Just In
Don't Miss
- Movies Puttakkana Makkalu: ಮುರಳಿ ಮೇಲಿನ ಪ್ರೀತಿ ಒಪ್ಪಿಕೊಂಡ ಸಹನಾ; ಇನ್ನಾದ್ರು ತಪ್ಪಿನ ಅರಿವಾಗುತ್ತಾ?
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
10-11-2018: ಶನಿವಾರದ ದಿನ ಭವಿಷ್ಯ
ವೇದಗಳ ಜ್ಯೋತಿಷ್ಯ ಶಾಸ್ತ್ರ ಪ್ರಕಾರ ,೯ ನವಗ್ರಹ ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು, ಸಹನೆ, ಶ್ರಮ, ಪ್ರಯತ್ನ, ಅನುಭವಗಳ ಪ್ರತೀಕವಾಗಿದ್ದಾನೆ. ಅಡೆತಡೆಗಳನ್ನು, ದುರಾದೃಷ್ಟಗಳನ್ನು, ತರುವವನೂ ಆಗಿದ್ದಾನೆ.
ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ, ಆರೋಗ್ಯಕರ ಜೀವನವಾಗಿರುತ್ತದೆ, ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ ,ಹಿಂದೂ ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟಸ್ಥಾನ"ದಲ್ಲಿ ಕುಳಿತಿದ್ದರೆ, ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ.
ಸೂರ್ಯ ಪುತ್ರನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ. ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು. 9845743807.
ಮೇಷ
ಮಕ್ಕಳ ವಿಚಾರದಲ್ಲಿ ಹರ್ಷದಾಯಕವಾದ ಮತ್ತು ಹೆಮ್ಮೆ ಪಡುವಂತಹ ವಿಚಾರಗಳನ್ನು ಕೇಳಿ ನೀವು ಸಂತೋಷ ಸಾಗರದಲ್ಲಿ ತೇಲುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುವುದರಿಂದ ಹೆಚ್ಚು ಉತ್ಸಾಹಶಾಲಿಗಳಾಗುವಿರಿ.ನೀವು ಕೆಲಸ ಮಾಡುವ ಸ್ಥಳದಲ್ಲಿ ಹಿರಿಯ ಅಧಿಕಾರಿಯೊಬ್ಬರ ಸಕಾಲಿಕ ಮಾರ್ಗದರ್ಶನದಿಂದ ನಿಮ್ಮ ಕೆಲಸಗಳು ಸುಗಮವಾಗಿ ಆಗುವವು. ಅವರ ಮಾರ್ಗದರ್ಶನದಂತೆ ನಡೆದಲ್ಲಿ ನಿಮಗೆ ಒಳಿತಾಗುವುದು.ನಿಮ್ಮ ಬಂಧುವರ್ಗ ಅಥವಾ ನಿಮಗೆ ಹತ್ತಿರದವರೇ ನಿಮಗೆ ನೋವಾಗುವಂತಹ ಮಾತುಗಳನ್ನು ಆಡುವ ಸಾಧ್ಯತೆ ಇರುತ್ತದೆ. ನಿಮ್ಮ ಆತ್ಮಸಾಕ್ಷಿ ಶುದ್ಧವಾಗಿರುವುದರಿಂದ ಈ ಬಗ್ಗೆ ಅನಗತ್ಯ ಭಯ ಬೇಡ.
ಅದೃಷ್ಟ ಸಂಖ್ಯೆ:2
ವೃಷಭ
ಹೊಸ ವಹಿವಾಟು ಒಂದರ ವಿಚಾರದ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸುವಿರಿ. ನೀವು ನೀಡುವ ಸಲಹೆ ಸೂಕ್ತ ವಾದುದೆಂದು ಪರಿಗಣಿಸಿ ಅವರು ಅದನ್ನು ಕಾರ್ಯರೂಪಕ್ಕೆ ತರುವರು. ಇದರಿಂದ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.ಮಕ್ಕಳು ಶುಭ ವಾರ್ತೆ ತರಲಿದ್ದಾರೆ. ವಿಶೇಷವಾದ ಸಂತೋಷ ಸಮಾಧಾನ ನಿಮ್ಮದಾಗುವುದು. ಬಾಕಿ ಬರಬೇಕಾಗಿದ್ದ ಹಣಕಾಸು ಬರುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುವುದು.ಸಂಗೀತ, ಚಿತ್ರಕಲೆಯನ್ನು ಉಳಿಸಿ ಬೆಳೆಸಬೇಕೆಂಬ ನಿಮ್ಮ ಮನೋಬಯಕೆ ಈಡೇರುವಂತಹ ಸುಸಂದರ್ಭ ದೊರೆಯುವುದು. ಅದಕ್ಕಾಗಿ ಉತ್ತಮ ಗುರುಗಳ ಭೇಟಿ ಮತ್ತು ಅವರ ಮಾರ್ಗದರ್ಶನ ನಿಮಗೆ ಲಭಿಸಲಿದೆ.
ಅದೃಷ್ಟ ಸಂಖ್ಯೆ:1
ಮಿಥುನ
ಮುನ್ನುಗ್ಗುವ ವ್ಯಕ್ತಿಯನ್ನು ಕೀಟಲೆ ಮಾಡಿ ಅವನಿಗೆ ಅಡೆತಡೆ ಉಂಟು ಮಾಡುವಂಥ ಜನರು ನಿಮ್ಮ ಸುತ್ತಮುತ್ತ ಇರುವರು. ಅಂಥವರ ಹಾವಭಾವ ಮತ್ತು ಮಾತುಕತೆಗೆ ಉತ್ತರ ಕೊಡದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ. ಯಶಸ್ಸು ನಿಮ್ಮದಾಗುವುದು.ಖರ್ಚಿನ ದಾರಿಯನ್ನು ಸ್ಪಷ್ಟವಾಗಿ ನಿಯಂತ್ರಿಸಿ. ತಿಳಿದಿರುವುದಕ್ಕಿಂತಲೂ ಜಾಸ್ತಿ ಖರ್ಚು ವೆಚ್ಚ ಎದುರಾಗುವುದು. ಸದ್ಯದರಲ್ಲಿಯೇ ನಿಮ್ಮ ಜೀವನದಲ್ಲಿ ಹರಡಿಕೊಂಡಿರುವ ಕಷ್ಟದ ಕಾರ್ಮೋಡಗಳು ಕರಗಿ ಆನಂದ ಮೂಡುತ್ತದೆ. ತಾಳ್ಮೆಯಿಂದ ಇರಿ.
ಅತ್ಯಂತ ನಂಬುಗೆಗೆ ಪಾತ್ರರಾದ ಸ್ನೇಹಿತರಿಂದ ಇಲ್ಲವೆ ಬಂಧುಗಳಿಂದ ಸಹಕಾರ ಸಿಗದೆ ಹೋಗುವ ಸಾಧ್ಯತೆ ಇದೆ. ಹಾಗಾಗಿ ಬಂಧು ಬಳಗದವರ ಎದುರು ನಿಮ್ಮ ಸುಖದುಃಖಗಳನ್ನು ಹಂಚಿಕೊಳ್ಳದಿರಿ. ಭಗವಂತನನ್ನು ಮನಸಾ ಸ್ಮರಿಸಿ.
ಅದೃಷ್ಟ ಸಂಖ್ಯೆ:2
ಕಟಕ
ಹಿರಿಯರು ಮತ್ತು ಬಂಧುಗಳಿಂದ ಉತ್ತಮ ಬೆಂಬಲ ಲಭ್ಯವಾಗಲಿದೆ. ಇಡೀ ದಿನ ಉಲ್ಲಾಸದಿಂದ ಇರುವಿರಿ. ಮಕ್ಕಳು ನಿಮ್ಮ ಸಂತೋಷ ಇಮ್ಮಡಿಗೊಳಿಸುವರು. ಬರಬೇಕಾಗಿದ್ದ ಬಾಕಿ ಹಣ ಕೈ ಸೇರುವುದು.
