For Quick Alerts
ALLOW NOTIFICATIONS  
For Daily Alerts

29-11-2017 ಬುಧವಾರದ ದಿನ ಭವಿಷ್ಯ

By Divya Pandith
|
ದಿನ ಭವಿಷ್ಯ - Kannada Astrology 29-11-2017 - Your Day Today - Oneindia Kannada

ಮನಸ್ಸಿಟ್ಟು ಮಾಡಿದ ಕೆಲಸ, ಕಷ್ಟ ಪಟ್ಟು ದುಡಿದ ಹಣ, ಹಲವರೊಂದಿಗೆ ಹಂಚಿ ತಿನ್ನುವ ಗುಣ, ಭಕ್ತಿಯಿಂದ ಮಾಡುವ ದೇವರ ಆರಾಧನೆ ಎಂದಿಗೂ ನಮ್ಮ ಕೈ ಬಿಡುವುದಿಲ್ಲ. ಸದಾ ನಮ್ಮ ಒಳಿತಿಗಾಗಿ ಆಶೀರ್ವದಿಸುತ್ತದೆ. ನಮಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಆಗದಿದ್ದರೂ ಚಿಂತೆಯಿಲ್ಲ. ಕೆಟ್ಟದನ್ನು ಬಯಸುವುದು ಅಥವಾ ಕೆಟ್ಟದ್ದನ್ನು ಗೈಯುವ ಕೆಲಸಕ್ಕೆ ಹೋಗಬಾರದು. ಬೇರೆಯವರಿಗೆ ಕೆಟ್ಟದ್ದನ್ನು ಬಗೆದರೆ ಅದರ ಪರಿಣಾಮವಾಗಿ ನಮಗೆ ಕೆಟ್ಟದ್ದಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು.

ಬುಧವಾರವಾದ ಇಂದು ಯಾವೆಲ್ಲಾ ಬಗೆಯ ವ್ಯತ್ಯಾಸಗಳಿಗೆ ನೀವು ಭಾಗಿಯಾಗುವಿರಿ? ನಿಮ್ಮ ಅದೃಷ್ಟವು ನಿಮ್ಮ ಕೈ ಹಿಡಿಯುವುದೇ ಅಥವಾ ನೀವು ಮಾಡಿದ ಪುಣ್ಯ ಕೆಲಸಗಳು ನಿಮ್ಮನ್ನು ಮುಂದೆ ನಡೆಸುವುದೇ? ಎನ್ನುವುದನ್ನು ತಿಳಿಯಲು ಈ ಮುಂದಿರುವ ಇಂದಿನ ದಿನ ಭವಿಷ್ಯದ ವಿವರಣೆಯನ್ನು ಅರಿಯಿರಿ...

 ಮೇಷ

ಮೇಷ

ಇಂದು ನೀವು ಸಾಲದಿಂದ ಮುಕ್ತಿ ಹೊಂದುವಿರಿ. ಎಲ್ಲಾ ಸಾಲವನ್ನೂ ನೀವು ಮರುಪಾವತಿ ಮಾಡುವಿರಿ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಸಂತೋಷ ಉಂಟಾಗುವುದು. ತಂದೆ ಮತ್ತು ಮಕ್ಕಳ ಸಹಕಾರದಿಂದ ಹೊಸ ಯೋಜನೆಯು ಚಾಲ್ತಿ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ವಿದೇಶಯಾನ ಬಯಸುವವರ ಕನಸು ನೆರವೇರುವುದು. ಯಶಸ್ವಿ ಬದುಕಿಗಾಗಿ ವಿಷ್ಣುವಿನ ಆರಾಧನೆ ಮಾಡಿ.

ವೃಷಭ

ವೃಷಭ

ಸಮಾಧಾನದಲ್ಲಿ ನೀವು ಜೀವನನಡೆಸಬೇಕು. ಆತುರದ ನಿರ್ಧಾರವನ್ನು ಕೈಗೊಳ್ಳದಿರಿ. ಮಾನಸಿಕವಾಗಿ ಕಿರಿಕಿರಿ ಉಂಟಾಗುವ ಲಕ್ಷಣಗಳಿವೆ. ಹಣಕಾಸಿನ ಬಗ್ಗೆ ಆದಷ್ಟು ಜಾಗ್ರತರಾಗಿರಿ. ನೀವು ಮಾಡುತ್ತಿರುವ ಉದ್ಯೋಗದಲ್ಲಿ ಉಂಟಾಗುವ ಏರು ಪೇರುಗಳು ನಿಮ್ಮನ್ನು ಹೈರಾಣಗೊಳಿಸುವುದು. ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುವುದು. ಸ್ನೇಹಿತರೇ ದ್ರೋಹ ಮಾಡುವ ಸಾಧ್ಯತೆಗಳಿವೆ. ಹಣವನ್ನು ಪಡೆಯುವುದು ಅಥವಾ ಕೊಡುವ ಕೆಲಸಕ್ಕೆ ಕೈ ಹಾಕದಿರಿ. ಮೂರನೆ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶ ನೀಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಗಣೇಶನ ಆರಾಧನೆ ಮಾಡಿ.

