಿಯನ್ನು ನೆನೆಯುತ್ತಾ ಈ ದಿನದ ರಾಶಿಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807

ಮೇಷ

ಮೇಷ

ನಿಮ್ಮ ವರ್ಚಸ್ಸನ್ನು ಹಾಳುಗೆಡವಲು ಸಂಚು ನಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವು ವಿಚಾರಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಇಲ್ಲವೆ ಇದ್ದಲ್ಲಿ ಜನ ದುರುಪಯೋಗ ಮಾಡಿಕೊಳ್ಳುವರು. ನಿಮಗೆ ತಿಳಿದುದಕ್ಕಿಂತಲೂ ಜಾಸ್ತಿಯಾಗಿ ತಿಳಿದರೂ ತಿಳಿಯದಂತೆ ನಟಿಸುವ ಜನರಿರುವುದರಿಂದ ಎಚ್ಚರದಿಂದ ಇರಬೇಕು. ಆದಾಗ್ಯೂ ಗುರುವು ನಿಮಗೆ ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವರು. ಅತಿಆಸೆ ಗತಿ ಗೆಡಿಸಿತು ಎನ್ನುವಂತೆ ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಕೈಹಾಕದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿತರೆ ಜೀವನದಲ್ಲಿ ಯಶಸ್ಸನ್ನು ಹೊಂದುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ನೀವು ತಳೆಯುವ ನಿರ್ಧಾರವನ್ನು ವಿರೋಧಿಸುವವರು ಬಹಳ ಮಂದಿ. ಹಾಗಂತ ನೀವು ನಿಮ್ಮ ವಿಚಾರಧಾರೆಯಿಂದ ಹಿಂದಕ್ಕೆ ಸರಿಯದಿರುವುದು ಒಳಿತು. ನಂತರ ನಿಮ್ಮ ತೀರ್ಮಾನವನ್ನು ಎಲ್ಲರೂ ಕೊಂಡಾಡುವರು.

ಬರೀ ಹಗುರ ಮಾತನಾಡುತ್ತ ದಿನವನ್ನು ಕಳೆಯಿರಿ. ನಿಮ್ಮ ವಿದ್ವತ್, ಪಾಂಡಿತ್ಯಕ್ಕೆ ಬೆಲೆ ನೀಡಿ ನಿಮ್ಮನ್ನು ಜನರು ಆದರಿಸುವರು. ಹಾಗಾಗಿ ಸಣ್ಣತನ ತೋರಿ ಹಗುರ ಆಗದಿರಿ. ನಿಮ್ಮ ನಡೆ-ನುಡಿಯಲ್ಲಿ ಗಾಂಭೀರ್ಯತೆಯನ್ನು ರೂಢಿಸಿಕೊಳ್ಳಿರಿ. ವಿರೋಧಿಗಳನ್ನು ಮಾತಿನ ಮೂಲಕ ಸೋಲಿಸುವ ಚಾಕಚಕ್ಯತೆ ನಿಮ್ಮಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಅಪರಿಚಿತರ ಬಳಿ ವ್ಯವಹರಿಸುವಾಗ ಮಾತ್ರ ಎಚ್ಚರದಿಂದ ಇರಿ.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಹೊಸ ಯೋಜನೆಗಳು ಜೀವನದಲ್ಲಿ ಹೊಸದೇ ಆದ ಚೈತನ್ಯವನ್ನು ತುಂಬಿಕೊಡುವುದು. ಇದರಿಂದ ಮನೆಯ ಸದಸ್ಯರು ಹಾಗೂ ಸಂಗಾತಿಯೂ ಹೆಚ್ಚು ಸಂತೋಷಪಡುವರು. ಭಗವಂತನು ನೀಡಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ ಜೀವನವನ್ನು ಸುಖಮಯವಗಿ ಕಳೆಯಿರಿ.ಮಾತು ಆಡಿದರೆ ಆಯಿತು. ಮುತ್ತು ಒಡೆದರೆ ಹೋಯಿತು ಎನ್ನುವಂತೆ ನಿಮ್ಮ ಸಂಕಷ್ಟದ ದಿನಗಳಲ್ಲಿ ಬಹು ಎಚ್ಚರಿಕೆಯಿಂದ ಎದುರಾಳಿಯನ್ನು ಎದುರಿಸಬೇಕು. ಬಾಯಿತಪ್ಪಿ ಆಡಿದ ಮಾತಿಗೆ ವಿಪರೀತವಾದ ದಂಡ ತೆರಬೇಕಾಗುವುದು.

ಅನೇಕರು ಹೊಸದೇ ಆದ ವಹಿವಾಟನ್ನು ಆರಂಭಿಸಲು ನಿಮಗೆ ಸಲಹೆ ನೀಡುವರು. ಆದರೆ ಅದಕ್ಕೆ ಕಾಲ ಪಕ್ವವಾಗಿಲ್ಲ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಮನೆಯವರ ವಿಶ್ವಾಸವನ್ನು ಗಳಿಸಿಕೊಳ್ಳಿರಿ.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಒಂದೇ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮಹತ್ತರವಾದ ಕೆಲಸ ಹಾಳಾಗುವ ಸಂಭವ. ಅದಕ್ಕೆ ಆಸ್ಪದ ಕೊಡದೆ ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿರಿ. ಎಲ್ಲವೂ ಒಳಿತಾಗುವುದು.ಸತ್ಪಾತ್ರರಿಗೆ ದಾನ ಮಾಡಬೇಕೆಂಬ ನಿಮ್ಮ ಯೋಚನೆ ಸರಿ. ಆದರೆ ಯಾವುದಕ್ಕೂ ಅವಸರ ಬೇಡವೇ ಬೇಡ. ಭಗವಂತ ನಿಮ್ಮ ಎಲ್ಲಾ ಕಾರ್ಯಗಳಿಗೂ ಅಭಯ ಹಸ್ತವನ್ನು ನೀಡುವರು. ಗುರುವಿನ ಅನುಗ್ರಹ ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಬಲವನ್ನು ತಂದುಕೊಡುವುದು. ದೂರವಾಗಿದ್ದ ಮಿತ್ರರು ಹತ್ತಿರ ಬರುವರು. ನಿಮ್ಮ ಕೆಲಸಗಳು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವುದು.

ಅದೃಷ್ಟ ಸಂಖ್ಯೆ:5

ಸಿಂಹ

ಸಿಂಹ

ಜನರು ಬರುವರು. ಅವರುಗಳಲ್ಲಿ ಕೆಲವರು ತಮ್ಮ ಸ್ವಾರ್ಥ ಪೂರೈಸಿಕೊಳ್ಳಲು ಬರುವರು. ಅಂಥವರನ್ನು ಎಚ್ಚರದಿಂದ ಸಾಗಹಾಕಿ.

ನಿಮ್ಮ ಸಾಮಾಜಿಕ ಕಳಕಳಿಯು ಬಹು ಮೆಚ್ಚುಗೆಗೆ ಪಾತ್ರವಾಗುವುದು ಮತ್ತು ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯ ಮಂದಿ ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಇಲ್ಲವೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಮಾಡುವುದು ಕ್ಷೇಮ.

ಅದೃಷ್ಟ ಸಂಖ್ಯೆ:9

ಕನ್ಯಾ

ಕನ್ಯಾ

ತೀರಾ ಸರಳವಾದ ಮಾರ್ಗದಿಂದ ಧನಲಾಭದ ದಾರಿ ತೆರೆದುಕೊಳ್ಳವುದೆಂಬ ನಿಮ್ಮ ದಡ್ಡತನವನ್ನು ಕೈಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಸುಲಭವಾಗಿ ದೊರೆಯುವುದಿಲ್ಲ.ಸಮಾಜದಲ್ಲಿ ಜನಾನುರಾಗಿಗಳಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸಿದ್ದೀರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಸಾಗುವ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರವಾಗಿದ್ದು ಕಠಿಣ ತರವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು.

ಅದೃಷ್ಟ ಸಂಖ್ಯೆ:5

ತುಲಾ

ತುಲಾ

ಬಹಳ ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳಿಗೆ ಸುಖಕರ ಅಂತ್ಯ ಕಂಡು ಬರುವವು. ನಿಮಗೆ ಮಾರ್ಗದರ್ಶನ ನೀಡುತ್ತಿದ್ದ ವ್ಯಕ್ತಿಯು ಸರಿಯಾದ ಮಾರ್ಗದರ್ಶನ ನೀಡುವರು.ನಿಮಗೆ ಕೇವಲ ಕಷ್ಟಗಳೇ ಆಗಿ ಬೇಸರ ಬಂದಿರುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಮನಸ್ಸು ವ್ಯಘ್ನವಾಗಿರುವಾಗ ವಾಹನ ಚಲಾಯಿಸದಿರಿ.ಜನ್ಮಶನಿಯು ಎಲ್ಲಾ ಕೆಲಸಗಳಲ್ಲಿ ಮಂದ ಪ್ರಗತಿಯನ್ನುಂಟು ಮಾಡುತ್ತಿರುವನು. ನಿಧಾನವೇ ಪ್ರಧಾನ. ಶನಿಮಹಾರಾಜನ ಆಟಗಳಿಗೆ ತಲೆಬಾಗದೆ ವಿಧಿಯಿಲ್ಲ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.

ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ಆದಷ್ಟು ಎಚ್ಚರದಿಂದ ಇರಿ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕೆಲವರು ಮೂಗು ತೂರಿಸುತ್ತಾ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವರು. ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿ.ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಹೇರಳವಾಗಿ ಬರುವವು. ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡರು ಎಂಬಂತೆ ಆಗಬಾರದು. ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ. ನಿಮ್ಮದು ಮೀನಿನಂತೆ ಚುರುಕಾದ ನಡೆನುಡಿ ಇದ್ದರು ಗಾಳಕ್ಕೆ ಸಿಕ್ಕ ಮೀನಿನಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಡಿ.

ಅದೃಷ್ಟ ಸಂಖ್ಯೆ:4

ಧನುಸ್ಸು

ಧನುಸ್ಸು

ಎಲ್ಲರೊಂದಿಗೆ ಸಂಭಾಳಿಸಿಕೊಂಡು ಹೋಗುವಂಥ ನಿಮ್ಮ ವಿಚಾರಗಳು ನಿಮಗೆ ಜನಪ್ರಿಯತೆ ತಂದು ಕೊಡುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿಮ್ಮ ಬಳಿ ಯಾಚಿಸುವ ವ್ಯಕ್ತಿಗಳಿಗೆ ಧನಸಹಾಯ ಮಾಡುವಿರಿ. ಬಂಧು ಬಾಂಧವರು ನಿಮಗಿಂದು ವಿವಿಧ ರೀತಿಯಲ್ಲಿ ಸಹಾಯ ಮಾಡುವರು. ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು. ಮಕ್ಕಳ ಅಭಿವೃದ್ಧಿ ನಿಮಗೆ ಹೆಚ್ಚಿನ ಸಂತೋಷ ತಂದುಕೊಡುವುದು. ಮನೆಯ ಹಿರಿಯರೊಡನೆ ಸ್ನೇಹದಿಂದ ವರ್ತಿಸಿ.

ಕಟ್ಟಡ ವಿನ್ಯಾಸಕಾರರು ಹಾಗೂ ಕಂಟ್ರ್ಯಾಕ್ಟರ್‌ಗಳಿಗೆ ಉತ್ತಮ ಆದಾಯದ ಜತೆಗೆ ನೂತನ ಕೆಲಸ ಕಾರ್ಯಗಳು ದೊರೆಯುವವು. ಹೊಸ ಕೆಲಸ ಕಾರ್ಯಗಳಿಗೆ ಟೆಂಡರ್‌ ಹಾಕುವುದಕ್ಕೆ ಸಕಾಲವಾಗಿದೆ. ನಿಮ್ಮ ಪ್ರಯತ್ನಕ್ಕೆ ಫಲ ದೊರೆಯುವುದು.

ಅದೃಷ್ಟ ಸಂಖ್ಯೆ:6

ಮಕರ

ಮಕರ

ಸುಮ್ಮನೆ ತೊಂದರೆ, ಕಿರಿಕಿರಿ ಮಾಡುವ ಜನ ಹತ್ತಿರದಲ್ಲೇ ಇರುತ್ತಾರೆ. ಆದರೆ ತಾಳ್ಮೆ ಕಳೆದುಕೊಳ್ಳದೆ ಅವರೊಂದಿಗೆ ವ್ಯವಹರಿಸಿ. ಇದರಿಂದ ನಿಮಗೆ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಮುಂಗೋಪ ಬಿಟ್ಟುಬಿಡಿ. ಕೋಪ ಮನುಜನ ಮೊದಲ ಶತ್ರು. ಸರ್ವ ಚಿತ್ತಾರ ಮಸಿ ನುಂಗಿತು ಎನ್ನುವಂತೆ ನಿಮ್ಮಲ್ಲಿ ಎಷ್ಟೇ ಒಳ್ಳೆಯ ಗುಣಗಳಿದ್ದರೂ ಅವೆಲ್ಲವೂ ನಿಮ್ಮ ಮುಂಗೋಪದಿಂದ ಮುಚ್ಚಿಹೋಗುವುದು.ಬಾಳಸಂಗಾತಿಯೊಡನೆ ಅನವಶ್ಯಕ ಮನಸ್ತಾಪಗಳಿಗೆ ಅವಕಾಶ ಕೊಡಬೇಡಿ. ಅವರ ವಿಚಾರಧಾರೆಗಳು ಅವರಿಗೆ ಸರಿ ಎನಿಸುವುದು. ನಿಮ್ಮ ವಿಚಾರಧಾರೆಗಳು ನಿಮಗೆ ಸರಿ ಎನಿಸುವುದು. ಇದು ನಿಮ್ಮ ನಡುವೆ ವೈಮನಸ್ಸಿಗೆ ದಾರಿಯಾದೀತು.

ಅದೃಷ್ಟ ಸಂಖ್ಯೆ:8

ಕುಂಭ

ಕುಂಭ

ದಿಢೀರನೆ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ಮಾಡದಿರಿ. ನೀವು ಸಾಗುವ ದಾರಿ ಬಹಳ ಇರುವುದರಿಂದ ಕೂತು ಮಲಗುವ ಅಭ್ಯಾಸ ಮಾಡಿಕೊಳ್ಳಿ. ನೀವು ಸವೆಸಬೇಕಾಗಿರುವ ದಾರಿಯ ಸ್ಪಷ್ಟತೆ ಅರಿಯಿರಿ.ಹಣೆಬರಹ ಎಂದು ಕೊರಗುತ್ತಾ ಸುಮ್ಮನೆ ಕೂರುವುದು ತರವಲ್ಲ. ಧೈರ್ಯದಿಂದ ಮುನ್ನುಗ್ಗಿ ಹೋಗುವುದನ್ನು ಕಲಿತುಕೊಳ್ಳಿ. ಧೈರ್ಯವಂತರಿಗೆ ಭಗವಂತನು ಕೂಡಾ ಸಹಾಯ ಮಾಡುವನು. ಭೂಮಿ ವಿಕ್ರಯ, ರಿಯಲ್‌ ಎಸ್ಟೇಟ್‌ ಮೈನಿಂಗ್‌ ಇತ್ಯಾದಿ ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗರೂಕತೆಯಿಂದ ಇರಿ ಮತ್ತು ಆ ವ್ಯವಹಾರಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಮುಂದುವರೆಯಿರಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ವಿದೇಶ ಪ್ರವಾಸಗಳನ್ನು ಸದ್ಯಕ್ಕೆ ಮುಂದೂಡುವುದೇ ಒಳಿತು. ಸಾಡೇಸಾತ್‌ ಶನಿ ಕಾಟವು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳದಂತೆ ತಡೆಗಟ್ಟುವ ಸಾಧ್ಯತೆ ಇದೆ. ಆಂಜನೇಯ ಸ್ತೋತ್ರ ಮತ್ತು ಶನಿ ಸ್ತೋತ್ರ ಪಠಿಸಿ.

ನಿಮ್ಮ ಎಲ್ಲಾ ಯೋಚನೆಗಳು ಧನಾತ್ಮಕವಾಗಿದ್ದು ಉತ್ತಮ ಫಲಿತಾಂಶವನ್ನು ಶೀಘ್ರವೇ ಹೊಂದುವಿರಿ. ನಿಮ್ಮ ಪ್ರಗತಿಯನ್ನು ಕಂಡು ಅಸೂಯೆ ಪಡುವ ಮತ್ತು ಕರುಬುವ ವ್ಯಕ್ತಿಗಳು ಹುಟ್ಟಿಕೊಳ್ಳುವರು. ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳದಿರಿ. ಬಹು ವಿವಾದಪೂರ್ಣ ವಿಚಾರವು ತಾತ್ವಿಕ ನೆಲೆಗಟ್ಟಿನ ಮಾತುಕತೆಯೊಂದಿಗೆ ಮತ್ತು ಹೊಂದಾಣಿಕೆಗಳೊಂದಿಗೆ ಒಂದು ಇತ್ಯರ್ಥಕ್ಕೆ ಬರುವುದು. ಒಂದು ರೀತಿಯಲ್ಲಿ ವ್ಯಾಜ್ಯವು ಸುಖಾಂತ್ಯಗೊಳ್ಳುವುದು. ಇದು ಉಭಯತರರಿಗೂ ಸಂತೋಷ ತರುವುದು.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-23-November-2018

Know what astrology and the planets have in store for you today. Choose your zodiac sign and read the details...
Story first published: Thursday, November 22, 2018, 16:57 [IST]
X
Desktop Bottom Promotion