Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರೀಲಂಕಾದ ಗುಹೆಯೊಂದರಲ್ಲಿ ರಾವಣನ ದೇಹವು ಇಂದಿಗೂ ಇದೆ ಎನ್ನುವ ವದಂತಿ ಇದೆ!
ಹಿಂದೂ ಕಥೆ ಪುರಾಣಗಳಲ್ಲಿ ವಿಶೇಷವಾದ ಜೀವನ ಸಂಗತಿಗಳಿರುವುದನ್ನು ನಾವು ಕಾಣಬಹುದು. ಹಾಗೆಯೇ ಪುರಾಣದ ಕಥೆಗಳು ವಿಶೇಷ ಹಿನ್ನೆಲೆಗಳನ್ನು ಹೊಂದಿವೆ. ಅವುಗಳ ಕೆಲವು ಪುರಾವೆಗಳು ಇಂದಿಗೂ ಇವೆ ಎನ್ನುವುದು ಆಶ್ಚರ್ಯದ ಸಂಗತಿ. ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ರಾಮಾಯಣವೂ ಒಂದು. ರಾಮಾಯಣದಲ್ಲಿ ಅನೇಕ ಕಥೆಗಳು ಸೇರಿಕೊಂಡಿವೆ. ರಾಮಾಯಣದ ದುಷ್ಟ ರಾಜನಾದ ರಾವಣನೇ ರಾಮಾಯಣದ ಕಥೆಗೆ ಮೂಲ ಕಾರಣ ಎಂದು ಹೇಳಬಹುದು. ಇಂತಹ ಒಂದು ದುಷ್ಟ ರಾವಣನ ಸಾವಿನ ಸಂಗತಿಯು ಇಂದಿಗೂ ಪ್ರಚಲಿತದಲ್ಲಿದೆ... ಮುಂದೆ ಓದಿ..

ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ
ಕೆಲವು ಸಂಗತಿಗಳು ರಹಸ್ಯಗಳಿಂದ ಕೂಡಿಕೊಂಡಿವೆ. ನಮಗೆ ತಿಳಿದಿರುವಂತೆ ರಾಮಾಯಣದಲ್ಲಿ ರಾಮ ಮತ್ತು ಲಕ್ಷ್ಮಣ ಅತ್ಯಂತ ಪ್ರೀತಿಪಾತ್ರರಾದ ಸಹೋದರರು. ಅಣ್ಣನ ಜೊತೆಯಲ್ಲಿಯೇ ಲಕ್ಷ್ಮಣ ಸದಾ ಇರಲು ಬಯಸುತ್ತಿದ್ದನು. ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಣ ಮಾಡಿದನು. ನಂತರ ಸೀತೆಯನ್ನು ಹುಡುಕಿ, ರಾವಣನೊಂದಿಗೆ ಹೋರಾಡಿದರು. ಯುದ್ಧದಲ್ಲಿ ರಾವಣ ಸೋತನು. ಸೀತೆಯನ್ನು ಬಿಡಿಸಿಕೊಂಡು ಬಂದರು ಎನ್ನುವುದು ಎಲ್ಲರು ತಿಳಿದಿರುವ ವಿಚಾರ. ಆದರೆ ನಂತರ ರಾವಣನು ಏನಾದ ಎನ್ನುವುದು ರಹಸ್ಯವಾಗಿಯೇ ಉಳಿದ ಸಂಗತಿ!

ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆಯಂತೆ
ಈ ವಿಚಾರವಾಗಿಯೇ ನಡೆಸಿದ ಸಂಶೋಧನೆಯ ಪ್ರಕಾರ ರಾವಣನ ದೇಹವು ಶ್ರೀಲಂಕಾದ ಗುಹೆಯೊಂದರಲ್ಲಿ ಇದೆ ಎನ್ನುವುದು ತಿಳಿದು ಬಂದಿದೆ. ಈ ಕುತೂಹಲಕಾರಿ ಸಂಶೋಧನೆಯ ಪ್ರಕಾರ ರಾಮಾಯಣಕ್ಕೆ ಸಂಬಂಧಿಸಿದ 50 ಪ್ರದೇಶಗಳನ್ನು ತನಿಖೆ ಮಾಡಲಾಗಿತ್ತು. ಅದರಲ್ಲಿರುವ ಒಂದು ಗುಹೆಯಲ್ಲಿ ರಾವಣನ ದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ರಾವಣನ ದೇಹ ಇದೆಯಂತೆ!
ಹಿಂದೂ ಪುರಾಣಗಳ ಪ್ರಕಾರ, ರಾಮನು ನವರಾತ್ರಿಯ 10ನೇ ದಿನ ಭಗವಾನ್ ರಾಮನು ರಾವಣನನ್ನು ಕೊಂದ. ಹಾಗಾಗಿಯೇ 10ನೇ ದಿನವನ್ನು ವಿಜಯ ದಶಮಿ ಎಂದು ಆಚರಿಸಲಾಯಿತು ಎನ್ನುವ ಕಥೆಯಿದೆ. ರಾಮ ಅಯೋಧ್ಯೆಗೆ ಮರಳಿದ 20 ದಿನಗಳ ಬಳಿಕ ದೀಪಾವಳಿಯನ್ನು ಆಚರಿಸಲಾಯಿತು. ಸಂಶೋಧನೆಯ ಪ್ರಕಾರ ರಾವಣನ ದೇಹವನ್ನು ಶ್ರೀಲಂಕಾದ ರಾಗ್ಲಾ ಕಾಡಿನ ನಡುವೆ ಇರುವ ಒಂದು ಗುಹೆಯಲ್ಲಿ ಇರಿಸಲಾಗಿದೆ ಎಂದು ಜನರು ಹೇಳುತ್ತಾರೆ. ಗುಹೆಯಲ್ಲಿ ರಾವಣನ ದೇಹವಿದೆ ಎಂದು "ಶ್ರೀಲಂಕಾದ ರಾಷ್ಟ್ರೀಯ ರಾಮಾಯಣ ಸಂಶೋಧನಾ ಕೇಂದ್ರ ಮತ್ತು ಪ್ರವಾಸೋದ್ಯಮ ಸಚಿವಾಲಯ" ಇದನ್ನು ಪತ್ತೆ ಹಚ್ಚಿದೆಯಂತೆ.

ಕಥೆಯ ಪ್ರಕಾರ ಏನಿದೆ?
ಕಥೆಯ ಪ್ರಕಾರ ರಾಮನು ರಾವಣನನ್ನು ಕೊಂದರೂ, ರಾಮನು ರಾವಣನ ದೇಹವನ್ನು ರಾವಣನ ಸಹೋದರನ ಕೈಗೆ ಹಸ್ತಾಂತರಿಸಿದ್ದನು ಎಂದು ಹೇಳಲಾಗುವುದು. ರಾವಣನ ಸಹೋದರನಿಗೆ ಮೃತ ದೇಹವನ್ನು ಹಸ್ತಾಂತರಿಸಿದ ನಂತರ ಏನಾಯಿತು ಎನ್ನುವುದರ ಕುರಿತು ಯಾವುದೇ ಕಥೆ-ಪುರಾಣಗಳು ಇಲ್ಲ. ಹಾಗಾಗಿ ರಾವಣನ ಅಂತ್ಯ ಕ್ರಿಯೆಯ ಬಗ್ಗೆ ಸಾಕಷ್ಟು ಸಂದಿಗ್ಧತೆ ಹಾಗೂ ರಹಸ್ಯಗಳು ಅಡಗಿವೆ ಎಂದು ಊಹಿಸಲಾಗುತ್ತದೆ.

ರಾವಣನ ದೇಹವನ್ನು ಹೊಂದಿರುವ ಗುಹೆ 8 ಸಾವಿರ ಅಡಿ ಎತ್ತರದಲ್ಲಿದೆ
ನಂತರ ರಾವಣನ ದೇಹವನ್ನು ಗುಹೆಯಲ್ಲಿ ಇಡಲಾಯಿತು. ಅದು ಅಂದಿನಿಂದ ಇಂದಿಗೂ ಅಲ್ಲಿಯೇ ಇದೆ. ರಾವಣನ ದೇಹವನ್ನು ಹೊಂದಿರುವ ಗುಹೆ 8 ಸಾವಿರ ಅಡಿ ಎತ್ತರದಲ್ಲಿದೆ ಎನ್ನುವುದು ಆಶ್ಚರ್ಯದ ಸಂಗತಿ.



Click it and Unblock the Notifications