ಮಿಥುನ

ಮಿಥುನ

ಮನೆಯಲ್ಲಿ ನೆಮ್ಮದಿ ಹಾಗೂ ಮನಸ್ಸಿಗೆ ಸಂತೋಷ ಉಂಟಾಗುವುದು. ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆಯಿಂದ ಮುಂದುವರಿಯಿರಿ. ಕಬ್ಬಿಣ, ತೈಲೋದ್ಯಮಗಳಲ್ಲಿ ಲಾಭ ಉಂಟಾಗುವುದು. ಹೊಟೇಲ್ ಉದ್ಯಮಿಗಳಿಗೂ ಲಾಭ ದೊರೆಯುವುದು. ಸಂಗಾತಿ ಹೇಳುವ ಸಲಹೆಯನ್ನು ಸ್ವೀಕರಿಸಿ. ವಿದ್ಯಾರ್ಥಿಗಳಿಗೆ ಶುಭ ದಿನ. ಸ್ತ್ರೀಯರ ಮನ ನೋಯಿಸದಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಕುಲದೇವರ ಆರಾಧನೆ ಹಾಗೂ ಇಷ್ಟ ದೇವರ ಸ್ಮರಣೆಯನ್ನು ಮಾಡಿ.

ಕರ್ಕ

ಕರ್ಕ

ನೀವು ಅಂದುಕೊಂಡ ಕಾರ್ಯವು ನೆರವೇರುವುದು. ತಂದೆ ಮಕ್ಕಳ ನಡುವೆ ಇದ್ದ ಭಿನ್ನಾಭಿಪ್ರಾಯ ಉಪಶಮನವಾಗುವುದು. ಬಂಧು ಮಿತ್ರರಿಂದ ಸಹಕಾರ ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸುವುದು. ದೂರದ ಸಂಬಂಧಿಗಳು ಅಗಲಿದ ಸುದ್ದಿಯನ್ನು ಕೇಳಬೇಕಾಗುವುದು. ಎಲ್ಲಾ ತರಹದ ವ್ಯಾಪಾರ ವಹಿವಾಟು ಸುಗಮವಾಗಿ ಸಾಗುವುದು. ಆರ್ಥಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನ. ಸಮಸ್ಯೆಗಳ ನಿವಾರಣೆಗೆ ಗಣೇಶ ಹಾಗೂ ವಿಷ್ಣುವಿನ ಆರಾಧನೆ ಮಾಡಿ.

ಸಿಂಹ

ಸಿಂಹ

ನಿಮಗೆ ಪಂಚಮಶನಿ ಇರುವುದರಿಂದ ವಿಪರೀತ ಆಯಾಸ, ಇಲ್ಲಸಲ್ಲದ ಆರೋಪಗಳು ನಿಮ್ಮ ಬೆನ್ನೇರುವುದು. ತಾಂತ್ರಿಕ ವರ್ಗದವರಿಗೆ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆ ಉಂಟಾಗುವುದು. ಅನೇಕ ಸಮಸ್ಯೆಗಳು ಒಂದೊಂದಾಗಿಯೇ ತಲೆದೂರುವುದು. ನಿಮ್ಮ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಕನ್ಯಾ

ಕನ್ಯಾ

ಇಲ್ಲ ಸಲ್ಲದ ಆರೋಪಗಳಿಗೆ ನೀವು ತುತ್ತಾಗಬೇಕಾಗುವುದು. ಇದರಿಂದ ಮಾನಸಿಕ ಕಿರಿಕಿರಿ ಉಯಂಟಾಗುವುದು. ಬಂಧು ಮಿತ್ರರಿಂದ ಸಹಕಾರ ದೊರೆಯದು. ಮಾಡುತ್ತಿರುವ ಉದ್ಯೋಗವನ್ನೇ ಮುಂದುವರಿಸಿ. ಕೆಲಸವನ್ನು ಬಿಡುವುದು ಅಥವಾ ಬದಲಾವಣೆಯ ಕೆಲಸಕ್ಕೆ ಮುಂದಾಗದಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಶಿವನ ಆರಾಧನೆ ಮಾಡಿ.

 ತುಲಾ

ತುಲಾ

ನಿಮ್ಮ ಸುಂದರ ಬದುಕಿಗೆ ಭಗವಂತನ ಆಶೀರ್ವಾದ ಲಭಿಸುವುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಉಪಶಮನ ಕಾಣುವುದು. ಮನೆಯಲ್ಲಿ ನೆಮ್ಮದಿ ಸಿಗುವುದು. ಸಹೋದರರಿಂದ ನಿರೀಕ್ಷಿತ ಮಟ್ಟದ ಸಹಕಾರ ದೊರೆಯುವುದು. ಅನೇಕದಿನದಿಂದ ನಿಂತಿರುವ ಕೆಲಸ ಇದೀಗ ಚಾಲನೆ ಕಾಣುವುದು. ಆರ್ಥಿಕವಾಗಿ ಉತ್ತಮ ಲಾಭ ಪಡೆಯುವಿರಿ. ಸಮಾಧಾನದ ಬದುಕಿಗೆ ವಿಷ್ಣುವಿನ ಸ್ಮರಣೆ ಮಾಡಿ.

ವೃಶ್ಚಿಕ

ವೃಶ್ಚಿಕ

ಇಂದು ನಿಮಗೆ ಅಷ್ಟು ಅನುಕೂಲಕರವಲ್ಲದ ದಿನ. ಮಾನಸಿಕ ಕಿರಿಕಿರಿ ನಿಮ್ಮನ್ನು ಹೈರಾಣಗೊಳಿಸುವುದು. ತಂದೆ ಮಕ್ಕಳ ನಡುವೆ ವೈಮನಸ್ಸು ಉಂಟಾಗುವುದು. ಹಿತಶತ್ರುಗಳ ಕಾಟ ಉಂಟಾಗುವುದು. ಶನಿಯ ಪ್ರಭಾವಕ್ಕೆ ನೀವು ಒಳಗಾಗಿದ್ದೀರಿ. ಆಸ್ತಿಯನ್ನು ಪಡೆಯಲು ಕಿತ್ತಾಟ ನಡೆಸದಿರಿ. ನ್ಯಾಯಾಂಗದಲ್ಲಿ ಅಪಜಯ ಉಂಟಾಗುವುದು. ಉತ್ತಮ ಭವಿಷ್ಯಕ್ಕಾಗಿ ವಿಷ್ಣುವಿನ ಆರಾಧನೆ ಹಾಗೂ ಆಂಜನೇಯನ ಸ್ಮರಣೆ ಮಾಡಿ.

ಧನು

ಧನು

ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರುಪೇರು ನಿಮ್ಮನ್ನು ಹೈರಾಣಗೊಳಿಸುವುದು. ಬಂಧು ಮಿತ್ರರ ಕಿರಿಕಿರಿ ಉಂಟಾಗುವುದು. ಸ್ಥಿರಾಸ್ತಿಯಿಂದ ನಷ್ಟ ಉಂಟಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಅಪಜಯ ಉಂಟಾಗುವುದು. ಸ್ತ್ರೀಯರಿಗೆ ತವರು ಮನೆಯಿಂದ ಅವಮಾನ ಉಂಟಾಗುವುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಉತ್ತಮ ಬದುಕಿಗಾಗಿ ಹಾಗೂ ಸಮಸ್ಯೆಗಳ ನಿವಾರಣೆಗೆ ವಿಷ್ಣುವಿನ ಆರಾಧನೆ ಮಾಡಿ.

ಮಕರ

ಮಕರ

ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಬಂಧು ಮಿತ್ರರಿಂದ ಸಹಕಾರ ಸಿಗುವುದು. ಮನೆಯಲ್ಲಿ ನೆಮ್ಮದಿ. ಬೇರೆಯವರ ಮಾತಿಗೆ ಕಿವಿಕೊಡದಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೋರಿ. ಹಣವನ್ನು ಕೊಡುವುದು ಅಥವಾ ತೆಗೆದುಕೊಳ್ಳುವ ಕೆಲಸಕ್ಕೆ ಮುಂದಾಗದಿರಿ. ಪ್ರಗತಿಯುತ ಜೀವನಕ್ಕೆ ವಿಷ್ಣುವಿನ ಆರಾಧನೆ ಮಾಡಿ.

ಕುಂಬ

ಕುಂಬ

ಸಮಾಧಾನದ ಬದುಕು ನಿಮ್ಮನ್ನು ಅರಸಿ ಬರುವುದು. ಸ್ತ್ರೀಯರಿಗೆ ಉತ್ತಮ ಫಲಿತಾಂಶ ದೊರೆಯುವುದು. ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಭಡ್ತಿ ದೊರೆಯಲಿದೆ. ಇನ್ನಷ್ಟು ಸಂತೋಷದ ಬದುಕಿಗೆ ವಿಷ್ಣು ಮತ್ತು ಗಣೇಶನ ಆರಾಧನೆ ಮಾಡಿ.

ಮೀನ

ಮೀನ

ಇಂದು ನಿಮಗೆ ಅದೃಷ್ಟದ ದಿನ. ನೀವು ಮಾಡುವ ಕೆಲಸಕ್ಕೆ ಯಾವುದೇ ಹಿಂಜರಿಕೆ ತೋರದೆ ಮುನ್ನಡೆಯಿರಿ. ಕಲಾವಿದರಿಗೆ ಅನುಕೂಲಕರವಾದ ದಿನ. ಆರ್ಥಿಕವಾಗಿ ಲಾಭ ಹಾಗೂ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶ ಮತ್ತು ವಿಷ್ಣುವಿನ ಆರಾಧನೆ ಮಾಡಿ.

English summary

rashi-bhavishya-november-29th

Know what astrology and the planets have in store for you today. Choose your zodiac sign and read the details...
X
Desktop Bottom Promotion