Just In
- 1 hr ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 2 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 3 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 4 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ ಶಾಂತಿ ನೆಮ್ಮದಿಗೆ-ಒಂದು ಲೋಟ 'ಉಪ್ಪು' ನೀರಿನ ಪರೀಕ್ಷೆ!
ಎಲ್ಲಿ ಋಣಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ ದಾರಿದ್ರ ಬೀಡು ಬಿಡುತ್ತದೆ ಎಂದು ಹೇಳಲಾಗಿದೆ. ಋಣಾತ್ಮಕ ಶಕ್ತಿ ಮನೆಯನ್ನು ಆವರಿಸಿದಷ್ಟೂ ಹೆಚ್ಚು ಉದ್ವೇಗ, ಆತಂಕ, ದುಗುಡಗಳು ಆವರಿಸುತ್ತವೆ. ಈ ಋಣಾತ್ಮಕ ಶಕ್ತಿಗಳನ್ನು ಹೊರಹಾಕಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಸಾಮಾನ್ಯ ಉಪ್ಪನ್ನು ಬಳಸಿ ಈ ಋಣಾತ್ಮಕ ಶಕ್ತಿಗಳ ಪ್ರಭಾವವನ್ನು ಇಲ್ಲದಂತಾಗಿಸುವುದು ಮಾತ್ರವಲ್ಲ ಈ ಮೂಲಕ ಮನೆಯಿಂದ ದಾರಿದ್ರ್ಯವನ್ನೂ ಹೊರಹಾಕಲು ಸಾಧ್ಯ. ಉಪ್ಪನ್ನು ಈ ಕೆಲಸಕ್ಕೆ ಕೆಲವಾರು ವಿಧಗಳಲ್ಲಿ ಬಳಸಬಹುದು.
ಇದೇ ಕಾರಣಕ್ಕೆ ಮನೆಯಲ್ಲಿ ಜಗಳ, ಅಶಾಂತಿ ಉಂಟಾಗುವುದು!
ಋಣಾತ್ಮಕ ಶಕ್ತಿಗಳಿಂದ ಮುಕ್ತಿ ಪಡೆಯಲು ಹಲವಾರು ಸಂಶೋಧಕರು ಉಪ್ಪನ್ನು ಹಲವು ವಿಧಗಳಲ್ಲಿ ಬಳಸಿದ್ದು ಒಂದಕ್ಕಿಂತ ಹೆಚ್ಚು ವಿಧಾನದ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅತ್ಯಂತ ಪ್ರಬಲವಾದ ಕೆಲವು ವಿಧಾನಗಳನ್ನು ನಾವು ಸಂಗ್ರಹಿಸಿದ್ದು ಈ ಮೂಲಕ ನಿಮ್ಮ ಮನೆಯಿಂದಲೂ ಋಣಾತ್ಮಕ ಶಕ್ತಿ ಹಾಗೂ ದಾರಿದ್ರ್ಯವನ್ನು ಹೊರಹಾಕಲು ನೆರವಾಗಬಹುದು.....
ಕಲ್ಲುಪ್ಪು ಬೆರೆಸಿದ ನೀರಿನಿಂದ ನೆಲ ಒರೆಸಿ...
ಈ ವಿಧಾನವನ್ನು ಭಾನುವಾರದ ಹೊರತು ಇತರ ದಿನಗಳಲ್ಲಿ ಆಚರಿಸಬಹುದು. ಮೊದಲು ಕೊಂಚ ಕಲ್ಲುಪ್ಪನ್ನು ನೀರಿನಲ್ಲಿ ಬೆರೆಸಿ ಈ ನೀರನ್ನು ನೆಲ ಒರೆಸುವ ದ್ರಾವಣದಲ್ಲಿ ಮಿಶ್ರಣ ಮಾಡಿ ಇಡಿಯ ಮನೆಯ ನೆಲವನ್ನು ಒರೆಸಿ.
ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸಿ...
ಮನೆಯ ಹಿಂಭಾಗದಿಂದ ಪ್ರಾರಂಭಿಸಿ ಮನೆಯ ಒಳಗಣ ಪ್ರತಿ ಕೋಣೆಯ ನೆಲದ ಒಂದಿಂಚನ್ನೂ ಬಿಡದಂತೆ ಒರೆಸುತ್ತಾ ಮನೆಯ ಹೊಸ್ತಿಲಿನಲ್ಲಿ ಕೊನೆಯಾಗುವಂತೆ ಒರೆಸುವ ಮೂಲಕ ಋಣಾತ್ಮಕ ಶಕ್ತಿಯನ್ನು ಹೊರಹಾಕುವ ಮೂಲಕ ದಾರಿದ್ರ್ಯದ ಲಕ್ಷಣಗಳನ್ನೂ ನಿವಾರಿಸಬಹುದು.
ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....
ಒಂದು ಗಾಜಿನ ಲೋಟದಲ್ಲಿರುವ ನೀರಿಗೆ ಚಿಟಿಕೆಯಷ್ಟು ಕಲ್ಲುಪ್ಪು ಬೆರೆಸಿ ಕಲಕಿ. ಈ ಲೋಟವನ್ನು ನಿಮ್ಮ ಮನೆಯ ನೈಋತ್ಯ ಭಾಗದ ಮೂಲೆಯಲ್ಲಿರಿಸಿ. ಈ ಮೂಲಕ ಮನೆಯಲ್ಲಿದ್ದ ದಾರಿದ್ರ್ಯ ಹೊರಹೋಗಲು ಸಾಧ್ಯವಾಗುತ್ತದೆ.
