Just In
- 3 hrs ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 4 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 7 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 9 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
12-11-2018: ಸೋಮವಾರದ ದಿನ ಭವಿಷ್ಯ
ಸೋಮವಾರದ ದಿನ ಮಂಗಳಕರನೋ ಅವನೇ ಶಿವ. ʽಹಿಂದೂʼ ಧರ್ಮದಲ್ಲಿ ಯಾವ ಯಾವಾಗ ನಿರಾಕಾರ ಉಪಾಸನೆ ಬರುತ್ತದೋ ಆಗ ಆ ಪರಬ್ರಹ್ಮವನ್ನು ಶಿವ ಎಂದೇ ಸಂಬೋಧಿಸುತ್ತಾರೆ.ಈ ಪ್ರಕಾರ ಶಿವವೇ ಪರಬ್ರಹ್ಮ. ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹೇಶ್ವರನೇ ಶಿವನೆಂದು ಭಾವಿಸುತ್ತಾರೆ.
ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ. ಕೈಲಾಸ ಪತಿ ನೀಲಕಂಠ ಈಶ್ವರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ಮೇಷ
ಅಮೂಲ್ಯವಾದ ವಸ್ತುಗಳನ್ನು ಸಂರಕ್ಷಿಸಿಕೊಳ್ಳಿ. ಕೆಲವು ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇದೆ. ಅಂಥ ವಸ್ತುಗಳನ್ನು ಜಾಗ್ರತೆಯಾಗಿ ಎತ್ತಿಡಿ. ತಾಯಿಯ ಆರೋಗ್ಯದ ಸಲುವಾಗಿ ಖರ್ಚು ಮಾಡಬೇಕಾಗುವುದು.ಹಿರಿಯರು ನಿಮಗೆ ಅತ್ಯವಶ್ಯವಾದ ಸಲಹೆಯನ್ನು ನೀಡುವರು. ಅವರ ಸಲಹೆಯಂತೆ ನೀವು ನಡೆದುಕೊಂಡರೆ ಅತ್ಯಂತ ಸಂತೋಷದಿಂದ ದಿನ ಕಳೆಯುವಿರಿ. ಇದರಿಂದ ಮನಸ್ಸು ನಿರಾಳವಾಗುವುದು.ಕೆಲಸದ ಸ್ಥಳದಲ್ಲಿ ಬಾಸ್ನಿಂದ ಪ್ರಶಂಸೆ ಪಡೆಯುವುದಕ್ಕೆ ಅವಕಾಶ ಅಧಿಕವಾಗಿದೆ. ಇದರಿಂದ ಮುಂದಿನ ಪದೋನ್ನತಿಗೆ ದಾರಿ ನಿರಾಳವಾಗುವುದು. ನಿಮ್ಮ ಕಾಯಕದಲ್ಲಿ ನಿಷ್ಠೆಯನ್ನು ತೋರಿ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರುವುದು.
ಅದೃಷ್ಟ ಸಂಖ್ಯೆ:2
ವೃಷಭ
ಹಿಂದೆ ಇದ್ದ ವೈಭವವನ್ನು ನೆನೆದು ಹಿತ್ತಲಲ್ಲಿ ಅತ್ತರು ಎಂಬಂತಾಗಿದೆ ನಿಮ್ಮ ಪರಿಸ್ಥಿತಿ. ದೇಹದಲ್ಲಿ ಕಸುವಿದ್ದಾಗ ಮಾಡಿದ ಕೆಲಸಗಳು ನೆನಪಾಗುವುದು. ಇಂದಿನ ಪರಿಸ್ಥಿತಿಗೂ ಅಂದಿನ ಸ್ಥಿತಿಗೂ ಹೋಲಿಸಿ ನೋಡುವುದು ತರವಲ್ಲ.
ದೈಹಿಕ ನಿಶ್ಯಕ್ತಿಯು ನಿಮ್ಮಲ್ಲಿ ಉದಾಸೀನ ಭಾವನೆಯನ್ನುಂಟು ಮಾಡುವುದು. ವೈದ್ಯರ ಸಲಹೆ ಇಲ್ಲದೆ ತೆಗೆದುಕೊಂಡ ಸ್ವಯಂ ವೈದ್ಯಕೀಯ ನಿಮ್ಮನ್ನು ನಿತ್ರಾಣ ಮಾಡುವುದು. ಸೂಕ್ತ ವೈದ್ಯರನ್ನು ಭೇಟಿ ಮಾಡಿ ಉತ್ತಮ ಔಷಧಿ ತೆಗೆದುಕೊಳ್ಳಿ.
ಅತಿ ಸೂಕ್ಷ್ಮ ಮತಿಗಳಾದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂತೆಯೆ ಒಂದು ಪ್ರಸಂಗವು ನಿಮ್ಮ ಚಿತ್ತ ಕ್ಷೋಭೆಯನ್ನು ಕದಡುವುದು. ಮಾತಾ ದುರ್ಗಾದೇವಿಯನ್ನು ಅನನ್ಯ ಭಜಿಸಿ.
ಅದೃಷ್ಟ ಸಂಖ್ಯೆ:1
ಮಿಥುನ
ಹಣಕಾಸಿನ ವಿಷಯದಲ್ಲಿ ಎಲ್ಲಾ ಕಡೆಯಿಂದಲೂ ಸಕಾರಾತ್ಮಕ ಚಿಂತನೆ ಮೂಡಿಬರುವುದು. ದೊಡ್ಡ ಪ್ರಮಾಣದ ಉಳಿತಾಯ ಯೋಜನೆ ಇದ್ದಲ್ಲಿ ಎಲ್ಲಾ ಸಾಧಕ ಬಾಧಕಗಳ ಬಗ್ಗೆ ಯೋಚನೆ ಮಾಡಿ ಕಾರ್ಯಪ್ರವೃತ್ತರಾಗಿ.ಭವಿಷ್ಯತ್ತಿನ ವಿಚಾರಗಳ ಕುರಿತು ಸೂಕ್ತವಾದ ನಿರ್ಣಯವನ್ನು ನೀವು ತೆಗೆದುಕೊಳ್ಳುವಿರಿ. ಇದಕ್ಕೆ ಹಿರಿಯರ ಆಶೀರ್ವಾದವೂ ಇದ್ದು ನೀವು ಅಂದುಕೊಂಡ ಕಾರ್ಯಗಳು ಕೈಗೂಡುವವು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿಕಡೆಗೆ ಕರೆದುಕೊಂಡು ಹೋಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿಯು ನಿಮಗೆ ಸಂತಸ ನೀಡುವುದು.
ಅದೃಷ್ಟ ಸಂಖ್ಯೆ:2
ಕಟಕ
ಹೊರಗಿನ ವ್ಯವಹಾರದಲ್ಲಿ ಬರಿ ಮೋಸ ಕಪಟಗಳು ತಾಂಡವಾಡುತ್ತಿವೆ. ಹಾಗಾಗಿ ಅಂತರಂಗದ ನುಡಿಗಳನ್ನು ಆಲಿಸಿ ಕಾರ್ಯ ಪ್ರವೃತ್ತರಾಗಿ. ಪರಿಚಯವಿಲ್ಲದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸದಿರುವುದು ಒಳ್ಳೆಯದು.ಯಾವುದರಲ್ಲಿ ವಿಶ್ವಾಸ, ಆಸಕ್ತಿ ಇರುವುದೋ ಅಲ್ಲಿ ಕಾರ್ಯ ನಿರ್ವಹಿಸುವುದು ಒಳ್ಳೆಯದು. ಇಲ್ಲವೆ ಗುಡ್ಡಕ್ಕೆ ಮಣ್ಣು ಹೊರುವಂತಹ ವ್ಯರ್ಥ ಪ್ರಯತ್ನವಾಗುವುದು. ಕಾರ್ಯ ಹಮ್ಮಿಕೊಳ್ಳುವ ಮುನ್ನ 2 ಬಾರಿ ಚಿಂತಿಸಿ.ಹಳೆಯ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ. ಶಾಂತಿಯಿಂದ ಇರಿ. ಮಾತು ಮಾತಿಗೂ ಆಣೆ ಪ್ರಮಾಣಗಳನ್ನು ಮಾಡದಿರಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತೆ ಮೌನವಾಗಿರಿ.
ಅದೃಷ್ಟ ಸಂಖ್ಯೆ:4
ಸಿಂಹ
ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರ ಮೇಲೂ ಅನುಮಾನ ತಾಳುವುದು ಸರಿಯಲ್ಲ. ಅನ್ಯರ ನಾಡಿ ಮಿಡಿತವನ್ನು ಅರಿತ ನಿಮಗೆ ಯಾರ ಜತೆ ಹೇಗೆ ವರ್ತಿಸಬೇಕೆಂಬುದು ತಿಳಿದೇ ಇದೆ. ಅದರಂತೆ ನಡೆಯುವುದು ಒಳ್ಳೆಯದು.ಧಾರ್ಮಿಕ ಕಾರ್ಯಗಳೆಲ್ಲವೂ ಮುಗಿದು ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂಬ ನಿಮ್ಮ ಇಚ್ಛೆ ಕೈಗೂಡುವುದು. ಮನೆ ಮಂದಿಯೊಂದಿಗೆ ಸಂತೋಷದ ಕ್ಷ ಣಗಳನ್ನು ಕಳೆಯುವಿರಿ. ಹಿಂದಿನ ದಿನಕ್ಕಿಂತ ಹೆಚ್ಚು ಹಣ ಸಂದಾಯವಾಗಲಿದೆ.
ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ, ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು.
ಅದೃಷ್ಟ ಸಂಖ್ಯೆ:8
ಕನ್ಯಾ
ಅನೇಕ ದಿನಗಳ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಹತ್ತರ ತಿರುವು ಕಂಡುಬರುವುದು. ಮುಂದಿನ ದಿನಗಳಲ್ಲಿ ಬೃಹತ್ ಪ್ರಮಾಣದ ಕಾರ್ಯ ಯೋಜನೆಗೆ ಚಾಲನೆ ಸಿಗುವುದು ಮತ್ತು ಗೌರವ ಸ್ಥಾನ ಹೊಂದುವಿರಿ.
ಸವಾಲುಗಳನ್ನು ಎದುರಿಸದೆ ಗೆಲುವು ಅಸಾಧ್ಯ. ಅಂತಹ ಗೆಲುವು ರಸಹೀನವಾಗಿರುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಹತ್ತರ ಕಾರ್ಯ ಮಾಡಲು ಕಂಕಣ ಬದ್ಧರಾಗುವಿರಿ. ನಿಮ್ಮ ಪ್ರಯತ್ನಕ್ಕೆ ಭಗವಂತ ಮತ್ತು ಸ್ನೇಹಿತರು ಸಹಾಯಹಸ್ತ ನೀಡುವರು.ಬಹುರೂಪಿಯಾದ ಮತ್ತು ಅತ್ಯಂತ ಕರುಣಾಮಯಿಯಾದ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ನೂತನ ಸದಸ್ಯರ ಸೇರ್ಪಡೆ ಸಾಧ್ಯತೆ ಇರುವುದು.
ಅದೃಷ್ಟ ಸಂಖ್ಯೆ:8
ತುಲಾ
ಅತ್ಯಂತ ನಂಬಿಕಸ್ಥ ಬಂಧುಗಳು ಇಲ್ಲವೆ ಸ್ನೇಹಿತರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇರುವುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದೇವರು ಒಳಿತನ್ನು ಮಾಡುವನು.ಪ್ರತಿದಿನವೂ ನಿಮಗೆ ಒಂದು ರೀತಿಯ ಅಗ್ನಿಪರೀಕ್ಷೆ. ಪುಟಕ್ಕಿಟ್ಟ ಬಂಗಾರದಂತೆ ಪ್ರತಿಬಾರಿಯೂ ನೀವು ಜಯಶೀಲರಾಗಿ ಬರುವಿರಿ. ಆದಷ್ಟು ನೀವು ಜವಾಬ್ದಾರಿಯನ್ನು ಅರಿತು ಲೋಕದ ವ್ಯವಹಾರದಲ್ಲಿ ಮುನ್ನುಗ್ಗುವುದು ಒಳಿತು.ನಿಮ್ಮ ಮಾತಿಗೆ ಬೆಲೆಯುಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಹಾಗಾಗಿ ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಧಾರೆಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ.
ಅದೃಷ್ಟ ಸಂಖ್ಯೆ:9
ವೃಶ್ಚಿಕ
ನಿಮ್ಮಲ್ಲಿ ಅತ್ಯುತ್ಸಾಹ ತುಂಬಿ ತುಳುಕುತ್ತಿದ್ದರೂ ಕ್ರಿಯಾಶೀಲತೆಗೆ ಬೇಕಾದ ತುಡಿತ ನಿಮ್ಮಲ್ಲಿಲ್ಲ. ಅಲ್ಲದೆ ನಿಮ್ಮ ಕೆಲಸ ಕಾರ್ಯಗಳಿಗೆ ನಿಮ್ಮ ಸ್ನೇಹಿತರು, ಬಂಧುಗಳೇ ಅಡ್ಡ ಹಾಕುವುದರಿಂದ ತೊಂದರೆ ಎದುರಿಸಬೇಕಾಗುವುದು.
ಏನೇ ಅಡೆತಡೆಗಳು ಬಂದರೂ ವೃದ್ಧ ಮಾತಾಪಿತರ ಇಲ್ಲವೆ ಗುರುಗಳನ್ನು ಶರಣು ಹೊಂದಿ. ಅವರು ನಿಮಗೆ ಕಷ್ಟದಿಂದ ಹೊರ ಬರಲು ಸಹಕಾರ ನೀಡುವರು. ಹಣಕಾಸು ಸಕಾಲದಲ್ಲಿ ಬರುವುದು.ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ನಿಜ ಜೀವನಕ್ಕೆ ಹತ್ತಿರವಾದಂತೆ ಅನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವವು.
ಅದೃಷ್ಟ ಸಂಖ್ಯೆ:2
ಧನುಸ್ಸು
ಯಾವುದೇ ಚಿಕ್ಕ ಕಾರ್ಯ ಮಾಡುವುದಾದರು ಸಹ ಅದಕ್ಕೆ ಪೂರ್ವಭಾವಿಯಾಗಿ ಅದರ ಸಾಧಕ ಬಾಧಕಗಳನ್ನು ತಿಳಿದು ಮುಂದುವರಿಯುವುದು ಒಳ್ಳೆಯದು. ಉತ್ತಮ ಸಮಯವನ್ನು ಕಳೆಯುವಿರಿ. ಪ್ರತಿಯೊಂದು ವಿಚಾರಕ್ಕೂ ಕನಿಷ್ಟ 2 ಮುಖಗಳಿರುತ್ತವೆ. ಹಾಗಾಗಿ ಆ ಎರಡೂ ವಿಚಾರಗಳನ್ನು ಅರಿತು ಯಾವ ಸಂದರ್ಭದಲ್ಲಿ ಏನನ್ನು ಪ್ರಯೋಗಿಸಬೇಕು ಎಂಬುದು ನಿಮಗೆ ಗೊತ್ತಾಗುವುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ.ದಿಢೀರನೆ ನಿರ್ಧಾರ ತಳೆಯುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ. ಶನಿ ಮಹಾತ್ಮರ ಸನ್ನಿಧಾನದಲ್ಲಿ ಎಳ್ಳೆಣ್ಣೆ ದಾನ ಮಾಡಿ. ಬಡವರಿಗೆ ಆಹಾರ ನೀಡಿ.
