Just In
Don't Miss
- News Neha Hiremath: ನೇಹಾ ಹಿರೇಮಠ್ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಲು ವಿಎಚ್ಪಿ ಒತ್ತಾಯ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆತ ಮಲಬದ್ಧತೆ ಸಮಸ್ಯೆಗೆ ಬೇಸತ್ತು ಗುದದ್ವಾರದೊಳಗೆ ಬದನೆಕಾಯಿ ಪ್ರಯೋಗಿಸಿದ!
ಚಿತ್ರವಿಚಿತ್ರವಾಗಿರುವಂತಹ ಘಟನೆಗಳು ಹೆಚ್ಚಾಗಿ ಚೀನಾದಲ್ಲಿ ನಡೆಯುತ್ತಲಿರುವುದು ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ತುಂಬಾ ಕುತೂಹಲಕಾರಿ ಹಾಗೂ ವಿಚಿತ್ರ ಸುದ್ದಿಗಳನ್ನು ನೀಡುವಲ್ಲಿ ಚೀನಾವು ಎಂದೂ ನಮಗೆ ನಿರಾಶೆ ಮಾಡಿಲ್ಲ. ಈ ಲೇಖನದಲ್ಲಿ ನಾವಿಂದು ನಿಮಗೆ ಇದೇ ರೀತಿಯ ವಿಚಿತ್ರ ಘಟನೆ ಬಗ್ಗೆ ತಿಳಿಸಿಕೊಡಲಿದ್ದೇವೆ. ಪುರುಷರ ಮನಸ್ಸನ್ನು ಕದಿಯಬೇಕಾದರೆ ಅವರ ಹೊಟ್ಟೆಯನ್ನು ಸಂತೃಪ್ತಿಗೊಳಿಸಬೇಕೆಂಬ ಮಾತಿದೆ.
ಆದರೆ ಹೊಟ್ಟೆ ತುಂಬಾ ತಿಂದ ಬಳಿಕ ಹಲವಾರು ರೀತಿಯ ಸಮಸ್ಯೆಗಳು ಬರುವುದು ಇದೆ. ಅದರಲ್ಲಿ ಪ್ರಮುಖವಾಗಿ ಮಲಬದ್ಧತೆ. ಮಲಬದ್ಧತೆಯಿರುವ ವ್ಯಕ್ತಿ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಾರೆ. ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿ ಇದರ ನಿವಾರಣೆಗಾಗಿ ಸುಮಾರು 30 ಸೆ.ಮೀ. ಉದ್ದದ ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿದ ವಿಚಿತ್ರ ಘಟನೆ ನಡೆದಿದೆ. 30 ಸೆ.ಮೀ. ಇದ್ದ ಬದನೆಕಾಯಿಯನ್ನು ಸಂಪೂರ್ಣವಾಗಿ ಗುದದ್ವಾರದಿಂದ ಒಳಗೆ ಹಾಕಲಾಗಿತ್ತು. ಇದು ಆತನ ಶ್ವಾಸಕೋಶಕ್ಕೆ ತಾಗುತ್ತಲಿತ್ತು. ಈ ಘಟನೆ ಬಗ್ಗೆ ಇನ್ನಷ್ಟು ತಿಳಿಯಲು ನೀವು ಓದುವುದನ್ನು ಮುಂದುವರಿಸಿ....
ಆತ ಹಲವಾರು ಮನೆಮದ್ದು ಪ್ರಯೋಗಿಸಿದ
ಮಲಬದ್ಧತೆಗೆ ತುಂಬಾ ವಿಚಿತ್ರ ಮದ್ದನ್ನು ಪ್ರಯೋಗಿಸಿ ಆಸ್ಪತ್ರೆ ಸೇರಿದ ಬಳಿಕ ಮಾಧ್ಯಮಗಳು ಇದನ್ನು ಸುದ್ದಿ ಮಾಡಿರುವದರಿಂದ ಆತ ರೊಚ್ಚಿಗೆದ್ದಿದ್ದ.
ಆತ ಯಾರು ನಿರೀಕ್ಷಿಸದನ್ನು ಮಾಡಿದ!
ಮಲಬದ್ಧತೆಯಿಂದ ನಿವಾರಣೆ ಪಡೆಯಲು ತುಂಬಾ ವಿಚಿತ್ರವಾಗಿರುವ ಕಲ್ಪನೆ ಮಾಡಿಕೊಂಡ ವ್ಯಕ್ತಿಯು ತನ್ನ ಪರಿಸ್ಥಿತಿ ಸುಧಾರಣೆ ಮಾಡಿಕೊಳ್ಳಲು ಬದನೆಕಾಯಿಯನ್ನು ಗುದದ್ವಾರದೊಳಗೆ ಹಾಕಿ ಪರಿಹಾರ ಬಯಸಿದ.
ಕಥೆ ಮುಂದುವರಿಯಿತು!
ಗುದದ್ವಾರದೊಳಗೆ ಬದನೆಕಾಯಿ ತುರುಕಿಸುವುದು ತುಂಬಾ ವಿಚಿತ್ರ ವಿಧಾನ ಮತ್ತು 30 ಸೆ.ಮೀ. ಉದ್ದರ ಬದನೆಕಾಯಿ ಬಳಸುವುದು ದೊಡ್ಡ ಮೂರ್ಖತನ. ಬದನೆಕಾಯಿ ಆತನ ದೇಹದಲ್ಲಿ ಆಚೀಚೆ ಹೋಗುತ್ತಲಿದ್ದದ್ದು ಕೂಡ ಅಚ್ಚರಿಯಲ್ಲ.
ಹೊಟ್ಟೆಯೊಳಗೆ ಗಾಯ ಮಾಡಿಕೊಂಡ
ಬದನೆಕಾಯಿಯನ್ನು ಗುದದ್ವಾರದಿಂದ ಒಳಗೆ ತುರುಕಿಸಿಕೊಂಡರೂ ಆತ ವೈದ್ಯರಲ್ಲಿಗೆ ಹೋಗಲಿಲ್ಲ. ಇದರಿಂದ ತನ್ನ ಮಲಬದ್ಧತೆ ನಿವಾರಣೆಯಾಗಬಹುದು ಎಂದು ಯೋಚಿಸಿದ. ಆದರೆ ಎರಡು ದಿನಗಳ ಬಳಿಕ ಆತನಿಗೆ ತನ್ನ ಮಹಾನ್ ಕಾರ್ಯದ ಬಗ್ಗೆ ಅರ್ಥವಾಗಲು ಆರಂಭವಾಯಿತು. ಆತ ತಕ್ಷಣ ವೈದ್ಯರನ್ನು ಭೇಟಿಯಾಗಿ ತಾನು ಮಾಡಿರುವುದೆಲ್ಲವನ್ನೂ ತಿಳಿಸಿದ.
ಪರೀಕ್ಷೆ ವೇಳೆ
ವೈದ್ಯರು ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಬದನೆಕಾಯಿಯು ಶ್ವಾಸಕೋಶಕ್ಕೆ ತಾಗುತ್ತಲಿತ್ತು ಮತ್ತು ಆತನ ಕರುಳಿಗೆ ಕೂಡ ಇದರಿಂದ ತೊಂದರೆಯಾಗಿತ್ತು.
ಶಸ್ತ್ರಚಿಕಿತ್ಸೆ ನಡೆಸಲಾಯಿತು
ಸಮಯ ವೆಚ್ಚ ಮಾಡದೆ ಆತನ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯೊಳಗಿದ್ದ ಬದನೆಕಾಯಿ ಹೊರತೆಗೆಯಲಾಯಿತು ಮತ್ತು ಬದನೆಕಾಯಿಯು ಸುಮಾರು 30 ಸೆ.ಮೀ. ಉದ್ದವಿತ್ತೆಂದು ವೈದ್ಯರು ಲೆಕ್ಕ ಹಾಕಿದ್ದಾರೆ. ಈಗ ಆ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ.
ಅತಿಯಾದ ಔಷಧಿ
ವೈದ್ಯರ ಪ್ರಕಾರ ಇಂತಹ ಪ್ರಯೋಗಗಳನ್ನು ಮಾಡುವವರಲ್ಲಿ ಹೆಚ್ಚಾಗಿ 30-50 ವರ್ಷದ ಪುರುಷರು ಹೆಚ್ಚಾಗಿರುವರು. ಇವರು ಹೊರಗಿನ ಸುಖ ಪಡೆಯಲು ಬಯಸುವರು. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ತಪ್ಪಾಗಿದ್ದರೆ ನಮಗೆ ತಿದ್ದಲು ನೀವು ನೆರವಾಗಿ. ಆದರೆ ಮಲಬದ್ಧತೆಗೆ ಇಂತಹ ಪ್ರಯೋಗ ಖಂಡಿತವಾಗಿಯೂ ಮಾಡಲು ಹೋಗಬೇಡಿ. ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.