Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈ ಊರಿನಲ್ಲಿ ಮದುವೆಯಾದ ನಂತರ ವಧು ಐದು ದಿನಗಳ ಕಾಲ ನಗ್ನವಾಗಿರಬೇಕು!!
ಕೆಲವೊಂದು ಧರ್ಮ, ಜಾತಿ ಹಾಗೂ ಜನಾಂಗಕ್ಕೆ ಅನುಗುಣವಾಗಿ ವಿಚಿತ್ರ ಆಚರಣೆಗಳನ್ನು ನಾವು ನೋಡುತ್ತೇವೆ. ಇದರಲ್ಲಿ ಪ್ರಮುಖವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಯು ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಈ ಲೇಖನದಲ್ಲಿ ಒಂದು ವಿಚಿತ್ರ ಆಚರಣೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಇಲ್ಲಿ ವಿವಾಹಿತ ಮಹಿಳೆಯು ಐದು ದಿನಗಳ ಕಾಲ ನಗ್ನವಾಗಿರಬೇಕು ಮತ್ತು ಯಾವುದೇ ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕದಿಂದ ಆಕೆ ದೂರವಿರಬೇಕು. ಇದನ್ನು ಹೊರತುಪಡಿಸಿ ಭಾರತದಲ್ಲಿ ವಿವಾಹದ ವೇಳೆ ಆಚರಣೆಯಲ್ಲಿರುವಂತಹ ಕೆಲವೊಂದು ವಿಚಿತ್ರ ಆಚರಣೆಗಳ ಬಗ್ಗೆ ನೀವು ತಿಳಿಯಿರಿ....

ಮದುವೆ ಬಳಿಕ ಮಹಿಳೆಯು ಐದು ದಿನ ನಗ್ನವಾಗಿರಬೇಕು
ಹಿಮಾಚಲ ಪ್ರದೇಶದ ಜನರು ತುಂಬಾ ದೀರ್ಘಕಾಲದಿಂದ ಈ ವಿಚಿತ್ರ ಆಚರಣೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ವಧು ಐದು ದಿನಗಳ ಕಾಲ ನಗ್ನವಾಗಿರಬೇಕೆಂಬ ಕಠಿಣ ನಿಯಮವಿದೆ. ಈ ವೇಳೆ ಮಹಿಳೆಯರು ಪತಿ ಜತೆಗೆ ದೈಹಿಕ ಸಂಪರ್ಕದಲ್ಲಿ ಪಾಲ್ಗೊಳ್ಳುವಂತಿಲ್ಲ.

ವಧುವಿನ ಕಾಲು ತೊಳೆದ ನೀರು ಅಥವಾ ಹಾಲು ಕುಡಿಯುವುದು!
ಗುಜರಾತ್ ನಲ್ಲಿ ಈ ವಿಚಿತ್ರ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವಧುವಿನ ಮಾವ ಹಾಲು ಮತ್ತು ಜೇನುತುಪ್ಪದಿಂದ ವಧುವಿನ ಕಾಲನ್ನು ತೊಳೆಯುವರು. ಈ ವಿಚಿತ್ರ ಆಚರಣೆಯ ವಿಶೇಷವೆಂದರೆ ಈ ನೀರು ಅಥವಾ ಹಾಲನ್ನು ಆತ ಕುಡಿಯಬೇಕು.

ವಧು ಸರ್ಕಸ್ ಮಾಡಬೇಕು!
ಬಿಹಾರದ ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯವು ಸಾಮಾನ್ಯವಾಗಿದೆ. ಇಲ್ಲಿ ವಧು ತಲೆ ಮೇಲೆ ಮಣ್ಣಿನ ಮಡಕೆಯನ್ನಿಟ್ಟು ಅದನ್ನು ಬ್ಯಾಲೆನ್ಸ್ ಮಾಡಬೇಕು. ಅತ್ತೆಯು ಈ ಮಡಕೆಗಳನ್ನು ವಧುವಿನ ತಲೆ ಮೇಲಿಡುವರು. ಹಿರಿಯರ ಆಶೀರ್ವಾದ ಪಡೆಯಲು ವಧು ಕೆಳಗೆ ಬಗ್ಗಬೇಕು. ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವಳು ಎನ್ನುವುದೇ ಈ ಆಚರಣೆಯ ಉದ್ದೇಶ.

ಮನಸ್ಸು ಬದಲಾಯಿಸುವುದು
ಈ ಸಂಪ್ರದಾಯವು ತಮಿಳುನಾಡಿನ ಬ್ರಾಹ್ಮಣರಲ್ಲಿದೆ. ಈ ತಮಾಷೆಯ ಸಂಪ್ರದಾಯದಲ್ಲಿ ವರನು ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿ ಮದುವೆಯಾಗಲು ನಿರಾಕರಿಸುತ್ತಾನೆ. ಇದರ ಬಳಿಕ ವಧುವಿನ ಸೋದರರು ಅಥವಾ ತಂದೆ ಆತನನ್ನು ಸನ್ಯಾಸಿಯಾಗುವುದು ಬೇಡ, ನೀವು ಸಂಸಾರಿಯಾಗು ಎಂದು ಮನವೊಲಿಸುವರು.

ವರನ ತಾಯಿ ಮದುವೆಗೆ ಹಾಜರಾಗದಿರುವುದು...
ಬಂಗಾಳದಲ್ಲಿ ಆಚರಣೆಯಲ್ಲಿರುವ ವಿಚಿತ್ರ ಸಂಪ್ರದಾಯದ ಪ್ರಕಾರ ವರನ ತಾಯಿ ಮದುವೆ ಸಂದರ್ಭದಲ್ಲಿ ಹಾಜರಾಗಲು ಅನುಮತಿಯಿಲ್ಲ. ಮಗನ ಸಂತೋಷದ ಜೀವನಕ್ಕಾಗಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

ಓಡಿಹೋಗುವ ಸಂಪ್ರದಾಯ
ಕೆಲವೊಂದು ಆದಿವಾಸಿ ಸಮುದಾಯಗಳಲ್ಲಿ ಈ ಸಂಪ್ರದಾಯವು ಆಚರಣೆಯಲ್ಲಿದೆ. ನವವಿವಾಹಿತ ವಧು ಒಂದು ವರ್ಷದ ಕಾಲ ತುಂಬಾ ನಿಗೂಢ ಜಾಗದಲ್ಲಿ ವಾಸಿಸಬೇಕು. ಈ ವೇಳೆ ಆಕೆ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಮತ್ತು ಹೊರಗಡೆ ಹೋಗುವಂತಿಲ್ಲ. ವರ್ಷದ ಬಳಿಕ ಸಮುದಾಯದ ಹಿರಿಯರು ಮದುವೆಯನ್ನು ಅನುಮೋದಿಸುವರು. ಈ ವೇಳೆ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ.



Click it and Unblock the Notifications