ಅದೃಷ್ಟ ಸಂಖ್ಯೆ:6
ಮಕರ
ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಖಂಡಿತ. ಆದರೆ ಅತಿಯಾದ ಆತ್ಮವಿಶ್ವಾಸ ಅಪಾಯಕಾರಿ. ಇದರಿಂದ ಸರಳವಾಗಿ ಆಗುತ್ತಿದ್ದ ಕೆಲಸಕ್ಕೂ ಬಹಳ ದಿನ ಕಾಯುವಂತಹ ಪರಿಸ್ಥಿತಿ ಬರುವುದು. ಆಂಜನೇಯ ಸ್ತೋತ್ರ ಪಠಿಸಿ.ನಿಮ್ಮ ಕೈಕೆಳಗೆ ಇರುವ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಬೆಂಬಲಿಸುವ ಮೂಲಕ ಕಾರ್ಯಗಳಲ್ಲಿ ಬದಲಾವಣೆ ತಂದರೆ ಒಳಿತಾಗುವುದು. ಇಲ್ಲವೆ ಅದೇ ನೌಕರರು ತಿರುಗಿ ಬೀಳುವರು.ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಗಳಿಗೆ ಮುಂದಾಗುವ ಸಂಭವವಿರುತ್ತದೆ. ಬೇಸರ ಪಡಬೇಡಿ. ಜೀವನದ ಪ್ರತಿ ಘಟನೆಯೂ ನಿಮಗೆ ಒಂದು ಉತ್ತಮ ಪಾಠವನ್ನು ಕಲಿಸುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.
ಅದೃಷ್ಟ ಸಂಖ್ಯೆ:8
ಕುಂಭ
ವಿದ್ಯೆಯ ಸಂಪತ್ತನ್ನು ಹೊಂದಿರುವ ನಿಮ್ಮನ್ನು ಕಂಡರೆ ಕೆಲವರಿಗೆ ಗೌರವ, ಕೆಲವರಿಗೆ ಅಸೂಯೆ. ಈ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಭಗವಂತ ನಿಮ್ಮ ಸಹಾಯಕ್ಕೆ ಬಂದು ನಿಲ್ಲುವನು.
ನಿರಂತರವಾದ ಯಶಸ್ಸನ್ನು ಹೊಂದಲು ಬೇಕಾಗುವ ಸಕಲ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಮನೆಯಲ್ಲಿನ ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಕಂಡುಬರುವುದು.ಮಾತೃಸ್ವರೂಪಿಯಾದ ಶ್ರೀ ದುರ್ಗಾಮಾತೆಯನ್ನು ಅನನ್ಯ ಭಜಿಸಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು ಮತ್ತು ಮೇಲಧಿಕಾರಿಗಳು ನಿಮ್ಮ ಮೇಲೆ ಅಪಾರ ಪ್ರೀತಿ ವಾತ್ಸಲ್ಯ ತೋರುವರು.
ಅದೃಷ್ಟ ಸಂಖ್ಯೆ:2
ಮೀನ
ನೀವು ನಡೆಯುವ ದಾರಿ ಉತ್ತಮವಾಗಿರುವುದು. ಅನವಶ್ಯಕವಾಗಿ ಗೊಂದಲಕ್ಕೆ ಬಿದ್ದು ನಡೆಯುವ ದಾರಿಯನ್ನು ಬದಲಾಯಿಸದಿರಿ. ಆತ್ಮೀಯ ಗೆಳೆಯರ ಭೇಟಿಯು ನಿಮಗೆ ಆನಂದವನ್ನುಂಟು ಮಾಡುತ್ತದೆ.ನಿಮ್ಮ ಗಮನಕ್ಕೆ ಬಾರದಂತೆ ನಿಮ್ಮ ವಿಚಾರಧಾರೆಗಳನ್ನು ನಕಲು ಮಾಡುವ ಜನರಿಂದ ತೊಂದರೆ ಅನುಭವಿಸಬೇಕಾಗುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ. ಒಳಿತಾಗುವುದು.ದೂರದೂರಿನ ಬಂಧುಗಳಿಂದ ಕಿರಿಕಿರಿಯ ಮಾತುಗಳು ಎದುರಾಗುವ ಸಂಭವ ಇದೆ. ನೀವು ಮಾಡದೇ ಇರುವ ತಪ್ಪಿಗೆ ಮೂದಲಿಸಿಕೊಳ್ಳುವ ಸಂದರ್ಭ ಇರುತ್ತದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ ದೇವರ ಪ್ರಾರ್ಥನೆ ಮಾಡಿ.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp