Just In
- 40 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Movies Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಶಿ ಭವಿಷ್ಯ: ನಿಮ್ಮಲ್ಲಿರುವ ಅತೀಂದ್ರಿಯ ಶಕ್ತಿ ಯಾವುದೆಂದು ತಿಳಿಯಬೇಕಾ?
ಪ್ರತಿಯೊಬ್ಬ ವ್ಯಕ್ತಿಗೂ ಅವನದ್ದೇ ಆದ ವಿಶೇಷ ಬುದ್ಧಿವಂತಿಕೆ, ದೈಹಿಕ ಸಾಮಥ್ರ್ಯ, ವಿಶೇಷ ಕೌಶಲ್ಯಗಳು ಇರುತ್ತವೆ. ಹಾಗಂತ ಅದನ್ನು ಇತರ ವ್ಯಕ್ತಿಗಳಿಗೆ ಹೋಲಿಕೆ ಮಾಡಿದಾಗ ಆ ಸಾಮರ್ಥ್ಯ ಹೆಚ್ಚಿರುವಂತೆಯೂ ಅಥವಾ ಕಡಿಮೆ ಇರುವಂತೆಯೂ ಕಾಣಬಹುದು ಎಂದು ಹೇಳಲಾಗುತ್ತದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದ ಅನುಗುಣವಾಗಿ ವ್ಯಕ್ತಿಯಲ್ಲಿ ವಿಶೇಷವಾದ ಆಂತರಿಕ ಶಕ್ತಿಯು ಅಡಗಿರುತ್ತದೆ. ಆಂತರಿಕವಾಗಿ ಇರುವ ಶಕ್ತಿ ವ್ಯಕ್ತಿಯ ಯಶಸ್ಸಿಗೆ ಅಥವಾ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವುದು ಎನ್ನಲಾಗುವುದು.
ವ್ಯಕ್ತಿಯಲ್ಲಿ ಅಡಗಿರುವ ವಿಶೇಷವಾದ ಆಂತರಿಕ ಶಕ್ತಿಯ ಹುಟ್ಟು ಹಾಗೂ ಅದರ ಬೆಳವಣಿಗೆಯ ಅವಧಿಯಲ್ಲಿ ಯಾವ ಬಗೆಯ ಪರಿಸರದಲ್ಲಿ ಬೆಳೆದಿದ್ದಾನೆ? ಅವನು ಯಾವ ಬಗೆಯ ಸಮಸ್ಯೆಗಳನ್ನು ಎದುರಿಸಿಕೊಂಡು ಬಂದಿದ್ದಾನೆ ಎನ್ನುವುದರ ಮೇಲೆ ನಿರ್ಣಯವಾಗುತ್ತದೆ. ಜೊತೆಗೆ ಅವುಗಳ ಆಧಾರದಲ್ಲಿಯೇ ಆಂತರಿಕ ಶಕ್ತಿಯ ಗುಣಮಟ್ಟವೂ ನಿರ್ಧರಿತವಾಗುತ್ತದೆ. ಪ್ರತಿಯೊಂದು ರಾಶಿಚಕ್ರದವರಲ್ಲೂ ಅಡಗಿರುವ ಆಂತರಿಕ ಶಕ್ತಿಗಳು ಯಾವವು? ಅವು ಹೇಗೆ ವ್ಯಕ್ತಿಯನ್ನು ನಿಭಾಯಿಸುತ್ತವೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಓದಿ....
ಮೇಷ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಭವಿಷ್ಯದಲ್ಲಿ ನಡೆಯಬಹುದಾದ ಸಂಗತಿಗಳನ್ನು ಹೇಳಬಹುದಾದ ಮಾನಸಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಿಗೆ ಜೀವನದಲ್ಲಿ ಮುಂದೆ ಬರಲು ಏನು ಮಾಡಬೇಕು? ಎನ್ನುವ ದೊಡ್ಡ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಇವರು ಪ್ರತಿಭಾವಂತರರಾದ ಆಯಸ್ಕಾಂತ ಪ್ರವೃತ್ತಿಯವರು ಎನ್ನಬಹುದು. ಇವರು ಸದಾ ಅತ್ಯುತ್ತಮ ಕೆಲಸಮಾಡುವುದರ ಮೂಲಕ ಮುನ್ನುಗ್ಗುತ್ತಾರೆ.
ವೃಷಭ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಸಂವೇದನ ಗಡಿಯನ್ನು ಹೊಂದಿರುತ್ತಾರೆ. ಇವರು ದೈಹಿವಾಗಿ ಹಾಗೂ ಭಾವನಾತ್ಮಕವಾಗಿಯೂ ಅತ್ಯಂತ ಒಳ್ಳೆಯವರು. ಇವರು ಇತರರ ಭಾವನೆಯನ್ನು ಹಾಗೂ ಆಂತರಿಕ ವಿಚಾರವನ್ನು ತಿಳಿದು ಕೊಳ್ಳುವಂತಹ ಶಕ್ತಿಯನ್ನು ಹೊಂದಿರುತ್ತಾರೆ. ಹಾಗಾಗಿ ಯಾವ ವ್ಯಕ್ತಿ ಇವರಿಂದ ಏನು ಬಯಸಬಲ್ಲ ಅಥವಾ ಎಷ್ಟು ದೂರ ಇರಲು ಪ್ರಯತ್ನಿಸಬಲ್ಲ ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ತಿಳಿದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ.
ಮಿಥುನ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಪದಗಳ ಬಳಕೆಯನ್ನು ತಿಳಿದಿರುತ್ತಾರೆ. ತಾವು ಬಳಸುವ ಪದಗಳ ಮೂಲಕವೇ ವ್ಯಕ್ತಿ ಹಾಗೂ ವಿಚಾರಗಳನ್ನು ಆಕರ್ಷಣೆಯತ್ತ ಇರಿಸುತ್ತಾರೆ. ಇವರು ಸಾಮಾನ್ಯವಾಗಿ ಜನರಿಂದ ಸುತ್ತುವರಿದಿರುತ್ತಾರೆ. ಜೊತೆಗೆ ಅವರಿಗಾಗಿ ಏನು ಹೇಳಬೇಕು ಎನ್ನುವುದನ್ನು ತಿಳಿದಿರುತ್ತಾರೆ.
ಕರ್ಕ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಇತರರ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಗ್ರಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಏನು ಭಾವಿಸುತ್ತಿದ್ದಾರೆ ಎನ್ನುವುದನ್ನು ಸಂಕ್ಷಿಪ್ತವಾಗಿ ಹೇಳಬಲ್ಲ ಸಾಮರ್ಥ್ಯವನ್ನು ಇವರು ಹೊಂದಿದ್ದಾರೆ. ಇವರು ಇತರರ ಬಗ್ಗೆ ಸಹಾನೂ ಭೂತಿಯನ್ನು ಹೊಂದಿರುತ್ತಾರೆ. ಇವರು ತಮ್ಮನ್ನು ಭಾವನಾತ್ಮಕವಾಗಿ ದೂರ ಇರಿಸುತ್ತಾರೆ ಎಂದು ಹೇಳಲಾಗುವುದು.
ಸಿಂಹ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ನೈಸರ್ಗಿಕವಾಗಿಯೇ ಉತ್ತಮ ಚಿಂತಕರಾಗಿರುತ್ತಾರೆ. ಸಮಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾರೆ. ಇವರಿಗಾಗಿ ಯಾವುದೇ ಅಲಾರಾಂ ಗಡಿಯಾರವನ್ನು ಇರಿಸಬೇಕಾಗುವುದಿಲ್ಲ. ಬೇಕಾದ ಸಮಯದಲ್ಲಿ ನೈಸರ್ಗಿಕವಾಗಿಯೇ ಎಚ್ಚೆತ್ತುಕೊಂಡಿರುತ್ತಾರೆ. ತಮ್ಮ ಪರಿಸ್ಥಿತಿಯನ್ನು ಸೂಕ್ತ ನಿರ್ವಹಣೆಯಲ್ಲಿ ನಿರ್ವಹಿಸುತ್ತಾರೆ. ಹಾಗಾಗಿ ಇವರಿಗೆ ಆಂತರಿಕವಾದ ಗಡಿಯಾರ ಅತ್ಯುತ್ತಮವಾಗಿದೆ ಎಂದು ಹೇಳಬಹುದು.
ಕನ್ಯಾ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಸಂವೇದನಾ ಶೀಲರು ಹಾಗೂ ಮುಂದಾಗುವುದನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಯಾವುದೇ ಸನ್ನಿವೇಶ ಅಥವಾ ಸಮಸ್ಯೆಗಳು ಮೊದಲು ತಿಳಿದು ಬರುವುದಿಲ್ಲ. ಎಲ್ಲವೂ ಆಕಸ್ಮಿಕವಾಗಿರುತ್ತದೆ. ಅಂತಹ ಆಕಸ್ಮಿಕ ಘಟನೆಗಳನ್ನು ಊಹಿಸಬಹುದಾದ ಸಾಮಥ್ರ್ಯವನ್ನು ಈ ರಾಶಿಯವರು ಹೊಂದಿರುತ್ತಾರೆ. ಇದರಿಂದ ಅವರು ಮುಂಬರುವ ಅಡಚಣೆಯಿಂದ ಉಂಟಾಗುವ ಪ್ರಭಾವದಿಂದ ಪಾರಾಗುವ ಸಾಧ್ಯತೆಗಳಿರುತ್ತವೆ.
ತುಲಾ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಸಂಭಾಷಣೆಯ ಶಕ್ತಿಯನ್ನು ಹೊಂದಿರುತ್ತಾರೆ. ಇತರರೊಂದಿಗೆ ಹೇಗೆ ಆಳವಾದ ಸಂಭಾಷಣೆಯನ್ನು ಹೊಂದಬಹುದು ಎನ್ನುವುದು ತಿಳಿದಿರುತ್ತದೆ. ಇದಕ್ಕೆ ಅವರು ಅತ್ಯುತ್ತಮವಾದ ಅತೀಂದ್ರಿಯ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಇವರು ತಮ್ಮನ್ನು ತಾವು ನಿರಂತರವಾದ ಶ್ರಮದಲ್ಲಿ ತೊಡಗಿಕೊಂಡಾಗ ಮಾತ್ರ ಜಯ ಪಡೆಯುತ್ತೇವೆ ಎನ್ನುವುದನ್ನು ಅವರು ಆಳವಾಗಿ ಅರಿತಿರುತ್ತಾರೆ.
ವೃಶ್ಚಿಕ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸುಳ್ಳು ಹೇಳುವವರಿಗೆ ಯಾವುದೇ ಬಗೆಯ ಕರುಣೆಯನ್ನು ತೋರುವುದಿಲ್ಲ. ಇವರು ಇತರರು ಸುಳ್ಳು ಹೇಳುವುದನ್ನು ಬಹುಬೇಗ ಗುರುತಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಜೊತೆಗೆ ಆ ಸಂದರ್ಭದಲ್ಲಿಯೇ ಅವರಿಗೆ ಅದು ಸುಳ್ಳು ಎಂದು ಹೇಳಿಬಿಡುತ್ತಾರೆ. ಇತರರು ಹೇಳುವ ಸುಳ್ಳು ಅಥವಾ ನಕಲಿ ಕಥೆಗಳನ್ನು ಬಹುಬೇಗ ಬಹಿರಂಗಪಡಿಸುವರು.
ಧನು
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತಾವು ಏನು ಸಾಧಿಸಲು ಪ್ರಯತ್ನಿಸುತ್ತಾರೋ ಅದನ್ನು ಬಹುಬೇಗ ಸಾಧಿಸಿ ತೋರುವ ಶಕ್ತಿಯನ್ನು ಹೊಂದಿರುತ್ತಾರೆ. ಇವರಿಗೆ ಲಾಭವನ್ನು ಪಡೆಯುವಲ್ಲಿ ಯಶಸ್ಸಿನ ಪ್ರಮಾಣ ಅಪೇಕ್ಷಣೀಯವಾಗಿರುತ್ತದೆ. ಇವರು ಸಾಧನೆಗಾಗಿ ಪೂರ್ವ ಸಿದ್ಧತೆ ನಡೆಸಬೇಕಿಲ್ಲ. ನೈಸರ್ಗಿಕವಾಗಿಯೇ ಕೆಲವು ಯಶಸ್ಸಿನ ಗುಟ್ಟನ್ನು ಇವರು ಅರಿತಿರುತ್ತಾರೆ.
ಮಕರ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜೀವನದ ವೇಗವನ್ನು ಬಹು ಸುಲಭವಾಗಿ ಅರಿತುಕೊಳ್ಳುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಯಾವ ಸಮಯದಲ್ಲಿ ಮುಂದೆ ಬರಬೇಕು ಎನ್ನುವುದು ಇವರಿಗೆ ತಿಳಿಸಿರುತ್ತದೆ. ತಮ್ಮ ಜೀವನದಲ್ಲಿ ಮೂಲಭೂತ ಬದಲಾವಣೆಯನ್ನು ಮಾಡಲು ಮುಂದಾಗ ಬೇಕು? ಅದಕ್ಕಾಗಿ ಯಾವ ವೇಗವನ್ನು ಅನುಸರಿಸಬೇಕು ಎನ್ನುವುದನ್ನು ಇವರು ತಿಳಿದಿರುತ್ತಾರೆ.
ಕುಂಭ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಮನಸ್ಸನ್ನು ಓದುವ ಕೌಶಲ್ಯವನ್ನು ಅತ್ಯುತ್ತಮವಾಗಿ ಹೊಂದಿರುತ್ತಾರೆ. ಸ್ವಾಭಾವಿಕವಾಗಿಯೇ ಇವರಿಗೆ ಆ ಶಕ್ತಿ ಇರುವುದರಿಂದ ಇನ್ನೊಬ್ಬರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳಲು ಬಹಳ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಇತರರಿಗೆ ಬೇಕಾದದ್ದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ.
ಮೀನ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಯಾವ ಸಂದರ್ಭದಲ್ಲಿ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿದಿದ್ದಾರೆ. ಇದು ಅವರ ಅತೀಂದ್ರಿಯ ಶಕ್ತಿಯಾಗಿದೆ. ಇದರಿಂದಲೇ ಜೀವನದಲ್ಲಿ ಅನೇಕ ಸನ್ನಿವೇಶಗಳನ್ನು ಬಹಳ ಸುಲಭವಾಗಿ ನಿರ್ವಹಿಸುತ್ತಾರೆ.