Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
15-11-2018: ಗುರುವಾರದ ದಿನ ಭವಿಷ್ಯ
ನವಗ್ರಹದಲ್ಲಿ ಗುರು ಗ್ರಹ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ.ಮನುಷ್ಯನ ಪ್ರತಿಯೊಂದು ಯಶಸ್ಸಿಗೂ ಗುರು ಗ್ರಹದ ಕೃಪೆ ಬೇಕು. ಗುರು ಗ್ರಹದ ಅನುಗ್ರಹವಿದ್ದಲ್ಲಿ ಸುಖ,ಶಾಂತಿ, ಸಂಪತ್ತು, ವಿವಾಹ, ಸಂತಾನ ಯೋಗ ಎಲ್ಲವೂ ಸಿಗಲಿದೆ. ಜಾತಕದಲ್ಲಿ ಗುರು ಪ್ರಬಲವಾಗಿದ್ದರೆ ಯಶಸ್ಸು ಲಭಿಸುತ್ತದೆ. ದುರ್ಬಲವಾಗಿದ್ದರೆ ಅಪಜಯ, ನೋವು, ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಗುರುವಿನ ಅನುಗ್ರಹ ಪಡೆಯಲು ಬಯಸುವ ವ್ಯಕ್ತಿ ಗುರುವಾರದ ಈ ದಿನ ಗುರು ಸ್ಥಾನದಲ್ಲಿರುವ 'ದತ್ತಾತ್ರೇಯ','ರಾಘವೇಂದ್ರ ಸ್ವಾಮಿಗಳು','ಸಾಯಿಬಾಬಾ'ಮೊದಲಾದವರ ದರ್ಶನವನ್ನು(ಮಂದಿರಗಳಲ್ಲಿ) ಪಡೆಯಿರಿ.ಗುರು ರಾಘವೇಂದ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807.
ಮೇಷ
ನಿಮ್ಮ ಯೋಜನೆಗಳಲ್ಲಿ ಪರಿಶ್ರಮ ಇರಲಿ. ನಿಧಾನವಾದರೂ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಇದಕ್ಕೆ ಪೂರಕವಾಗಿ ಹಿರಿಯರ ಆಶೀರ್ವಾದ ನಿಮಗಿರುವುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬರುವುದು.ಆನೆ ನಡೆದದ್ದೇ ದಾರಿ ಎನ್ನುವಂತೆ ನೀವು ಯೋಚಿಸುವ ಮತ್ತು ಕಾರ್ಯಪ್ರವೃತ್ತರಾಗುವ ದಾರಿ ವಿಶಿಷ್ಟವಾಗಿರುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸವೂ ಅಭಿವೃದ್ಧಿಯಾಗುವುದು ಹಾಗೂ ಪರರಿಗೆ ಅಸೂಯೆಯನ್ನುಂಟು ಮಾಡುವುದು.
ಶತ್ರುಗಳು ಮೇಲುಗೈ ಸಾಧಿಸದಂತೆ ಕುಲದೇವರನ್ನು ಪ್ರಾರ್ಥನೆ ಮಾಡಿ. ಮನಸ್ಸಿನ ಸಂಕಲ್ಪ ನೆರವೇರಿಸಿಕೊಳ್ಳುವ ಅವಕಾಶ ಬರುತ್ತದೆ. ಆದರೂ ಕೆಲವು ಅಡೆತಡೆಗಳು ಉಂಟಾಗುವವು. ಶ್ರಮದಿಂದ ಕಾರ್ಯಸಿದ್ಧಿ ಆಗುತ್ತದೆ.
ಅದೃಷ್ಟ ಸಂಖ್ಯೆ:2
ವೃಷಭ
ನಿಮ್ಮ ಸುತ್ತಮುತ್ತಲೂ ನಿಮ್ಮ ಆರಾಧಿಸುವ, ವಿರೋಧಿಸುವ ಜನರು ಇದ್ದೇ ಇರುತ್ತಾರೆ. ಅವರ ನಿಜವಾದ ಮುಖವಾಡ ತಿಳಿಯದೆ ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಮಕ್ಕಳ ಪ್ರಗತಿ ಕಂಡು ಅವರ ಬೆನ್ನು ತಟ್ಟಿ ಹುರಿದುಂಬಿಸಿ. ಅವರು ನಿಮ್ಮ ಮನೋಭಾವನೆಗಳನ್ನು ಗುರುತಿಸಿ ಗೌರವಿಸುವರು. ಇದರಿಂದ ನಿಮಗೂ ಆನಂದ ಮತ್ತು ಕುಟುಂಬದಲ್ಲಿ ನೆಮ್ಮದಿ ಮೂಡುವುದು. ಯಾವ ರೀತಿ ಫಲ ಸಿಗಬಹುದೆಂದು ಹೇಳಲು ಆಗುವುದಿಲ್ಲ. ಆದರೆ ಆರೋಗ್ಯದ ಮೇಲಂತೂ ಪ್ರಭಾವ ಹೆಚ್ಚಿರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಅದೃಷ್ಟ ಸಂಖ್ಯೆ:1
ಮಿಥುನ
ಜೀವನ ರಥ ಸಾಗಿಸಲು ಗಂಡು ಹೆಣ್ಣು ಅವಶ್ಯಕ. ಆದರೆ ರಥ ಸಾಗಿಸಲು ಪರ ಪುರುಷರ ಅಥವಾ ಪರಸ್ತ್ರೀಯ ಸಹಾಯ ಪಡೆಯುವುದು ಅಪಚಾರವಾಗುವುದು. ಈ ಬಗ್ಗೆ ವಿವೇಚನೆಯಿಂದ ವರ್ತಿಸಿ.ಯಾವುದೇ ರೀತಿಯ ಒತ್ತಡಗಳು ಬಂದರೂ ಜಾಣತನದಿಂದ ಅದನ್ನು ನಿಭಾಯಿಸಿ. ಇದರಿಂದ ನಿಮಗೆ ಉತ್ತಮ ಮಾರ್ಗ ಗೋಚರಿಸುವುದು. ಗುರು ಹಿರಿಯರ ಸಲಹೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.ನಿಮ್ಮ ಸಕಾರಾತ್ಮಕ ಚಿಂತನಾ ಶಕ್ತಿಯ ವಿಚಾರದಲ್ಲಿ ಎಲ್ಲವೂ ಸರಿ ಇದೆ ಎಂದುಕೊಳ್ಳುತ್ತಿರುವಾಗಲೇ ಬಾಯಿ ತಪ್ಪಿ ಆಡಿದ ಮಾತಿನಿಂದಾಗಿ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುವುದು. ದುರ್ಗಾದೇವಿಯನ್ನು ಪ್ರಾರ್ಥಿಸಿ.
ಅದೃಷ್ಟ ಸಂಖ್ಯೆ:2
ಕಟಕ
ಉಗುರಿನಲ್ಲಿ ಹೋಗುವ ಕೆಲಸಗಳಿಗೆ ಕೊಡಲಿ ಹಿಡಿಯುವ ವ್ಯರ್ಥ ಶ್ರಮ ಕೈಬಿಡಿ. ಅನಗತ್ಯವಾದ ಸಂಶಯವೇ ನಿಮ್ಮ ಕಾರ್ಯಹಾನಿಗೆ ಕಾರಣವಾಗುವುದು. ಧನಾತ್ಮಕವಾಗಿ ಚಿಂತಿಸಿ ಧನ್ಯತೆ ಹೊಂದಿ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎನ್ನುವ ಗಾದೆ ಮಾತನ್ನು ನೀವು ನೆನಪಿಸಿಕೊಳ್ಳಿ. ನೀವು ನೋಡುವ ಅಥವಾ ಕೇಳುವ ವಿಚಾರಗಳು ಮನಸ್ಸಿಗೆ ಘಾಸಿ ಉಂಟು ಮಾಡುವವು. ಆದಾಗ್ಯೂ ಅವನ್ನು ತಾಳ್ಮೆಯಿಂದ ಪರೀಕ್ಷಿಸಿ.
ವ್ಯಾಜ್ಯ ಸಂಬಂಧ ವಿಚಾರದಲ್ಲಿನ ಹೊಂದಾಣಿಕೆಗೆ ವಿರೋಧಿಗಳು ಸಹಕಾರ ನೀಡುತ್ತಾರೆ. ಇದರಿಂದ ಸಮಾಧಾನಕರ ನಿರ್ಣಯ ಒಡಮೂಡಲು ಅವಕಾಶಗಳು ಕೂಡಿ ಬರುತ್ತವೆ. ದೇವಿ ಆರಾಧನೆಯಿಂದ ಒಳಿತಾಗುವುದು.
ಅದೃಷ್ಟ ಸಂಖ್ಯೆ:4
ಸಿಂಹ
ಅಂಗೈ ಹುಣ್ಣಿಗೆ ಕನ್ನಡಿ ಬೇರೆ ಎನ್ನುವಂತೆ ನಿಮ್ಮ ಸುತ್ತಮುತ್ತಲಿನ ಜನರಿಂದಲೇ ನಿಮ್ಮ ಕಾರ್ಯವಾಗುತ್ತಿರುವಾಗ ಅದಕ್ಕಾಗಿ ರಾಜಕಾರಣಿಯ ಸಹಾಯ ಪಡೆಯುವುದು ಸೂಕ್ತವಲ್ಲ. ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಇದೆ.ಹೊಸಬರ ಸಂಗಡ ಚಾಣಾಕ್ಷ ತನದಿಂದ ಮಾತುಗಳನ್ನು ಆಡುವಿರಿ. ಅವರು ನೀವೆಷ್ಟು ವಿವೇಚನಾಶಾಲಿಗಳು ಎಂದು ಕೊಂಡಾಡುವರು. ಆದರೆ ನಿಮ್ಮ ಆಂತರ್ಯವನ್ನು ಅವರ ಎದುರು ಬಹಿರಂಗ ಪಡಿಸದಿರಿ.
ಧನನಷ್ಟ ಮತ್ತು ಆರೋಗ್ಯದ ವಿಚಾರದಲ್ಲಿ ಹಲವು ಕಿರಿಕಿರಿ ಉಂಟಾಗುವುದು. ಕುಲದೇವರನ್ನು ಆರಾಧನೆ ಮಾಡಿ. ಕೆಲವರಿಗೆ ದೂರದ ಊರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ:6
ಕನ್ಯಾ
ನೀವು ಧಾರಾಳತನವೇ ನಿಮಗೆ ತೊಂದರೆಯನ್ನುಂಟು ಮಾಡುವುದು. ಒಳ್ಳೆಯತನಕ್ಕೂ ಒಂದು ಮಿತಿ ಉಂಟು. ಆ ಮಿತಿಯನ್ನು ಅರಿತು ಸಮಾಜದಲ್ಲಿ ವರ್ತಿಸಿ. ಇದರಿಂದ ಮಡದಿ ಮಕ್ಕಳು ಸಂತಸ ಪಡುವರು.
ಈಗಾಗಲೆ ಮಾಡಿರುವ ಸಾಲ ಬೆಟ್ಟದಷ್ಟಿದೆ. ಸಾಲದಲ್ಲಿ ಸಾಲ ಎಂದು ಪುನಃ ಭಂಡ ಧೈರ್ಯದಿಂದ ಸಾಲ ಮಾಡದಿರಿ. ನಿಮ್ಮ ಮೇಲಿನ ಅಭಿಮಾನಕ್ಕೆ ಯಾರಾದರೂ ಸಾಲ ಕೊಡಲು ತಯಾರಿರುತ್ತಾರೆ. ಆದರೆ ಸಾಲ ತೀರುಸುವ ದಾರಿ ತಿಳಿದುಕೊಳ್ಳಿ.ಗ್ರಹಗಳ ಸ್ಥಿತಿಗತಿಯಿಂದಾಗಿ ಉತ್ತಮ ಅಧಿಕಾರದ ಸೂತ್ರ ಹಿಡಿಯುವ ಸಾಧ್ಯತೆ ಇದೆ. ನಿಮ್ಮ ಯೋಗ್ಯತೆಯನ್ನು ಸರಕಾರ ಗಮನಿಸಿ ನಿಮಗೆ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇರುತ್ತದೆ.
ಅದೃಷ್ಟ ಸಂಖ್ಯೆ:8
ತುಲಾ
ಸ್ನೇಹಿತರ ಮೂಲಕವೇ ಕೆಲಸಗಳು ಆಗುತ್ತವೆ ಎಂಬ ನಿಯಮವಿಲ್ಲ. ನಿಮ್ಮ ಪ್ರಯತ್ನವೂ ಸಾಕಷ್ಟು ಬೇಕು. ವ್ಯಾಪಾರ ವ್ಯವಹಾರದಲ್ಲಿ ಆದಷ್ಟು ಪಾರದರ್ಶಕತೆ ರೂಢಿಸಿಕೊಳ್ಳಿ.ಒಂದೇ ಸಲಕ್ಕೆ ದೊಡ್ಡ ಬಂಡವಾಳದ ಕಾರ್ಯ ಯೋಜನೆಗೆ ಕೈಹಾಕದಿರಿ. ನೀವು ಮಾಡುತ್ತಿರುವ ಕಾರ್ಯದ ಮೇಲೆ ನಿಗಾ ಇರಲಿ. ಹಣಕಾಸಿನ ವಿಷಯದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ. ಹಣ ಖರ್ಚು ಮಾಡುವುದು ಸುಲಭ ಗಳಿಸುವುದು ಕಠಿಣ.
ಮನಸ್ಸಿನ ಸಂಕಲ್ಪ ಈಡೇರಿಸಿಕೊಳ್ಳಲು ದುರ್ಗಾದೇವಿಯನ್ನು ಸ್ತುತಿಸಿ. 5 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ತಿನ್ನಿಸಿ. ಉನ್ನತ ಹುದ್ದೆ ಅಲಂಕರಿಸಲು ಅಪರೂಪದ ಅವಕಾಶ ಬರುವುದು. ಅದನ್ನು ಸ್ವೀಕರಿಸಿ.
ಅದೃಷ್ಟ ಸಂಖ್ಯೆ:4
ವೃಶ್ಚಿಕ
ರಾಜಕಾರಣಿಗಳು ತಮ್ಮ ಮನದ ಇಚ್ಛೆಯನ್ನು ಬಹಿರಂಗ ಪಡಿಸುವ ಮೂಲಕ ತಮ್ಮ ಕಾರ್ಯಗಳನ್ನು ಈಡೇರಿಸಿಕೊಳ್ಳಬಹುದಾಗಿದೆ. ಇದೊಂದು ರಾಜಕೀಯ ಕಣ್ಣೋರೆಸುವ ತಂತ್ರವಾದರೂ ಮುಂದೆ ಅನುಕೂಲವಾಗುವುದು.ಸದ್ಯದ ಪರಿಸ್ಥಿತಿಯಲ್ಲಿ ಹಗ್ಗ ಕೂಡ ಹಾವೆಂದು ಭ್ರಮಿಸಿ ಭಯ ಪಡುವ ಕ್ಷ ಣಗಳಾಗಿವೆ. ಅದಕ್ಕೆ ಈಗಿರುವ ಆರ್ಥಿಕ ಸಂಕಷ್ಟದ ದಿನಗಳೇ ಕಾರಣ. ಯಾವುದೇ ಬೃಹತ್ ಪ್ರಮಾಣದ ಯೋಜನೆಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ.ಆರ್ಥಿಕ ವಿಚಾರದಲ್ಲಿ ನಿಮ್ಮನ್ನು ಬೇಸ್ತು ಬೀಳಿಸುವ ಜನರು ನಿಮ್ಮ ಸುತ್ತಲೂ ಇರುವರು. ನಿಮಗೆ ಅವರು ಮಂಕುಬೂದಿ ಎರಚಿ ಹಣ ಲಪಟಾಯಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆಂಜನೇಯ ಸ್ತೋತ್ರ ಪಠಿಸಿ.
ಅದೃಷ್ಟ ಸಂಖ್ಯೆ:9
ಧನುಸ್ಸು
ಸ್ವಚ್ಛ ಮನೆಯು ಸ್ವಚ್ಛ ಮನಸ್ಸಿನ ಸಂಕೇತವಾಗಿರುವುದು. ಆದರೆ ಮನೆಯನ್ನು ಒಪ್ಪ ಓರಣವಾಗಿ ಇಟ್ಟುಕೊಳ್ಳಲು ಆಲಸ್ಯತನ ಅಡ್ಡ ಬರುತ್ತದೆ. ಇದರಿಂದ ಹೊರಬನ್ನಿ. ಆಂಜನೇಯ ಸ್ತೋತ್ರ ಪಠಿಸಿ.ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿಯುವ ದಡ್ಡತನ ತೋರದಿದ್ದರೇ ಕ್ಷೇಮ. ಆದಷ್ಟು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಬಡವರಿಗೆ ಆಹಾರ ನೀಡಿ.ಸದ್ಯದ ಪರಿಸ್ಥಿತಿಯಲ್ಲಿ ಗ್ರಹಗಳು ನಿಮಗೆ ಸಂಪೂರ್ಣ ಸಿದ್ಧಿ ಕೊಡಲು ಅಸಮರ್ಥವಾಗಿವೆ. ಹಾಗಾಗಿ ಜೀವನದಲ್ಲಿ ಸೋತು ಗೆಲ್ಲುವ ಬಯಕೆಯನ್ನು ಈಡೇರಿಸಿಕೊಳ್ಳುವುದು ಅವಶ್ಯ.
