Just In
- 1 hr ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 2 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 2 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 2 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ರಾಶಿಯ ಜನರು ತಪ್ಪಿನ ಮೇಲೆ ತಪ್ಪು ಮಾಡಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ!
ಜೀವನದಲ್ಲಿ ನಮ್ಮ ಗುರಿ ಸಾಧನೆಗೆ ನಿರಂತರವಾಗಿ ಮುನ್ನಡೆಯುತ್ತಲೇ ಇರಬೇಕು. ನಿರಂತರ ಪ್ರಯತ್ನಗಳನ್ನು ನಡೆಸುತ್ತಿರುವಾಗ ಸಿಗುವ ಚಿಕ್ಕ ಪುಟ್ಟ ಅವಕಾಶಗಳನ್ನು ಉಪಯೋಗಿಸಿಕೊಂಡು, ಸಾರ್ಥಕ ಮಾಡಿಕೊಳ್ಳಬೇಕು. ಆಗಲೇ ಬಹುಬೇಗ ಸಾಧನೆಯ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ. ಉದಾಹರಣೆಗೆ ನಮ್ಮ ಕೈಯಲ್ಲಿರುವ ಉಪ್ಪನ್ನು ಅಡುಗೆ ತಯಾರಿಸುವಾಗ ಸೂಕ್ತ ಪ್ರಮಾಣದಲ್ಲಿ ಬೆರೆಸಿ, ಅಡುಗೆಯನ್ನು ರುಚಿಯಾಗುವಂತೆ ಮಾಡಬಹುದು. ಹಾಗೆಯೇ ಒಂದು ಪ್ರಮಾಣದ ಕಲ್ಪನೆಯೂ ಇರದೆ ಉಪ್ಪನ್ನು ಅಡುಗೆಗೆ ಬೆರೆಸಿದರೆ ಅದನ್ನು ತಿನ್ನಲು ಕಷ್ಟವಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿ ಪ್ರತಿಯೊಂದು ಹೆಜ್ಜೆ ಹಾಗೂ ಅವಕಾಶಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ? ಎನ್ನುವುದರ ಮೇಲೆಯೇ ನಮ್ಮ ಜೀವನದ ಆಗು ಹೋಗುಗಳು ನಿರ್ಧಾರವಾಗುತ್ತವೆ.
ಆತುರದ ನಿರ್ಧಾರ ಮತ್ತು ಕಲ್ಪನೆ ಇಲ್ಲದೆಯೇ ಮಾತನಾಡುವ ಪರಿಯೂ ನಮ್ಮ ನಡತೆ ಹಾಗೂ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸಂದರ್ಭಗಳು ವ್ಯಕ್ತಿಯ ಜೀವನದಲ್ಲಿ ಕಷ್ಟದ ಸನ್ನಿವೇಶಗಳನ್ನು ತಂದೊಡ್ಡಬಹುದು. ಇನ್ನೂ ಕೆಲವೊಮ್ಮೆ ನಾವೇ ಕೆಲವು ಕಷ್ಟದ ಸಂದರ್ಭಗಳು ಸೃಷ್ಟಿಯಾಗುವಂತೆ ನಡೆದುಕೊಳ್ಳುತ್ತೇವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಗ್ರಹಗತಿಗಳ ಅನುಸಾರ ನಮ್ಮ ವರ್ತನೆಗಳು ಅಥವಾ ನಡವಳಿಕೆಗಳು ನಮ್ಮ ಜೀವನ ಹಾಳಾಗುವಂತೆ ಮಾಡುತ್ತವೆ ಎಂದು ಹೇಳುತ್ತದೆ. ಆಯಾ ರಾಶಿಚಕ್ರಗಳಿಗೆ ಅನುಸಾರವಾಗಿ ವ್ಯಕ್ತಿಗಳು ಕೆಟ್ಟ ವರ್ತನೆಯನ್ನು ತೋರುತ್ತಾರೆ.
ಅದರ ಪರಿಣಾಮವಾಗಿ ಅವರ ಕೈಯಿಂದಲೇ ಜೀವನ ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ರಾಶಿಚಕ್ರದ ಅನುಸಾರ ಯಾವೆಲ್ಲಾ ಬಗೆಯ ತಪ್ಪು ಕೆಲಸಗಳು ನಮ್ಮ ಕೈಯಿಂದ ನಡೆಯುತ್ತದೆ? ಅದರಿಂದ ನಮ್ಮ ಜೀವನದಲ್ಲಿ ಯಾವ ಬಗೆಯ ಪರಿಣಾಮ ಉಂಟಾಗುತ್ತದೆ ಎನ್ನುವ ಸೂಕ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ಈ ಮುಂದೆ ಪರಿಚಯಿಸಿದೆ...
ಮೇಷ:
ಈ ರಾಶಿಯ ಜನರು ತಮ್ಮ ಅಸ್ತಿತ್ವವನ್ನು ದ್ವೇಷದಿಂದ ಹಾಳುಮಾಡಿಕೊಳ್ಳುತ್ತಾರೆ. ಕೆಲವು ವಿಷಯದಲ್ಲಿದ್ದ ಅಜ್ಞಾನ ಅಥವಾ ಅರಿವಿಲ್ಲದೆ ಇರುವುದು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಲು ಕಷ್ಟವಾಗುವುದು. ಇವರ ಸಹಿಷ್ಣುತೆಯ ಮನೋಭಾವ ಹಾಗೂ ಆತುರದ ಪ್ರವೃತ್ತಿಯು ದುರಾದೃಷ್ಟದ ಸಂಗತಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡುವುದು. ಇವರು ಬಹುತೇಕ ಸಮಯದಲ್ಲಿ ನಿರಾಶೆಯ ಭಾವವನ್ನು ತಳೆಯುತ್ತಾರೆ. ಅಲ್ಲದೆ ನತದೃಷ್ಟರಲ್ಲಿ ಒಬ್ಬರು ಎಂದು ಜೀವಿಸುತ್ತಾರೆ.
ವೃಷಭ
ಈ ರಾಶಿಯವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಅನುಭವಿಸದೆ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಇವರು ಎಲ್ಲರನ್ನೂ ಎಲ್ಲಾ ರೀತಿಯಲ್ಲೂ ನಿಯಂತ್ರಣದಲ್ಲಿ ಇಡಲು ಬಯಸುತ್ತಾರೆ. ತಾವು ಯೋಚಿಸಿರುವ ಮಾರ್ಗದಲ್ಲಿಯೇ ಇವರು ಸಾಗಲು ಬಯಸುತ್ತಾರೆ. ಈ ಗುಣವನ್ನು ಬಿಟ್ಟು ಸಾಮಾನ್ಯ ವ್ಯಕ್ತಿಗಳಂತೆ ಎಂದುಕೊಂಡು, ಸಾಮಾನ್ಯ ಮಾರ್ಗದಲ್ಲಿಯೇ ನಡೆದರೆ ಉತ್ತಮವಾಗಿರುತ್ತದೆ. ಇವರಿಗೆ ಕಠಿಣವಾದ ವಿಷಯವೆಂದರೆ ವ್ಯಕ್ತಿಗಳನ್ನು ನಿಯಂತ್ರಿಸಲಾಗುವುದಿಲ್ಲ ಹಾಗೂ ಸಂದರ್ಭಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇರುವುದಿಲ್ಲ ಎನ್ನುವ ಪರಿಯಾಗಿರುತ್ತದೆ. ಜೀವನದಲ್ಲಿ ಒಂದು ಪೂರ್ವ ಸಿದ್ಧತೆ ಇಲ್ಲದ ಪರಿಸ್ಥಿತಿಯೇ ಇವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುವುದು.
ಮಿಥುನ:
ಇವರು ತಮ್ಮ ಜೀವನದಲ್ಲಿ ನೆಲೆನಿಲ್ಲುವಂತೆ ಮಾಡಿಕೊಳ್ಳುವುದರಿಂದಲೇ ತಮ್ಮ ನಾಶವನ್ನು ಕಾಣುತ್ತಾರೆ. ಇವರಿಗೆ ಬೇಕಾದುದ್ದನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಭಕ್ತಿಯ ಅಥವಾ ಆರಾಧನೆಯ ಭಾವದಲ್ಲಿ ನೆಲೆಸುತ್ತಾರೆ. ಇವರಿಗೆ ಜೀವನದ ಬದಲಾವಣೆಯು ಅಧಿಕ ಭಯವನ್ನು ಹುಟ್ಟಿಸುತ್ತದೆ. ಇವರು ಆದಷ್ಟು ವೃತ್ತಿ ಜೀವನದಲ್ಲಿ ಕಾಲ ಕಳೆಯಲು ಬಯಸುವರು. ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನವನ್ನು ಗಮನಾರ್ಹ ರೀತಿಯಲ್ಲಿ ಹಾಳುಮಾಡಿಕೊಳ್ಳುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು.
ಮುಂದುವರಿದ ಭಾಗ...
ಇವರು ತಮ್ಮ ಜೀವನದ ಬಗ್ಗೆ ಅಸ್ಪಷ್ಟತೆಯನ್ನು ಹೊಂದಿರುತ್ತಾರೆ. ಬೇರೆಯವರ ಗಮನದಲ್ಲಿ ಎದ್ದು ಕಾಣುವಂತೆ ಮಾಡಲು ಮುಂದಾಗುವರು. ಆಗ ಸಾಮಾನ್ಯ ಸ್ಥಿತಿಗಿಂತ ಹೆಚ್ಚಿನ ತೊಂದರೆಯನ್ನು ಅನುಭವಿಸುವರು. ನಿಮ್ಮ ಜೀವನದಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಪ್ರವೇಶ ಪಡೆದರು ಎಂದಾದ ಮೇಲೆ, ಅವರ ಉಪಸ್ಥಿತಿ ನಿಮ್ಮ ಜೀವನಕ್ಕೆ ಅಗತ್ಯ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಅವರನ್ನು ತಿರಸ್ಕರಿಸಿದರೆ ಕರ್ಮವು ನಿಮ್ಮ ಬೆನ್ನು ಬಿಡದು. ಜೊತೆಗೆ ಸಾಮಾನ್ಯವಾದದ್ದಕ್ಕಿಂತ ಹೆಚ್ಚಿನ ದುಷ್ಪರಿಣಾಮವನ್ನು ನೀವು ಅನುಭವಿಸಬೇಕಾಗುವುದು.
ಕರ್ಕ
ಇತರರು ನಿಮ್ಮ ಜೀವನವನ್ನು ಹಾಳುಮಾಡುವುದಕ್ಕಿಂತ ಮುಂಚೆ ನೀವೇ ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳುವಿರಿ. ಇವರು ಉತ್ಸಾಹ ಪೂರ್ಣ ವ್ಯಕ್ತಿಗಳು. ಆದರೆ ಕೆಲವೊಂದು ವಿಚಾರದಲ್ಲಿ ಯಾವುದೇ ಪ್ರಯತ್ನ ಮಾಡದೆ ಇರುವುದರ ಪರಿಣಾಮವಾಗಿ ತಾವು ಭಾವಿಸಿಕೊಂಡ ರೀತಿಗಿಂತ ಬಹು ಸುಲಭವಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಅಪರೂಪಕ್ಕೆ ನೀವು ಯಾರಾದರೂ ಒಬ್ಬ ಆದರ್ಶ ವ್ಯಕ್ತಿಯನ್ನು ಭೇಟಿಯಾಗಿದ್ದೀರಿ ಎಂದುಕೊಳ್ಳಿ, ಆಗ ನಿಮ್ಮ ಆದರ್ಶ ಹಾಗೂ ಪ್ರಯತ್ನಗಳು ಹೆಚ್ಚಿನ ಪ್ರಮಾಣದಲ್ಲಿ ತೋರ್ಪಡುವುದು. ಕೆಲವೊಂದು ವಿಚಾರಗಳು ಕ್ಷಣಾರ್ಧದಲ್ಲಿ ತೊಂದರೆಯನ್ನು ತಂದೊಡ್ಡಬಹುದು. ಹಾಗಾಗಿ ಎಲ್ಲಾ ಸಮಯದಲ್ಲೂ ಆದಷ್ಟು ಎಚ್ಚರಿಕೆ ಹಾಗೂ ಕಾಳಜಿಯಿಂದ ಇರಬೇಕು.
ಸಿಂಹ
ಇವರು ತಮ್ಮ ಭಾವನೆಗಳನ್ನು ತಾವೇ ಮುರಿದುಕೊಳ್ಳುವುದರ ಮೂಲಕ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವುದು ರಕ್ಷಣಾತ್ಮಕ ಭಾವನೆಯ ಕೊರತೆಯಿಂದ ಎಂದು ಸಹ ಹೇಳಬಹುದು. ಇವರು ಅತ್ಯಂತ ದಯಾಶೀಲರು ಹಾಗೂ ಕಾಲ್ಪನಿಕ ಗ್ರಹಿಕೆಯ ಶಕ್ತಿ ಉಳ್ಳವರು. ಆದರೆ ಕೆಲವೊಮ್ಮೆ ಅಸಡ್ಡೆತನ ತೋರುವುದರ ಮೂಲಕ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಇವರ ಉತ್ಸಾಹ ಭರಿತ ಪ್ರವೃತ್ತಿಯನ್ನು ಇತರರು
ಉಪಯೋಗಿಸಿಕೊಳ್ಳುತ್ತಾರೆ. ತಮ್ಮ ಜೀವನಕ್ಕೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ ಎನ್ನಬಹುದು. ನಿಮ್ಮ ಭಾವನೆಗಳು ಯಾವುದೇ ರೀತಿಯಲ್ಲೂ ನಿರಾಕರಿಸುವಷ್ಟು ದುರ್ಬಲತೆಯನ್ನು ಹೊಂದಿಲ್ಲ ಎನ್ನುವುದನ್ನು ನೀವು ನೆನಪಿಟ್ಟುಕೊಳ್ಳಿ.
ಕನ್ಯಾ
ಇವರು ತಮ್ಮ ಜೀವನವನ್ನು ಬಹಳ ಕಷ್ಟಕರವಾದ ರೀತಿಯಲ್ಲಿ ಹಾಳುಮಾಡಿಕೊಳ್ಳುತ್ತಾರೆ. ತಮ್ಮ ಅವಶ್ಯಕತೆಗಿಂತ ಇತರರ ಅವಶ್ಯಕತೆಗೆ ಹೆಚ್ಚು ಒತ್ತನ್ನು ನೀಡಲು ಮುಂದಾಗುತ್ತಾರೆ. ಇದು ಅವರ ಜೀವನದ ಮೇಲೆ ಗಣನೀಯ ಪರಿಣಾಮವನ್ನು ಉಂಟುಮಾಡುವುದು. ಇವರು ಇತರರನ್ನು ಪ್ರೀತಿಸುವಷ್ಟು ಅಥವಾ ಆರಾಧಿಸುವಷ್ಟು ತಮ್ಮನ್ನು ತಾವು ಇಷ್ಟಪಡುವುದಿಲ್ಲ. ಜೊತೆಗೆ ತಮ್ಮ ಸಂಬಂಧಗಳಲ್ಲಿ ತೋರಿಸುವುದಿಲ್ಲ. ಈ ರೀತಿಯ ಬಿಕ್ಕಟ್ಟನ್ನು ತಂದೊಡ್ಡಿಕೊಳ್ಳುವುದರಲ್ಲಿ ಈ ರಾಶಿಯವರೇ ಮೊದಲಿಗರಾಗಿರುತ್ತಾರೆ ಎನ್ನಬಹುದು. ಇವರ ಜೀವನದ ಅತ್ಯಂತ ಕೆಟ್ಟ ವೈರಿಗಳು ಇವರೇ ಆಗಿರುತ್ತಾರೆ.
ತುಲಾ
ಇವರು ಇತರರನ್ನು ಸಮಾಧಾನಗೊಳಿಸುವುದರ ಮೂಲಕ ತಮ್ಮ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಾರೆ. ಇವರಿಗೆ ಅಗತ್ಯವಿರುವ ವಿಚಾರದ ಕುರಿತು ಹೆಚ್ಚಿನ ಗಮನವನ್ನು ನಿಡುವುದಿಲ್ಲ. ಇವರನ್ನು ಇತರರು ಗೌರವಿಸುವಂತೆಯೇ ದುರ್ಬಳಕೆ ಮಾಡಿಕೊಳ್ಳುವುದರಲ್ಲೂ ಉಪಯೋಗಿಸಿಕೊಳ್ಳುತ್ತಾರೆ. ಜೊತೆಗೆ ನಿಂದನೆ ಮಾಡುತ್ತಾರೆ. ಇವರು ಕಾಳಜಿ ವಹಿಸುವ ವಿಚಾರದಲ್ಲಿ ತಮ್ಮ ಭಾವನೆಯನ್ನು ಹಿಡಿದಿಟ್ಟುಕೊಳ್ಳಬೇಕು. ಆಗ ಅವರ ಅಭಿವೃದ್ಧಿ ಉಂಟಾಗುವುದು. ಕೆಲವೊಮ್ಮೆ ತಮ್ಮ ಪ್ರೀತಿ ಪಾತ್ರರ ಭಾವನೆಯನ್ನು ತಗ್ಗಿಸುವಂತೆ ಮತ್ತು ಅವರ ಆಶಯಗಳಿಗೆ ಯಾವುದೇ ಸ್ಪಂದನೆ ಇಲ್ಲದವರಂತೆ ಬಹುಬೇಗ ನೋವನ್ನುಂಟುಮಾಡುತ್ತಾರೆ.
ವೃಶ್ಚಿಕ
ಕೆಲವು ಆದರ್ಶಗಳಿಂದ ಹಾಗೂ ಒಂಟಿಯಾದ ಜೀವನ ನಡೆಸುವುದರ ಮೂಲಕ ನಿಮ್ಮ ಜೀವನವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇವರು ಅಸಹನೀಯವಾದ ಉದ್ದೇಶಗಳನ್ನು ಹೊಂದಿರುತ್ತಾರೆ. ಇದು ವೈಯಕ್ತಿಕವಾಗಿ ಹೆಚ್ಚು ಪರಿಣಾಮ ಬೀರುವುದು. ಇವರು ಇತರರನ್ನು ಬಹು ಸುಲಭವಾಗಿ ಹುರಿದುಂಬಿಸಬಹುದಾದ ಸಾಮಥ್ರ್ಯವನ್ನು ಹೊಂದಿದ್ದಾರೆ. ಇವರ ಅತ್ಯಂತ ದೋಷಪೂರಿತ ವಿಚಾರವೆಂದರೆ ಇವರು ಕೆಲವು ವಿಷಯಗಳಲ್ಲಿ ಕಿರಿದಾದ ಮನಸ್ಸನ್ನು ಹೊಂದಿರುವುದು. ಇತರರು ನೀವು ಅತ್ಯುತ್ತಮ ವ್ಯಕ್ತಿ ಎಂದು ಭಾವಿಸಬೇಕು ಎಂದು ಬಯಸುತ್ತಾರೆ.
ಧನು
ನಿಮ್ಮ ಕೆಲವು ನ್ಯೂನತೆಯು ನಿಮ್ಮನ್ನು ಆತಂಕಕ್ಕೀಡುಮಾಡುವುದು. ನೀವು ಏನು ಮಾಡದೆಯೇ ಯಶಸ್ಸನ್ನು ಬಯಸುತ್ತೀರಿ ಅದು ನಿಮ್ಮನ್ನು ಕಷ್ಟಕ್ಕೆ ತಳ್ಳಬಹುದು. ನೀವು ಅಸಂಖ್ಯಾತ ಪ್ರಮಾಣದಲ್ಲಿ ಅಸಮಾನ್ಯ ಚಿಂತನೆಗಳನ್ನು ನಡೆಸುತ್ತೀರಿ. ಅದೊಂದು ಕಾರ್ಯರೂಪಕ್ಕೆ ಬರುವಂತಹದ್ದಾಗಿರುವುದಿಲ್ಲ. ಯಾವುದೇ ವಿಚಾರವನ್ನು ಸೂಕ್ತ ರೀತಿಯಲ್ಲಿ ಕೇಂದ್ರೀಕರಿಸುವುದಿಲ್ಲ. ಜೊತೆಗೆ ಯಾವುದನ್ನೂ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಮಾಡಬೇಕಾದ ಒಂದು ಕೆಲಸದ ಮೇಲೆ ಹೆಚ್ಚು ಕೇಂದ್ರೀಕರಿಸಿ. ನಂತರ ಹಂತ ಹಂತವಾಗಿ ಸಾಗಲು ಮುಂದಾಗಿ. ಇಲ್ಲವಾದರೆ ನಿಮ್ಮ ಜೀವನವನ್ನು ನೀವೇ ಇನ್ನಷ್ಟು ಕಷ್ಟದ ಸ್ಥಿತಿಗೆ ದೂಕಿದಂತಾಗುವುದು.
ಮಕರ
ಇವರು ಬಹಳ ಸುಲಭವಾಗಿ ತಮ್ಮ ಜೀವನದಲ್ಲಿ ಕಷ್ಟವನ್ನು ತಂದೊಡ್ಡಿಕೊಳ್ಳುತ್ತಾರೆ. ನಿಮಗಾಗಿ ಅತಿಯಾಗಿ ಶ್ರಮಪಟ್ಟಿರುವವರು ಅಥವಾ ನಿಮ್ಮನ್ನು ಹೆಚ್ಚು ಕೇಂದ್ರೀಕೃತವಾಗಿ ನೋಡಿಕೊಂಡವರ ಬಗ್ಗೆಯೂ ಅಷ್ಟು ಸೂಕ್ತರೀತಿಯಲ್ಲಿ ಪರಿಗಣಿಸುವುದಿಲ್ಲ. ನೀವು ಯಾವುದೇ ವಿಚಾರಕ್ಕೆ ಹೆಚ್ಚು ಅವಲಂಬಿತರಾಗಿದ್ದೀರಿ ಎಂದಾದಾಗ ಅದನ್ನು ತೃಪ್ತಿಪಡಿಸಿದವರನ್ನು ಸಹ ನೆನಪಿಟ್ಟುಕೊಳ್ಳಿ. ಆಗ ಜೀವನದಲ್ಲಿ ಸಂತೋಷ ಲಭಿಸುವುದು.
ಕುಂಭ
ಈ ಗಾಗಲೇ ಅನುಭವಿಸಿರುವ ಅನುಭವವನ್ನು ಭವಿಷ್ಯದಲ್ಲಿ ಹೂಡಿಕೆ ಮಾಡುವುದರ ಮೂಲಕ ಜೀವನವನ್ನು ನಾಶಪಡಿಸಿಕೊಳ್ಳುವಿರಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನೀವೇ ಕಾರಣರಾಗುವಿರಿ. ನೀವು ಆದರ್ಶ ಸ್ಥಿತಿಯಲ್ಲಿ ಇರುವಿರಿ ಎನ್ನುವ ಆಧಾರದ ಮೇಲೆ ಯೋಗ್ಯ ವ್ಯಕ್ತಿಗಳನ್ನು ದೂರ ತಳ್ಳಲು ನೀವು ಒಲವು ತೋರಿಸುವ ಸಾಧ್ಯತೆಗಳಿರುತ್ತವೆ. ನಿಮ್ಮ ಈ ಎಲ್ಲಾ ಕಾರಣಗಳು ಇನ್ನಷ್ಟು ಕಷ್ಟದ ಸ್ಥಿತಿಯನ್ನು ಸೃಷ್ಟಿಸುವುದು.
ಮೀನ
ವೈಯಕ್ತಿಕವಾಗಿ ತಪ್ಪು ವ್ಯಕ್ತಿಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಜೀವನವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಮಾರಕ ವ್ಯಕ್ತಿಗಳನ್ನು ಮತ್ತು ಅವರ ಮೇಲಿನ ಒಲವನ್ನು ನೀವೇ ಆಯ್ಕೆ ಮಾಡಿಕೊಳ್ಳುವಿರಿ. ಇತರ ರಾಶಿ ಚಕ್ರದವರಿಗೆ ಹೋಲಿಸಿದರೆ ಇವರು ಅತ್ಯಂತ ಉತ್ತಮ ಹೃದಯ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರ ಆಯ್ಕೆಯಲ್ಲಿ ತಪ್ಪಾದ ವಿಚಾರಗಳು ಮತ್ತು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಜೀವನವನ್ನು ಹಿಂಸೆಗೆ ತಳ್ಳಿಕೊಳ್ಳುತ್ತಾರೆ. ಬಹುತೇಕ ಸಂದರ್ಭದಲ್ಲಿ ತಮ್ಮನ್ನು ತಾವು ದುಃಖಿತ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುತ್ತಾರೆ.