For Quick Alerts
ALLOW NOTIFICATIONS  
For Daily Alerts

19-11-2018: ಸೋಮವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಹಿಂದೂ ಪುರಾಣಗಳ ಪ್ರಕಾರ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ಭೂಮಿಯನ್ನು ಸೃಷ್ಟಿಸಿದ್ದಾರೆ. ಬ್ರಹ್ಮ ಜೀವಿಗಳನ್ನು ಸೃಷ್ಟಿಸಿದರೆ, ವಿಷ್ಣು ಅದಕ್ಕೆ ಜೀವ ನೀಡುತ್ತಾನೆ ಮತ್ತು ಮಹೇಶ್ವರ ಎಲ್ಲವನ್ನೂ ಲಯಗೊಳಿಸುತ್ತಾನೆ ಎಂದು ನಂಬಲಾಗಿದೆ.
ಈಶ್ವರ ಸೃಷ್ಟಿಯಲ್ಲಿ ಇರುವ ಕೆಟ್ಟದನ್ನು ತನ್ನ ಮೂರನೇ ಕಣ್ಣಿನಿಂದ ನಾಶಗೊಳಿಸುತ್ತಾನೆ ಎನ್ನಲಾಗುತ್ತದೆ. ಇದಕ್ಕಾಗಿಯೇ ಆತನಿಗೆ ದೇವಾದಿದೇವ ಎನ್ನಲಾಗುತ್ತದೆ. ಇದರ ಅರ್ಥ ದೇವರುಗಳಿಗೆ ದೇವರು.. ಈಶ್ವರನ ಸೃಷ್ಟಿಯ ಬಗ್ಗೆ ಯಾರಿಗೂ ಇದುವರೆಗೆ ತಿಳಿದಿಲ್ಲ. ಮತ್ತು ಆತನಿಗೆ ಕೊನೆಯೆಂಬುವುದು ಇಲ್ಲ.

horoscope

ಇದಕ್ಕಾಗಿಯೇ ಶಿವನಿಗೆ ಅತೀ ಹೆಚ್ಚಿನ ಭಕ್ತರಿದ್ದಾರೆ.ಓಂ ನಮಃ ಶಿವಾಯ ಮಂತ್ರವನ್ನು ಬದ್ಧತೆ ಮತ್ತು ಏಕಾಗ್ರತೆಯಿಂದ ಪಠಿಸಿದರೆ ಆಗ ನಮಗೆ ಮಾನಸಿಕ ಬಲ, ಶಕ್ತಿ ಮತ್ತು ಪ್ರೇರಣೆ ಸಿಗುತ್ತದೆ. ಇದರಿಂದ ನೀವು ಜೀವನದ ಗುರಿಯನ್ನು ತಲುಪಬಹುದಾಗಿದೆ.ಮನಸ್ಸಿನ ಶಾಂತಿ ಮರಳುವುದು.ಇದರಲ್ಲಿ ಐದು ಅಕ್ಷರಗಳ ಮಹತ್ವವಿದೆ. ನ, ಮ, ಶಿ, ವಾ ಮತ್ತು ಯ. ಹಿಂದೂ ಪುರಾಣಗಳ ಪ್ರಕಾರ ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಪ್ರತಿನಿಧಿಸುತ್ತದೆ. ಇದನ್ನು ಪಠಿಸುತ್ತಾ ಇದ್ದರೆ ದೇವರು ಎಲ್ಲಾ ಕಡೆ ಇದ್ದಾನೆಂದು ನಿಮಗನಿಸುತ್ತದೆ.ಕೈಲಾಸಪತಿ ಮಹೇಶ್ವರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807

ಮೇಷ

ಮೇಷ

ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ. ನಿಮಗಾಗಿ ಬಹು ಸೂಕ್ತ ಸಮಯದ ಪದೋನ್ನತಿಯೊಂದು ಕಾದಿದೆ. ನಿರಾಳ ಆಗಿರಿ. ಮನಸ್ಸಿನ ತುಮುಲಗಳೆಲ್ಲ ತಮ್ಮಷ್ಟಕ್ಕೆ ಕಡಿಮೆ ಆಗುವುದು. ಜಗತ್ತು ಸುಂದರವಾಗಿ ಕಾಣಿಸಿಕೊಳ್ಳುವುದು. ಗುರುಕೃಪೆಯು ತಪ್ಪುತ್ತಿರುವ ಈ ಸಂದರ್ಭದಲ್ಲಿ ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನಾವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.

ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ಜನರಿಗೆ ಸಹಾಯ ಸಲ್ಲಿಸುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ಗುರುವಿನ ಅನುಗ್ರಹ ಆಗುತ್ತಿರುವುದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುವುದು.

ನಿಮ್ಮ ಬುದ್ಧಿಬಲ ಶಕ್ತಿಯುತವಾದದ್ದು. ಸಂಪನ್ನವಾದ ನಿಮ್ಮ ಊಹೆಗಳು ಕಾರ್ಯರೂಪಕ್ಕೆ ಯಶಸ್ಸನ್ನು ನೀಡುವವು. ಮನೆಯ ಮಡದಿ ಮಕ್ಕಳ ಜೊತೆ ಸ್ವಲ್ಪ ಕಾಲ ಕಳೆಯುವುದು ಒಳ್ಳೆಯದು.ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವರು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವರು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು.

ಅದೃಷ್ಟ ಸಂಖ್ಯೆ:1

ಮಿಥುನ

ಮಿಥುನ

ಹೊಸದೇ ಆದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು.ಹಿರಿಯರನ್ನು ದೂರ ಇಡಬೇಡಿರಿ. ಮತ್ತು ಅವರ ದಿನಚರ್ಯೆಗಳನ್ನು ದೂಷಿಸಬೇಡಿರಿ. ಅವರ ಸೇವೆಯನ್ನು ಮಾಡುವ ಮೂಲಕ ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲವಾಗುವುದು.ಅಪತ್ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಮಕ್ಕಳು ಬಂಧು ಬಾಂಧವರು ಸಹಾಯ ಹಸ್ತ ನೀಡುವುದರಿಂದ ಜೀವನದಲ್ಲಿ ಒಂದು ಹೊಸ ಬೆಳಕು ಮೂಡುವುದು. ಜೀವನ ನಡೆಸಲು ಧೈರ್ಯ ಬರುವುದು.

ಅದೃಷ್ಟ ಸಂಖ್ಯೆ:2

ಕಟಕ

ಕಟಕ

ಮೇಲಾಧಿಕಾರಿಯ ಎದುರು, ವಿಷಯ ಗೊತ್ತಿದ್ದರೂ ಮತ್ತು ಮಾಡುವ ಕೆಲಸದಲ್ಲಿ ಅವರ ಸಲಹೆಯನ್ನು ಸ್ವೀಕರಿಸಿ ಮುಂದಡಿ ಇಟ್ಟಲ್ಲಿ ಅವರಿಗೂ ಖುಷಿ ಆಗುವುದು. ಇಲ್ಲವೆ ನಿಮ್ಮ ಬುದ್ಧಿಚಾತುರ್ಯಕ್ಕೆ ಅಸೂಯೆ ಪಡುವರು.

ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿಯನ್ನು ಮಾಡುವರು. ಗುರುವಿನ ಸ್ತೋತ್ರವನ್ನು ಮಾಡಿರಿ.ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ಗುರುವಿನ ಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತದೆ.

ಅದೃಷ್ಟ ಸಂಖ್ಯೆ:4

ಸಿಂಹ

ಸಿಂಹ

ನಿಮ್ಮ ವರ್ಚಸ್ಸನ್ನು ಹಾಳುಗೆಡವಲು ಸಂಚು ನಡೆಯುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವು ವಿಚಾರಗಳಲ್ಲಿ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಇಲ್ಲವೆ ಇದ್ದಲ್ಲಿ ಜನ ದುರುಪಯೋಗ ಮಾಡಿಕೊಳ್ಳುವರು.ನಿಮಗೆ ತಿಳಿದುದಕ್ಕಿಂತಲೂ ಜಾಸ್ತಿಯಾಗಿ ತಿಳಿದರೂ ತಿಳಿಯದಂತೆ ನಟಿಸುವ ಜನರಿರುವುದರಿಂದ ಎಚ್ಚರದಿಂದ ಇರಬೇಕು. ಆದಾಗ್ಯೂ ಗುರುವು ನಿಮಗೆ ಸಕಾಲದಲ್ಲಿ ಎಚ್ಚರಿಕೆಯನ್ನು ನೀಡುವರು.ಅತಿಆಸೆ ಗತಿ ಗೆಡಿಸಿತು ಎನ್ನುವಂತೆ ಆಕಾಶಕ್ಕೆ ಏಣಿ ಹಾಕುವ ದುಃಸಾಹಸಕ್ಕೆ ಕೈಹಾಕದಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದನ್ನು ಕಲಿತರೆ ಜೀವನದಲ್ಲಿ ಯಶಸ್ಸನ್ನು ಹೊಂದುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಅದೃಷ್ಟ ಸಂಖ್ಯೆ:6

ಕನ್ಯಾ

ಕನ್ಯಾ

ನೀವು ತಳೆಯುವ ನಿರ್ಧಾರವನ್ನು ವಿರೋಧಿಸುವವರು ಬಹಳ ಮಂದಿ. ಹಾಗಂತ ನೀವು ನಿಮ್ಮ ವಿಚಾರಧಾರೆಯಿಂದ ಹಿಂದಕ್ಕೆ ಸರಿಯದಿರುವುದು ಒಳಿತು. ನಂತರ ನಿಮ್ಮ ತೀರ್ಮಾನವನ್ನು ಎಲ್ಲರೂ ಕೊಂಡಾಡುವರು.

ಬರೀ ಹಗುರ ಮಾತನಾಡುತ್ತ ದಿನವನ್ನು ಕಳೆಯಿರಿ. ನಿಮ್ಮ ವಿದ್ವತ್, ಪಾಂಡಿತ್ಯಕ್ಕೆ ಬೆಲೆ ನೀಡಿ ನಿಮ್ಮನ್ನು ಜನರು ಆದರಿಸುವರು. ಹಾಗಾಗಿ ಸಣ್ಣತನ ತೋರಿ ಹಗುರ ಆಗದಿರಿ. ನಿಮ್ಮ ನಡೆ-ನುಡಿಯಲ್ಲಿ ಗಾಂಭೀರ್ಯತೆಯನ್ನು ರೂಢಿಸಿಕೊಳ್ಳಿರಿ.ವಿರೋಧಿಗಳನ್ನು ಮಾತಿನ ಮೂಲಕ ಸೋಲಿಸುವ ಚಾಕಚಕ್ಯತೆ ನಿಮ್ಮಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಅಪರಿಚಿತರ ಬಳಿ ವ್ಯವಹರಿಸುವಾಗ ಮಾತ್ರ ಎಚ್ಚರದಿಂದ ಇರಿ.

ಅದೃಷ್ಟ ಸಂಖ್ಯೆ:4

ತುಲಾ

ತುಲಾ

ಹೊಸ ಯೋಜನೆಗಳು ಜೀವನದಲ್ಲಿ ಹೊಸದೇ ಆದ ಚೈತನ್ಯವನ್ನು ತುಂಬಿಕೊಡುವುದು. ಇದರಿಂದ ಮನೆಯ ಸದಸ್ಯರು ಹಾಗೂ ಸಂಗಾತಿಯೂ ಹೆಚ್ಚು ಸಂತೋಷಪಡುವರು. ಭಗವಂತನು ನೀಡಿದ್ದನ್ನು ತೃಪ್ತಿಯಿಂದ ಸ್ವೀಕರಿಸಿ ಜೀವನವನ್ನು ಸುಖಮಯವಗಿ ಕಳೆಯಿರಿ. ಮಾತು ಆಡಿದರೆ ಆಯಿತು. ಮುತ್ತು ಒಡೆದರೆ ಹೋಯಿತು ಎನ್ನುವಂತೆ ನಿಮ್ಮ ಸಂಕಷ್ಟದ ದಿನಗಳಲ್ಲಿ ಬಹು ಎಚ್ಚರಿಕೆಯಿಂದ ಎದುರಾಳಿಯನ್ನು ಎದುರಿಸಬೇಕು. ಬಾಯಿತಪ್ಪಿ ಆಡಿದ ಮಾತಿಗೆ ವಿಪರೀತವಾದ ದಂಡ ತೆರಬೇಕಾಗುವುದು.

ಅನೇಕರು ಹೊಸದೇ ಆದ ವಹಿವಾಟನ್ನು ಆರಂಭಿಸಲು ನಿಮಗೆ ಸಲಹೆ ನೀಡುವರು. ಆದರೆ ಅದಕ್ಕೆ ಕಾಲ ಪಕ್ವವಾಗಿಲ್ಲ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಮನೆಯವರ ವಿಶ್ವಾಸವನ್ನು ಗಳಿಸಿಕೊಳ್ಳಿರಿ.

ಅದೃಷ್ಟ ಸಂಖ್ಯೆ:8

ವೃಶ್ಚಿಕ

ವೃಶ್ಚಿಕ

ಒಂದೇ ಒಂದು ಸಣ್ಣ ತಪ್ಪಿನಿಂದ ನಿಮ್ಮ ಮಹತ್ತರವಾದ ಕೆಲಸ ಹಾಳಾಗುವ ಸಂಭವ. ಅದಕ್ಕೆ ಆಸ್ಪದ ಕೊಡದೆ ಗುರು ಹಿರಿಯರ ಹಿತವಚನದಂತೆ ನಡೆದುಕೊಳ್ಳಿರಿ. ಎಲ್ಲವೂ ಒಳಿತಾಗುವುದು.ಸತ್ಪಾತ್ರರಿಗೆ ದಾನ ಮಾಡಬೇಕೆಂಬ ನಿಮ್ಮ ಯೋಚನೆ ಸರಿ. ಆದರೆ ಯಾವುದಕ್ಕೂ ಅವಸರ ಬೇಡವೇ ಬೇಡ. ಭಗವಂತ ನಿಮ್ಮ ಎಲ್ಲಾ ಕಾರ್ಯಗಳಿಗೂ ಅಭಯ ಹಸ್ತವನ್ನು ನೀಡುವರು. ಗುರುವಿನ ಅನುಗ್ರಹ ನಿಮಗೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಬಲವನ್ನು ತಂದುಕೊಡುವುದು. ದೂರವಾಗಿದ್ದ ಮಿತ್ರರು ಹತ್ತಿರ ಬರುವರು. ನಿಮ್ಮ ಕೆಲಸಗಳು ದಿನದಿಂದ ದಿನಕ್ಕೆ ಪ್ರಗತಿಯತ್ತ ಸಾಗುವುದು.

ಅದೃಷ್ಟ ಸಂಖ್ಯೆ:8

ಧನುಸ್ಸು

ಧನುಸ್ಸು

ನಿಮ್ಮ ಬಳಿಯಲ್ಲಿ ವಿವಿಧ ತೆರನಾದ ಜನರು ಬರುವರು. ಅವರುಗಳಲ್ಲಿ ಕೆಲವರು ತಮ್ಮ ಸ್ವಾರ್ಥ ಪೂರೈಸಿಕೊಳ್ಳಲು ಬರುವರು. ಅಂಥವರನ್ನು ಎಚ್ಚರದಿಂದ ಸಾಗಹಾಕಿ.

ನಿಮ್ಮ ಸಾಮಾಜಿಕ ಕಳಕಳಿಯು ಬಹು ಮೆಚ್ಚುಗೆಗೆ ಪಾತ್ರವಾಗುವುದು ಮತ್ತು ನಿಮ್ಮ ಮಾರ್ಗದರ್ಶನವನ್ನು ನೆರೆಹೊರೆಯ ಮಂದಿ ಬಯಸುತ್ತಾರೆ. ಇದರಿಂದ ಅತಿ ಹೆಚ್ಚಿನ ಪ್ರಶಂಸೆ ಪಡೆಯುವಿರಿ.ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಪ್ರಗತಿಗೆ ಅಡ್ಡಗಾಲು ಹಾಕುವರು. ಅವರನ್ನು ಚಾತುರ್ಯದಿಂದಲೇ ದೂರ ಇಡುವುದು ಒಳ್ಳೆಯದು. ಇಲ್ಲವೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಮಾಡುವುದು ಕ್ಷೇಮ.

ಅದೃಷ್ಟ ಸಂಖ್ಯೆ:9

ಮಕರ

ಮಕರ

ತೀರಾ ಸರಳವಾದ ಮಾರ್ಗದಿಂದ ಧನಲಾಭದ ದಾರಿ ತೆರೆದುಕೊಳ್ಳವುದೆಂಬ ನಿಮ್ಮ ದಡ್ಡತನವನ್ನು ಕೈಬಿಟ್ಟರೆ ಒಳಿತಾಗುವುದು. ಕಠಿಣ ಪರಿಶ್ರಮವಿಲ್ಲದೆ ಹಣಕಾಸು ಸುಲಭವಾಗಿ ದೊರೆಯುವುದಿಲ್ಲ.ಸಮಾಜದಲ್ಲಿ ಜನಾನುರಾಗಿಗಳಾಗುವಂತಹ ವಿಶಿಷ್ಟ ಅವಕಾಶವೊಂದನ್ನು ನೀವು ಸಂಪಾದಿಸಿದ್ದೀರಿ. ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.ಸಾಗುವ ದೂರವನ್ನು ಕ್ರಮಿಸುವ ಶಕ್ತಿ ನಿಮಗಿದೆ. ನೀವು ಕ್ರಮಿಸುವ ದಾರಿ ನೇರವಾಗಿದ್ದು ಕಠಿಣ ತರವಾಗಿರುವುದು. ಅದಕ್ಕೆ ಯಾವುದೇ ಪರ್ಯಾಯ ಮಾರ್ಗವಿಲ್ಲ ಎಂಬುದನ್ನು ಅರಿಯಿರಿ. ಭಗವಂತನ ನಾಮಸ್ಮರಣೆ ನಿಮಗೆ ಮಾರ್ಗಸೂಚಿ ಆಗುವುದು.

ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ಬಹಳ ದಿನಗಳಿಂದಲೂ ಅಪೂರ್ಣವಾಗಿದ್ದ ನಿಮ್ಮ ಸಂಶೋಧನೆಯ ಕೆಲಸಗಳಿಗೆ ಸುಖಕರ ಅಂತ್ಯ ಕಂಡು ಬರುವವು. ನಿಮಗೆ ಮಾರ್ಗದರ್ಶನ ನೀಡುತ್ತಿದ್ದ ವ್ಯಕ್ತಿಯು ಸರಿಯಾದ ಮಾರ್ಗದರ್ಶನ ನೀಡುವರು.ನಿಮಗೆ ಕೇವಲ ಕಷ್ಟಗಳೇ ಆಗಿ ಬೇಸರ ಬಂದಿರುವ ಸಾಧ್ಯತೆ ಇದೆ. ಇದರಿಂದ ಮನಸ್ಸು ಗಲಿಬಿಲಿಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಮನಸ್ಸು ವ್ಯಘ್ನವಾಗಿರುವಾಗ ವಾಹನ ಚಲಾಯಿಸದಿರಿ.

ಜನ್ಮಶನಿಯು ಎಲ್ಲಾ ಕೆಲಸಗಳಲ್ಲಿ ಮಂದ ಪ್ರಗತಿಯನ್ನುಂಟು ಮಾಡುತ್ತಿರುವನು. ನಿಧಾನವೇ ಪ್ರಧಾನ. ಶನಿಮಹಾರಾಜನ ಆಟಗಳಿಗೆ ತಲೆಬಾಗದೆ ವಿಧಿಯಿಲ್ಲ. ಆಂಜನೇಯ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ.

ಅದೃಷ್ಟ ಸಂಖ್ಯೆ:2

ಮೀನ

ಮೀನ

ಆದಷ್ಟು ಎಚ್ಚರದಿಂದ ಇರಿ. ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಕೆಲವರು ಮೂಗು ತೂರಿಸುತ್ತಾ ಇಲ್ಲಸಲ್ಲದ ಸಲಹೆಗಳನ್ನು ನೀಡಿ ನಿಮ್ಮ ದಾರಿ ತಪ್ಪಿಸಲು ಹೊಂಚು ಹಾಕುತ್ತಿರುವರು. ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿ.ನಿಮ್ಮ ಪ್ರತಿಭೆಯನ್ನು ಧಾರಾಳವಾಗಿ ಪ್ರದರ್ಶಿಸಲು ಎಲ್ಲಾ ರೀತಿಯ ಅವಕಾಶಗಳು ಹೇರಳವಾಗಿ ಬರುವವು. ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡರು ಎಂಬಂತೆ ಆಗಬಾರದು. ತಾನಾಗಿ ಬಂದ ಅವಕಾಶಗಳನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಿ. ನಿಮ್ಮದು ಮೀನಿನಂತೆ ಚುರುಕಾದ ನಡೆನುಡಿ ಇದ್ದರು ಗಾಳಕ್ಕೆ ಸಿಕ್ಕ ಮೀನಿನಂತೆ ಒದ್ದಾಡುವಿರಿ. ವಿವೇಚನೆ ಬಳಸಿ ಕಾರ್ಯ ಪ್ರವೃತ್ತರಾಗಿ. ಅನವಶ್ಯಕ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಡಿ.

ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope-19-November-2018

Know what astrology and the planets have in store for you today. Choose your zodiac sign and read the details...
Story first published: Monday, November 19, 2018, 10:10 [IST]
X
Desktop Bottom Promotion