Just In
- 1 hr ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 10 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 10 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 11 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Gold Rates Today: ನಿನ್ನೆಗಿಂತ ಕೊಂಚ ಇಳಿಕೆಯಾದ ಚಿನ್ನದ ಬೆಲೆ, ಯಾವ ನಗರದಲ್ಲಿ ಎಷ್ಟು?
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶನಿ ದೇವನ ನಿಧಾನ ಗತಿಯ ಚಲನೆಯ ಹಿಂದಿರುವ ಅಸಲಿ ಕಹಾನಿ...
ಶನಿ ದೇವರನ್ನು ನ್ಯಾಯದ ಅಧಿಪತಿ ಎಂದು ಕರೆಯುತ್ತಾರೆ. ವೇದಿಕ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಗ್ರಹವು ಶನಿ ದೇವರನ್ನು ಪ್ರತಿನಿಧಿಸುತ್ತದೆ ಎನ್ನಲಾಗುವುದು. ಹಾಗಾಗಿ ಶನಿ ಗ್ರಹದ ಬದಲಾವಣೆಯು ವ್ಯಕ್ತಿಯ ರಾಶಿ ಭವಿಷ್ಯದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ಶನಿಗ್ರಹದ ಚಲನ ವಲನಗಳು ಇತರ ಗ್ರಹಗಳಂತೆಯೇ ನಡೆಯುವುದು.
ಸೂಕ್ತ ರೀತಿಯ ಪರಿಣಾಮ ನೀಡುವನು ಎನ್ನಲಾಗುತ್ತದೆ. ಆದರೆ ಇತರ ಗ್ರಹಗಳಿಗಿಂತ ಶನಿಗ್ರಹದ ಚಲನೆಯು ಸಾಮಾನ್ಯವಾಗಿ ನಿಧಾನವಾಗಿರುತ್ತದೆ ಎಂದು ಹೇಳಲಾಗುವುದು. ಹಾಗಾಗಿಯೇ ಒಂದು ರಾಶಿ ಚಕ್ರದಿಂದ ಇನ್ನೊಂದು ರಾಶಿಚಕ್ರಕ್ಕೆ ಹೋಗಲು ಒಂದೂವರೆ ವರ್ಷದಿಂದ ಎರಡು ವರ್ಷಗಳ ಕಾಲ ಬೇಕಾಗುವುದು ಎಂದು ಹೇಳಲಾಗುತ್ತದೆ.
ಜೀವನದ ಅರ್ಥ ಹಾಗೂ ಬದುಕಿನ ರೀತಿಯನ್ನು ಹೇಗೆ ನಡೆಸಬೇಕು ಎಂದು ತಿಳಿಸಿಕೊಡುವವನು ಶನಿ. ಶನಿಯ ಪ್ರಭಾವ ವ್ಯಕ್ತಿಯಲ್ಲಿ ಗಮನಾರ್ಹ ಬದಲಾವಣೆ ತಂದುಕೊಡುವುದು. ಶನಿಯ ಹುಟ್ಟು, ಅವನ ಪ್ರಭಾವ ಹಾಗೂ ಅವನ ಚಲನೆಯ ನಿಧಾನಗತಿಯ ವಿಚಾರಗಳು ಮಹತ್ತರವಾದ ಹಿನ್ನೆಲೆಯನ್ನು ಪಡೆದುಕೊಂಡಿವೆ. ಇಂತಹ ವಿಶೇಷ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....
ಶನಿ ದೇವನ ಜನ್ಮ ಕಥೆ
ಶನಿ ದೇವರ ಜನ್ಮ ಕಥೆಯ ಪ್ರಕಾರ ಶಯಾ ದೇವಿಯನ್ನು ಸಂಧ್ಯಾ ಎಂದೂ ಕರೆಯಲಾಗುತ್ತಿತ್ತು. ಸಂಧ್ಯಾ ದೇವಿಯೇ ಶನಿಯ ತಾಯಿ ಎಂದು ಕರೆಯಲಾಗುತ್ತದೆ. ಆಕೆ ಶಿವನ ಪರಮ ಭಕ್ತಳಾಗಿದ್ದಳು. ತಾನು ಗರ್ಭಿಣಿಯಾಗಿರುವಾಗ ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಶನಿ ದೇವನು ಜನಿಸಿದಾಗ ಕಪ್ಪು ಛಾಯೆಯನ್ನು ಹೊಂದಿದ್ದನು. ಸೂರ್ಯ ದೇವನು ತನ್ನ ಮಗ ಕಪ್ಪಗಾಗಿರುವುದನ್ನು ಇಷ್ಟಪಡಲು ಬಯಸಲಿಲ್ಲ. ಸೂರ್ಯ ದೇವ ಭಯಪಟ್ಟಿರುವುದರಿಂದ ಸಂಧ್ಯಾ ದೇವಿಯು ತನ್ನ ನೆರಳಾದ ಛಾಯಾ/ಸುವರ್ಣ ದೇವಿಯನ್ನು ಕರೆದು ಅದಲು ಬದಲಾದರು. ತನ್ನ ತಂದೆಯ ಮನೆಗೆ ಹೋದಳು.
ತಾಯಿಯ ಶಾಪಕ್ಕೆ ಒಳಗಾಗಿದ್ದನು
ಸಂಧ್ಯಾ ಮತ್ತು ಛಾಯಾ/ಸುವರ್ಣ ಅದಲು ಬದಲಾಗಿರುವ ವಿಚಾರ ಸೂರ್ಯ ದೇವ ಹಾಗೂ ಶನಿಗೆ ತಿಳಿದಿರಲಿಲ್ಲ. ಸುವರ್ಣ ನಂತರದ ದಿನಗಳಲ್ಲಿ ಐದು ಗಂಡು ಮತ್ತು 3 ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆರಂಭದಲ್ಲಿ ಸುವರ್ಣ ಶನಿ ದೇವನಿಗೆ ಉತ್ತಮ ಆರೈಕೆ ಮಾಡುತ್ತಿದ್ದಳು. ತನ್ನ ಸ್ವಂತ ಮಕ್ಕಳು ಜನಿಸಿದ ನಂತರ ಶನಿಗೆ ಪಕ್ಷಪಾತ ಮಾಡಲು ಪ್ರಾರಂಭಿಸಿದಳು. ಇದು ಶನಿ ದೇವನಿಗೆ ಅತ್ಯಂತ ಬೇಸರ ಹಾಗೂ ಹತಾಶೆ ಆಗಲು ಪ್ರಾರಂಭವಾಯಿತು. ಸುವರ್ಣ ತನ್ನ ಮಕ್ಕಳಿಗೆ ಆಹಾರ ನೀಡುವಾಗ ಶನಿ ದೇವನು ತನಗೂ ಆಹಾರ ನೀಡಬೇಕೆಂದು ಕೇಳಿಕೊಂಡಳು. ಆದಾಗ್ಯೂ ಸುವರ್ಣ ಅದನ್ನು ನಿರ್ಲಕ್ಷಿಸಿದಳು. ಈ ಮೂಲಕ ಕೋಪಗೊಂಡ ಶನಿಯು ತನ್ನ ಮುಗ್ಧತೆಯನ್ನು ಮರೆತು, ತಾಯಿಗೆ ಕಾಲಿನಿಂದ ತುಳಿದನು. ಆಗ ತಾಯಿಯು ಶನಿಗೆ ಕುಂಟ ಗ್ರಹವಾಗಬೇಕೆಂದು ಶಪಿಸಿದಳು. ಹಾಗಾಗಿಯೇ ಶನಿಗ್ರಹವು ನಿಧಾನವಾದ ಚಲನೆಯನ್ನು ಹೊಂದಿದೆ ಎಂದು ಹೇಳಲಾಗುವುದು.
Most Read: ವೃಷಭ ರಾಶಿಯವರು ಎದುರಿಸುವಂತಹ ಸಮಸ್ಯೆಗಳು ಇಲ್ಲಿದೆ ನೋಡಿ...
ಸಂಧ್ಯಾ ಮತ್ತು ಸುವರ್ಣರ ರಹಸ್ಯ ಬಹಿರಂಗವಾಯಿತು
ಶಾಪದಿಂದ ಬೇಸರಗೊಂಡ ಶನಿಯು ತಂದೆಯ ಸಹಾಯ ಕೇಳಿದನು. ಸಂಧ್ಯಾ ತನ್ನ ಮಗನಿಗೆ ಶಾಪ ನೀಡಿರುವುದನ್ನು ತಿಳಿದ ಸೂರ್ಯದೇವನು ಸಂದೇಹಕ್ಕೆ ಒಳಗಾದನು. ತನ್ನ ಮಕ್ಕಳಿಗೆ ತಾಯಿ ಎಂದಿಗೂ ಶಪಿಸುವುದಿಲ್ಲ, ಹಾಗಾದರೆ ಈಕೆ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಮುಂದಾದನು. ಸತ್ಯವನ್ನು ತಿಳಿಯಲು ಮುಂದಾದಾಗ ಅವಳು ಸುವರ್ಣ ಸಂಧ್ಯಾ ಅಲ್ಲ ಎನ್ನುವುದು ತಿಳಿಯಿತು.
Most Read: ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು
ಇದೇ ಕಾರಣಕ್ಕೆ ಶನಿ ದೇವ ಇತರ ಗ್ರಹಗಳಂತೆ ವೇಗವಾಗಿ ಚಲನೆ ಹೊಂದಿಲ್ಲ
ನಂತರ ಸೂರ್ಯ ದೇವ ಶನಿಗೆ ಸಮಾಧಾನ ಮಾಡಿದನು. ಇತರ ಗ್ರಹಗಳಂತೆ ವೇಗವಾಗಿ ನಡೆಯಲು ಸಾಧ್ಯವಾಗದಿದ್ದರೂ ಕುಂಟಾಗುವುದಿಲ್ಲ ಎಂದು ಹೇಳಿದರು. ಅದಕ್ಕಾಗಿಯೇ ಶನಿ ದೇವ ಇತರ ಗ್ರಹಗಳಂತೆ ವೇಗವಾಗಿ ಚಲನೆ ಹೊಂದಿಲ್ಲ. ಒಂದು ರಾಶಿಚಕ್ರದಿಂದ ಇನ್ನೊಂದು ರಾಶಿಚಕ್ರಕ್ಕೆ ಚಲಿಸುವಾಗ ಸಮಯ ತೆಗೆದುಕೊಳ್ಳುವನು ಎಂದು ಹೇಳಲಾಗುವುದು. ಶನಿದೇವ ನಿಧಾನ ಗತಿಯ ಚಲನೆ ಹೊಂದಲು ಇನ್ನೊಂದು ಕಥೆಯಿದೆ ಎಂದು ಸಹ ಹೇಳಲಾಗುವುದು.
ಶನಿ ದೇವ ಮತ್ತು ರಾವಣ
ಶನಿ ದೇವನ ನಿಧಾನಗತಿಯ ಚಲನೆಯನ್ನು ಪಡೆದುಕೊಂಡ ಕಥೆಯ ಹಿಂದೆ ರಾವಣನ ಪುತ್ರ ಮೇಘನಾದನ ಜನ್ಮ ಕಥೆಯ ಸಂಬಂಧವನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು. ಎಲ್ಲಾ ಗ್ರಹಗಳ ಉಪಸ್ಥಿತಿ ಅನುಕೂಲಕರವಾಗಿರುವಾಗ ತನ್ನ ಮಗನ ಜನ್ಮವಾದರೆ ಸುದೀರ್ಘವಾದ ಬದುಕನ್ನು ತನ್ನ ಮಗ ಪಡೆದುಕೊಳ್ಳುವನು ಎಂದು ರಾವಣನು ಭಾವಿಸಿದ್ದನು.
ಶನಿ ದೇವ ಮತ್ತು ರಾವಣ
ಅಂತೆಯೇ ಎಲ್ಲಾ ಗ್ರಹಗಳ ಮನವೊಲಿಸುವಲ್ಲಿ ರಾವಣನು ಯಶಸ್ವಿಯಾದನು. ಆದರೆ ಶನಿಯ ಮನವೊಲಿಸುವುದು ಸ್ವಲ್ಪ ಕಷ್ಟದ ಕೆಲಸವಾಯಿತು. ಇದು ರಾವಣನಿಗೆ ಸ್ವಲ್ಪ ಬೇಸರವನ್ನುಂಟು ಮಾಡಿತಾದರೂ, ಅಂತ್ಯದ ವೇಳೆಗೆ ಶನಿಯನ್ನು ಒಪ್ಪಿಸಿದನು.
Most Read: ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ
ಶನಿ ವ್ರಕ್ರವಾಗಿದ್ದಾಗ
ನ್ಯಾಯ ದೇವನಾದ ಶನಿಯು ನ್ಯಾಯಯುತವಾಗಿಯೇ ಇರಬೇಕೆಂದು ಭಾವಿಸಿದ್ದರಿಂದ, ರಾವಣನ ಯೋಜನೆ ಉಚಿತವಾದದ್ದಲ್ಲ ಎಂದು ಭಾವಿಸಿದನು. ದೂರದೃಷ್ಟಿಯಿಂದಾಗಿ ಶನಿಯು ತನ್ನ ವಕ್ರ ಚಲನೆಯಿಂದ ತೆರಳಿದ್ದನು. ಇದನ್ನು ತಿಳಿದ ರಾವಣನು ಕೆರಳಿದನು. ಜೊತೆಗೆ ಶನಿ ದೇವನ ಒಂದು ಕಾಲನ್ನು ಕತ್ತರಿಸಿದನು. ಇದರಿಂದ ಶನಿಯ ಚಲನೆ ನಿಧಾನವಾಯಿತು ಎನ್ನಲಾಗುವುದು.