Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ರಾಕ್ಷಸನಾದ ಬಾಲಕ ತನ್ನನ್ನು ಕೊಲ್ಲುವಂತೆ ಪೋಷಕರಿಗೆ ಹೇಳುತ್ತಾನಂತೆ!
ಜ್ವರ ಬರುವುದು ಮನುಷ್ಯನಿಗೆ ಸಹಜ. ಜ್ವರ ಬಂದ ಬಳಿಕ ನಿಮ್ಮ ಸಂಪೂರ್ಣ ಜೀವನವೇ ಬದಲಾದರೆ ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಇಲ್ಲೊಬ್ಬ ಬಾಲಕನಿಗೆ ಮನೆಯಲ್ಲಿನ ಗೋಡೆಯಲ್ಲಿದ್ದ ಶಿಲೀಂಧ್ರದ ಅಲರ್ಜಿಯಿಂದಾಗಿ ಜ್ವರ ಬಂದು ಆತನ ಜೀವನವೇ ಬದಲಾಗಿದೆ. ಈ ಬಾಲಕನಿಗೆ ಯಾವುದೇ ಕಾರಣವಿಲ್ಲದೆಯೂ ಜ್ವರ ಬರುತ್ತಿರುವುದು.

ಆದರೆ ಜ್ವರ ಬಂದ ಬಳಿಕ ಈತನ ವರ್ತನೆಯೇ ಬದಲಾಗಿದೆ. ಇದು ಹೇಗಾಯಿತು? ವಿಲಿಯಮ್ ಎನ್ನುವ ಬಾಲಕ ಜ್ವರ ಬಂದ ಬಳಿಕ ತುಂಬಾ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಬೇಡುತ್ತಿದ್ದಾನೆ. ಈ ವಿಚಿತ್ರ ಘಟನೆಯ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ.

ವಿಲಿಯಮ್ಸ್ ಹಿಂಸೆಗಿಳಿದ
ಜ್ವರ ಬಂದ ಬಳಿಕ ವಿಲಿಯಮ್ ತುಂಬಾ ಕ್ರೂರಿಯಾದ ಮತ್ತು ಭ್ರಮೆಯಲ್ಲೇ ಇರುತ್ತಿದ್ದ. ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಹೇಳುತ್ತಿದ್ದ.

ಪೋಷಕರು ನಂಬುವಂತೆ…
ವಿಲಿಯಮ್ ಗೆ ಜ್ವರ ಬಂದ ಬಳಿಕ ಹೀಗೆ ಆಗಿದೆ ಎಂದು ಪೋಷಕರು ನಂಬಿದ್ದಾರೆ. ಗೋಡೆಗಳ ಮೇಲಿದ್ದ ಶಿಲೀಂಧ್ರದಿಂದಾಗಿ ಆತನಿಗೆ ಹೀಗೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾತ್ರಿಬೆಳಗಾಗುದರೊಳಗಡೆ ಬದಲಾದ…
ಒಂದು ವಾರ ಕಾಲ ಅನಾರೋಗ್ಯದಿಂದ ಇದ್ದ ಬಳಿಕ ಒಂದು ದಿನ ಹಠಾತ್ ಆಗಿ ಆತ ತುಂಬಾ ಕ್ರೂರಿ ಹಾಗೂ ಹಿಂಸೆಗೆ ಇಳಿದ. ಆತ ತುಂಬಾ ಭಿನ್ನವಾಗಿ, ತೆಳುವಾಗಿ ಮತ್ತು ಕಣ್ಣುಗಳು ಎಳೆದುಕೊಂಡಂತೆ ಇದ್ದವು.

ತನ್ನ ಕುಟುಂಬದವರನ್ನೇ ಗುರುತಿಸಲಿಲ್ಲ
ವಿಲಿಯಮ್ ಭ್ರಮೆಯಲ್ಲೇ ಮಾತನಾಡುತ್ತಿದ್ದ. ಕರ್ಟನ್ ನಿಂದ ರಕ್ತದ ಹನಿಗಳು ಸೋರುತ್ತಿದೆ ಎನ್ನುತ್ತಿದ್ದ. ಆತನ ಪರಿಸ್ಥಿತಿ ಹೇಗಿತ್ತೆಂದರೆ ತನ್ನ ಕುಟುಂಬದವರನ್ನೇ ಗುರುತು ಹಿಡಿಯಲಿಲ್ಲ. ತನ್ನ ತಾಯಿಯಲ್ಲೇ ನನ್ನ ಅಮ್ಮ ಎಲ್ಲಿದ್ದಾರೆಂದು ಕೇಳುತ್ತಿದ್ದ.

ವರ್ಷದ ಬಳಿಕ ವೈದ್ಯರಿಗೆ ಪರಿಸ್ಥಿತಿ ತಿಳಿಯಿತು
ಒಂದು ವರ್ಷದ ಬಳಿಕ ವೈದ್ಯರಿಗೆ ವಿಲಿಯಮ್ ನ ಪರಿಸ್ಥಿತಿ ತಿಳಿಯಿತು. ವಿಲಿಯಮ್ ನ ಪರಿಸ್ಥಿತಿಯನ್ನು ಪಾನ್ಸ್ ಅಥವಾ ಪಾಂಡಸ್ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ಒಂದು ರೀತಿಯ ಸೋಂಕಿನಿಂದ ಬರುವುದು ಮತ್ತು ಇದರಿಂದ ಮೆದುಳಿನಲ್ಲಿ ಉರಿಯೂತ ಉಂಟಾಗಬಹುದು.

ಪಾನ್ಸ್ ಮತ್ತು ಪಾಂಡಸ್ ಬಗ್ಗೆ
ಈ ಪರಿಸ್ಥಿತಿಯು ಸುಮಾರು 200 ಮಕ್ಕಳಲ್ಲಿ ಒಬ್ಬರಿಗೆ ಬರುವುದು. ಈ ಪರಿಸ್ಥಿತಿಯು ಒಸಿಡಿ ಅಥವಾ ತಿನ್ನುವ ಅಸಾಮಾನ್ಯತೆ ಉಂಟು ಮಾಡಬಹುದು. ಎರಡು ವಾರಗಳ ಕಾಲ ಆ್ಯಂಟಿಬಯೋಟಿಕ್ ನೀಡಿದರೆ ಪರಿಸ್ಥಿತಿ ಸುಧಾರಣೆಯಾಗುವುದು.

ತನ್ನ ಜೀವನ ಹಾಳು ಮಾಡಿದನೆಂದು ಸೋದರಿಯ ಆರೋಪ
ವಿಲಿಯಮ್ ನ ಸೋದರಿ ಷರ್ಲೆಟ್ ನ ಪ್ರಕಾರ ತನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ. ಯಾಕೆಂದರೆ ಆಕೆ ವಿಲಿಯಮ್ ಗೆ ಹೆದರಿ ತನ್ನ ಸ್ನೇಹಿತೆಯರ ಮನೆಯಲ್ಲಿ ಮಲಗುತ್ತಿದ್ದಳು. ಇದು ತುಂಬಾ ಅಸಾಮಾನ್ಯ ಪರಿಸ್ಥಿತಿಯಾಗಿತ್ತು. ಇದನ್ನು ಹತ್ತು ವರ್ಷದ ಮಗುವಿಗೆ ವಿವರಿಸಲು ಸಾಧ್ಯವಿರಲಿಲ್ಲ ಎಂದು ವಿಲಿಯಮ್ ತಾಯಿ ಹೇಳುತ್ತಾರೆ.

ಶಿಲೀಂಧ್ರದಿಂದ ಬಂದಿರುವುದೆಂದು ವಿಲಿಯಮ್ ಪೋಷಕರ ನಂಬಿಕೆ
ವಿಲಿಯಮ್ ನ್ನು ಪರೀಕ್ಷಿಸಿದ ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಶಿಲೀಂಧ್ರವು ಬಿಡುಗಡೆ ಮಾಡುವಂತಹ ವಿಷಕಾರಿ ಅಂಶದಿಂದ ಬಂದಿದೆ ಎಂದಿದ್ದಾರೆ. ಇದು ಸಂಪೂರ್ಣವಾಗಿ ವಿಲಿಯಮ್ ದೇಹದಿಂದ ಹೊರಹೋಗದ ಹೊರತಾಗಿ ಆತನಿಗೆ ಪಾನ್ಸ್/ಪಾಂಡದಿಂದ ಸಂಪೂರ್ಣವಾಗಿ ಗುಣಪಡಿಸಲು ಆಗಲ್ಲ. ಹೊಸ ಮನೆಗೆ ಹೋದ ಬಳಿಕ ಆತನ ಪರಿಸ್ಥಿತಿಯು ಸುಧಾರಿಸಿದೆ. ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications











