Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ವಿಸ್ಮಯ ಜಗತ್ತು: ಈಕೆ ತಾಯಿಯಲ್ಲ, ನರಮಾಂಸ ತಿನ್ನುವ ರಾಕ್ಷಸಿ!
ಮದ್ಯವ್ಯಸನಿಯಾದ ಈ ಮಹಿಳೆ ತನ್ನ ಮಗುವಿನ ಮಾಂಸವನ್ನೇ ಕಿತ್ತು ತಿನ್ನುತ್ತಿದ್ದಾಗಲೇ ಹಿಡಿಯಲ್ಪಟ್ಟಿದ್ದಾಳೆ. ಆ ಸಮಯದಲ್ಲಿ ಮಗು ಜೀವಂತವಿದ್ದು ನೋವಿನಿಂದ ಕಿರುಚುತ್ತಿತ್ತು. ಅತ್ಯಂತ ಅಸಹ್ಯವಾದ ಈ ಪ್ರಕರಣದ ವಿವರಗಳನ್ನು ನೋಡೋಣ
ಮಗುವೊಂದರ ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸಾಗಿದ್ದು ಮಗುವಿನ ಆಗಮನ ಮೂಲಕ ಧನ್ಯತಾಭಾವನೆಯನ್ನು ಪಡೆಯುತ್ತಾಳೆ. ತನ್ನ ಮಗುವಿಗಾಗಿ ಯಾವ ತ್ಯಾಗವನ್ನೂ ಮಾಡಲು ತಯಾರಾಗುತ್ತಾಳೆ. ತನ್ನ ಒಲವು, ಪ್ರೀತಿ, ಆರೈಕೆಗಳ ಧಾರೆಯನ್ನೇ ಎರೆದು ಮಗು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆಯುವಂತಾಗಲು ಶ್ರಮಿಸುತ್ತಾಳೆ.
ಆದರೆ ಈ ವಿಶ್ವದಲ್ಲಿ ಎಲ್ಲಾ ತಾಯಂದಿರು ಹೀಗೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮಹಿಳೆಯರು ಮದ್ಯವ್ಯಸನಿಗಳೂ, ಮಾದಕದ್ರವ್ಯ ಸೇವಿಸುವವರೂ ಆಗಿರುತ್ತಾರೆ. ಇವರೂ ತಾಯಿಯಾಗುತ್ತಾರೆ. ಆದರೆ ವ್ಯಸನ ಇವರ ವಿವೇಕವನ್ನು ಕುಂಠಿತಗೊಳಿಸಿರುತ್ತದೆ. ಪರಿಣಾಮವಾಗಿ ಕ್ರೋಧ, ಹುಚ್ಚುತನ ಮೊದಲಾದವು ಮಮತೆಯನ್ನು ಮರೆಸಿ ವಿಜೃಂಭಿಸುತ್ತವೆ. ಈ ತರಹದ ವ್ಯಸನಕ್ಕೆ ತುತ್ತಾದ ಭಾರತೀಯ ಮಹಿಳೆಯೊಬ್ಬಳ ಕಥೆಯನ್ನು ಇಂದು ಕೇಳೋಣ.... ಮರಣದಂಡನೆ ವಿಧಿಸಿದ್ದ ವ್ಯಕ್ತಿಯ ವಿಚಿತ್ರ ಬಯಕೆ! ಹೀಗೂ ಉಂಟೇ?
ಮದ್ಯವ್ಯಸನಿಯಾದ ಈ ಮಹಿಳೆ ತನ್ನ ಮಗುವಿನ ಮಾಂಸವನ್ನೇ ಕಿತ್ತು ತಿನ್ನುತ್ತಿದ್ದಾಗಲೇ ಹಿಡಿಯಲ್ಪಟ್ಟಿದ್ದಾಳೆ. ಆ ಸಮಯದಲ್ಲಿ ಮಗು ಜೀವಂತವಿದ್ದು ನೋವಿನಿಂದ ಕಿರುಚುತ್ತಿತ್ತು. ಅತ್ಯಂತ ಅಸಹ್ಯವಾದ ಈ ಪ್ರಕರಣದ ವಿವರಗಳನ್ನು ನೋಡೋಣ....

ಯಾರೀಕೆ?
ಒರಿಸ್ಸಾ ರಾಜ್ಯದ ಗೋಪಾಲಪುರ ಎಂಬ ಪಟ್ಟಣದ ನಿವಾಸಿಯಾದ 'ಪ್ರಮಿಣಾ ಮೊಂಡಲ್' ಎಂಬ ಮದ್ಯವ್ಯಸನಿ ಮಹಿಳೆಯ ಕಥೆಯಿದು.

ಈಕೆ ಏನು ಮಾಡಿದಳು
ಮದ್ಯದ ಅಮಲಿನಲ್ಲಿ ತನ್ನ ಎರಡು ವರ್ಷದ ಮಗುವಿನ ತಲೆಯ ಒಂದು ತುಂಡನ್ನೇ ಕಚ್ಚಿ ತಿನ್ನುತ್ತಿದ್ದಾಗ ಆಕೆಯ ಭಾವ ಮಗುವಿನ ಕಿರುಚಾಟ ಕೇಳಿ ಓಡಿ ಬಂದು ಮಗುವನ್ನು ರಕ್ಷಿಸಿದ್ದ.

ಆಕೆಯ ಭಾವ ಹೇಗೆ ಮಗುವನ್ನು ರಕ್ಷಿಸಿದ?
ಈಕೆಯ ಭಾವ ಅಂದು ಮನೆಗೆ ಪ್ರವೇಶಿಸಿದಾಗ ನೋವಿನಿಂದ ಕಿರಿಚಿಕೊಳ್ಳುತ್ತಿದ್ದ ಮಗಿವಿನ ದನಿ ಕೇಳಿ ಒಳಗೆ ಧಾವಿಸಿದ. ಅಲ್ಲಿ ಕಂಡ ದೃಶ್ಯ ಘಲ್ಲೆನಿಸುವಂತಿತ್ತು. ಮಗುವಿನ ತಾಯಿಯೇ ಮಗುವಿನ ತಲೆಬುರುಡೆಯನ್ನು ಬಲವಾಗಿ ಕಚ್ಚಿ ಮಾಂಸದ ತುಂಡೊಂದನ್ನು ಅಗಿಯುತ್ತಿದ್ದಳು. ನೋವಿನಿಂದ ಮಗು ಸೂರು ಹಾರುವಂತೆ ಬೊಬ್ಬೆ ಹೊಡೆಯುತ್ತಿತ್ತು. ತಕ್ಷಣವೇ ಜಾಗೃತನಾದ ಈತ ಆಕೆಯಿಂದ ಮಗುವನ್ನು ಕಿತ್ತುಕೊಂಡು ಒಂದೇ ಓಟಕ್ಕೆ ಆಸ್ಪತ್ರೆಗೆ ಸೇರಿಸಿದ.

ಗ್ರಾಮಸ್ಥರಿಂದ ಆಕೆಗೆ ಬಿತ್ತು ಧರ್ಮದೇಟು
ಈ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲ ಜನರೆಲ್ಲ ತಕ್ಷಣವೇ ಆಕೆಯ ಮನೆಯ ಎದುರು ಜಮಾಯಿಸಿದರು. ಕೆಲವರು ಆಕೆಯನ್ನು ಮನೆಯಿಂದ ಹೊರಗೆಳೆಯುತ್ತಿದ್ದಂತೆಯೇ ಕುಪಿತರಾಗಿದ್ದ ಜನ ಹತ್ತಿರದ ಮರಕ್ಕೆ ಕಟ್ಟಿಹಾಕಿ ಕೈಗೆ ಸಿಕ್ಕ ವಸ್ತುಗಳಿಂದ ಪ್ರಹಾರ ನೀಡಿದರು. ಆದರೆ ಕೆಲವೇ ನಿಮಿಷಗಳಲ್ಲಿ ಆಗಮಿಸಿದ ಪೋಲೀಸರು ಜನರನ್ನು ಚದುರಿಸಿ ಮಹಿಳೆಯನ್ನು ಸಾವಿನಿಂದ ಕಾಪಾಡಿದರು.

ಈ ಕೃತ್ಯ ಎಸಗಲು ಆಕೆಗೆ ಏನು ಪ್ರೇರಣೆ ನೀಡಿತು?
ಮದ್ಯ ಏನು ಮಾಡಿಸುತ್ತದೆ ಎಂದು ನಮಗೆಲ್ಲಾ ಅರಿವಿದ್ದರೂ ಈ ಮಟ್ಟಿನ ಭೀಭತ್ಸತೆ ಪಡೆಯುವುದನ್ನು ಆಲೋಚಿಸಿರಲಿಕ್ಕಿಲ್ಲ. ಪೋಲೀಸರ ವಿಚಾರಣೆಯ ಬಳಿಕ ಮದ್ಯದ ಅಮಲಿನಲ್ಲಿ ತಾನು ಏನು ಮಾಡುತ್ತಿದ್ದೆನೆಂದು ಅರಿಯೆ ಎಂದು ಆಕೆ ತಿಳಿಸಿದ್ದಾಳೆ. ಸಧ್ಯಕ್ಕೆ ಈಕೆ ಇನ್ನೂ ಪೋಲೀಸರ ಸುಪರ್ದಿಯಲ್ಲಿದ್ದು ನ್ಯಾಯಾಲದ ವಿಚಾರಣೆ ಮತ್ತು ತೀರ್ಪು ಇನ್ನಷ್ಟೇ ಬರಬೇಕಾಗಿದೆ. ಅಮಲು ಎಷ್ಟೇ ಇರಲಿ, ಈ ತರಹದ ಕೃತ್ಯಕ್ಕೆ ಘೋರ ಶಿಕ್ಷೆಯಾಗಲೇಬೇಕು, ಆಕೆ ಮಗುವಿನ ತಾಯಿಯಾದರೂ ಸಹಾ!. ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ಸ್ ವಿಭಾಗದಲ್ಲಿ ಬರೆದು ತಿಳಿಸಿ.



Click it and Unblock the Notifications