ಒಂದು ಲೋಟ ನೀರಿಗೆ ಚಿಟಿಕೆಯಷ್ಟು ಉಪ್ಪು....
ಆದರೆ ಇದರೊಂದಿಗೆ ಹೇಳಬೇಕಾದ ಗುಟ್ಟು ಏನೆಂದರೆ ಅತ್ಯುತ್ತಮ ಫಲಿತಾಂಶ ಪಡೆಯಲು ಈ ಲೋಟವಿರುವ ಸ್ಥಳದಲ್ಲಿ ಕೆಂಪು ಬಣ್ಣದ ದೀಪ ಬೆಳಗುತ್ತಿರುವಂತೆ ನೋಡಿಕೊಳ್ಳಬೇಕು ಹಾಗೂ ಈ ಲೋಟದಲ್ಲಿ ನೀರು ಒಣಗುತ್ತಿದ್ದಂತೆಯೇ ಮತ್ತೊಮ್ಮೆ ಉಪ್ಪು ಬೆರೆಸಿದ ನೀರನ್ನು ತುಂಬಿಸುತ್ತಾ ಇರಬೇಕು.
ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪು...
ಒಂದು ಬೋಗುಣಿಯಲ್ಲಿ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಹಾಕಿ ಈ ಬೋಗುಣಿಯನ್ನು ನಿಮ್ಮ ಮನೆಯ ಸ್ನಾನಗೃಹದ ನೀರು ಬೀಳದ ಮೂಲೆಯಲ್ಲಿರಿಸಬೇಕು. ಈ ಉಪ್ಪನ್ನು ನಿಯಮಿತವಾಗಿ ಬದಲಿಸುತ್ತಲೂ ಇರಬೇಕು. ಈ ವಿಧಾನದಿಂದ ನಿಮ್ಮ ಮನೆಯನ್ನು ಆವರಿಸಿಸಬಹುದಾಗಿದ್ದ ದಾರಿದ್ರ್ಯದಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.
ಮನೆಯೊಳಗೆ ಸಮೃದ್ಧಿಗೆ ಹೀಗೆ ಮಾಡಿ...
ಒಂದು ಚಿಕ್ಕ ಕೆಂಪು ಬಣ್ಣದ ಬಟ್ಟೆಯಲ್ಲಿ ಕೊಂಚ ಉಪ್ಪನ್ನು ಹಾಕಿ ಗಂಟುಕಟ್ಟಿ ಈ ಗಂಟನ್ನು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಮೇಲೆ ನೇತುಹಾಕಿ. ಈ ಮೂಲಕ ನಿಮ್ಮ ಮನೆಗೆ ಪ್ರವೇಶಿಸುವ ಯಾವುದೇ ಋಣಾತ್ಮಕ ಶಕ್ತಿಯಿಂದ ರಕ್ಷಣೆ ಪಡೆದಂತಾಗುತ್ತದೆ ಹಾಗೂ ನಿಮ್ಮ ಮನೆಯೊಳಗೆ ಸಮೃದ್ಧಿ ಹಾಗೂ ಶುಭಶಕುನಗಳನ್ನು ಆಹ್ವಾನಿಸಲು ಸಾಧ್ಯವಾಗುತ್ತದೆ.
ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿ ಇಟ್ಟಿರಿ...
ನಿಮ್ಮ ಮನೆಯ ಊಟದ ಮೇಜಿನ ಮೇಲೆ ಸದಾ ಉಪ್ಪಿನ ಚಿಕ್ಕ ಭರಣಿಯನ್ನು ಇರಿಸಿರುವ ಮೂಲಕ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ. ಈ ಪುಟ್ಟ ಉಪ್ಪಿನ ಭರಣಿಗೆ ಇಷ್ಟು ಶಕ್ತಿ ಇದೆಯೆಂದು ಅಚ್ಚರಿಯಾಗುತ್ತದಲ್ಲವೇ?
ಸ್ನಾನ ಮಾಡುವ ಮುನ್ನ
ಸ್ನಾನ ಮಾಡುವ ಮುನ್ನ ಬಾತ್ ಟಬ್ ನಲ್ಲಿರುವ ನೀರಿಗೆ ಒಂದು ಕಪ್ ಅಥವಾ ಎರಡು ಕಪ್ ಕಲ್ಲುಪ್ಪನ್ನು ಸೇರಿಸಿ ಕಲಕಿ ಈ ನೀರಿನಿಂದ ಸ್ನಾನ ಮಾಡುವ ಮೂಲಕ ದೇಹದಿಂದ ವಿಷಕಾರಿ ವಸ್ತುಗಳು ನಿವಾರಣೆಯಾಗಿ ತಾಜಾತನ ದೊರಕುತ್ತದೆ.
ಸ್ನಾನ ಮಾಡುವ ಮುನ್ನ
ಈ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ದೇಹವನ್ನು ಮುಳುಗಿಸಿಡಬೇಕು. ಇದರಿಂದ ದೇಹವನ್ನು ಆವರಿಸಿದ್ದ ಋಣಾತ್ಮಕ ಶಕ್ತಿಗಳೆಲ್ಲ ನೀರಿನಲ್ಲಿ ಕರಗಿ ಹೊರಹೋಗುತ್ತವೆ.