Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆತ ಮಲಬದ್ಧತೆ ಸಮಸ್ಯೆಗೆ ಬೇಸತ್ತು ಗುದದ್ವಾರದೊಳಗೆ ಬದನೆಕಾಯಿ ಪ್ರಯೋಗಿಸಿದ!
ಚಿತ್ರವಿಚಿತ್ರವಾಗಿರುವಂತಹ ಘಟನೆಗಳು ಹೆಚ್ಚಾಗಿ ಚೀನಾದಲ್ಲಿ ನಡೆಯುತ್ತಲಿರುವುದು ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ತುಂಬಾ ಕುತೂಹಲಕಾರಿ ಹಾಗೂ ವಿಚಿತ್ರ ಸುದ್ದಿಗಳನ್ನು ನೀಡುವಲ್ಲಿ ಚೀನಾವು ಎಂದೂ ನಮಗೆ ನಿರಾಶೆ ಮಾಡಿಲ್ಲ. ಈ ಲೇಖನದಲ್ಲಿ ನಾವಿಂದು ನಿಮಗೆ ಇದೇ ರೀತಿಯ ವಿಚಿತ್ರ ಘಟನೆ ಬಗ್ಗೆ ತಿಳಿಸಿಕೊಡಲಿದ್ದೇವೆ. ಪುರುಷರ ಮನಸ್ಸನ್ನು ಕದಿಯಬೇಕಾದರೆ ಅವರ ಹೊಟ್ಟೆಯನ್ನು ಸಂತೃಪ್ತಿಗೊಳಿಸಬೇಕೆಂಬ ಮಾತಿದೆ.
ಆದರೆ ಹೊಟ್ಟೆ ತುಂಬಾ ತಿಂದ ಬಳಿಕ ಹಲವಾರು ರೀತಿಯ ಸಮಸ್ಯೆಗಳು ಬರುವುದು ಇದೆ. ಅದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಾರೆ. ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿ ಇದರ ನಿವಾರಣೆಗಾಗಿ ಸುಮಾರು 30 ಸೆ.ಮೀ. ಉದ್ದದ ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿದ ವಿಚಿತ್ರ ಘಟನೆ ನಡೆದಿದೆ. 30 ಸೆ.ಮೀ. ಇದ್ದ ಬದನೆಕಾಯಿಯನ್ನು ಸಂಪೂರ್ಣವಾಗಿ ಗುದದ್ವಾರದಿಂದ ಒಳಗೆ ಹಾಕಲಾಗಿತ್ತು. ಇದು ಆತನ ಶ್ವಾಸಕೋಶಕ್ಕೆ ತಾಗುತ್ತಲಿತ್ತು. ಈ ಘಟನೆ ಬಗ್ಗೆ ಇನ್ನಷ್ಟು ತಿಳಿಯಲು ನೀವು ಓದುವುದನ್ನು ಮುಂದುವರಿಸಿ....

ಆತ ಹಲವಾರು ಮನೆಮದ್ದು ಪ್ರಯೋಗಿಸಿದ
ಮಲಬದ್ಧತೆಗೆ ತುಂಬಾ ವಿಚಿತ್ರ ಮದ್ದನ್ನು ಪ್ರಯೋಗಿಸಿ ಆಸ್ಪತ್ರೆ ಸೇರಿದ ಬಳಿಕ ಮಾಧ್ಯಮಗಳು ಇದನ್ನು ಸುದ್ದಿ ಮಾಡಿರುವದರಿಂದ ಆತ ರೊಚ್ಚಿಗೆದ್ದಿದ್ದ.

ಆತ ಯಾರು ನಿರೀಕ್ಷಿಸದನ್ನು ಮಾಡಿದ!
ಮಲಬದ್ಧತೆಯಿಂದ ನಿವಾರಣೆ ಪಡೆಯಲು ತುಂಬಾ ವಿಚಿತ್ರವಾಗಿರುವ ಕಲ್ಪನೆ ಮಾಡಿಕೊಂಡ ವ್ಯಕ್ತಿಯು ತನ್ನ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಲು ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿ ಪರಿಹಾರ ಬಯಸಿದ.

ಕಥೆ ಮುಂದುವರಿಯಿತು!
ಗುದದ್ವಾರದೊಳಗೆ ಬದನೆಕಾಯಿ ತುರುಕಿಸುವುದು ತುಂಬಾ ವಿಚಿತ್ರ ವಿಧಾನ ಮತ್ತು 30 ಸೆ.ಮೀ. ಉದ್ದರ ಬದನೆಕಾಯಿ ಬಳಸುವುದು ದೊಡ್ಡ ಮೂರ್ಖತನ. ಬದನೆಕಾಯಿ ಆತನ ದೇಹದಲ್ಲಿ ಆಚೀಚೆ ಹೋಗುತ್ತಲಿದ್ದದ್ದು ಕೂಡ ಅಚ್ಚರಿಯಲ್ಲ.

ಹೊಟ್ಟೆಯೊಳಗೆ ಗಾಯ ಮಾಡಿಕೊಂಡ
ಬದನೆಕಾಯಿಯನ್ನು ಗುದದ್ವಾರದಿಂದ ಒಳಗೆ ತುರುಕಿಸಿಕೊಂಡರೂ ಆತ ವೈದ್ಯರಲ್ಲಿಗೆ ಹೋಗಲಿಲ್ಲ. ಇದರಿಂದ ತನ್ನ ಮಲಬದ್ಧತೆ ನಿವಾರಣೆಯಾಗಬಹುದು ಎಂದು ಯೋಚಿಸಿದ. ಆದರೆ ಎರಡು ದಿನಗಳ ಬಳಿಕ ಆತನಿಗೆ ತನ್ನ ಮಹಾನ್ ಕಾರ್ಯದ ಬಗ್ಗೆ ಅರ್ಥವಾಗಲು ಆರಂಭವಾಯಿತು. ಆತ ತಕ್ಷಣ ವೈದ್ಯರನ್ನು ಭೇಟಿಯಾಗಿ ತಾನು ಮಾಡಿರುವುದೆಲ್ಲವನ್ನೂ ತಿಳಿಸಿದ.

ಪರೀಕ್ಷೆ ವೇಳೆ
ವೈದ್ಯರು ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಬದನೆಕಾಯಿಯು ಶ್ವಾಸಕೋಶಕ್ಕೆ ತಾಗುತ್ತಲಿತ್ತು ಮತ್ತು ಆತನ ಕರುಳಿಗೆ ಕೂಡ ಇದರಿಂದ ತೊಂದರೆಯಾಗಿತ್ತು.

ಶಸ್ತ್ರಚಿಕಿತ್ಸೆ ನಡೆಸಲಾಯಿತು
ಸಮಯ ವೆಚ್ಚ ಮಾಡದೆ ಆತನ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯೊಳಗಿದ್ದ ಬದನೆಕಾಯಿ ಹೊರತೆಗೆಯಲಾಯಿತು ಮತ್ತು ಬದನೆಕಾಯಿಯು ಸುಮಾರು 30 ಸೆ.ಮೀ. ಉದ್ದವಿತ್ತೆಂದು ವೈದ್ಯರು ಲೆಕ್ಕ ಹಾಕಿದ್ದಾರೆ. ಈಗ ಆ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ.

ಅತಿಯಾದ ಔಷಧಿ
ವೈದ್ಯರ ಪ್ರಕಾರ ಇಂತಹ ಪ್ರಯೋಗಗಳನ್ನು ಮಾಡುವವರಲ್ಲಿ ಹೆಚ್ಚಾಗಿ 30-50 ವರ್ಷದ ಪುರುಷರು ಹೆಚ್ಚಾಗಿರುವರು. ಇವರು ಹೊರಗಿನ ಸುಖ ಪಡೆಯಲು ಬಯಸುವರು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಪ್ಪಾಗಿದ್ದರೆ ನಮಗೆ ತಿದ್ದಲು ನೀವು ನೆರವಾಗಿ. ಆದರೆ ಮಲಬದ್ಧತೆಗೆ ಇಂತಹ ಪ್ರಯೋಗ ಖಂಡಿತವಾಗಿಯೂ ಮಾಡಲು ಹೋಗಬೇಡಿ. ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.



Click it and Unblock the Notifications











