Just In
Don't Miss
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಧು,ಸಂತರು ಕಾವಿ ಬಟ್ಟೆಯೇ ಧರಿಸುತ್ತಾರೆ, ಇದಕ್ಕೇ ಬೇರೆಯೇ ಕಾರಣವಿದೆ!!
ಸಾವಿರಾರು ವರ್ಷಗಳಿಂದಲೂ ಸಾಧುಸಂತರುಗಳು ಕೇಸರಿ ಬಣ್ಣದ ಬಟ್ಟೆ ಧರಿಸುತ್ತಾರೆ ಎನ್ನುವುದು ನಮಗೆ ತಿಳಿದಿದೆ. ಕೇವಲ ಭಾರತದಲ್ಲಿ ಹಿಂದೂ ಧರ್ಮದವರು ಮಾತ್ರವಲ್ಲದೆ ಬೌದ್ಧ ಧರ್ಮದವರೂ ಕಾವಿ ಧರಿಸುತ್ತಾರೆ. ಕೇಸರಿ ಬಣ್ಣವು ಅಗ್ನಿಯ ಸೂಚಕವಾದರೂ ಇದು ಒಳ್ಳೆಯದನ್ನು ಸೂಚಿಸುತ್ತದೆ.
ಕೇಸರಿ ಬಣ್ಣವು ಹಿಂದೂ ಧರ್ಮದ ಸಂಕೇತವೆಂದೇ ಹೆಚ್ಚಿನವರು ಭಾವಿಸಿದ್ದಾರೆ. ಕೇಸರಿ ಬಣ್ಣವು ನಮ್ಮ ರಾಷ್ಟ್ರ ಧ್ವಜದಲ್ಲೂ ಇದೆ. ಕೇಸರಿ ಬಣ್ಣದ ಬಟ್ಟೆ ಹಾಗೂ ಸಾಧು, ಸಂತರು ಇಂತಹ ಬಟ್ಟೆ ಧರಿಸಲು ಹಲವಾರು ಕಾರಣಗಳು ಇವೆ... ಮುಂದೆ ಓದಿ...
ಕೇವಲ ಹಿಂದೂಗಳು ಮಾತ್ರವಲ್ಲ
ಕೇವಲ ಹಿಂದೂಗಳು ಮಾತ್ರವಲ್ಲದೆ ಸಿಕ್ಖ್ ಧರ್ಮದವರು ಮತ್ತು ಬೌದ್ಧ ಧರ್ಮದವರು ಕೇಸರಿಯನ್ನು ತುಂಬಾ ಪವಿತ್ರ ಬಣ್ಣವೆಂದು ಭಾವಿಸುತ್ತಾರೆ. ಕೇಸರಿ ಬಣ್ಣವು ಸಾಧು ಹಾಗೂ ಸಂತರಿಗೆ ಹೊಂದಿಕೊಳ್ಳಲು ವೈಜ್ಞಾನಿಕ ಕಾರಣಗಳು ಏನು ಎನ್ನುವುದನ್ನು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದೆ. ಋಗ್ ವೇದದ ಮೊದಲ ಪದ್ಯ ಹೀಗೆ ಹೇಳುತ್ತದೆ: ಅಗ್ನಿಮಿಲೆ ಪುರೋಹಿತಮ್ ಯಜ್ಞಾಸಯ ದೇವಂ ರಾತ್ವಿಜಮ್, ಹಾತರಾಮ್ ರತ್ನಾ ಧಾತಮಂ ಅಗ್ನಿಯೇ ದೇವರು, ಬಲಿಯ ಪೂಜಕ, ಜ್ಞಾನದ ನಿಧಿಯನ್ನೇ ನೀಡುವಂತಹ ಅಗ್ನಿ ದೇವರನ್ನು ನಾನು ಪೂಜಿಸುತ್ತೇನೆ ಎನ್ನುವುದು ಇದರರ್ಥ.
ವೈಜ್ಞಾನಿಕ ಕಾರಣ
ಈ ಬಣ್ಣವು ತ್ರಿಕಾಸ್ತಿ ಮತ್ತು ಮೂಲ ಚಕ್ರದ ಶಕ್ತಿಯನ್ನು ಸಮತೋಲನದಲ್ಲಿಡುತ್ತದೆ. ಲೈಂಗಿಕ ಕ್ರಿಯೆಯು ಸಾಧು ಹಾಗೂ ಸಂತರಲ್ಲಿ ಕಡಿಮೆಯಿರುವ ಕಾರಣ ಈ ಎರಡು ಚಕ್ರಗಳಲ್ಲಿ ಶಕ್ತಿಯು ಹೆಚ್ಚು ಬೆಳವಣಿಗೆಯಾಗಿರುವುದಿಲ್ಲ. ಮೂಲ ಹಾಗೂ ತ್ರಿಕಾಸ್ತಿಯ ಬಣ್ಣವು ಕ್ರಮವಾಗಿ ಕೆಂಪು ಹಾಗೂ ಕೇಸರಿಯಾಗಿರುವುದು.
ವೈಜ್ಞಾನಿಕ ಕಾರಣ
ಈ ಬಣ್ಣವನ್ನು ಧರಿಸುವುದರಿಂದ ಹೃದಯ ಹಾಗೂ ಶಿರೋಚಕ್ರದ ಶಕ್ತಿಯ ಸಮತೋಲನ ಕಾಪಾಡಬಹುದು. ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಈ ಚಕ್ರಗಳು ಹೆಚ್ಚು ಬೆಳೆದಿರುವುದು. ಇದರಿಂದಾಗಿ ಅವರು ಎಲ್ಲಾ ಭಾವನೆಗಳನ್ನು ತ್ಯಜಿಸಿರುತ್ತಾರೆ.
ಬೌದ್ಧ ಧರ್ಮದಲ್ಲಿ ಕೇಸರಿ ಬಣ್ಣವು ತ್ಯಾಗ ಮತ್ತು ಬೆಳಕಿನ ಬಣ್ಣವಾಗಿದೆ
ಸಿಕ್ಖರ ಧಾರ್ಮಿಕ ಧ್ವಜವು ಕೇಸರಿ ಬಣ್ಣದ್ದಾಗಿದೆ. ಇದು ಸಂತೋಷ ಮತ್ತು ಪರಮಸುಖವನ್ನು ಪ್ರತಿಬಿಂಬಿಸುವುದು. ಸಿಕ್ಖರು ಧರಿಸುವಂತಹ ಪಂಚ ಪಯರೆ(ಯುದ್ಧ ಧಿರಿಸು) ಕೂಡ ಇದೇ ಬಣ್ಣದ್ದಾಗಿರುವುದು. ಈ ಬಣ್ಣವು ಆಘಾತ ಮತ್ತು ಕೆಟ್ಟ ಅನುಭವನ್ನು ಹೀರಿಕೊಳ್ಳುತ್ತದೆ ಎನ್ನುವುದು ಇದರ ಸಂಕೇತವಾಗಿದೆ.