Just In
Don't Miss
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
22-10-2018: ಸೋಮವಾರದ ದಿನ ಭವಿಷ್ಯ
ಸೋಮವಾರ ಯಾರು ವಿಧಿ-ವಿಧಾನದಿಂದ ಶಿವನ ಪೂಜೆ ಮಾಡುತ್ತಾರೋ ಅವರಿಗೆ ವಿಶೇಷ ಫಲ ಲಭಿಸುತ್ತದೆ. ವ್ರತದಿಂದಾಗಿ ಪ್ರತಿಯೊಂದು ದುಃಖ, ಕಷ್ಟ, ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಸುಖಿ, ನಿರೋಗಿ ಹಾಗೂ ಸಮೃದ್ಧಿಯ ಜೀವನ ಸಾಗಿಸ್ತಾನೆ. ಈ ದಿನ ಶಿವನ ಆರಾಧನೆ ಮಾಡುವುದರಿಂದ ಮಕ್ಕಳ ರೋಗ ಗುಣಮುಖವಾಗುತ್ತದೆ. ದುರ್ಘಟನೆ ಹಾಗೂ ಅಕಾಲ ಮೃತ್ಯವಿನಿಂದ ಮುಕ್ತಿ ಸಿಗುತ್ತದೆ . ವೈವಾಹಿಕ ಜೀವನದಲ್ಲಿ ಕಂಡು ಬರುವ ಭಿನ್ನಾಭಿಪ್ರಾಯ ದೂರವಾಗುತ್ತದೆ. ಪರಮೇಶ್ವರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ... ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.
ಮೇಷ
ಅವಸರದ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗುವುದು. ಮನೆ ಮಂದಿಯ ಸಹಕಾರ ಪಡೆಯಿರಿ. ಅವರು ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಸಹಕಾರ ನೀಡುವರು. ಬಂಧುಗಳ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು.ಆರ್ಥಿಕ ಅಭಿವೃದ್ಧಿ ನಿಧಾನವಾದರೂ ಸಂತೃಪ್ತಿ ಬದುಕು, ಹೊಸ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ. ಕೌಟುಂಬಿಕವಾಗಿ ನೆಮ್ಮದಿಯ ದಿನ. ಆರೋಗ್ಯ ಉತ್ತಮವಾಗಿರುವುದು.ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗುವವು. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ದೊರೆಯುವುದು. ಸಂಬಂಧಗಳಲ್ಲಿಯೂ ಗಣನೀಯ ಸುಧಾರಣೆ ಕಂಡುಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.
ಅದೃಷ್ಟ ಸಂಖ್ಯೆ:2
ವೃಷಭ
ಮನಸ್ಸನ ಚಂಚಲತೆಯಿಂದ ಹೊರ ಬನ್ನಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮನಸ್ಸು ಸರಿಯಿರದ ದಿನದಲ್ಲಿ ಯಾವುದೇ ಮಹತ್ತರ ನಿರ್ಣಯ ತೆಗೆದುಕೊಳ್ಳದಿರಿ. ನಿಮ್ಮ ಮನೆಗೆ ಸಮಾಜ ಮುಖಂಡರು ಇಲ್ಲವೆ ರಾಜಕೀಯ ಧುರೀಣರು ಭೇಟಿ ನೀಡುವರು.ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ತೋರುವಿರಿ. ಜೀವನದಲ್ಲಿ ಯಶಸ್ಸು ಗಳಿಸಲು ಸಹನೆ, ತಾಳ್ಮೆ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಸಲ್ಲದ ವಿಷಯಗಳ ಬಗ್ಗೆ ಅನಗತ್ಯ ಕುತೂಹಲ ತೋರಿಸುವುದು ಒಳ್ಳೆಯದಲ್ಲ.ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಮಿತ್ರರ ಸಹಕಾರವೂ ದೊರೆಯುತ್ತದೆ. ಆರ್ಥಿಕವಾಗಿ ಪ್ರಗತಿ ಹೊಂದುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.
ಅದೃಷ್ಟ ಸಂಖ್ಯೆ:1
ಮಿಥುನ
ಈಗ ಆಗಿರುವ ನಷ್ಟ ಸರಿದೂಗಿಸುವಷ್ಟು ಹಣಕಾಸಿನ ನೆರವು ದೊರೆಯುವುದು. ಗುರು ನಿಮಗೆ ಸಮಾಜದಲ್ಲಿ ಗೌರವ, ಆದರಗಳನ್ನು ಕೊಡಿಸುವನು. ಮಕ್ಕಳ ಕಲರವ ಮನಸ್ಸಿಗೆ ಮುದ ನೀಡುವುದು. ಮಕ್ಕಳು ಇಲ್ಲವೆ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವಿರಿ.ಸ್ನೇಹಿತರು ಸಕಾಲದಲ್ಲಿ ಸಹಾಯ ಮಾಡುವರು. ಮಕ್ಕಳ ಪ್ರಗತಿಯು ಮನಸ್ಸಿಗೆ ಮುದ ನೀಡುವುದು. ಆರ್ಥಿಕ ಅಭಿವೃದ್ಧಿ ಇದೆ. ಮನೆಯಲ್ಲಿ ಶಾಂತಿ ನೆಲೆಸಲಿದೆ.ಸಣ್ಣಪುಟ್ಟ ಅಡೆತಡೆಗಳ ಬಗ್ಗೆ ಗಮನ ಕೊಡದೆ ಆತ್ಮವಿಶ್ವಾಸದಿಂದ ಮುಂದಡಿ ಇಡಿ. ನಿಮ್ಮಲ್ಲಿ ಅಡಗಿರುವ ಶಕ್ತಿ ಏನು ಎನ್ನುವುದು ಸ್ವತಃ ನಿಮ್ಮ ಅರಿವಿಗೆ ಬರುವುದು. ಇದರಿಂದ ನಿಮ್ಮ ಬಗ್ಗೆಯೇ ನಿಮಗೆ ಹೆಮ್ಮೆ ಎನಿಸುವುದು.
ಅದೃಷ್ಟ ಸಂಖ್ಯೆ:3
ಕಟಕ
ಸ್ಥಿರಾಸ್ತಿ ಖರೀದಿಸಲು ನಿಮ್ಮ ಮನೆಯಲ್ಲಿ ಮಾತುಕತೆ ನಡೆಯುವ ಸಂಭವವಿರುತ್ತದೆ. ಕೆಲವರು ನೂತನ ವಾಹನ ಖರೀದಿ ಬಗ್ಗೆ ಯೋಚಿಸುವರು. ಹಿರಿಯರ ಆಶೀರ್ವಾದಗಳಿಂದ ನಿಮ್ಮ ಮನೋಕಾಮನೆಗಳು ಪೂರ್ಣ ಗೊಳ್ಳುವವು.ಆಸ್ತಿ ವ್ಯವಹಾರಗಳು ಚರ್ಚೆಗೆ ಬರಲಿವೆ. ಚಾಲನೆಯಲ್ಲಿ ಜಾಗ್ರತೆ ಇರಲಿ. ಸ್ನೇಹಿತರಿಂದ ವ್ಯಾಪಾರ, ವ್ಯವಹಾರದಲ್ಲಿ ಸಹಕಾರ ದೊರೆಯುವುದು. ಮನೆಯಲ್ಲಿ ಮಕ್ಕಳ ಆಟಪಾಠಗಳಿಂದ ಮನಸ್ಸಿಗೆ ಸಂತಸ ಎನಿಸುವುದು.ತಡವಾಗಿಯಾದರೂ ನಿಮ್ಮ ಸಾಧನೆ, ವೃತ್ತಿಪರತೆಗೆ ಗೌರವ ದೊರೆಯಲಿದೆ. ನಿಮ್ಮ ಕೆಲಸ ನಿಧಾನ ಎಂದು ಕೆಲವರಿಗೆ ಅನಿಸುವುದು. ಆದರೆ ಅದರ ಹಿಂದಿನ ಗುಣಮಟ್ಟ ದೊಡ್ಡದು ಎಂದು ಸ್ವತಃ ಮೇಲಧಿಕಾರಿಗಳೇ ಪ್ರಶಂಸಿಸುವರು.
ಅದೃಷ್ಟ ಸಂಖ್ಯೆ:6
ಸಿಂಹ
ಸಮಾಧಾನದಿಂದ ಇದ್ದರೆ ಮಾತ್ರ ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವಿರಿ. ಮಹತ್ವದ ತೀರ್ಮಾನ ಕೈಗೊಳ್ಳಬೇಡಿ. ನವ ದಂಪತಿಗೆ ಸಂತತಿ ವಿಚಾರವಾಗಿ ವಾದ, ವಿವಾದ ಉಂಟಾಗುವ ಸಾಧ್ಯತೆ ಇದೆ.ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಪ್ರೀತಿ ವಿಶ್ವಾಸ ಗಳಿಸುವುದು ಮತ್ತು ಅವರಿಂದ ಕಾರ್ಯ ಸಾಧಿಸುವುದು ಕಷ್ಟಸಾಧ್ಯವಾಗುವುದು. ಹಳೆಯ ಕೆಲಸಗಾರರನ್ನು ಬಿಡಿಸಿ ನೂತನ ಕೆಲಸಗಾರರನ್ನು ನೇಮಿಸಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಕೆಲವರು ಹಣ ಕೂಡಿಡುವುದರಲ್ಲಿ ನಿಸ್ಸೀಮರು. ದೀರ್ಘಕಾಲಿನ ಹೂಡಿಕೆಗಳ ಬಗ್ಗೆ ಆಸಕ್ತಿ ಹೊಂದಿ ಕಾರ್ಯೋನ್ಮುಖರಾಗುವಿರಿ. ಹಣಕಾಸಿನ ವ್ಯವಹಾರ ತಲೆನೋವು ಉಂಟುಮಾಡುವುದಾದರೂ ಸಂಗಾತಿಯ ಸಲಹೆಯಿಂದ ಬೇಗ ವಾಸಿಯಾಗುವುದು.ಅದೃಷ್ಟ ಸಂಖ್ಯೆ:8
ಕನ್ಯಾ
ಬಹುದಿನದ ಆಸೆ ಈಡೇರಿದ ಸಂತೃಪ್ತಿ ನಿಮ್ಮದಾಗುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿನ ಏಕತಾನತೆಯಿಂದ ಬೇಸರ ಮೂಡುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಬಿಟ್ಟು ಬಿಡಲೇ ಎಂದು ಚಿಂತಿಸುವರು. ಯಾವುದಕ್ಕೂ ಹಿರಿಯರ ಸಲಹೆ ಅನುಸರಿಸಿ.ಜನಪ್ರಿಯತೆ ಹೆಚ್ಚಾಗುವುದು. ವ್ಯವಹಾರಗಳು ಸುಲಲಿತವಾಗಿ ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗುವುದು. ನೆಮ್ಮದಿಯ ದಿನವನ್ನು ಕಳೆಯುವಿರಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.ಎಲ್ಲಾ ವಿಷಯಗಳಿಗೂ ನೀವು ಕೇಂದ್ರಬಿಂದುವಂತೆ ಎಲ್ಲರೂ ನಿಮ್ಮ ಅನುಭವಗಳನ್ನು ಬಳಸಿಕೊಳ್ಳಲು ಕಾತುರರಾಗಿದ್ದಾರೆ. ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ನಿಮ್ಮ ಬಾಸ್ ನಿಮ್ಮನ್ನು ಹೊಗಳುವರು. ಆದರೆ ಈ ಕೆಲಸದ ಸಲುವಾಗಿ ಸಾಕಷ್ಟು ಹಣ ಖರ್ಚಾಗುವುದು.
ಅದೃಷ್ಟ ಸಂಖ್ಯೆ:3
ತುಲಾ
ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯ ಬೇಕುಬೇಡಗಳ ಕಡೆ ಲಕ್ಷ್ಯವಿರಲಿ. ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ಜಾಣತನವೇ ನಿಮಗೆ ಲಾಭ ತರುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.ಗುರಿ ಸಾಧಿಸುವುದರಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಕೂಡದು. ಮಡದಿ, ಮಕ್ಕಳ ಜತೆ ಸಂತೋಷ ಕೂಟದಲ್ಲಿ ಭಾಗವಹಿಸುವಿರಿ.ಕೌಟುಂಬಿಕ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸುವುದು ಒಳ್ಳೆಯದು. ತಾಯಿಗೆ ಬೆಂಬಲ ಸೂಚಿಸಿದರೆ ಸಂಗಾತಿಗೆ ಮುನಿಸು. ಸಂಗಾತಿಯ ಮಾತಿಗೆ ಬೆಲೆ ಕೊಟ್ಟರೆ ತಾಯಿಗೆ ಕೋಪ. ಈ ಎರಡರ ಮಧ್ಯದ ಪರಿಸ್ಥಿತಿ ನಿಮ್ಮದಾಗುವುದು.ಅದೃಷ್ಟ ಸಂಖ್ಯೆ:5
ವೃಶ್ಚಿಕ
ಸಾಲಗಳು ತಕ್ಕಮಟ್ಟಿಗೆ ತೀರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರ ದೊರೆಯುವುದು. ಪ್ರೇಮಿಗಳಲ್ಲಿ ಅನಿರೀಕ್ಷಿತ ಭಿನ್ನಾಭಿಪ್ರಾಯ ಕಂಡು ಬರುವುದು. ಅಜೀರ್ಣ ಸಂಬಂಧಿ ವ್ಯಾಧಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.ಬ್ಯಾಂಕಿಂಗ್, ಹಣಕಾಸಿನ ವ್ಯವಹಾರಗಳು ಸುಗಮವಾಗಿ ಆಗುವುದು. ಉದ್ಯೋಗಸ್ಥರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಂಭವವಿದೆ. ಆಂಜನೇಯ ದೇವಾಲಯದಲ್ಲಿ ಎಳ್ಳುದೀಪ ಹಚ್ಚಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.ಖುಷಿಯಿಂದ ಕೂಡಿರುವ ದಿನ. ಅನಿರೀಕ್ಷಿತವಾಗಿ ದೂರ ಪ್ರಯಾಣ ಕೂಡಿ ಬರುವುದು. ಹೊಸ ಜವಾಬ್ದಾರಿಗಳು ಬಂದರೆ ಅದನ್ನು ಸ್ವೀಕರಿಸಿ. ಮುಂದಿನ ದಿನಗಳಲ್ಲಿ ಒಳಿತಾಗುವುದು. ಸಾಲ ಪಡೆದಿದ್ದಲ್ಲಿ ಅದನ್ನು ತೀರಿಸುವ ಪ್ರಯತ್ನ ಮಾಡಿ.ಅದೃಷ್ಟ ಸಂಖ್ಯೆ:2
ಧನಸ್ಸು
ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮ್ಮ ಯಶಸ್ಸಿಗೆ ಕಾರಣವಾಗುವುದು. ಹಣಕಾಸು ವ್ಯವಹಾರದಲ್ಲಿ ಕಟ್ಟುನಿಟ್ಟಾಗಿರಿ. ರಜೆಯನ್ನು ಸಂತೋಷದಿಂದ ಕಳೆಯುವಿರಿ. ಯಾವುದೇ ಆತಂಕಗಳು ಎದುರಾಗುವುದಿಲ್ಲ.ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಅಂತೆಯೆ ನಿಮಗೆ ಕೆಲಗ್ರಹಗಳು ಅಶುಭ ಸ್ಥಾನದಲ್ಲಿ ಸಂಚರಿಸು ತ್ತಿರುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಇದ್ದ ಸ್ಥಿತಿಯನ್ನೇ ಕಾಪಾಡಿಕೊಂಡು ಹೋಗುವುದು ಉತ್ತಮ.ಹಣವಿದ್ದಲ್ಲಿ ಸಕಲರು ಆದರಿಸುವರು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಸಂಗಾತಿಯೊಂದಿಗೆ ಶಾಪಿಂಗ್ ಖುಷಿ ನೀಡುವುದು. ಮಹತ್ತರ ನಿರ್ಧಾರಗಳನ್ನು ಮುಂದೂಡಬೇಡಿ.
ಅದೃಷ್ಟ ಸಂಖ್ಯೆ:4
ಮಕರ
ಮನೆಯ ಹಿರಿಯರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಸುಧಾರಿಸಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.ಹಮ್ಮಿಕೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವು. ಕೆಲ ಗ್ರಹಗಳ ಶುಭದೃಷ್ಟಿಯಿಂದ ನೂತನ ಗೆಳೆಯರ ಪರಿಚಯವಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು.ಕೆಲಸದ ವಿಚಾರದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡ ಕಾಡುವವು. ಅನಗತ್ಯ ತಿರುಗಾಟಗಳು ಕಾದಿವೆ. ಕೆಲವರ ಆರೋಗ್ಯದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಹಣ ನೀರಿನಂತೆ ಖರ್ಚಾಗುವುದು.ಅದೃಷ್ಟ ಸಂಖ್ಯೆ:2
ಕುಂಭ
ಗುರಿ ಸಾಧನೆಗೆ ಏಕಾಗ್ರತೆ ಪ್ರಮುಖವಾಗುವುದು. ಈಗಾಗಲೇ ಬರೆದಿರುವ ಪರೀಕ್ಷೆಯ ಫಲಿತಾಂಶ ನಿಮ್ಮ ಪ್ರಗತಿಗೆ ಕಾರಣವಾಗುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.ಮಹತ್ವದ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗುವುದು. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಮನೆಗೆ ಬಂಧುಗಳ ಆಗಮನದಿಂದ ಸಂತಸವಾಗುವುದು. ಆರೋಗ್ಯ ಉತ್ತಮವಾಗಿರುವುದು.ಮುಖ್ಯವಾಗಿ ಆಲಸ್ಯದಿಂದ ಹೊರಬರಬೇಕು. ಮೈ ಕೊಡವಿ ಎದ್ದರೆ ನಿಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಗಟ್ಟಿ ನಿರ್ಧಾರ ಮಾಡಿ ಮುಂದಡಿ ಇಡಿ. ನಿಮ್ಮನ್ನು ಹುಡುಕಿ ಬರುವ ಸ್ಥಾನಮಾನಗಳನ್ನು ತಿರಸ್ಕರಿಸದಿರಿ.ಅದೃಷ್ಟ ಸಂಖ್ಯೆ:4
ಮೀನ
ಮಾನಸಿಕ ಒತ್ತಡದಿಂದ ದೈಹಿಕ ಆರೋಗ್ಯ ವ್ಯತ್ಯಯವಾಗುವುದು. ರಜೆಯನ್ನು ಸ್ನೇಹಿತರೊಂದಿಗೆ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದರಿಂದ ನವ ಚೈತನ್ಯ ಹೊಂದುವಿರಿ. ಸಂಜೆ ಯಾವುದಾದರೂ ದೇವಾಲಯಕ್ಕೆ ಭೇಟಿ ನೀಡಿ.ಯೋಜನೆಗಳ ಬಗ್ಗೆ ನಿರಂತರ ಪ್ರಯತ್ನ ಸಾಗುವುದು. ಬರಹಗಾರರಿಗೆ ಉತ್ತಮ ಅವಕಾಶಗಳು ಬರುವುದು. ವ್ಯಾಪಾರ, ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಬರುವುದು. ಗೆಳೆಯರ ಸಹಕಾರ ಎಂದಿನಂತೆ ದೊರೆಯಲಿದೆ.ಸಾಮಾಜಿಕವಾಗಿ ಯಾವುದೇ ಬದ್ಧತೆಗಳಿಗೆ ಈಡಾಗಬೇಡಿ. ಆರ್ಥಿಕ ವಿಚಾರಗಳಲ್ಲಿಯೂ ಯಾರಿಗೂ ಭರವಸೆ ನೀಡಬೇಡಿ. ನಿಮ್ಮ ಸಾಧನೆಯನ್ನು ಕುಟುಂಬಸ್ಥರು ಮತ್ತು ಬಂಧುಗಳು ಕೊಂಡಾಡುವರು. ವೃತ್ತಿಯಲ್ಲಿ ನೆಮ್ಮದಿಯ ದಿನ.ಅದೃಷ್ಟ ಸಂಖ್ಯೆ:1
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp