Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ನಾಲ್ಕು ರಾಶಿಯವರು ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಾರಂತೆ!
ಕೋಪ/ಸಿಟ್ಟು ಎನ್ನುವುದು ಮನುಷ್ಯನ ಸಾಮಾನ್ಯ ಸಂವೇದನೆಗಳಲ್ಲಿ ಒಂದು. ತಾನು ಅಂದುಕೊಂಡಿದ್ದು ದೊರೆಯದಿದ್ದಾಗ, ಮನಸ್ಸು ಬಯಸಿದ್ದು ಸಿಗದೆ ಇರುವಾಗ, ಇತರರ ಕಾರಣದಿಂದ ಜೀವನ ಹಾಳಾದಾಗ, ಅನಗತ್ಯ ಕಾರಣಗಳಿಂದಾಗಿ ಇತರರು ಕಿರಿಕಿರಿ ಉಂಟುಮಾಡಿದರೆ ಹೀಗೆ ವಿವಿಧ ಕಾರಣಗಳಿಂದಾಗಿ ಕೋಪ/ಸಿಟ್ಟು ಬರುವುದು ಸಹಜ. ಸಿಟ್ಟು ಎನ್ನುವುದು ವ್ಯಕ್ತಿಯನ್ನು ಆವರಿಸಿರುವಾಗ ವ್ಯಕ್ತಿ ಏನು ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ.
ಸಿಟ್ಟು ಬಂದಾಗ ಕೆಲವರು ತಮ್ಮ ಸುತ್ತಲಿನ ವಸ್ತುಗಳನ್ನು ನಾಶಮಾಡಬಹುದು, ಕೆಲವರು ಸುತ್ತಲ ವ್ಯಕ್ತಿಗಳ ಮೇಲೆ ಹರಿಹಾಯಬಹುದು ಅಥವಾ ಇನ್ನೂ ಕೆಲವರು ತಮಗೆ ತಾವೇ ನೋವನ್ನುಂಟು ಮಾಡುಕೊಳ್ಳುವರು. ತಮ್ಮ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮೌನದ ಮೊರೆ ಹೋಗುವವರು ಬೆರಳೆಣಿಕೆಯ ಮಂದಿ ಎಂದು ಹೇಳಬಹುದು.

ಕೆಲವರು ತಮ್ಮ ರಾಶಿಚಕ್ರ ಹಾಗೂ ಗ್ರಹಗಳ ಪ್ರಭಾವದಿಂದ ಸಣ್ಣ ಪುಟ್ಟ ಸಮಸ್ಯೆಗಳಿಗೂ ಅಧಿಕ ಉದ್ವೇಗಕ್ಕೆ ಒಳಗಾಗುತ್ತಾರೆ. ಇವರು ಸಿಟ್ಟಿನಲ್ಲಿ ಇರುವಾಗ ಮಾತನಾಡಿಸುವಾಗ ಸಾಕಷ್ಟು ಚಿಂತನೆ ನಡೆಸಬೇಕಾಗುವುದು. ಇವರಿಗೆ ಕೋಪ ಕಡಿಮೆಯಾದ ಬಳಿಕ ಮಾತನಾಡಬೇಕು ಅಷ್ಟೆ. ಹಾಗಾದರೆ ಅತಿಯಾದ ಸಿಟ್ಟಿನ ರಾಶಿಚಕ್ರದ ಪಟ್ಟಿಯಲ್ಲಿ ಯಾವ ರಾಶಿಚಕ್ರದವರು ನಿಲ್ಲುತ್ತಾರೆ? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ
ಈ ರಾಶಿಯ ವ್ಯಕ್ತಿಗಳು ಹಠಾತ್ ಕೋಪಕ್ಕೆ ಒಳಗಾಗುತ್ತಾರೆ. ಇವರಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಕಾಣಬಹುದು. ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿರುವ ಇವರು ಸುಲಭವಾಗಿ ನಿರಾಶೆಗೆ ಒಳಗಾಗುತ್ತಾರೆ. ಘರ್ಷಣೆ ಮತ್ತು ಕಿರಿಕಿರಿಗೆ ಒಳಗಾದಾಗ ಬಹುಬೇಗ ಕೋಪಗೊಳ್ಳುತ್ತಾರೆ ಎನ್ನಲಾಗುವುದು. ಇವರಲ್ಲಿ ತಾಳ್ಮೆಯ ಪ್ರಮಾಣ ಕಡಿಮೆಯಿರುವುದೇ ಇದಕ್ಕೆ ಕಾರಣ ಎನ್ನಬಹುದು.

ಕರ್ಕ
ಈ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಮತ್ತು ಸೂಕ್ಷ್ಮ ಪ್ರವೃತ್ತಿಯವರು ಎನ್ನಬಹುದು. ಇವರು ಅಸಮಧಾನಗೊಂಡಾಗ ಹಾಗೂ ನಿರಾಶೆಗೆ ಒಳಗಾದಾಗ, ಸಂಗಾತಿ ಅಥವಾ ಸ್ನೇಹಿತರೊಂದಿಗೆ ವಾದಕ್ಕೆ ಒಳಗಾದ ಸಂದರ್ಭದಲ್ಲಿ ಅಧಿಕ ಸಿಟ್ಟನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರ ಕೋಪ ಅಧಿಕವಾಗಿರುವಾಗ ಕೋಪಕ್ಕೆ ಕಾರಣರಾದವರಿಗೆ ಹೊಡೆಯುವ ಸಾಧ್ಯತೆಗಳು ಇರುತ್ತವೆ.

ಸಿಂಹ
ಈ ರಾಶಿಯವರು ತೊಂದರೆಗೆ ಒಳಗಾದಾಗ ಸಾಕಷ್ಟು ಸಮಾಧಾನದಲ್ಲಿಯೇ ಇರುತ್ತಾರೆ. ಯಾವಾಗ ಇವರ ತಾಳ್ಮೆ ಮೀರಿ ಅತಿಯಾದ ತೊಂದರೆ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೋ ಆಗ ಅವರ ಸಿಟ್ಟು ನಿಯಂತ್ರಣವನ್ನು ತಪ್ಪಿರುತ್ತದೆ. ಅಲ್ಲದೆ ಇವರ ಸ್ನೇಹಿತರು ಇವರಿಂದ ಅಂಗಿಯನ್ನು ಎರವಲು ಪಡೆದು, ಬಳಿಕ ಹಿಂತಿರುಗಿಸುವಾಗ ಅದರ ಮೇಲೆ ಯಾವುದೇ ಹಾನಿ ಉಂಟಾಗಿದ್ದರೆ ದೊಡ್ಡ ಸಿಟ್ಟನ್ನು ತೋರುವರು. ಅನಿರೀಕ್ಷಿತವಾಗಿ ಉಂಟಾಗುವ ಸಮಸ್ಯೆಗಳಿಗೆ ಅಧಿಕ ಸಿಟ್ಟನ್ನು ತೋರುವರು ಎನ್ನಲಾಗುವುದು.

ವೃಶ್ಚಿಕ
ಈ ರಾಶಿಚಕ್ರದವರು ಸಾಮಾನ್ಯವಾಗಿ ಸಮರ್ಥನೀಯ ಹಾಗೂ ಬೆಂಕಿಯ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ವಿಷಯವು ಇವರ ದಾರಿಯಲ್ಲಿ ಇಲ್ಲದಿದ್ದರೆ ಬಹಳ ಕೋಪವನ್ನು ತೋರುವರು. ಕೆಲವೊಮ್ಮೆ ಹಿಂಸಾತ್ಮಕ ರೂಪವನ್ನು ತಾಳುವರು. ಇವರು ಅತಿಯಾದ ಕಿರಿಕಿರಿಗೆ ಒಳಗಾದರೆ ವಸ್ತುಗಳನ್ನು ಮುರಿಯುವ ಸಾಧ್ಯತೆಗಳಿವೆ. ಹಾಗಾಗಿ ಸಿಟ್ಟಿಗೆ ಒಳಗಾದ ವೃಶ್ಚಿಕ ರಾಶಿಯವರ ಬಗ್ಗೆ ಹೆಚ್ಚಿನ ಜಾಗರೂಕತೆಯಲ್ಲಿ ಇರಬೇಕು.



Click it and Unblock the Notifications