Just In
Don't Miss
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವ ರಾಶಿಯವರಿಗೆ ಯಾವ ಉಲ್ಲೇಖ ಸರಿ ಹೊಂದುವುದು?
ರಾಶಿಚಕ್ರಗಳ ಬಗ್ಗೆ ಜ್ಯೋತಿಷ್ಯದ ಫಲಾಫಲಗಳು ಹೇಗಿರುತ್ತದೆ ಎನ್ನುವ ಬಗ್ಗೆ ಹಲವಾರು ಲೇಖನಗಳನ್ನು ನೀವು ಈಗಾಗಲೇ ಓದಿರುತ್ತೀರಿ. ಆದರೆ ಪ್ರತಿಯೊಂದು ರಾಶಿಗಳಿಗೂ ಹೊಂದಿಕೊಳ್ಳುವಂತಹ ಉದ್ಧರಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಉದ್ಧರಣವೆಂದರೆ ಅದಕ್ಕೆ ನಿಜವಾಗಿಯೂ ಒಂದು ಒಳ್ಳೆಯ ಅರ್ಥವಿರುವುದು ಮತ್ತು ಇದನ್ನು ನಮ್ಮ ಜೀವನಕ್ಕೂ ಕೆಲವೊಮ್ಮೆ ಅಳವಡಿಸಿಕೊಳ್ಳಬಹುದು.
ಕೆಲವೊಂದು ಉದ್ಧರಣಗಳು ನೇರವಾಗಿ ನಮ್ಮ ಜೀವನಕ್ಕೆ ಸಂಬಂಧಿಸಿದಂತೆ ಕಾಣುವುದು ಮತ್ತು ನಮಗೆ ವಿಶೇಷವಾಗಿರುವವರ ನೆನಪು ತರುವುದು. ಈ ಲೇಖನದಲ್ಲಿ 12 ರಾಶಿಗಳಿಗೆ ಹೊಂದಿಕೊಳ್ಳುವ ಉದ್ಧರಣದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ರಾಶಿಚಕ್ರಗಳ ನಡವಳಿಕೆಗೆ ಅನುಗುಣವಾಗಿ ಈ ಉದ್ಧರಣಗಳನ್ನು ಹೇಳಲಾಗಿದೆ. ಅದು ಯಾವುದು ಮತ್ತು ನಿಮ್ಮ ರಾಶಿಗೆ ಯಾವ ಉದ್ಧರಣ ಎಂದು ಓದಲು ತಯಾರಾಗಿ.....
ಮೇಷ: ಮಾ.21-ಎ.19
ಮೇಷ ರಾಶಿಯವರು ಬೇರೆಲ್ಲಾ ರಾಶಿಗಿಂತ ತುಂಬಾ ಪ್ರಬಲ ಮಸಸ್ಥಿತಿಯವರು ಎಂದು ಪರಿಗಣಿಸಲಾಗಿದೆ. ಈ ರಾಶಿಯವರು ಸ್ವಾಭಾವಿಕ ಹಾಗೂ ನಿಷ್ಠೆಯುಳ್ಳವರು. ಇವರನ್ನು ವಿವರಿಸುವ ಒಳ್ಳೆಯ ಉದ್ಧರಣ: ``ನನ್ನ ಅದೃಷ್ಟಕ್ಕೆ ನಾನೇ ಮುಖ್ಯಸ್ಥ. ನನ್ನ ಆತ್ಮಕ್ಕೆ ನಾನೇ ನಾಯಕ-ವಿಲಿಯಂ ಅರ್ನೆಸ್ಟ್ ಹೆನ್ಲೆ
ವೃಷಭ: ಎ.20-ಮೇ 20
ವೃಷಭ ರಾಶಿಯವರಲ್ಲಿ ಸ್ಥಿತಿಸ್ಥಾಪಕತ್ವವುಳ್ಳ ಅಂತರಂಗ ಶಕ್ತಿಯಿದೆ ಮತ್ತು ಭಾವನೆಗಳನ್ನು ನಿಭಾಯಿಸಲು ಅವರಿಗೆ ತಿಳಿದಿದೆ. ಇವರಿಂದ ಸರಿಹೊಂದುವ ಉಲ್ಲೇಖ: ``ನಿನ್ನನ್ನು ಕೊಲ್ಲದೆ ಅದು ನಿನ್ನನ್ನು ಬಲಪಡಿಸುತ್ತದೆ. "- ಫ್ರೆಡ್ರಿಕ್ ನೀತ್ಸೆ
ಮಿಥುನ: ಮೇ 21- ಜೂನ್ 20
ಮಿಥುನ ರಾಶಿಯವರು ಸಮಾಜಮುಖಿಯಾಗಿರಲು ಮತ್ತು ಸ್ನೇಹಿತರನ್ನು ಸಂಪಾದಿಸಲು ಬಯಸುವರು. ಇದೇ ವೇಳೆ ಇವರು ತುಮಬಾ ಸೂಕ್ಷ್ಮ ಮತ್ತು ಸಾಮಾಜಿಕವಾಗಿರುವವರು. ಇವರನ್ನು ವಿವರಿಸುವ ಉಲ್ಲೇಖವೆಂದರೆ : ``ನಗುವಿಲ್ಲದ ದಿನ ವ್ಯರ್ಥ'': ಚಾರ್ಲಿ ಚಾಪ್ಲಿನ್
ಕರ್ಕಾಟಕ: ಜೂನ್ 21- ಜುಲೈ 22
ಕರ್ಕಾಟಕ ರಾಶಿಯವರು ತುಂಬಾ ಸೌಮ್ಯ ಹಾಗೂ ವಿಶಾಲ ಹೃದಯಿಗಳು. ಇವರು ತುಂಬಾ ಒಳ್ಳೆಯ ಮನಸ್ಸಿನವರಾಗಿರುವ ಕಾರಣ ಕ್ಷಮಿಸುವ ಗುಣವು ಹುಟ್ಟಿನಿಂದಲೇ ಬಂದಿರುವುದು. ಇವರನ್ನು ವಿವರಿಸುವ ಉದ್ಧರಣವೆಂದರೆ: ``ಅಂತ್ಯದಲ್ಲಿ ಮೂರು ವಿಷಯಗಳು ಮುಖ್ಯವಾಗಿರುವುದು: ನೀವು ಎಷ್ಟು ಪ್ರೀತಿಸಿದ್ದೀರಿ, ಹೇಗೆ ಬದುಕಿದ್ದೀರಿ ಮತ್ತು ನಿಮಗೆ ಸಂಬಂಧಿಸದೆ ಇರುವ ವಸ್ತುಗಳನ್ನು ಎಷ್ಟು ಹಿತವಾಗಿ ಬಿಟ್ಟುಕೊಡುತ್ತೀರಿ''-ಬುದ್ಧ
ಸಿಂಹ: ಜುಲೈ 23-ಆ.23
ಸಿಂಹ ರಾಶಿಯವರು ಜನ್ಮತಃ ನಾಯಕರು ಮತ್ತು ಯಾವಾಗಲೂ ಆಕರ್ಷಣೆಯ ಕೇಂದ್ರ ಬಿಂದುವಾಗಿರಲು ಬಯಸುವರು. ಇವರು ಆತ್ಮವಿಶ್ವಾಸ ಕಳೆದುಕೊಳ್ಳಲ್ಲ. ಇವರನ್ನು ವಿಶ್ಲೇಷಿಸುವ ಒಳ್ಳೆಯ ಉದ್ಧರಣವೆಂದರೆ: ``ನಿನ್ನ ಪ್ರೀತಿಯು ನನ್ನನ್ನು ಬಲಗೊಳಿಸಿದೆ; ನಿಮ್ಮ ದ್ವೇಷವು ನನ್ನನ್ನು ನಿಲ್ಲಿಸದಂತೆ ಮಾಡಿದೆ-ಕ್ರಿಸ್ಟಿಯಾನೋ ರೊನಾಲ್ಡೊ
ಕನ್ಯಾ: ಆ.24-ಸೆ.23
ಕನ್ಯಾ ರಾಶಿಯವರು ತುಂಬಾ ಪ್ರಾಯೋಗಿಕವಾಗಿರುವ ವ್ಯಕ್ತಿಗಳು. ಇವರು ಯಾವುದೇ ಕಠಿಣ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವರು. ಇವರನ್ನು ವಿವರಿಸುವ ಉದ್ಧರಣವೆಂದರೆ: ``ನೀವು ಮರುಪಾವತಿ ಮಾಡದೆ, ಯಾರಿಗಾದರೂ ಏನನ್ನಾದರೂ ಮಾಡದೆ ನೀವು ಇಂದು ಜೀವಿಸಲ್ಲ-ಜಾನ್ ಬನ್ಯಾನ್
ತುಲಾ: ಸೆ.24-ಅ.23
ತುಲಾ ರಾಶಿಯವರು ತುಂಬಾ ಸಮತೋಲನ ಮತ್ತು ಸಹಕಾರಿಗಳು. ಇವರು ಯಾವತ್ತೂ ತಮ್ಮ ಪ್ರೀತಿಪಾತ್ರರ ಕಡೆ ಹೆಚ್ಚಿನ ಗಮನಹರಿಸುವರು. ಇವರಿಗೆ ಹೊಂದಿಕೊಳ್ಳುವ ಉಲ್ಲೇಖ: ಜನರು ಪರಿಪೂರ್ಣರಾಗಬೇಕೆಂಬ ನಿರೀಕ್ಷೆ ಮಾಡುವುದನ್ನು ನೀವು ನಿಲ್ಲಿಸಿದಾಗ, ಅವರು ಹೇಗಿದ್ದಾರೋ ಹಾಗೆ ಅವರನ್ನು ನೀವು ಇಷ್ಟಪಡುವಿರಿ-ಡೊನಾಲ್ಡ್ ಮಿಲ್ಲರ್.
ವೃಶ್ಚಿಕ: ಅ.24-ನ.22
ಇವರು ಯಾವಾಗಲೂ ಯಶಸ್ಸಿನೆಡೆಗೆ ಮುನ್ನಡೆಯುವ ಕಾರಣ ಇವರು ಜೀವನದಲ್ಲಿ ಯಶಸ್ಸನ್ನು ಪಡೆಯುವರು. ಇವರನ್ನು ವಿವರಿಸುವ ಒಳ್ಳೆಯ ಉಲ್ಲೇಖ: ``ಸ್ಮಶಾನದಲ್ಲಿ ಶ್ರೀಮಂತ ವ್ಯಕ್ತಿಯಾಗಿರುವುದು ನನಗೆ ಅಪ್ರಸ್ತುತ. ಇಂದು ರಾತ್ರಿ ಮಲಗುವ ಮೊದಲು ನಾವು ಏನಾದರೂ ಅಮೋಘವಾಗಿರುವುದನ್ನು ಮಾಡಿದ್ದೇವೆ...ಎನ್ನುವುದು ನನಗೆ ಪ್ರಸ್ತುತ''-ಸ್ಟೀವ್ ಜಾಬ್ಸ್
ಧನು: ನ.23-ಡಿ.22
ಪ್ರಯಾಣ ಮಾಡಲು ತುಂಬಾ ಇಷ್ಟಪಡುವ ರಾಶಿ ಎಂದರೆ ಅದು ಧನು. ಇವರನ್ನು ವಿವರಿಸಲು ಒಳ್ಳೆಯ ಉದ್ದರಣವೆಂದರೆ: ``ಪ್ರಯಾಣಿಸಿ: ನಿಮಗೆ ಎಷ್ಟು ಸಾಧ್ಯವೋ ಅಷ್ಟು, ಎಷ್ಟು ಮಾಡಬಹುದೋ ಅಷ್ಟು, ಎಷ್ಟು ದೂರವೋ ಅಷ್ಟು. ಜೀವನವೆನ್ನುವುದು ಕೇವಲ ಒಂದೇ ಸ್ಥಳದಲ್ಲಿ ಕೂತಿರಲು ಇರುವುದಲ್ಲ- ಅನಾಮಧೇಯ
ಮಕರ: ಡಿ.23-ಜ.20
ಶ್ರೀಮಂತರಾಗಬೇಕೆಂಬ ಅವರ ಬಯಕೆಯು ಇವರನ್ನು ಜೀವನದಲ್ಲಿ ತುಂಬಾ ಕಠಿಣವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವುದು. ಇವರಿಗೆ ಹೊಂದಿಕೊಳ್ಳುವ ಉಲ್ಲೇಖ: ``ನಿಮಗೆ ಜೀವನ ನೀಡಲಾಯಿತು;ಜೀವನದಲ್ಲಿ ಏನಾದರೂ ಸುಂದರವಾಗಿರುವುದನ್ನು ಹುಡುಕುವುದು ಅದು ನಿಮ್ಮ ಕರ್ತವ್ಯ(ಮತ್ತು ಮಾನವನಾಗಿ ಅದು ನಿಮ್ಮ ಅರ್ಹತೆ) ಅಷ್ಟು ಸ್ವಲ್ಪವೂ ಅಲ್ಲ-ಎಲಿಜಬೆತ್ ಗಿಲ್ಬರ್ಟ್
ಕುಂಭ: ಜ.21-ಫೆ.18
ಕುಂಭ ರಾಶಿಯವರು ತುಂಬಾ ಕ್ರಿಯಾತ್ಮಕ. ಅಸಹಾಯಕರಿಗೆ ಇವರು ಯಾವಾಗಲೂ ನೆರವಾಗುವರು. ಇವರನ್ನು ವಿವರಿಸುವ ಒಳ್ಳೆಯ ಉಲ್ಲೇಖವೆಂದರೆ: ಇತರರಿಗೆ ನೆರವಾಗುವುದು ಜೀವನದಲ್ಲಿ ನಮ್ಮ ಮುಖ್ಯ ಉದ್ದೇಶ ಮತ್ತು ನೀವು ಅವರಿಗೆ ನೆರವಾಗದೇ ಇದ್ದರೆ, ಅವರಿಗೆ ನೋವುಂಟು ಮಾಡಬೇಡಿ''-ದಲಾಯಿ ಲಾಮಾ
ಮೀನ: ಫೆ.19-ಮಾ.20
ಮೀನ ರಾಶಿಯವರು ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವರು ಮತ್ತು ಇತರರನ್ನು ವಿಧೇಯದಿಂದ ನೋಡುವರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅವರು ಬೇರೆಯವರಿಗೆ ನೆರವಾಗುವರು. ಇವರನ್ನು ವಿವರಿಸುವ ಒಳ್ಳೆಯ ಉದ್ದರಣ: ``ನೀವು ಕಲಿಯಬೇಕಾಗಿರುವ ಶ್ರೇಷ್ಠ ವಿಷಯವೆಂದರೆ ಅದು ಪ್ರೀತಿ ಮತ್ತು ಮರಳಿ ಪ್ರೀತಿ ಪಡೆಯುವುದು''-ಮೌಲಿನ್ ರೂಜ್