Just In
- 5 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 5 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 6 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 7 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕ್ಷಸನಾದ ಬಾಲಕ ತನ್ನನ್ನು ಕೊಲ್ಲುವಂತೆ ಪೋಷಕರಿಗೆ ಹೇಳುತ್ತಾನಂತೆ!
ಜ್ವರ ಬರುವುದು ಮನುಷ್ಯನಿಗೆ ಸಹಜ. ಜ್ವರ ಬಂದ ಬಳಿಕ ನಿಮ್ಮ ಸಂಪೂರ್ಣ ಜೀವನವೇ ಬದಲಾದರೆ ಅದನ್ನು ನೀವು ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಇಲ್ಲೊಬ್ಬ ಬಾಲಕನಿಗೆ ಮನೆಯಲ್ಲಿನ ಗೋಡೆಯಲ್ಲಿದ್ದ ಶಿಲೀಂಧ್ರದ ಅಲರ್ಜಿಯಿಂದಾಗಿ ಜ್ವರ ಬಂದು ಆತನ ಜೀವನವೇ ಬದಲಾಗಿದೆ. ಈ ಬಾಲಕನಿಗೆ ಯಾವುದೇ ಕಾರಣವಿಲ್ಲದೆಯೂ ಜ್ವರ ಬರುತ್ತಿರುವುದು.
ಆದರೆ ಜ್ವರ ಬಂದ ಬಳಿಕ ಈತನ ವರ್ತನೆಯೇ ಬದಲಾಗಿದೆ. ಇದು ಹೇಗಾಯಿತು? ವಿಲಿಯಮ್ ಎನ್ನುವ ಬಾಲಕ ಜ್ವರ ಬಂದ ಬಳಿಕ ತುಂಬಾ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಬೇಡುತ್ತಿದ್ದಾನೆ. ಈ ವಿಚಿತ್ರ ಘಟನೆಯ ಬಗ್ಗೆ ನೀವು ಇನ್ನಷ್ಟು ತಿಳಿಯಿರಿ.
ವಿಲಿಯಮ್ಸ್ ಹಿಂಸೆಗಿಳಿದ
ಜ್ವರ ಬಂದ ಬಳಿಕ ವಿಲಿಯಮ್ ತುಂಬಾ ಕ್ರೂರಿಯಾದ ಮತ್ತು ಭ್ರಮೆಯಲ್ಲೇ ಇರುತ್ತಿದ್ದ. ತನ್ನನ್ನು ಕೊಲ್ಲುವಂತೆ ಪೋಷಕರಲ್ಲಿ ಹೇಳುತ್ತಿದ್ದ.
Most Read: ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!
ಪೋಷಕರು ನಂಬುವಂತೆ…
ವಿಲಿಯಮ್ ಗೆ ಜ್ವರ ಬಂದ ಬಳಿಕ ಹೀಗೆ ಆಗಿದೆ ಎಂದು ಪೋಷಕರು ನಂಬಿದ್ದಾರೆ. ಗೋಡೆಗಳ ಮೇಲಿದ್ದ ಶಿಲೀಂಧ್ರದಿಂದಾಗಿ ಆತನಿಗೆ ಹೀಗೆ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿಬೆಳಗಾಗುದರೊಳಗಡೆ ಬದಲಾದ…
ಒಂದು ವಾರ ಕಾಲ ಅನಾರೋಗ್ಯದಿಂದ ಇದ್ದ ಬಳಿಕ ಒಂದು ದಿನ ಹಠಾತ್ ಆಗಿ ಆತ ತುಂಬಾ ಕ್ರೂರಿ ಹಾಗೂ ಹಿಂಸೆಗೆ ಇಳಿದ. ಆತ ತುಂಬಾ ಭಿನ್ನವಾಗಿ, ತೆಳುವಾಗಿ ಮತ್ತು ಕಣ್ಣುಗಳು ಎಳೆದುಕೊಂಡಂತೆ ಇದ್ದವು.
ತನ್ನ ಕುಟುಂಬದವರನ್ನೇ ಗುರುತಿಸಲಿಲ್ಲ
ವಿಲಿಯಮ್ ಭ್ರಮೆಯಲ್ಲೇ ಮಾತನಾಡುತ್ತಿದ್ದ. ಕರ್ಟನ್ ನಿಂದ ರಕ್ತದ ಹನಿಗಳು ಸೋರುತ್ತಿದೆ ಎನ್ನುತ್ತಿದ್ದ. ಆತನ ಪರಿಸ್ಥಿತಿ ಹೇಗಿತ್ತೆಂದರೆ ತನ್ನ ಕುಟುಂಬದವರನ್ನೇ ಗುರುತು ಹಿಡಿಯಲಿಲ್ಲ. ತನ್ನ ತಾಯಿಯಲ್ಲೇ ನನ್ನ ಅಮ್ಮ ಎಲ್ಲಿದ್ದಾರೆಂದು ಕೇಳುತ್ತಿದ್ದ.
ವರ್ಷದ ಬಳಿಕ ವೈದ್ಯರಿಗೆ ಪರಿಸ್ಥಿತಿ ತಿಳಿಯಿತು
ಒಂದು ವರ್ಷದ ಬಳಿಕ ವೈದ್ಯರಿಗೆ ವಿಲಿಯಮ್ ನ ಪರಿಸ್ಥಿತಿ ತಿಳಿಯಿತು. ವಿಲಿಯಮ್ ನ ಪರಿಸ್ಥಿತಿಯನ್ನು ಪಾನ್ಸ್ ಅಥವಾ ಪಾಂಡಸ್ ಎಂದು ಕರೆಯಲಾಗುತ್ತದೆ. ಈ ಪರಿಸ್ಥಿತಿಯು ಒಂದು ರೀತಿಯ ಸೋಂಕಿನಿಂದ ಬರುವುದು ಮತ್ತು ಇದರಿಂದ ಮೆದುಳಿನಲ್ಲಿ ಉರಿಯೂತ ಉಂಟಾಗಬಹುದು.
ಪಾನ್ಸ್ ಮತ್ತು ಪಾಂಡಸ್ ಬಗ್ಗೆ
ಈ ಪರಿಸ್ಥಿತಿಯು ಸುಮಾರು 200 ಮಕ್ಕಳಲ್ಲಿ ಒಬ್ಬರಿಗೆ ಬರುವುದು. ಈ ಪರಿಸ್ಥಿತಿಯು ಒಸಿಡಿ ಅಥವಾ ತಿನ್ನುವ ಅಸಾಮಾನ್ಯತೆ ಉಂಟು ಮಾಡಬಹುದು. ಎರಡು ವಾರಗಳ ಕಾಲ ಆ್ಯಂಟಿಬಯೋಟಿಕ್ ನೀಡಿದರೆ ಪರಿಸ್ಥಿತಿ ಸುಧಾರಣೆಯಾಗುವುದು.
ತನ್ನ ಜೀವನ ಹಾಳು ಮಾಡಿದನೆಂದು ಸೋದರಿಯ ಆರೋಪ
ವಿಲಿಯಮ್ ನ ಸೋದರಿ ಷರ್ಲೆಟ್ ನ ಪ್ರಕಾರ ತನ್ನ ಜೀವನವನ್ನು ಆತ ಹಾಳು ಮಾಡಿದ್ದಾನೆ. ಯಾಕೆಂದರೆ ಆಕೆ ವಿಲಿಯಮ್ ಗೆ ಹೆದರಿ ತನ್ನ ಸ್ನೇಹಿತೆಯರ ಮನೆಯಲ್ಲಿ ಮಲಗುತ್ತಿದ್ದಳು. ಇದು ತುಂಬಾ ಅಸಾಮಾನ್ಯ ಪರಿಸ್ಥಿತಿಯಾಗಿತ್ತು. ಇದನ್ನು ಹತ್ತು ವರ್ಷದ ಮಗುವಿಗೆ ವಿವರಿಸಲು ಸಾಧ್ಯವಿರಲಿಲ್ಲ ಎಂದು ವಿಲಿಯಮ್ ತಾಯಿ ಹೇಳುತ್ತಾರೆ.
ಶಿಲೀಂಧ್ರದಿಂದ ಬಂದಿರುವುದೆಂದು ವಿಲಿಯಮ್ ಪೋಷಕರ ನಂಬಿಕೆ
ವಿಲಿಯಮ್ ನ್ನು ಪರೀಕ್ಷಿಸಿದ ವೈದ್ಯರು ಹಲವಾರು ಪರೀಕ್ಷೆಗಳನ್ನು ನಡೆಸಿದ್ದಾರೆ. ಶಿಲೀಂಧ್ರವು ಬಿಡುಗಡೆ ಮಾಡುವಂತಹ ವಿಷಕಾರಿ ಅಂಶದಿಂದ ಬಂದಿದೆ ಎಂದಿದ್ದಾರೆ. ಇದು ಸಂಪೂರ್ಣವಾಗಿ ವಿಲಿಯಮ್ ದೇಹದಿಂದ ಹೊರಹೋಗದ ಹೊರತಾಗಿ ಆತನಿಗೆ ಪಾನ್ಸ್/ಪಾಂಡದಿಂದ ಸಂಪೂರ್ಣವಾಗಿ ಗುಣಪಡಿಸಲು ಆಗಲ್ಲ. ಹೊಸ ಮನೆಗೆ ಹೋದ ಬಳಿಕ ಆತನ ಪರಿಸ್ಥಿತಿಯು ಸುಧಾರಿಸಿದೆ. ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಇದರ ಬಗ್ಗೆ ನಿಮ್ಮ ಅನಿಸಿಕೆಯೇನು ಎಂದು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.