Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ ಊರಿನಲ್ಲಿ ಮದುವೆಯಾದ ನಂತರ ವಧು ಐದು ದಿನಗಳ ಕಾಲ ನಗ್ನವಾಗಿರಬೇಕು!!
ಕೆಲವೊಂದು ಧರ್ಮ, ಜಾತಿ ಹಾಗೂ ಜನಾಂಗಕ್ಕೆ ಅನುಗುಣವಾಗಿ ವಿಚಿತ್ರ ಆಚರಣೆಗಳನ್ನು ನಾವು ನೋಡುತ್ತೇವೆ. ಇದರಲ್ಲಿ ಪ್ರಮುಖವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿಯು ಕೆಲವೊಂದು ಸಂಪ್ರದಾಯಗಳನ್ನು ಪಾಲಿಸಬೇಕಾಗುತ್ತದೆ. ಈ ಲೇಖನದಲ್ಲಿ ಒಂದು ವಿಚಿತ್ರ ಆಚರಣೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಇಲ್ಲಿ ವಿವಾಹಿತ ಮಹಿಳೆಯು ಐದು ದಿನಗಳ ಕಾಲ ನಗ್ನವಾಗಿರಬೇಕು ಮತ್ತು ಯಾವುದೇ ಲೈಂಗಿಕ ಚಟುವಟಿಕೆ ಅಥವಾ ದೈಹಿಕ ಸಂಪರ್ಕದಿಂದ ಆಕೆ ದೂರವಿರಬೇಕು. ಇದನ್ನು ಹೊರತುಪಡಿಸಿ ಭಾರತದಲ್ಲಿ ವಿವಾಹದ ವೇಳೆ ಆಚರಣೆಯಲ್ಲಿರುವಂತಹ ಕೆಲವೊಂದು ವಿಚಿತ್ರ ಆಚರಣೆಗಳ ಬಗ್ಗೆ ನೀವು ತಿಳಿಯಿರಿ....

ಮದುವೆ ಬಳಿಕ ಮಹಿಳೆಯು ಐದು ದಿನ ನಗ್ನವಾಗಿರಬೇಕು
ಹಿಮಾಚಲ ಪ್ರದೇಶದ ಜನರು ತುಂಬಾ ದೀರ್ಘಕಾಲದಿಂದ ಈ ವಿಚಿತ್ರ ಆಚರಣೆಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ವಧು ಐದು ದಿನಗಳ ಕಾಲ ನಗ್ನವಾಗಿರಬೇಕೆಂಬ ಕಠಿಣ ನಿಯಮವಿದೆ. ಈ ವೇಳೆ ಮಹಿಳೆಯರು ಪತಿ ಜತೆಗೆ ದೈಹಿಕ ಸಂಪರ್ಕದಲ್ಲಿ ಪಾಲ್ಗೊಳ್ಳುವಂತಿಲ್ಲ.

ವಧುವಿನ ಕಾಲು ತೊಳೆದ ನೀರು ಅಥವಾ ಹಾಲು ಕುಡಿಯುವುದು!
ಗುಜರಾತ್ ನಲ್ಲಿ ಈ ವಿಚಿತ್ರ ಸಂಪ್ರದಾಯವನ್ನು ಆಚರಿಸಲಾಗುತ್ತದೆ. ವಧುವಿನ ಮಾವ ಹಾಲು ಮತ್ತು ಜೇನುತುಪ್ಪದಿಂದ ವಧುವಿನ ಕಾಲನ್ನು ತೊಳೆಯುವರು. ಈ ವಿಚಿತ್ರ ಆಚರಣೆಯ ವಿಶೇಷವೆಂದರೆ ಈ ನೀರು ಅಥವಾ ಹಾಲನ್ನು ಆತ ಕುಡಿಯಬೇಕು.

ವಧು ಸರ್ಕಸ್ ಮಾಡಬೇಕು!
ಬಿಹಾರದ ಹೆಚ್ಚಿನ ಕಡೆಗಳಲ್ಲಿ ಈ ಸಂಪ್ರದಾಯವು ಸಾಮಾನ್ಯವಾಗಿದೆ. ಇಲ್ಲಿ ವಧು ತಲೆ ಮೇಲೆ ಮಣ್ಣಿನ ಮಡಕೆಯನ್ನಿಟ್ಟು ಅದನ್ನು ಬ್ಯಾಲೆನ್ಸ್ ಮಾಡಬೇಕು. ಅತ್ತೆಯು ಈ ಮಡಕೆಗಳನ್ನು ವಧುವಿನ ತಲೆ ಮೇಲಿಡುವರು. ಹಿರಿಯರ ಆಶೀರ್ವಾದ ಪಡೆಯಲು ವಧು ಕೆಳಗೆ ಬಗ್ಗಬೇಕು. ಮನೆಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವಳು ಎನ್ನುವುದೇ ಈ ಆಚರಣೆಯ ಉದ್ದೇಶ.

ಮನಸ್ಸು ಬದಲಾಯಿಸುವುದು
ಈ ಸಂಪ್ರದಾಯವು ತಮಿಳುನಾಡಿನ ಬ್ರಾಹ್ಮಣರಲ್ಲಿದೆ. ಈ ತಮಾಷೆಯ ಸಂಪ್ರದಾಯದಲ್ಲಿ ವರನು ಕೊನೆಯ ಕ್ಷಣದಲ್ಲಿ ತನ್ನ ಮನಸ್ಸು ಬದಲಾಯಿಸಿ ಮದುವೆಯಾಗಲು ನಿರಾಕರಿಸುತ್ತಾನೆ. ಇದರ ಬಳಿಕ ವಧುವಿನ ಸೋದರರು ಅಥವಾ ತಂದೆ ಆತನನ್ನು ಸನ್ಯಾಸಿಯಾಗುವುದು ಬೇಡ, ನೀವು ಸಂಸಾರಿಯಾಗು ಎಂದು ಮನವೊಲಿಸುವರು.

ವರನ ತಾಯಿ ಮದುವೆಗೆ ಹಾಜರಾಗದಿರುವುದು...
ಬಂಗಾಳದಲ್ಲಿ ಆಚರಣೆಯಲ್ಲಿರುವ ವಿಚಿತ್ರ ಸಂಪ್ರದಾಯದ ಪ್ರಕಾರ ವರನ ತಾಯಿ ಮದುವೆ ಸಂದರ್ಭದಲ್ಲಿ ಹಾಜರಾಗಲು ಅನುಮತಿಯಿಲ್ಲ. ಮಗನ ಸಂತೋಷದ ಜೀವನಕ್ಕಾಗಿ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.

ಓಡಿಹೋಗುವ ಸಂಪ್ರದಾಯ
ಕೆಲವೊಂದು ಆದಿವಾಸಿ ಸಮುದಾಯಗಳಲ್ಲಿ ಈ ಸಂಪ್ರದಾಯವು ಆಚರಣೆಯಲ್ಲಿದೆ. ನವವಿವಾಹಿತ ವಧು ಒಂದು ವರ್ಷದ ಕಾಲ ತುಂಬಾ ನಿಗೂಢ ಜಾಗದಲ್ಲಿ ವಾಸಿಸಬೇಕು. ಈ ವೇಳೆ ಆಕೆ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಮತ್ತು ಹೊರಗಡೆ ಹೋಗುವಂತಿಲ್ಲ. ವರ್ಷದ ಬಳಿಕ ಸಮುದಾಯದ ಹಿರಿಯರು ಮದುವೆಯನ್ನು ಅನುಮೋದಿಸುವರು. ಈ ವೇಳೆ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ.



Click it and Unblock the Notifications