ಅದೃಷ್ಟ ಸಂಖ್ಯೆ:8
ಮಕರ
ತೋಳ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವರು. ಅಂತೆಯೇ ಈಗ ಗ್ರಹಗಳ ಬಲ ಇಲ್ಲದೆ ಒತ್ತಡ ಜೀವನ ನಡೆಸುತ್ತಿರುವ ನಿಮಗೆ ಸಾಲಗಾರರು ಹೆಚ್ಚಿನ ತಲೆ ನೋವು ಉಂಟು ಮಾಡುವರು.ಮನೆ ಕಟ್ಟುವ ವಿಚಾರದಲ್ಲಿ ಅತಿಯಾದ ಅವಸರ ಬೇಡ. ಒಂದಿಷ್ಟು ವಿಚಾರಗಳನ್ನು ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ಕಚೇರಿ ಕೆಲಸ ಕಾರ್ಯದಲ್ಲಿ ಮೇಲಧಿಕಾರಿಗಳ ಕಿರಿಕಿರಿ ಇರುತ್ತದೆ. ಆಂಜನೇಯ ಸ್ತೋತ್ರ ಪಠಿಸಿ.ಯಾರನ್ನೂ ದಿಢೀರನೆ ನಂಬಿ ಮೋಸ ಹೋಗದಿರಿ. ಬ್ಯಾಂಕಿನಿಂದ ತರುವ ಅಥವಾ ಕಟ್ಟಲು ಒಯ್ಯುತ್ತಿರುವ ಹಣದ ಬಗೆಗೆ ಎಚ್ಚರ ಇರಲಿ. ಹದ್ದಿನಂತೆ ಕಾಯುವ ಜನರಿದ್ದಾರೆ. ಅವರು ಹಣ ಲಪಟಾಯಿಸುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ:6
ಕುಂಭ
ಬಹುಜನರಿಗೆ ಪ್ರಿಯರಾಗಿದ್ದೀರಿ. ಆದರೆ ತುಸುವಾದರೂ ನಿಷ್ಠುರತೆ ಬೆಳೆಸಿಕೊಳ್ಳದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ. ನಿಮ್ಮತನವನ್ನು ಕಾಯ್ದುಕೊಳ್ಳಲು ಕೆಲವರಿಂದ ಅಂತರ ಕಾಯ್ದುಕೊಳ್ಳಿ.ಸಕಲ ಅಭಯಗಳನ್ನು ಒದಗಿಸಿ ಚೈತನ್ಯಕ್ಕೆ ಕಾರಣವಾಗುವಂತಹ ಮಾತಾ ದುರ್ಗಾದೇವಿ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ದೇವಿ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿ.ನೀವು ಮೇಲೇರಲು ಸೂಕ್ತ ಸಮಯವಾಗಿದ್ದು, ಜನರ ನಡುವೆ ವಿಶಿಷ್ಟ ಸ್ಥಾನ ಪಡೆದು ಪ್ರಶಂಸೆ ಗಿಟ್ಟಿಸಿಕೊಳ್ಳುವಿರಿ. ಕೆಲವು ಯೋಜನೆಗಳಿಗೆ ಸೂಕ್ತ ವಹಿವಾಟುದಾರರು ದೊರೆಯುವರು.
ಅದೃಷ್ಟ ಸಂಖ್ಯೆ:2
ಮೀನ
ಮನದ ಸಂಕಲ್ಪ ಸಾಧಿಸಿಕೊಡುವ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ. 54 ಇಲ್ಲವೆ 100 ಕಪ್ಪು ವೀಳ್ಯೆದೆಲೆ ಸರವನ್ನು ಆಂಜನೇಯನಿಗೆ ಅರ್ಪಿಸಿ. ಗುರುಗಳನ್ನು ಮನಸಾ ಸ್ಮರಿಸಿ.ನಿಮ್ಮದೇ ಆದ ಉತ್ತಮ ಕಾರ್ಯತಂತ್ರಗಳನ್ನು ಮೇಲಧಿಕಾರಿಗಳು ಶ್ಲಾಘಿಸಲಿದ್ದಾರೆ. ಅದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುವುದು. ಮನೆಯಲ್ಲೂ ಮಡದಿ ಮಕ್ಕಳು ಸಂತಸವನ್ನುಂಟು ಮಾಡುವರು.
ನಿಮ್ಮನ್ನು ನೀವು ಬಹುಮುಖ ಕ್ರಿಯಾಶೀಲತೆಯ ಫಲದಿಂದಾಗಿ ಮೇಲಕ್ಕೆ ಏರಿಸಿಕೊಳ್ಳಲು ಸೂಕ್ತವಾದ ದಿನಗಳಾಗಿವೆ. ವ್ಯಾಪಕವಾದ ಜನಬೆಂಬಲ ನಿಮ್ಮ ಬಗೆಗಿನ ಗೌರವಾದರಗಳು ಸಮಾಜದಲ್ಲಿ ಸ್ಪಷ್ಟವಾಗುವವು. ಕುಲದೇವರನ್ನು ಪ್ರಾರ್ಥನೆ ಮಾಡಿ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp