Latest Updates
-
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ -
ಹುಷಾರ್.. ಚೈತ್ರ ನವರಾತ್ರಿ ಬಳಿಕ ಈ ರಾಶಿಯವರಿಗೆ ಸಾಲು ಸಾಲು ಕಷ್ಟ! ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿಯಿರಿ -
ಯುಗಾದಿಗೆ ಈ 4 ಖಾದ್ಯಗಳನ್ನು ಮಾಡಲೇಬೇಕು! ನಿಮ್ಮ ಹಬ್ಬ ಇನ್ನಷ್ಟು ಸ್ಪೆಷಲ್.. ಸಂಪೂರ್ಣ ಲಿಸ್ಟ್ ಇಲ್ಲಿದೆ -
ಯುಗಾದಿ ದಿನ.. ಪ್ರೇಮ ಜೀವನದಲ್ಲಿ ಯಾರಿಗೆ ಬೇವು? ಯಾರಿಗೆ ಬೆಲ್ಲ? -
March 19 Horoscope: ಯುಗಾದಿ ದಿನ ಯಾರಿಗೆ ಶುಭದಿನ? -
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು
ಈ ಊರಿನಲ್ಲಿ ಮದುವೆಯಾದ ನಂತರ ವಧು ಐದು ದಿನಗಳ ಕಾಲ ನಗ್ನವಾಗಿರಬೇಕು!!
ಕೆಲವೊಂದು ಧರ್ಮ, ಜಾತಿ ಹಾಗೂ ಜನಾಂಗಕ್ಕೆ ಅನುಗುಣವಾಗಿ ವಿಚಿತ್ರ ಆಚರಣೆಗಳನ್ನು ನಾವು ನೋಡುತ್ತೇವೆ. ಇದರಲ್ಲಿ ಪ್ರಮುಖವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಯು ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಈ ಲೇಖನದಲ್ಲಿ ಒಂದು ವಿಚಿತ್ರ ಆಚರಣೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಇಲ್ಲಿ ವಿವಾಹಿತ ಮಹಿಳೆಯು ಐದು ದಿನಗಳ ಕಾಲ ನಗ್ನವಾಗಿರಬೇಕು ಮತ್ತು ಯಾವುದೇ ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕದಿಂದ ಆಕೆ ದೂರವಿರಬೇಕು. ಇದನ್ನು ಹೊರತುಪಡಿಸಿ ಭಾರತದಲ್ಲಿ ವಿವಾಹದ ವೇಳೆ ಆಚರಣೆಯಲ್ಲಿರುವಂತಹ ಕೆಲವೊಂದು ವಿಚಿತ್ರ ಆಚರಣೆಗಳ ಬಗ್ಗೆ ನೀವು ತಿಳಿಯಿರಿ....

ಮದುವೆ ಬಳಿಕ ಮಹಿಳೆಯು ಐದು ದಿನ ನಗ್ನವಾಗಿರಬೇಕು
ಹಿಮಾಚಲ ಪ್ರದೇಶದ ಜನರು ತುಂಬಾ ದೀರ್ಘಕಾಲದಿಂದ ಈ ವಿಚಿತ್ರ ಆಚರಣೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ವಧು ಐದು ದಿನಗಳ ಕಾಲ ನಗ್ನವಾಗಿರಬೇಕೆಂಬ ಕಠಿಣ ನಿಯಮವಿದೆ. ಈ ವೇಳೆ ಮಹಿಳೆಯರು ಪತಿ ಜತೆಗೆ ದೈಹಿಕ ಸಂಪರ್ಕದಲ್ಲಿ ಪಾಲ್ಗೊಳ್ಳುವಂತಿಲ್ಲ.

ವಧುವಿನ ಕಾಲು ತೊಳೆದ ನೀರು ಅಥವಾ ಹಾಲು ಕುಡಿಯುವುದು!
ಗುಜರಾತ್ ನಲ್ಲಿ ಈ ವಿಚಿತ್ರ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವಧುವಿನ ಮಾವ ಹಾಲು ಮತ್ತು ಜೇನುತುಪ್ಪದಿಂದ ವಧುವಿನ ಕಾಲನ್ನು ತೊಳೆಯುವರು. ಈ ವಿಚಿತ್ರ ಆಚರಣೆಯ ವಿಶೇಷವೆಂದರೆ ಈ ನೀರು ಅಥವಾ ಹಾಲನ್ನು ಆತ ಕುಡಿಯಬೇಕು.

ವಧು ಸರ್ಕಸ್ ಮಾಡಬೇಕು!
ಬಿಹಾರದ ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯವು ಸಾಮಾನ್ಯವಾಗಿದೆ. ಇಲ್ಲಿ ವಧು ತಲೆ ಮೇಲೆ ಮಣ್ಣಿನ ಮಡಕೆಯನ್ನಿಟ್ಟು ಅದನ್ನು ಬ್ಯಾಲೆನ್ಸ್ ಮಾಡಬೇಕು. ಅತ್ತೆಯು ಈ ಮಡಕೆಗಳನ್ನು ವಧುವಿನ ತಲೆ ಮೇಲಿಡುವರು. ಹಿರಿಯರ ಆಶೀರ್ವಾದ ಪಡೆಯಲು ವಧು ಕೆಳಗೆ ಬಗ್ಗಬೇಕು. ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವಳು ಎನ್ನುವುದೇ ಈ ಆಚರಣೆಯ ಉದ್ದೇಶ.

ಮನಸ್ಸು ಬದಲಾಯಿಸುವುದು
ಈ ಸಂಪ್ರದಾಯವು ತಮಿಳುನಾಡಿನ ಬ್ರಾಹ್ಮಣರಲ್ಲಿದೆ. ಈ ತಮಾಷೆಯ ಸಂಪ್ರದಾಯದಲ್ಲಿ ವರನು ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿ ಮದುವೆಯಾಗಲು ನಿರಾಕರಿಸುತ್ತಾನೆ. ಇದರ ಬಳಿಕ ವಧುವಿನ ಸೋದರರು ಅಥವಾ ತಂದೆ ಆತನನ್ನು ಸನ್ಯಾಸಿಯಾಗುವುದು ಬೇಡ, ನೀವು ಸಂಸಾರಿಯಾಗು ಎಂದು ಮನವೊಲಿಸುವರು.

ವರನ ತಾಯಿ ಮದುವೆಗೆ ಹಾಜರಾಗದಿರುವುದು...
ಬಂಗಾಳದಲ್ಲಿ ಆಚರಣೆಯಲ್ಲಿರುವ ವಿಚಿತ್ರ ಸಂಪ್ರದಾಯದ ಪ್ರಕಾರ ವರನ ತಾಯಿ ಮದುವೆ ಸಂದರ್ಭದಲ್ಲಿ ಹಾಜರಾಗಲು ಅನುಮತಿಯಿಲ್ಲ. ಮಗನ ಸಂತೋಷದ ಜೀವನಕ್ಕಾಗಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

ಓಡಿಹೋಗುವ ಸಂಪ್ರದಾಯ
ಕೆಲವೊಂದು ಆದಿವಾಸಿ ಸಮುದಾಯಗಳಲ್ಲಿ ಈ ಸಂಪ್ರದಾಯವು ಆಚರಣೆಯಲ್ಲಿದೆ. ನವವಿವಾಹಿತ ವಧು ಒಂದು ವರ್ಷದ ಕಾಲ ತುಂಬಾ ನಿಗೂಢ ಜಾಗದಲ್ಲಿ ವಾಸಿಸಬೇಕು. ಈ ವೇಳೆ ಆಕೆ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಮತ್ತು ಹೊರಗಡೆ ಹೋಗುವಂತಿಲ್ಲ. ವರ್ಷದ ಬಳಿಕ ಸಮುದಾಯದ ಹಿರಿಯರು ಮದುವೆಯನ್ನು ಅನುಮೋದಿಸುವರು. ಈ ವೇಳೆ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ.



Click it and Unblock the Notifications