ಯಾವುದೇ ರೀತಿ ಅಡ್ಡಮಾರ್ಗ ಹಿಡಿಯದಿರಿ ಮತ್ತು ಅಡ್ಡದಾರಿ ಬಗ್ಗೆ ಯೋಚನೆ ಮಾಡದಿರಿ. ನೇರವಾದ ಮಾರ್ಗ ನಿಮ್ಮನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು. ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ಕೇವಲ ಕೆಲವೇ ಕೆಲವು ಮಂದಿ ಪ್ರತಿಭಾನ್ವಿತರಲ್ಲಿ ಒಬ್ಬರಾದ ನಿಮಗೆ ಕೆಲಸದ ಸ್ಥಳದಲ್ಲಿ ಭಡ್ತಿ ದೊರೆಯುವ ಸಾಧ್ಯತೆ ಇರುತ್ತದೆ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು. ಹಣಕಾಸಿನ ತೊಂದರೆ ನಿವಾರಣೆ ಆಗುವುದು.
ಅದೃಷ್ಟ ಸಂಖ್ಯೆ:5
ಸಿಂಹ
ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗದೆ ಪರದಾಟ ಉಂಟಾಗುವ ಸಾಧ್ಯತೆ ಇದೆ. ವಿಷ್ಣುವಿನ ಆರಾಧನೆ ಮಾಡುವುದು ಮತ್ತು ವಿಷ್ಣು ದೇವಾಲಯಕ್ಕೆ ತುಳಸಿ ಮಾಲೆ ನೀಡುವುದು ಒಳ್ಳೆಯದು. ಉತ್ತಮ ಕಂಠ ಹೊಂದಿರುವ ನೀವು ಸುಶ್ರಾವ್ಯವಾಗಿ ಹಾಡು ಹೇಳಬಲ್ಲಿರಿ. ಆದರೆ ಏಕೋ ಹಾಡನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಾಡುಗಾರಿಕೆಯಿಂದ ಇತರರಿಗೆ ಸಂತೋಷ ಕೊಡುವ ಶಕ್ತಿ, ಯುಕ್ತಿ ಎರಡೂ ಇದ್ದು ಅದರ ಸದುಪಯೋಗ ಮಾಡಿಕೊಳ್ಳಿ.ಕೋರ್ಟು ಕಚೇರಿ ಕೆಲಸದಲ್ಲಿ ನಿಮ್ಮ ವಿರುದ್ಧವಾದ ತೀರ್ಪು ಬರುವ ಸಾಧ್ಯತೆ ಇದೆ. ಆದರೆ ಇದಕ್ಕೆ ನಿರಾಶರಾಗುವ ಅವಶ್ಯಕತೆ ಇಲ್ಲ. ಭಗವಂತ ಇದಕ್ಕೊಂದು ಸರಳವಾದ ಪರಿಹಾರವನ್ನು ನಿಮಗೆ ಕೊಡುವನು.
ಅದೃಷ್ಟ ಸಂಖ್ಯೆ:8
ಕನ್ಯಾ
ಚಂಚಲ ಸ್ವಭಾವವುಳ್ಳ ನೀವು ಯಾರೊಟ್ಟಿಗಾದರೂ ಮಾತಾಡಿದರೆ ಏನು ತಿಳಿದುಕೊಳ್ಳವರೋ ಎಂಬ ಸೂಕ್ಷ್ಮ ಪ್ರವೃತ್ತಿಯವರು. ಜನರೇ ನಿಮ್ಮನ್ನು ನೋಯಿಸುವರು. ಅವರಿಗೆ ಪ್ರತ್ಯುತ್ತರ ಕೊಡಲು ಅಸಹಾಯಕರಾಗಿ ನೋವು ಅನುಭವಿಸುವಿರಿ.
ನೀವು ಸಣ್ಣಪುಟ್ಟ ಅನಾರೋಗ್ಯ ಎದುರಿಸಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ಇರಲಿ. ಕುಲದೇವತೆ ಪ್ರಾರ್ಥನೆ ಮಾಡುವುದು ಒಳ್ಳೆಯದು. ಮನಸ್ಸಿನ ದುಗುಡಗಳು ಕಡಿಮೆ ಆಗುವವು.ಸರ್ಕಾರಿ ವಲಯದಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳು ನೆರವೇರುವ ಲಕ್ಷ ಣಗಳು ನಿಮಗೆ ಗೋಚರಿಸುವುದು. ಇದರಿಂದ ನಿಮ್ಮ ಮುಂದಿನ ಕಾರ್ಯಗಳಿಗೆ ಬೆಂಬಲ ದೊರೆತಂತೆ ಆಗುವುದು.
ಅದೃಷ್ಟ ಸಂಖ್ಯೆ:5
ತುಲಾ
ಸಾಂಸಾರಿಕ ಬಿಕ್ಕಟ್ಟುಗಳನ್ನು ಆಂತರಿಕವಾಗಿಯೇ ಪರಿಹಾರ ಮಾಡಿಕೊಳ್ಳುವುದು ಒಳಿತು. 'ಸಂಸಾರ ಗುಟ್ಟು ವ್ಯಾಧಿ ರಟ್ಟು' ಎಂಬ ನಾಣ್ನುಡಿ ಅರಿತು ಬಾಳಿ. ಇಲ್ಲದಿದ್ದಲ್ಲಿ ಸಮಾಜದಲ್ಲಿ ನಿಮಗೆ ಗೌರವ ಕಡಿಮೆ ಆಗುವುದು.ಕೆಲ ಗ್ರಹಗಳ ಕಾಡಾಟದಿಂದ ತಪ್ಪಿಸಿಕೊಳ್ಳಲು ಗುರು, ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿ. ಇದರಿಂದ ಮಹತ್ತರವಾದ ಕೆಲಸ ಸಾಧಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.ಹೊಸದಾದ ವಿಶಿಷ್ಟ ಯೋಜನೆಯೊಂದಕ್ಕೆ ಚಾಲನೆ ನೀಡುವಿರಿ. ಇದರಿಂದ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಗೆಲ್ಲುವ ಹಂತ ತಲುಪುವಿರಿ. ನಿಮ್ಮ ಸಹೋದ್ಯೋಗಿಗಳಿಂದ ಪ್ರಶಂಸೆ ದೊರೆಯುವುದು.
ಅದೃಷ್ಟ ಸಂಖ್ಯೆ:6
ವೃಶ್ಚಿಕ
ನಿಮ್ಮ ವಿಚಾರದಲ್ಲಿ ಈ ದಿನದ ಬೆಳವಣಿಗೆಗಳು ಧನಾತ್ಮಕವಾಗಿ ಮೂಡಿಬರುವುದು. ಹಾಗಾಗಿ ನಿಮಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳು ಬರುವವು. ಸಂಗಾತಿ ಸಲಹೆ ಸ್ವೀಕರಿಸಿರಿ ಮತ್ತು ಬೆಳೆದು ನಿಂತ ಮಗನ ಮನಸ್ಸು ನೋಯಿಸದಿರಿ.ನಿಮ್ಮ ಪ್ರಯತ್ನಗಳಿಗೆ ಸದ್ಯ ಫಲ ದೊರೆಯುತ್ತಿಲ್ಲ ಎಂದು ಚಿಂತಿಸದಿರಿ. ಈಗ ಆಗುತ್ತಿರುವ ಘಟನೆಗಳು ನಿಮಗೆ ಒಂದು ಪಾಠವೆಂದು ಭಾವಿಸಿ ಮುನ್ನುಗ್ಗಿ ಹೋರಾಟ ಮಾಡಿ. ಸದ್ಯದರಲ್ಲಿಯೇ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.
ನೀವು ಅತ್ಯಂತ ಪಾರದರ್ಶಕ ವ್ಯವಹಾರವನ್ನು ನಡೆನುಡಿಯಲ್ಲಿ ತೋರುವುದರಿಂದ ನೀವೊಬ್ಬ ಅತ್ಯಂತ ನಂಬಲರ್ಹವಾದ ವ್ಯಕ್ತಿಯೆಂದು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ಹಲವು ಮೂಲಗಳಿಂದ ಹಣಕಾಸು ಬರುವುದು.
ಅದೃಷ್ಟ ಸಂಖ್ಯೆ:8
ಧನಸ್ಸು
ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಹೊಸ ಸಮಸ್ಯೆಯೊಂದು ಸೃಷ್ಟಿ ಆಗುವುದು. ಸಹೋದ್ಯೋಗಿಗಳ ಜತೆಯಲ್ಲಿ ಕುಳಿತು ಸಮಸ್ಯೆಯ ಗಂಭೀರತೆಯನ್ನು ಚರ್ಚಿಸಿ. ಪರಿಹಾರ ದೊರೆಯುವುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.ತಲೆ ಗಟ್ಟಿ ಇದೆ ಎಂದು ಯಾರೂ ಬಂಡೆಗೆ ಚಚ್ಚಿಕೊಳ್ಳುವುದಿಲ್ಲ. ಅಂತೆಯೇ ಎಲ್ಲಾ ವಿಷಯಗಳಲ್ಲೂ ಯಶಸ್ಸು ಹೊಂದುತ್ತೇನೆ ಎಂಬ ಭ್ರಮೆ ಬೇಡ. ತಗ್ಗಿ, ಬಗ್ಗಿ ನಡೆದಲ್ಲಿ ಇಚ್ಛಿತ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.ಹಣಕಾಸಿನ ತೊಂದರೆ ಇದೆ ಎಂದು ಹೇಳಿಕೊಳ್ಳುವಷ್ಟು ವಿಶ್ವಾಸವನ್ನು ನೀವು ಉಳಿಸಿಕೊಂಡಿಲ್ಲ. ಹಾಗಾಗಿ ಇತರರು ನಿಮ್ಮನ್ನು ಸಂಶಯದಿಂದಲೇ ನೋಡುವರು. ಹಿಂದೆ ಆಗಿರುವ ತಪ್ಪನ್ನು ತಿದ್ದಿಕೊಂಡು ಮುನ್ನಡೆಯಿರಿ. ಒಳಿತಾಗುವುದು.
ಅದೃಷ್ಟ ಸಂಖ್ಯೆ:2
ಮಕರ
ಉದಾಸೀನತೆಯೇ ಅಧೋಗತಿಗೆ ಮೂಲ ಎಂದರು ಹಿರಿಯರು. ಹಾಗಾಗಿ ಹಿರಿಯರ ಮಾತನ್ನು ಉಡಾಫೆಯಿಂದ ತಿರಸ್ಕರಿಸಿದಲ್ಲಿ ಸೋಲು ಕಾಣುವಿರಿ. ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲವಾದ್ದರಿಂದ ಚಿಕ್ಕ ಮಗು ಹೇಳಿದ ಮಾತನ್ನು ಕೇಳಬೇಕಾದೀತು.ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿ ಕಂಡು ಇತರರು ಕುರುಬುವರು ಮತ್ತು ನಿಮ್ಮ ಪ್ರಯತ್ನ ಗಳನ್ನು ವಿಫಲಗೊಳಿಸಲು ಅನೇಕ ರೀತಿ ಕಾರ್ಯತಂತ್ರವನ್ನು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.ಎಲ್ಲವೂ ಸರಿಯಾಗಿ ಆಗುತ್ತಿದೆ ಎನ್ನುವ ಹಂತದಲ್ಲಿರುವಾಗಲೇ ಕಿರಿಕಿರಿ ಮಾಡುವ ಹಿರಿಯರೊಬ್ಬರ ಸಹವಾಸ ನಿಮ್ಮ ತಾಳ್ಮೆಯನ್ನು ಕೆಡಿಸುತ್ತದೆ. ಆದರೆ ಅವರು ಹೇಳುವ ವಿಚಾರಗಳಲ್ಲಿ ಅಲ್ಪಪ್ರಮಾಣದ ಸತ್ಯಾಂಶವೂ ಇರುತ್ತದೆ ಎಂಬುದನ್ನು ತಿಳಿಯಿರಿ.
ಅದೃಷ್ಟ ಸಂಖ್ಯೆ:6
ಕುಂಭ
ಮುನ್ನುಗ್ಗುವ ಮಾರ್ಗದಲ್ಲಿ ಕಾಲಿಡುವ ಕಡೆಯಲ್ಲೆಲ್ಲ ಮುಳ್ಳುಗಳೇ ಎದುರಾಗುವುದು. ಮುಳ್ಳಿನಿಂದ ರಕ್ಷ ಣೆ ಪಡೆಯಲು ಪಾದರಕ್ಷೆ ಧರಿಸುವಂತೆ ನಿಮ್ಮ ವಿರೋಧಿಗಳನ್ನು ಮಟ್ಟಹಾಕಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುವುದು.
ನಿಮ್ಮ ಸಹೋದರ ಸಹೋದರಿಯರ ಜತೆಯಲ್ಲಿ ವಾದ ವಿವಾದ ಬೇಡ. ನಿಮಗೆ ಇಷ್ಟವಾದದ್ದನ್ನು ನೇರವಾಗಿ ಹೇಳಿ. ಇದರಿಂದ ಉಭಯತರರಿಗೂ ಅನುಕೂಲವಾಗುವುದು. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ.ವಿದೇಶದಲ್ಲಿ ಕೆಲಸ ದೊರಕಿಸಿಕೊಳ್ಳುವ ಆಸೆ ಹೊಂದಿದ್ದವರಿಗೆ ಸಿಹಿ ಸುದ್ದಿಯೊಂದು ತಲುಪಲಿದೆ. ಇದರಿಂದ ಜಡವಾಗಿದ್ದ ನಿಮ್ಮ ಚೇತನ ಚುರುಕುಗೊಳ್ಳುವುದು. ಮುಖದಲ್ಲಿ ಮಂದಹಾಸ ಮೂಡುವುದು.
ಅದೃಷ್ಟ ಸಂಖ್ಯೆ:2
ಮೀನ
ಬಹಳಷ್ಟು ಉತ್ತಮ ಕಾರ್ಯಗಳನ್ನು ಮಾಡುವಿರಿ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಕಾರ್ಯಗಳನ್ನು ವೀಕ್ಷಿಸಿ ಬೆನ್ನು ತಟ್ಟುವವರು ಕಡಿಮೆ. ದೈವದ ಮೊರೆ ಹೋಗಿ. ಮನಸ್ಸಿನ ದುಗುಡಗಳು ಕಡಿಮೆ ಆಗುವುದು.ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವವು. ಆದರೆ ನೀವು ಚಿತ್ತಚಾಂಚಲ್ಯಕ್ಕೆ ಒಳಗಾಗದೆ ದೃಢ ಚಿತ್ತದಿಂದ ಕಾರ್ಯ ನಿರ್ವಹಿಸಬೇಕಾಗುವುದು.
ದೈವಾನುಗ್ರಹಕ್ಕಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದ್ದು, ಇದರಿಂದ ನಿಮ್ಮ ಸಾಕಷ್ಟು ಸಮಸ್ಯೆಗಳು ಬಗೆಹರಿಯುವವು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಸ್ನೇಹಿತರು ನಿಮಗೆ ಸಹಕಾರ ನೀಡುವರು.
ಅದೃಷ್ಟ ಸಂಖ್ಯೆ:1
ಪಂಡಿತ್ ಮಂಜುನಾಥ್ ಶಾಸ್ತ್ರೀ
ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp