Just In
- 19 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 47 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೃಷಭ ರಾಶಿಯವರು ಎದುರಿಸುವಂತಹ ಸಮಸ್ಯೆಗಳು ಇಲ್ಲಿದೆ ನೋಡಿ...
ವೃಷಭ ರಾಶಿಯವರ ಸೌಂದರ್ಯದಲ್ಲಿ ಯಾರಿಗೂ ಕಡಿಮೆಯೇನಲ್ಲ. ಶುಕ್ರನು ಅಧಿಪತಿಯಾಗಿರುವಂತಹ ಈ ರಾಶಿಯವರು ಶಾಂತಿ ಹಾಗೂ ಪ್ರೇಮಕ್ಕೆ ಮನಸೋಲುವವರು. ಶಾಂತಿ ಬಯಸುವ ಕಾರಣದಿಂದಾಗಿ ವೃಷಭ ರಾಶಿಯವರು ಸ್ನೇಹಿತರು ಮಾತ್ರವಲ್ಲದೆ, ಇತರರನ್ನು ಕೂಡ ಹೆಚ್ಚು ಪ್ರೀತಿಸುವರು. ಆದರೆ ಒಮ್ಮೆ ಪ್ರೀತಿಗೆ ಬೀಳುವಂತಹ ವೃಷಭ ರಾಶಿಯವರಿಗೆ ಅದರಿಂದ ಮೇಲೆ ಬರಲು ತುಂಬಾ ಕಷ್ಟವಾಗುವುದು.
ಇವರಿಗೆ ಪ್ರೇಮದ ವಿಚಾರದಲ್ಲಿ ಯಾರಾದರೂ ಮೋಸ ಮಾಡಿದರೆ ಅದರಿಂದ ಹೊರಬರಲು ತುಂಬಾ ಕಷ್ಟಪಡುವರು. ಇವರು ತುಂಬಾ ಸಭ್ಯ ಪ್ರೇಮಿಗಳು ಎಂದು ಪರಿಗಣಿಸಲಾಗಿದೆ. ಆದರೆ ಪ್ರೇಮವೈಫಲ್ಯವಾದರೆ ಆಗ ಏನಾಗುವುದು ಎಂದು ತಿಳಿಯಿರಿ.
ರಾಶಿಚಕ್ರದಿಂದ ವ್ಯಕ್ತಿಯೊಬ್ಬನ ಭೂತ, ಭವಿಷ್ಯ ಹಾಗೂ ವರ್ತಮಾನವನ್ನು ತಿಳಿಯಬಹುದು ಎಂದು ಜ್ಯೋತಿಷಿಗಳು ಹೇಳುವರು. ವೃತ್ತಿ, ಕುಟುಂಬ ಅಥವಾ ಸಂಬಂಧದ ಬಗ್ಗೆ ತಿಳಿದುಕೊಳ್ಳಬೇಕಾದರೆ ಆಗ ನಿಮ್ಮ ರಾಶಿ ಯಾವುದು ಎಂದು ತಿಳಿದಿರುವುದು ಅತೀ ಅಗತ್ಯವಾಗಿರುವುದು. ವೃಷಭ ರಾಶಿಯವರು ಎದುರಿಸುವಂತಹ ಕೆಲವೊಂದು ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಓದುತ್ತಾ ಸಾಗಿ...
ನ್ಯಾಯ ಬೋಧಕರು
ವೃಷಭ ರಾಶಿಯವರು ನ್ಯಾಯದ ವಕೀಲರಾಗಿರುವರು. ಇದು ನಿಜವಾದರೂ ಸಂಪೂರ್ಣ ನ್ಯಾಯವನ್ನು ಸಂಬಂಧದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ವೃಷಭ ರಾಶಿಯವರ ಸಂಗಾತಿಯು ಏನಾದರೂ ಸಣ್ಣ ತಪ್ಪು ಮಾಡಿದರೂ ಅವರು ಇದನ್ನು ಮನಸ್ಸಿಗೆ ತೆಗೆದುಕೊಳ್ಳುವರು. ಇದನ್ನು ಸಣ್ಣ ವಿಷಯವೆಂದು ಪರಿಗಣಿಸುವ ಬದಲು ದ್ವೇಷ ಸಾಧಿಸಲು ಹೊರಡುವುದು ಇವರ ದೊಡ್ಡ ತಪ್ಪು.
Most Read:ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು
ಕೆಲವೊಂದು ಸಲ ತೀರ್ಪುಗಾರರು
ವೃಷಭ ರಾಶಿಯವರಿಗೆ ಹೆಚ್ಚಿನ ಸ್ನೇಹಿತರು ಮತ್ತು ಸ್ನೇಹದ ಸಂಬಂಧ ಹೊಂದಿರುವವರು ಇರುವರು. ಆದರೆ ಇವರ ಮೇಲೆ ಕಾರಣವಿಲ್ಲದ ಅಭಿಪ್ರಾಯ ಹೇರುವುದು ವೃಷಭ ರಾಶಿಯವರು ಮಾಡುವ ತಪ್ಪು. ಕಾರಣವಿರುವಂತಹ ಅಭಿಪ್ರಾಯವಾಗಿದ್ದರೆ ಆಗ ಅವರು ಇದನ್ನು ತಿಳಿಸಿಕೊಡಲು ವಿಫಲವಾಗುವರು ಮತ್ತು ತೀರ್ಪು ನೀಡುವಂತೆ ವರ್ತಿಸಿ, ಸ್ನೇಹ ಕಳೆದುಕೊಳ್ಳುವರು. ತಮ್ಮ ವಿರುದ್ಧ ತೀರ್ಪು ನೀಡುವುದನ್ನು ಯಾರೂ ಇಷ್ಟಪಡಲಾರರು. ನಿಮ್ಮ ಇಷ್ಟ ಅಥವಾ ನಂಬಿಕೆಗಳನ್ನು ಒಪ್ಪಿಕೊಳ್ಳದೆ ಇರುವಂತಹ ವ್ಯಕ್ತಿಯು ಸರಿಯಿಲ್ಲ ಎನ್ನುವ ನಿರ್ಧಾರ ಮಾಡುವುದನ್ನು ವೃಷಭ ರಾಶಿಯವರು ಬಿಡಬೇಕು.
Most Read:ಈ 6 ರಾಶಿಯವರು, ಚಿಂತನೆ ನಡೆಸದೆಯೇ ಮಾತನಾಡಿ-ಇತರರಿಗೆ ನೋವು ಮಾಡಿಬಿಡುತ್ತಾರೆ!
ಪ್ರೀತಿ ಬಗ್ಗೆ ಅತಿಯಾದ ಸುರಕ್ಷತೆ
ವೃಷಭ ರಾಶಿಯವರ ಬೇಡಿಕೆಯು ಅತಿಯಾಗಿರುವುದು. ಇವರು ಯಾವುದೇ ವಸ್ತು ಅಥವಾ ಉಡುಗೊರೆಯ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ ಇವರು ತಮ್ಮ ಸಂಗಾತಿಯ ಹವ್ಯಾಸದ ಬಗ್ಗೆ ಕೆಲವೊಂದು ಬೇಡಿಕೆ ಸಲ್ಲಿಸುವರು. ಕೆಲವು ವ್ಯಕ್ತಿಗಳು ತಮ್ಮ ಸಂಗಾತಿ ಬಗ್ಗೆ ಅತಿಯಾದ ಸುರಕ್ಷಿತ ಭಾವನೆ ಹೊಂದಿ, ಕೆಲವೊಂದು ಕಟ್ಟುಪಾಡುಗಳನ್ನು ವಿಧಿಸಬಹುದು. ಇದೆಲ್ಲವೂ ಪ್ರೀತಿ ಹಾಗೂ ಚಿಂತೆಯಿಂದ ಮಾಡಿರುವುದು. ಆದರೆ ಸಂಗಾತಿಯು ತನ್ನನ್ನು ಪ್ರೀತಿಸುವಳು ಮತ್ತು ಎಲ್ಲರೂ ಒಂದೇ ರೀತಿಯಲ್ಲಿ ಇರಲ್ಲವೆಂದು ಅವರು ಅರ್ಥ ಮಾಡಿಕೊಂಡಾಗ ಎಲ್ಲವೂ ಸರಿಯಾಗುವುದು.
ಪರಿಪೂರ್ಣತೆಯ ಬೇಡಿಕೆ
ವೃಷಭ ರಾಶಿಯವರು ಯಾವಾಗಲೂ ಪರಿಪೂರ್ಣತೆಯನ್ನು ಬಯಸುವರು. ಆದರೆ ಇವರು ತಮ್ಮ ವೃತ್ತಿ ಬದುಕಿನಲ್ಲಿ ಮಾತ್ರ ಇದನ್ನು ಬಯಸುವರು ಎನ್ನುವುದು ಒಳ್ಳೆಯ ವಿಚಾರ. ಆದರೆ ಪರಿಪೂರ್ಣತೆಯ ಹುಚ್ಚು ಸಂಬಂಧಕ್ಕೆ ಬಂದರೆ ತುಂಬಾ ಕಠಿಣ. ಪರಿಪೂರ್ಣವಾಗಿಲ್ಲದ ಪ್ರೀತಿಯ ಜೀವನವನ್ನು ಇವರು ಇಷ್ಟಪಡಲಾರರು. ನಿಧಾನವಾಗಿ ಪರಿಪೂರ್ಣತೆಯತ್ತ ತೆರಳಲು ಇವರು ಕಲಿಯಬೇಕು. ಇವರ ನಿಯಮವು ಕಠಿಣವಾಗಿದೆ. ಆದರೆ ಇದಕ್ಕೆ ತಾಳ್ಮೆಯು ಅತೀ ಅಗತ್ಯ.