Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
400 ಮಕ್ಕಳ ಪ್ರಾಣ ರಕ್ಷಿಸಲು, 1 ಕಿ.ಮೀ ಬಾಂಬ್ ಹಿಡಿದು ಓಡಿದ ಧೀರ ಪೋಲೀಸ್!
ಮಧ್ಯಪ್ರದೇಶದ ಪೋಲೀಸ್ ಅಧಿಕಾರಿಯೊಬ್ಬರು ತಮ್ಮ ಗ್ರಾಮದ ಹೀರೋ ಅನ್ನಿಸಿಕೊಂಡಿದ್ದಾರೆ. ಕಷ್ಟಕರವಾದ ಕ್ಷಣದಲ್ಲಿ ಉಪಯೋಗಿಸಿದ ಸಾಮಾನ್ಯ ಜ್ಞಾನದ ಕಾರಣ ಇವರು ನಾನೂರು ಶಾಲಾ ಮಕ್ಕಳನ್ನು ರಕ್ಷಿಸಲು ಕಾರಣವಾಗಿದ್ದೇ ಈ ಪಟ್ಟ ದೊರಕಲು ಸಾಧ್ಯವಾಗಿದೆ. ಇದು ಯಾವುದೋ ಒಂದು ಹಿಂದಿ ಚಲನಚಿತ್ರದ ದೃಶ್ಯವಿರಬಹುದೆಂದು ನೀವು ಎಣಿಸಿದ್ದರೆ ಇದು ತಪ್ಪು, ಈ ಘಟನೆ ನಿಜವಾಗಿಯೂ ಇತ್ತೀಚೆಗೆ ನಡೆದಿದೆ.
ಈ ಧೀಮಂತ ಪೋಲೀಸ್ ಅಧಿಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಇಂದು ನೀಡಲಾಗಿದ್ದು ಲೇಖನದ ನಡುವೆ ಇರುವ ವಿಡಿಯೋ ಮೂಲಕ ದಿಕ್ಕಾಪಾಲಾಗಿ ಓಡುತ್ತಿರುವ ಜನರಿಗೆ ವಿರುದ್ಧವಾಗಿ ಓಡುತ್ತಾ ಧೈರ್ಯದಿಂದ ಸನ್ನಿವೇಶವನ್ನು ಎದುರಿಸಿದ ಬಗೆಯನ್ನು ನೋಡಿ....

ಈ ಎಲ್ಲವೂ ಒಂದು ವಿಡಿಯೋ ಕಾಲ್ನಿಂದ ಪ್ರಾರಂಭವಾಯಿತು
ವರದಿಗಳ ಪ್ರಕಾರ ಮಧ್ಯಪ್ರದೇಶದ ಚಿತೋರಾ ಎಂಬ ಗ್ರಾಮದಲ್ಲಿ ಪೋಲೀಸರಿಗೊಂದು ಅನಾಮಧೇಯ ಕರೆ ಬಂದಿತ್ತು. ಈ ಕರೆಯಲ್ಲಿ ನೀಡಿದ ವಿವರದ ಪ್ರಕಾರ ಗ್ರಾಮದ ಶಾಲೆಯಲ್ಲಿ ಹತ್ತು ಕೇಜಿಯಷ್ಟು ದೊಡ್ಡಗಾತ್ರದ ಪ್ರಬಲ ಬಾಂಬೊಂದನ್ನು ಇರಿಸಲಾಗಿದೆ! ತಕ್ಷಣವೇ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸ್ ಇಲಾಖೆ ಶೀಘ್ರವೇ ಕರೆಯಲ್ಲಿ ವಿವರಿಸಿದಲ್ಲಿ ಬಾಂಬ್ ನಿಜವಾಗಿಯೂ ಇದ್ದುದನ್ನು ಗಮನಿಸಿ ತಕ್ಷಣವೇ ಶಾಲೆಯನ್ನು ಮುಚ್ಚಲು ಆದೇಶ ನೀಡಿದರು.

ಶಾಲಾ ಮಕ್ಕಳಿಗೆ ಅಪಾಯವಾಗುವ ಸಂಭವ
ಆ ಹೊತ್ತಿನಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿ ಉಪಸ್ಥಿತರಿದ್ದು ಜೀವಕ್ಕೇ ಅಪಾಯವಾಗುವ ಸಂಭವವಿತ್ತು. ಬಾಂಬ್ ಯಾವಾಗ ಸಿಡಿಯುತ್ತದೆ ಎಂದು ಗೊತ್ತಿಲ್ಲ. ತಕ್ಷಣವೇ ಬಾಂಬನ್ನು ಅಲ್ಲಿಂದ ನಿವಾರಿಸದಿದ್ದರೆ ನಾನೂರು ಮಕ್ಕಳ ಜೀವಕ್ಕೆ ಕುತ್ತು! ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾರೇ ಆದರೂ ಧೃತಿಗೆಡುತ್ತಿದ್ದುದ್ದು ಸಹಜ. ಆದರೆ ಹೆಡ್ ಕಾನ್ಸ್ ಟಬಲ್ ಅಭಿಶೇಕ್ ಪಟೇಲ್ ಎಂಬ ಅಧಿಕಾರಿ ತಕ್ಷಣವೇ ತನ್ನ ಜೀವದ ಹಂಗನ್ನು ತೊರೆದು ಹತ್ತು ಕೇಜಿ ಬಾಂಬ್ ಅನ್ನು ಎತ್ತಿ ಶಾಲೆಗೆ ವಿರುದ್ದ ದಿಕ್ಕಿನತ್ತ ಓಡತೊಡಗಿದರು.

ಇವರು ಓಡಿದ್ದು ಸುಮಾರು ಒಂದು ಕಿಮೀ ಯಷ್ಟು ದೂರ
ಈ ಧೀಮಂತ ಅಧಿಕಾರಿ ಬಾಂಬ್ ಎತ್ತಿಕೊಂಡು ಒಂದೇ ಉಸಿರಿನಿಂದ ಸುಮಾರು ಒಂದು ಕಿ.ಮೀ ಗೂ ಹೆಚ್ಚಿನ ದೂರವನ್ನು ಓಡಿ ಸುರಕ್ಷಿತ ಸ್ಥಳದಲ್ಲಿಟ್ಟು ಅಲ್ಲಿಂದ ದೂರವಾದರು. ಏಕೆ ಈ ಯೋಚನೆ ಬಂತು ಎಂದು ಕೇಳಿದರೆ ಇತ್ತೀಚೆಗೆ ಭಾರವನ್ನು ಎತ್ತಿ ಓಡುವ ಕವಾಯತನ್ನು ಮಾಡಿದ್ದು ಆ ಕವಾಯತಿನಲ್ಲಿ ಭಾರವನ್ನು ಹೊತ್ತು ಓಡಿದ್ದ ಅನುಭವಿದ್ದುದರಿಂದ ಹೀಗೆ ಮಾಡಿದೆ ಎಂದು ತಿಳಿಸಿದ್ದಾರೆ.

ಇವರ ಹೆದರಿಕೆ
ಇವರ ವಿವರಣೆಯ ಪ್ರಕಾರ ಒಂದು ವೇಳೆ ಬಾಂಬು ಸಿಡಿದರೆ ಸುಮಾರು ಅರ್ಧ ಕಿಮೀ ತ್ರಿಜ್ಯದ ವಿಸ್ತಾರದಲ್ಲಿ ಘೋರ ಅನಾಹುತ ಸಂಭವಿಸುತ್ತದೆ. ಆದ್ದರಿಂದ ಮಕ್ಕಳು ಸುರಕ್ಷಿತವಾಗಿರಲು ಕನಿಷ್ಠ ಐನೂರು ಮೀಟರ್ಗಿಂತ ಹೊರಗೆ ಹೋಗಬೇಕು, ಆ ಬಳಿಕ ಬಾಂಬ್ ಸ್ಫೋಟಗೊಂಡು ತಾನು ಮರಣಹೊಂದಿದರೂ ತೊಂದರೆ ಇಲ್ಲ ಎಂದು ಇವರು ಯೋಚಿಸಿದ್ದರು.
ಈ ವಿಡಿಯೋ ವೈರಲ್ ಆಗಿದೆ
ಬಾಂಬ್ ಎತ್ತಿಕೊಂಡು ಬೆಟ್ಟದತ್ತ ಓಡುತ್ತಿರುವ ದೃಶ್ಯವನ್ನು ಕೆಲವರು ಸೆರೆಹಿಡಿದಿದ್ದು ಅಡ್ದಬಂದ ಪೊದೆ, ಕಲ್ಲುಗಳನ್ನು ಲೆಕ್ಕಿಸದೇ ಒಲಿಂಪಿಕ್ ಆಟಗಾರನಂತೆ ಒಂದೇ ಸಮನೆ ಊರಿನಿಂದ ಹೊರಗೆ ಓಡುತ್ತಿರುವ ದೃಶ್ಯ ಎಂತಹವರಿಗಾದರೂ ಎದೆ ಝಲ್ಲೆನಿಸುತ್ತದೆ. "ಆ ಹೊತ್ತಿನಲ್ಲಿ ನನಗೆ ಮಕ್ಕಳ ಪ್ರಾಣ ಉಳಿಸುವುದೊಂದೇ ಗುರಿಯಾಗಿತ್ತೇ ವಿನಃ ಬೇರೇನೂ ತೋಚುತ್ತಿರಲಿಲ್ಲ" ಎಂದು ವಿವರಿಸಿದ ಅಭಿಶೇಕ್ ಗೆ ಇಡಿಯ ಭಾರತ ಸಲಾಂ ಹೇಳುತ್ತಿದೆ.ಈ ವಿಡಿಯೋ ನೋಡಿ. ನಮ್ಮ ನಡುವೆ ಇಂತಹ ಧೈರ್ಯವಂತ ಹಾಗೂ ನಿಷ್ಠಾವಂತ ಅಧಿಕಾರಿಗಳು ಇರಬೇಕು ಎಂದು ಅನ್ನಿಸುವುದಿಲ್ಲವೇ?



Click it and Unblock the Notifications











