Latest Updates
-
ಬಿಸಿಲಿನ ತಾಪಕ್ಕೆ ದಂಪತಿಗಳ ನಡುವೆ ಜಗಳವೇ? ಸಂಬಂಧ ಗಟ್ಟಿಯಾಗಿರಲು ಇಲ್ಲಿವೆ ನೋಡಿ ಸರಳ ಉಪಾಯಗಳು -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ವಿದ್ಯುತ್ ಬಿಲ್ ಇಲ್ಲದೆ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ!
ಕೆಲಸದ ಮೊದಲ ದಿನ 14 ಮೈಲಿ ನಡೆದ ವ್ಯಕ್ತಿಗೆ ಕಂಪೆನಿ ಸಿಇಓನಿಂದ ಕಾರು ಉಡುಗೊರೆ!
ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯೂ ಯಾವತ್ತೂ ಜೀವನದಲ್ಲಿ ನಿಮಗೆ ಒಳ್ಳೆಯದನ್ನು ಮಾಡುವುದು. ಇದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಪ್ರಾಮಾಣಿಕವಾಗಿರಬೇಕು. ಇಂತಹ ಒಂದು ಪ್ರೇರಣಾತ್ಮಕ ಕಥೆಯ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.
ತನ್ನ ಪ್ರಾಮಾಣಿಕತೆ ಹಾಗೂ ಬದ್ಧತೆಗಾಗಿ ಈ ಯುವಕನಿಗೆ ಕಂಪೆನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ. ಇದು ಒಬ್ಬ ವ್ಯಕ್ತಿಯು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲೂ ತನ್ನ ಬದ್ಧತೆ ಮತ್ತು ಸರಿಯಾದ ಕೆಲಸ ಮಾಡಿರುವ ಪ್ರತಿಫಲ. ವಾಲ್ಟರ್ ಕಾರ್ ಎನ್ನುವಾತನೇ ಈ ಕಥೆಯ ಸ್ಫೂರ್ತಿ.

ಈತ ಹೊಸ ಉದ್ಯೋಗಕ್ಕೆ ಮರುದಿನ ಸೇರಬೇಕಿತ್ತು. ಆದರೆ ಆತನ ಕಾರು ಕೆಟ್ಟಿರುವುದು ತಿಳಿದುಬಂತು. ಇದನ್ನು ಸರಿಮಾಡಲು ಪ್ರಯತ್ನಿಸಿದ. ಆದರೆ ಕಾರು ಸ್ಟಾರ್ಟ್ ಆಗಲೇ ಇಲ್ಲ. ಮೊದಲ ದಿನವೇ ರಜೆ ಮಾಡುವ ಬದಲು ಆತ ಕಚೇರಿಗೆ ನಡೆದುಕೊಂಡೇ ಹೋಗುವ ನಿರ್ಧಾರಕ್ಕೆ ಬಂದ. ಆತನ ಮನೆಯಿಂದ ಕಚೇರಿಯು ಸುಮಾರು14 ಮೈಲಿ ದೂರದಲ್ಲಿತ್ತು. ನಾಲ್ಕು ಗಂಟೆ ನಿದ್ರೆ ಮಾಡಿಕೊಂಡ ಬಳಿಕ ಆತ ತನ್ನ ಕಚೇರಿಯತ್ತ ನಡೆಯಲು ಆರಂಭಿಸಿದ. ವಾಲ್ಟರ್ ಅಲಬಾಮದ ಹೋಮ್ ವುಡ್ ನಲ್ಲಿರುವ ತನ್ನ ಮನೆಯಿಂದ ಅಲಬಾಮದ ಪೆಲ್ಹಮ್ ಗೆ ನಡೆಯಲು ಆರಂಭಿಸಿದ. ಅದು ಕೂಡ ಮಧ್ಯರಾತ್ರಿ ವೇಳೆಗೆ....
ವಾಲ್ಟರ್ ಸುಮಾರು 14 ಮೈಲಿ ಕ್ರಮಿಸಿದ ಬಳಿಕ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪೊಲೀಸರು ಆತನನ್ನು ಹಿಡಿದರು. ವರದಿಯ ಪ್ರಕಾರ ವಾಲ್ಟರ್ ಸುದ್ದಿ ಕೇಳಿದ ಪೊಲೀಸರು ಆತನನ್ನು ಕಚೇರಿಗೆ ತಮ್ಮ ವಾಹನದಲ್ಲಿ ಬಿಟ್ಟರು ಮತ್ತು ಆತನ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತಿನಾ ಚಂಡಮಾರುತದಿಂದಾಗಿ ವಾಲ್ಟರ್ ಕುಟುಂಬವು ಮನೆ ಕಳೆದುಕೊಂಡ ಬಳಿಕ ಬರ್ಮಿಗ್ ಹ್ಯಾಮ್ ಗೆ ಸ್ಥಳಾಂತರಗೊಂಡಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಟರ್ ಬಗ್ಗೆ ಪೋಸ್ಟ್ ಗಳು ಹರಿದಾಡಿದವು ಮತ್ತು ಆತನ ಬದ್ಧತೆಯನ್ನು ನೋಡಿ ಕಂಪೆನಿಯ ಮಾಲಕರು ಮತ್ತು ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಂಪೆನಿಯ ಸಿಇಒ ಇದರ ಬಗ್ಗೆ ತಿಳಿದು ವಾಲ್ಟರ್ ಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಇದರಿಂದ ಆತ ಯಾವುದೇ ತೊಂದರೆಯಿಲ್ಲದೆ ಕಚೇರಿಗೆ ಬರುವಂತೆ ಆಗುವುದು. ಇದರ ಬಗ್ಗೆ ನಿಮ್ಮ ನಿಲುವು ಏನು? ಕೆಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications