Just In
Don't Miss
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ 4 ರಾಶಿಚಕ್ರದವರಿಗೆ ಮೂಗಿನ ಮೇಲೆ ಸಿಟ್ಟು-ಇವರ ಕೋಪವನ್ನು ನಿಯಂತ್ರಿಸುವುದೇ ಕಷ್ಟ!
ಸಿಟ್ಟು ಎನ್ನುವುದು ನವರಸಗಳಲ್ಲಿ ಒಂದು. ವ್ಯಕ್ತಿಯ ಮನಸ್ಸಿಗೆ ಅಹಿತಕರವಾದ ಭಾವನೆ ಉಂಟಾದಾಗ ಅಥವಾ ತಾವು ಅಂದುಕೊಂಡಿರುವುದು ನೆರವೇರದೆ ಇರುವಾಗ ಸಾಮಾನ್ಯವಾಗಿ ಸಿಟ್ಟಿಗೆ ಒಳಗಾಗುತ್ತಾರೆ. ಸಿಟ್ಟು ಎನ್ನುವುದು ಮನುಷ್ಯನ ವೈರಿ ಎಂದು ಕರೆಯಲಾಗುತ್ತದೆ. ಏಕೆಂದರೆ ಸಿಟ್ಟು ವ್ಯಕ್ತಿಯ ಭಾವನೆಯ ಮೇಲೆ ಬಹುಬೇಗ ಪರಿಣಾಮ ಬೀರುವ ಸಂವೇದನೆ. ಸಿಟ್ಟು ಬಹುಬೇಗ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಬದಲಾಯಿರುತ್ತದೆ. ಸಿಟ್ಟಿಗೆ ಒಳಗಾದ ವ್ಯಕ್ತಿ ಏನು ಮಾಡುತ್ತಾನೆ ಎನ್ನುವುದು ಅವನ ಅರಿವಿನಲ್ಲಿಯೇ ಇರುವುದಿಲ್ಲ. ಸಿಟ್ಟಿನಿಂದ ಒಂದಿಷ್ಟು ಹಾನಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಿಟ್ಟು ಬಂದಾಗ ಸಾಮಾನ್ಯವಾಗಿ ಅದನ್ನು ನಿಯಂತ್ರಿಸುವ ಕಲೆ ನಮಗಿರಬೇಕು.
ಸಿಟ್ಟಿಗೆ ಒಳಗಾದಾಗ ಎಲ್ಲವೂ ನಕಾರಾತ್ಮಕ ರೀತಿಯಲ್ಲಿಯೇ ಕಾಣುತ್ತದೆ. ಹಾಗಾಗಿ ಸಿಟ್ಟಿಗೆ ಒಳಗಾದಾಗ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು. ಸಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಎಂದಿಗೂ ಒಳ್ಳೆಯದನ್ನು ಮಾಡದು. ಸಿಟ್ಟಿಗೆ ಒಳಗಾದುದರ ಪರಿಣಾಮವಾಗಿ ಅನೇಕ ಅಹಿತಕರ ಘಟನೆ ಉಂಟಾಗಿರುವುದನ್ನು ನಾವು ಪುರಾಣ ಇತಿಹಾಸಗಳಲ್ಲಿ ಕಾಣಬಹುದು. ಎಂತಹ ಸ್ಥಿತಿಯಲ್ಲಾದರೂ ಹೃದಯದಿಂದ ನೋಡಿದರೆ ಎಲ್ಲವೂ ಉತ್ತಮವಾಗಿ ಕಾಣುವುದು.
ಈ 4 ರಾಶಿಚಕ್ರದ ವ್ಯಕ್ತಿಗಳಿಗೆ ಕೆಟ್ಟ ರೀತಿಯ ಸಿಟ್ಟು ಬರುತ್ತದೆಯಂತೆ!
ಮನುಷ್ಯನ ಸಂವೇದನೆಗಳಲ್ಲಿ ಸಿಟ್ಟು ಸಹಜವಾದದ್ದು. ಈ ಸಿಟ್ಟು ಉದ್ಭವವಾಗುವ ರೀತಿ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹಾಗೂ ಸಿಟ್ಟಿಗೆ ಒಳಗಾದಾಗ ಉಂಟಾಗುವ ವ್ಯಕ್ತಿಯ ವರ್ತನೆಗಳ ಪರಿವರ್ತನೆಯು ಅವರವರ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವವನ್ನು ಒಳಗೊಂಡಿರುತ್ತದೆ. ಅದರಲ್ಲೂ ನಾಲ್ಕು ರಾಶಿಚಕ್ರದ ವ್ಯಕ್ತಿಗಳು ಕೆಟ್ಟ ರೀತಿಯ ಸಿಟ್ಟಿಗೆ ಒಳಗಾಗುತ್ತಾರೆ ಎನ್ನಲಾಗುವುದು. ಹಾಗಾದರೆ ಆ ರಾಶಿಚಕ್ರಗಳ ಸಿಟ್ಟಿನ ವರ್ತನೆಗಳು ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.
ಮೇಷ
ಮೇಷರಾಶಿಯ ವ್ಯಕ್ತಿಗಳು ಹಠಾತ್ ಹಾಗೂ ಆಕ್ರಮಣಕಾರಿ ವರ್ತನೆಯನ್ನು ಒಳಗೊಂಡಿರುತ್ತಾರೆ. ಸ್ಪರ್ಧಾತ್ಮಕ ಮನೋಭಾವದವರಾದ ಇವರು ಬಹುಬೇಗ ನಿರಾಶೆಗೆ ಒಳಗಾಗುತ್ತಾರೆ.
Most Read:ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!ಮೇಷ
ಘರ್ಷಣೆಗಳು ಮತ್ತು ಕಿರಿಕಿರಿಯನ್ನು ಎದುರಿಸುವಾಗ ಅವರು ಕೋಪದಿಂದ ಪ್ರತಿಕ್ರಿಯಿಸುತ್ತಾರೆ. ತಾಳ್ಮೆಯನ್ನು ಹೊಂದಿರದ ಈ ವ್ಯಕ್ತಿಗಳು ತಾವು ಕೈಗೊಂಡ ನಿರ್ಧಾರ ಅಥವಾ ಕೆಲಸದಲ್ಲಿ ಕೊಂಚ ಬದಲಾವಣೆ ಅಥವಾ ವ್ಯತ್ಯಾಸ ಉಂಟಾದರೂ ಬಹುಬೇಗ ಕೋಪಕ್ಕೆ ಒಳಗಾಗುತ್ತಾರೆ.
ಕರ್ಕ
ಕರ್ಕ ರಾಶಿಯವರು ಭಾವನಾತ್ಮಕ ಮತ್ತು ಸೂಕ್ಷ್ಮ ಪ್ರವೃತ್ತಿಯ ವ್ಯಕ್ತಿಗಳಾಗಿರುತ್ತಾರೆ. ಇವರು ಅತಿಯಾದ ಅಸಮಧಾನವನ್ನು ಸಹಿಸುವುದಿಲ್ಲ. ನಿರಾಶೆಯು ಇವರ ಭಾವನೆಗಳ ಮೇಲೆ ತೀಕ್ಷ್ಣವಾದ ಪರಿಣಾಮ ಬೀರುವುದು.
ಕರ್ಕ
ಅನುಮಾನಾಸ್ಪದ ಪ್ರವೃತ್ತಿಯನ್ನು ಹೊಂದಿರುವ ಇವರು ತಮ್ಮ ಸಂಗಾತಿ ಹಾಗೂ ಸ್ನೇಹಿತರಲ್ಲಿ ವಾದಮಾಡುವಾಗ ಸಾಕಷ್ಟು ಗಂಭೀರ ಸ್ಥಿತಿ ಹಾಗೂ ಸಿಟ್ಟಿಗೆ ಒಳಗಾಗುವರು. ಇವರ ಪರವಾಗಿ ಸ್ನೇಹಿತರು ಅಥವಾ ಆಪ್ತರು ನಿಲ್ಲದೆ ಹೋದರೆ ಬಹು ನಿರಾಶೆ ಹಾಗೂ ಸಿಟ್ಟನ್ನು ಹೊಂದುವರು.
ಸಿಂಹ
ಈ ರಾಶಿಯವರು ಶಾಂತರೀತಿಯ ಪ್ರವೃತ್ತಿ ಹೊಂದುವುದು ಎಂದರೆ ಆಶ್ಚರ್ಯ ಉಂಟುಮಾಡುವುದು. ಇವರು ಸಾಮಾನ್ಯವಾಗಿ ಸದಾ ಜೋರಾದ ಮತ್ತು ತೀವ್ರತರದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಕೆಲವು ಸಣ್ಣ ಪುಟ್ಟ ವಿಚಾರಗಳು ಸಹ ಕೆಲವೊಮ್ಮೆ ಅತಿಯಾದ ಅಸಮಧಾನಕ್ಕೆ ಕಾರಣವಾಗುವುದು.
Most Read:ವೃಷಭ ರಾಶಿಯವರು ಎದುರಿಸುವಂತಹ ಸಮಸ್ಯೆಗಳು ಇಲ್ಲಿದೆ ನೋಡಿ...
ಸಿಂಹ
ತಾವು ಇತರರಿಗೆ ನೀಡಿದ ಕೆಲವು ವಸ್ತುಗಳನ್ನು ಹಿಂತಿರುಗಿ ಪಡೆಯುವಾಗ ಯಾವುದೇ ಹಾನಿ ಉಂಟಾಗಿದ್ದರೆ, ಕೋಪ ಅವರ ನಿಯಂತ್ರಣದಲ್ಲಿ ಇರುವುದಿಲ್ಲ. ಇವರು ಸಾರ್ವಜನಿಕ ಸ್ಥಳದಲ್ಲೂ ಸಹ ದೊಡ್ಡ ದೃಶ್ಯಗಳನ್ನು ಉಂಟುಮಾಡುವಂತಹ ಕೋಪವನ್ನು ತೋರುವರು.
ವೃಶ್ಚಿಕ
ಈ ರಾಶಿಯವರು ಬಹುತೇಕ ಸಂದರ್ಭದಲ್ಲಿ ಸಮರ್ಥನೀಯ ಮತ್ತು ಉಗ್ರರಾಗಿರುತ್ತಾರೆ. ವಿಷಯಗಳು ತಮ್ಮ ರೀತಿಯಲ್ಲಿ ಅಥವಾ ಪರವಾಗಿ ಇಲ್ಲವಾದರೆ ಬಹುಬೇಗ ಕೋಪಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರುವ ಸಾಧ್ಯತೆಗಳಿವೆ. ಕಿರಿಕಿರಿ ಉಂಟಾದಾಗ ತಮ್ಮ ನಿಯಂತ್ರಣ ಮೀರಿದಂತಹ ಕೋಪವನ್ನು ತೋರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುವುದು. ಹಾಗಾಗಿ ಕೋಪಕ್ಕೆ ಒಳಗಾದ ವೃಶ್ಚಿಕ ರಾಶಿಯ ವ್ಯಕ್ತಿಗಳ ಜೊತೆಗೆ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುವುದು.