Just In
- 57 min ago ವೀಲ್ಚೇರ್ನಲ್ಲಿ ಮಾವನ ಹೆಣವಿಟ್ಟು ಬ್ಯಾಂಕ್ಗೆ ತಂದ ಸೊಸೆ..! ಲೋನ್ ಮಾಡಿಸುವಾಗ ಸಿಕ್ಕಿಬಿದ್ಲು..!
- 1 hr ago ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- 2 hrs ago ದುಬೈ ಪ್ರವಾಹದ ವೈರಲ್ ವೀಡಿಯೋಗಳು: ಒಂದೊಂದು ದೃಶ್ಯವೂ ಬದುಕಿನ ಪಾಠ ಹೇಳುತ್ತೆ
- 6 hrs ago ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Don't Miss
- News ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಕೋಟಿ ಒಡೆಯ: ಒಟ್ಟು ಆಸ್ತಿ ಎಷ್ಟು ಗೊತ್ತಾ?
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Technology ಬಜೆಟ್ ಬೆಲೆಗೆ ಲಭ್ಯವಿರುವ ಈ ಫೋನ್ಗಳ ಫೀಚರ್ಸ್ ತಿಳಿದ್ರೆ, ವಾವ್ ಅಂತೀರಾ!
- Finance ಅಂಬುಜಾ ಸಿಮೆಂಟ್ ಮೇಲೆ ಅದಾನಿ ಗ್ರೂಪ್ನಿಂದ 8,339 ಕೋಟಿ ರೂ. ಹೂಡಿಕೆ
- Movies ಸುಶಾಂತ್ ಸಿಂಗ್ ರಜಪೂತ್ ಸತ್ತಾಗ ಯಾರು ದು:ಖಿಸಲಿಲ್ಲ ; ಜನರಿಗೆ ಬೇಕಿದ್ದಿದ್ದು 'ಮಸಾಲೆಯುಕ್ತ ಗಾಸಿಪ್' ಅಷ್ಟೇ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಕ್ತಿಯ ಪರಾಕಾಷ್ಠೆಯನ್ನು ಪ್ರಕಟಿಸಲು ತನ್ನ ಮರ್ಮಾಂಗದಿಂದ ಟ್ರಕ್ ಎಳೆದ ಸಾಧು!
ಹಿಂದೆ ಸಾಧು ಋಷಿ ಮುನಿಗಳು ತಮ್ಮ ನೆಚ್ಚಿನ ಭಗವಂತನನ್ನು ಮೆಚ್ಚಿಸಲು ಕಠಿಣ ತಪಸ್ಸು ಆಚರಿಸುತ್ತಿದ್ದರಂತೆ. ಇಂದಿನ ದಿನಗಳಲ್ಲಿ ತಾವು ನಂಬಿರುವ ತತ್ವಗಳನ್ನು ಪ್ರಕಟಿಸಲು ಕೆಲವರು ಯಾವುದೇ ಮಟ್ಟಕ್ಕೆ ಹೋಗುತ್ತಾರೆ. ಕೆಲವರ್ಷಗಳ ಹಿಂದೆ ಕನಸಿನಲ್ಲಿ ಕಂಡ ದೇವಿಗೆ ಕಣ್ಣನ್ನೇ ಕೊಟ್ಟು ಕುರುಡಾಗಿದ್ದ ಭಕ್ತನ ಕಥೆ ಎಲ್ಲಾ ಪತ್ರಿಕೆಗಳಲ್ಲಿ ಬಂದಿತ್ತು.
ಇಂದಿನ ದಿನಗಳಲ್ಲಿ ಸಾಧುವೊಬ್ಬರು ತಮ್ಮ ದೈವಭಕ್ತಿಯ ಪರಾಕಾಷ್ಠೆಯನ್ನು ಪ್ರಕಟಿಸಲು ಜನನಾಂಗಕ್ಕೆ ಕಟ್ಟಿದ ಹಗ್ಗದಿಂದ ಟ್ರಕ್ ಒಂದನ್ನು ಎಲ್ಲರ ಮುಂದೆ ಎಳೆದು ತೋರಿಸಿದರಂತೆ. ಈ ನೈಜ ಘಟನೆ ನಡೆದದ್ದು ಉತ್ತರಪ್ರದೇಶದ ಅಲಾಹಾಬಾದ್ ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ. ದೇಶದ ವಿವಿಧ ಕಡೆಗಳಿಂದ ಸಾಧುಗಳು ಈ ಮೇಳಕ್ಕೆ ಆಗಮಿಸಿ ಸುಮಾರು ನಲವತ್ತೈದು ದಿನಗಳ ಕಾಲ ಭಗವಂತನನ್ನು ಆರಾಧಿಸುತ್ತಾರೆ. ಬನ್ನಿ, ಈ ಅಸಾಧಾರಣ ಕಥೆಯ ಬಗ್ಗೆ ಅರಿಯೋಣ....
ಮಾಘಮೇಳದಲ್ಲಿ ನಡೆದ ಅಸಾಧಾರಣ ಘಟನೆ
ಈ ಮೇಳ ಸುಮಾರು ನಲವತ್ತೈದು ದಿನಗಳ ಕಾಲ ನಡೆಯುತ್ತದೆ ಹಾಗೂ ಈ ಮೇಳದಲ್ಲಿ ಭಾಗವಹಿಸಲು ದೇಶದ ಎಲ್ಲಾ ಕಡೆಗಳಿಂದ ಅಗಾಧ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಪ್ರದೇಶದಲ್ಲಿ ಇವರು ಒಗ್ಗೂಡಿ ಈ ಎಲ್ಲಾ ದಿನಗಳಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಾರೆ.
ಈ ಮೇಳದಲ್ಲಿ ನಡೆಯುವ ವಿವಿಧ ಕ್ರಿಯೆಗಳು
ಈ ಸಾಧುಗಳು ತಮ್ಮನ್ನು ಪರಮಾತ್ಮನ ಅವತಾರ ಎಂದು ತೋರ್ಪಡಿಸಲು ತಮಗೆ ಒಲಿದ ವಿದ್ಯೆಯನ್ನು ಪ್ರಕಟಿಸಲು ಉತ್ಸುಕರಾಗಿರುತ್ತಾರೆ ಹಾಗೂ ಮೇಳದ ಸಮಯದಲ್ಲಿ ಆಗಮಿಸುವ ಸಹಸ್ರಾರು ಜನರ ಎದುರು ತಮ್ಮ ಪ್ರತಿಭೆಯನ್ನು ಪ್ರಕಟಿಸುತ್ತಾರೆ. ನದಿಯಲ್ಲಿ ನಿಶ್ಚಲರಾಗಿ ದಿನಗಟ್ಟಲೇ ನಿಂತು ಒಬ್ಬರು ವಿಶ್ವದಾಖಲೆ ನಿರ್ಮಿಸಿದರೆ ಗೋಡೆಗೆ ಆತುಕೊಂಡು ದಿನಗಟ್ಟಲೇ ಕುಳಿತು ಇನ್ನೊಬ್ಬರು ದಾಖಲೆ ನಿರ್ಮಿಸುತ್ತಾರೆ. ಎಲ್ಲಾ ವಿಚಿತ್ರ ಹಾಗೂ ಪ್ರಯೋಜನಕ್ಕೆ ಬಾರದ ಚಟುವಟಿಕೆಗಳು ಇಲ್ಲಿ ಪ್ರದರ್ಶಿಸಲ್ಪಡುತ್ತವೆ. ಇದರಲ್ಲಿ ಒಬ್ಬ ಸಾಧು ನಗ್ನನಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಕ್ರಿಯೆ ಮಾತ್ರ ಸಮಾಜಿಕ ಜಗತ್ತಿಗೆ ಒಗ್ಗದ ದಾಖಲೆಯಾಗಿದೆ.
ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ
ನಗ್ನನಾಗಿದ್ದ ಸಾಧು ತನಗೆ ಒಲಿದ ವಿಶೇಷ ಶಕ್ತಿಯನ್ನು ಪ್ರದರ್ಶಿಸಲು ಬಲವಾದ ಹಗ್ಗವನ್ನು ತನ್ನ ಮರ್ಮಾಂಗಕ್ಕೆ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಚಿಕ್ಕ ಪಿಕಪ್ ಟ್ರಕ್ ಒಂದಕ್ಕೆ ಕಟ್ಟಿ ಕೆಲವೊಮ್ಮೆ ಹಿಮ್ಮುಖನಾಗಿ, ಕೆಲವೊಮ್ಮೆ ಮುಮ್ಮುಖನಾಗಿ ನಡೆಯುತ್ತಾ ಟ್ರಕ್ ಚಲಿಸುವಂತೆ ಮಾಡುವಾಗ ಛಾಯಾಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ.
ಈತ ತನ್ನ ಮಾರ್ಮಾಂಗದಿಂದ ಟ್ರಕ್ ಎಳೆಯಲು ನಿಶ್ಚಯಿಸಿದ
ನಗ್ನನಾಗಿದ್ದ ಸಾಧು ತನಗೆ ಒಲಿದ ವಿಶೇಷ ಶಕ್ತಿಯನ್ನು ಪ್ರದರ್ಶಿಸಲು ಬಲವಾದ ಹಗ್ಗವನ್ನು ತನ್ನ ಮಾರ್ಮಾಂಗಕ್ಕೆ ಕಟ್ಟಿ ಹಗ್ಗದ ಇನ್ನೊಂದು ತುದಿಯನ್ನು ಚಿಕ್ಕ ಪಿಕಪ್ ಟ್ರಕ್ ಒಂದಕ್ಕೆ ಕಟ್ಟಿ ಕೆಲವೊಮ್ಮೆ ಹಿಮ್ಮುಖನಾಗಿ, ಕೆಲವೊಮ್ಮೆ ಮುಮ್ಮುಖನಾಗಿ ನಡೆಯುತ್ತಾ ಟ್ರಕ್ ಚಲಿಸುವಂತೆ ಮಾಡುವಾಗ ಛಾಯಾಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ.
ಹುರುದುಂಬಿಸಿದ ಜನತೆ
ಸಹಸ್ರಾರು ಜನರ ನಡುವೆ ನಡೆಯುತ್ತಿರುವ ಈ ಕ್ರಿಯೆ ಎಲ್ಲರ ಅಚ್ಚರಿಗೆ ಕಾಣವಾದರೂ ಎಲ್ಲರ ಆಕರ್ಷಣೆಯ ಕೇಂದ್ರವೂ ಆಗಿತ್ತು. ಈ ನಗ್ನ ಸಾಧು ಆ ಸಮಯದಲ್ಲಿ ಕೇವಲ ಮಣಿಗಳ ಸರ ಮತ್ತು ಪಾದುಕೆಗಳನ್ನು ಧರಿಸಿದ್ದ. ಹಾಗೂ ಕೈಗಳನ್ನು ಉಪಯೋಗಿಸದೆಯೇ ಹಗ್ಗವನ್ನು ಹಿಂದಕ್ಕೆ ಜಗ್ಗುತ್ತಾ ಟ್ರಕ್ ಮುಂದುವರೆಯುವಂತೆ ಮಾಡುತ್ತಿದ್ದ.
ಇಂತಹ ಕ್ರಿಯೆಗಳು ಇಲ್ಲಿ ಅಪರೂಪವಲ್ಲ
ಈ ಮೇಳದಲ್ಲಿ ಇಂತಹ ವಿಚಿತ್ರ ಹಾಗೂ ಮುಜುಗರ ತರಿಸುವ ನೂರಾರು ಚರ್ಯೆಗಳು ನಡೆಯುತ್ತಲೇ ಇರುತ್ತವೆ. 2014 ರಲ್ಲಿ ಭಾರವಾದ ಕಲ್ಲನ್ನು ಮರ್ಮಾಂಗದಿಂದ ಎತ್ತುತ್ತಿದ್ದ ವಿಡಿಯೋವೊಂದನ್ನು ಬಹಳ ಹೆಚ್ಚಿನ ಜನ ವೀಕ್ಷಿಸಿದ್ದರು.