Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಪಾಪ, ಮೋಸದಿಂದ ಆಕೆಯನ್ನು ವೇಶ್ಯಾವೃತ್ತಿಗೆ ತಳ್ಳಲಾಯಿತು!
ಈ ಮಹಿಳೆಯ ಹೆಸರು ಟೀನಾ. ಈಕೆ ಕೇವಲ ಹದಿನೈದು ವರ್ಷದವಳಿದ್ದಾಗ ಮನೆಯಿಂದ ಓಡಿಹೋಗಿದ್ದ ಒಂದೇ ತಪ್ಪಿನಿಂದ ಆಕೆ ಹೊರಜಗತ್ತಿನ ಭಯಾನಕ ರೂಪವನ್ನು ಕಂಡುಕೊಳ್ಳುವಂತಾಯಿತು.
ವೇಶ್ಯಾವೃತ್ತಿಯನ್ನು ಯಾವುದೇ ಮಹಿಳೆ ತನ್ನ ಇಚ್ಛೆಯಿಂದ ಆರಿಸಿಕೊಳ್ಳುವುದಿಲ್ಲ. ಹೆಚ್ಚಿನವರು ಬಲವಂತವಾಗಿ ದೂಡಲ್ಪಟ್ಟವರಾಗಿದ್ದಾರೆ. ಇಂದಿನ ಕಥೆ ಭಾರತೀಯ ಮಹಿಳೆಯೊಬ್ಬರದ್ದಾಗಿದ್ದು ಉದ್ಯೋಗದ ಆಮಿಷ ಒಡ್ಡಿ ಬಳಿಕ ಮೋಸದಿಂದ ಈ ವೃತ್ತಿಗೆ ದೂಡಲಾಗಿದೆ. ಆ ದಿನದಿಂದ ಆಕೆ ಎಷ್ಟು ನೋವು ಅನುಭವಿಸಿದ್ದಾರೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಇದು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ವೇಶ್ಯೆಯ ಕಣ್ಣೀರ ಕಥೆ
ಈ ಮಹಿಳೆಯ ಹೆಸರು ಟೀನಾ. ಈಕೆ ಕೇವಲ ಹದಿನೈದು ವರ್ಷದವಳಿದ್ದಾಗ ಮನೆಯಿಂದ ಓಡಿಹೋಗಿದ್ದ ಒಂದೇ ತಪ್ಪಿನಿಂದ ಆಕೆ ಹೊರಜಗತ್ತಿನ ಭಯಾನಕ ರೂಪವನ್ನು ಕಂಡುಕೊಳ್ಳುವಂತಾಯಿತು. ಭಾರತದ ರೆಡ್ ಲೈಟ್ ಏರಿಯಾದ ಹಿಂದಿರುವ ಸತ್ಯಾಸತ್ಯತೆ
ಈಕೆಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಈಕೆಯನ್ನು ವೇಶ್ಯಾವೃತ್ತಿಗೆ ತಳ್ಳಿದ ಯುವಕನ ನಯವಂಚನೆಯ ಬಗ್ಗೆ, ಹಾಗೂ ಇದರಿಂದ ಹೊರಬರಲು ಆಕೆ ಪಡುತ್ತಿರುವ ಬವಣೆಯನ್ನು ನೋಡೋಣ...

ಟೀನಾ ಆಗ ಕೇವಲ ಹದಿನೈದು ವರ್ಷದವಳಾಗಿದ್ದಳು
ಯಾವುದೇ ಹದಿಹರೆಯದ ಹುಡುಗಿಗೆ ಇರುವಂತೆ ಟೀನಾಳಿಗೂ ತನ್ನ ಗೊಂಬೆಗಳೊಂದಿಗೆ ಮತ್ತು ಅಕ್ಕಪಕ್ಕದ ಮನೆಗಳ ಮಕ್ಕಳೊಂದಿಗೆ ಆಡುವುದು ವ್ಯಾಸಾಂಗಕ್ಕಿಂತಲೂ ಹೆಚ್ಚು ಇಷ್ಟವಾಗಿತ್ತು. ಆಕೆಯ ಪರೀಕ್ಷೆಯ ಅಂಕಗಳು ಎಂದಿಗೂ ಉತ್ತಮವಾಗಿರಲಿಲ್ಲ. ಇದು ಆಕೆಯ ತಾಯಿಗೆ ಸಹಿಸಲಾರದ ತುತ್ತಾಗಿತ್ತು. ಒಮ್ಮೆ ಹೋಂ ವರ್ಕ್ ಮಾಡಿಲ್ಲವೆಂದು ಆಕೆಯ ತಾಯಿಯಿಂದ ಏಟನ್ನೂ ತಿಂದಿದ್ದಳು. ಈ ಏಟು ಆಕೆಯನ್ನು ಮನೆಯಿಂದ ಓಡಿಹೋಗಲು ಪ್ರೇರೇಪಿಸಿತು.

ಆಕೆ ಬೇರೊಂದು ನಗರಕ್ಕೆ ಪಯಣಿಸಿದಳು
ಕೈಯಲ್ಲಿ ಕೊಂಚವೇ ಹಣವನ್ನಿರಿಸಿಕೊಂಡು ಇನ್ನೊಂದು ನಗರಕ್ಕೆ ಧಾವಿಸಿದ ಈಕೆ ಆ ನಗರದ ಗಲ್ಲಿಗಲ್ಲಿಗಳಲ್ಲಿ ತಿರುಗುತ್ತಾ, ಫುಟ್ ಪಾತ್ ಮೇಲೆ ಮಲಗಿ ಕಾಲ ಕಳೆದಳು. ಒಂದು ದಿನ ಪೋಲೀಸ್ ಅಧಿಕಾರಿಯೊಬ್ಬರು ಈಕೆಗೆ ನೆರವಾಗಲು ಮುಂದಾದರು.

ಆದರೆ ಈ ಅಧಿಕಾರಿಯ ನಿಯತ್ತು ಸರಿ ಇರಲಿಲ್ಲ
ಈಕೆಗೆ ನೆರವು ನೀಡುವೆನೆಂದು ಪೋಲೀಸ್ ಠಾಣೆಗೆ ಕರೆದುಕೊಂಡು ಬಂದ ಈ ಅಧಿಕಾರಿ ನರರೂಪದ ರಾಕ್ಷಸನಾಗಿದ್ದ. ಕಾರಾಗೃದ ಕೋಣೆಯೊಂದರಲ್ಲಿ ಇಡಿಯ ರಾತ್ರಿ ಸತತವಾಗಿ ಬಲಾತ್ಕರಿಸಿದ. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯೂ ಆದಳು.

ಅಲ್ಲಿಂದ ಓಡಿಬಂದ ಈಕೆ ಹೆಣ್ಣುಮಗುವಿಗೆ ಜನ್ಮ ನೀಡಿದಳು
ಹೇಗೋ ಈ ರಾಕ್ಷಸನ ಬಂಧನದಿಂದ ಓಡಿಬಂದ ಈಕೆ ದೇವಸ್ಥಾನದ ಬಾಗಿಲಿನಲ್ಲಿಯೇ ಸುರಕ್ಷತೆಯ ಭಾವವನ್ನು ಅನುಭವಿಸುತ್ತಾ, ಭಿಕ್ಷೆ ಬೇಡುತ್ತಾ ಕಾಲ ಕಳೆದಳು. ನವಮಾಸ ಕಳೆದ ಬಳಿಕ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದಳು.

ಕಡೆಗೂ ಆಕೆಗೊಂದು ಉದ್ಯೋಗ ಸಿಕ್ಕಿತು
ಈ ದೇವಸ್ಥಾನಕ್ಕೆ ನಿಯಮಿತವಾಗಿ ಬರುತ್ತಿದ್ದ ಭಕ್ತರೊಬ್ಬರು ಈಕೆಯ ಬಗ್ಗೆ ಕರುಣೆ ತೋರಿ ಈಕೆಗೊಂದು ಕೆಲಸವನ್ನು ನೀಡುವ ಭರವಸೆ ನೀಡಿದರು. ಪಕ್ಕದ ಊರಿನಲ್ಲಿರುವ ದೇವಸ್ಥಾನದ ಪಕ್ಕದಲ್ಲಿಯೇ ಇರುವ ತನ್ನ ಸಹೋದರಿಯ ಮನೆಯಲ್ಲಿ ಕೆಲಸವಿದೆ ಎಂದು ತಿಳಿಸಿದ. ಈ ವ್ಯಕ್ತಿ ದೇವಸ್ಥಾನಕ್ಕೆ ನಿಯಮಿತವಾಗಿ ಬರುತ್ತಿರುವ ಕಾರಣ ಇವರ ದೈವಭಕ್ತಿಯನ್ನು ನಂಬಿದ ಈಕೆ ಈ ವ್ಯಕ್ತಿಯ ಮಾತುಗಳನ್ನು ನಂಬಿ ಭರವಸೆ ಇಟ್ಟಳು.

ಆದರೆ ಈತ ಆಕೆಯನ್ನು ಮಾರಿದ್ದ
ವಾಸ್ತವವಾಗಿ ಈ ವ್ಯಕ್ತಿಯೂ ದೇವಸ್ಥಾನದ ಭಕ್ತನ ಸೋಗಿನಲ್ಲಿ ಮಾನವ ಮಾರಾಟಗಾರನಾಗಿದ್ದ. ಆತನ ಸಹೋದರಿಯ ಮನೆ ಎಂದು ಆತ ಕಳಿಸಿದ್ದು ನೇರವಾಗಿ ಒಂದು ವೇಶ್ಯಾವಾಟಿಕೆಗೆ. ಈಕೆಯನ್ನು ಆತ ಕೇವಲ ಒಂದು ಲಕ್ಷ ರೂಪಾಯಿಗೆ ಮಾರಿದ್ದ. ಆ ಮನೆಗೆ ಅಡಿಯಿಟ್ಟ ಬಳಿಕ ಮನೆಯೊಳಗೆ ಇನ್ನೂ ಹಲವಾರು ವ್ಯಕ್ತಿಗಳಿದ್ದು ಇವರು ಆಕೆಯನ್ನು ಬಲವಂತವಾಗಿ ವೇಶ್ಯಾವೃತ್ತಿಗೆ ಇಳಿಸಿದರು.

ಅಂದಿನಿಂದ ಆಕೆಯ ಪ್ರತಿರಾತ್ರಿಯೂ ನರಕವಾಯಿತು
ಆ ಮನೆಯಲ್ಲಿ ಆಕೆಯನ್ನು ಕಾಮತೃಷೆಗಾಗಿ ಬಳಸಲಾಯಿತು. ಪ್ರತಿರಾತ್ರಿಯೂ ಆಕೆ ಹಲವು ಗ್ರಾಹಕರಿಗೆ ಸೇವೆ ನೀಡಬೇಕಿತ್ತು. ಇದಕ್ಕೆ ವಿರೋಧಿಸಿದರೆ ಎಳೆದಾಡಿ ಬಲವಂತವಾಗಿ ಸೇವೆ ನೀಡಿಸಲಾಗುತ್ತಿತ್ತು. ಈಕೆಗೆ ಯಾರಿಂದಲೂ ಮೇಹರೋಗಗಳೂ, ಏಡ್ಸ್ ರೋಗವೂ ಆಕ್ರಮಿಸಿದ ಬಳಿಕವೂ ಈಕೆಯ ಸೇವೆಯನ್ನು ಮುಂದುವರೆಸುವಂತೆ ಬಲಾತ್ಕರಿಸಲಾಗುತ್ತಿತ್ತು.

ಈಕೆ ವಿಭಿನ್ನ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾಳೆ
ತನ್ನೊಂದಿಗೆ ಆದ ಎಲ್ಲಾ ತಪ್ಪುಗಳಿಗೂ ಪ್ರತೀಕಾರದ ರೂಪದಲ್ಲಿ ತನ್ನ ದೇಹವನ್ನು ಆವರಿಸುವ ಕಾಯಿಲೆಯನ್ನು ಸಾಧ್ಯವಾದಷ್ಟು ಪುರುಷರಿಗೆ ಹಬ್ಬಿಸುತ್ತಿದ್ದಾಳೆ. ತನಗೆ ಯಾವುದೇ ರೋಗ ಇಲ್ಲವೆಂಬ ನಕಲಿ ವೈದ್ಯಕೀಯ ದೃಢೀಕರಣ ಪತ್ರವನ್ನು ಪಡೆದು ರಾಜಾರೋಶವಾಗಿ ಈ ರೋಗವನ್ನು ಹಬ್ಬಿಸುತ್ತಿದ್ದಾಳೆ.



Click it and Unblock the Notifications