Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ವಿವಾದಾತ್ಮಕ ಜಾಹೀರಾತು: ಗಣೇಶನಿಗೆ ಅಪಪ್ರಚಾರ ಮಾಡಿದ ದುಷ್ಟರು...
ಈ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳಿಗೂ ತಮ್ಮದೇ ಆದ ಕಟ್ಟುಪಾಡುಗಳಿದ್ದು ಇವುಗಳನ್ನು ಟೀಕಿಸುವುದು ಯಾರಿಗೂ ತರವಲ್ಲ. ಇಂದಿನ ದಿನಗಳಲ್ಲಿ ಒಂದು ಧರ್ಮದ ಯಾವುದೋ ಕಟ್ಟುಪಾಡನ್ನು ಇನ್ನೊಂದು ಧರ್ಮದಲ್ಲಿ ವಿರೋಧಿಸಿರುವುದನ್ನೇ ಕಾರಣವಾಗಿಸಿ ಕಾಲು ಕೆದಕಿ ಕಲಹವನ್ನು ಹುಟ್ಟು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಆಸ್ಟ್ರೇಲಿಯಾದ ಮಾಂಸದ ಉತ್ಪನ್ನಗಳ ಸಂಸ್ಥೆಯೊಂದು ಕುರಿಮಾಂಸದ ಸೇವನೆಯನ್ನು ಬೆಂಬಲಿಸಲು ಜಾಹೀರಾತೊಂದನ್ನು ಪ್ರಕಟಿಸಿದ್ದು ಇದರ ಮೂಲಕ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಮೂಡಿಸಿದೆ.
ಈ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಕಾಣುವಂತೆ ಭಗವಂತ ಗಣೇಶನನ್ನು ಕುರಿಮಾಂಸದ ಊಟದ ಮೇಜಿನಲ್ಲಿ ಎಲ್ಲರೊಡನೆ ಬಾಡೂಟವನ್ನು ಆಸ್ವಾದಿಸುತ್ತಿರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಮದ್ಯವನ್ನು ಗುಟುಕರಿಸುವುದನ್ನೂ ತೋರಿಸಲಾಗಿದೆ. ಹಿಂದೂಗಳಿಗೆ ಪವಿತ್ರವಾದ ಪುರಾಣಗಳಲ್ಲಿ ವಿವರಿಸಿರುವಂತೆ ಗಣೇಶ ಅಪ್ಪಟ ಸಸ್ಯಾಹಾರಿ ಹಾಗೂ ಎಂದಿಗೂ ಮದ್ಯ ಕುಡಿಯದವನಾಗಿದ್ದಾನೆ. ಬನ್ನಿ, ವಿವಾದ ಹುಟ್ಟು ಹಾಕಿದ ಈ ಜಾಹೀರಾತಿನ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ....

ಈ ಜಾಹೀರಾತಿನಲ್ಲಿ ಏನಿದೆ?
ಊಟದ ಮೇಜಿನಲ್ಲಿ ಹಲವು ವ್ಯಕ್ತಿಗಳು ಊಟ ಮಾಡಲು ಆಗಮಿಸಿದ್ದಾರೆ. ಇವರಲ್ಲಿ ಅನ್ಯಗ್ರಹ ಜೀವಿ, ಬುದ್ದ ಹಾಗೂ ಇನ್ನೂ ಹಲವಾರು ಧರ್ಮಗಳ ದೇವ ದೇವತೆಗಳ ಜೊತೆಗೆ ಗಜಮುಖದ ಗಣೇಶನೂ ಭೂರಿ ಭೋಜನದ ಊಟ ಮಾಡುತ್ತಿರುವಂತೆ ಬಿಂಬಿಸಲಾಗಿದೆ.

ಈ ಜಾಹೀರಾತಿನಲ್ಲಿ ಏನಿದೆ?
ಈ ಜಾಹೀರಾತಿನಲ್ಲಿ ಬುದ್ದನು ಗಣೇಶನನ್ನು ಉದ್ದೇಶಿಸಿ "ನಾವು ಈ ಕೋಣೆಯಲ್ಲಿರುವ ಆನೆಯನ್ನು ಕರೆಯಬೇಕೇ"( "Should we address the elephant in the room?") ಎಂದು ಕೇಳುತ್ತಿರುವಂತೆ ಹೇಳಿಸಲಾಗಿದೆ. ಇದಕ್ಕುತ್ತರವಾಗಿ ಗಣೇಶನ ಮುಖವಾಡವನ್ನು ಧರಿಸಿದ ಹಾಗೂ ಹಲವು ಕೈಗಳಿರುವ ವ್ಯಕ್ತಿ "ಎರಡೂವರೆ ಸಾವಿರ ವರ್ಷಕ್ಕೂ ಹಿಂದೆಯೂ ಇದು ತಮಾಷೆಯ ವಿಷಯವಾಗಿರಲಿಲ್ಲ, ಇಂದಿಗೂ ಇಲ್ಲ" ("Not funny 2500 years ago, not funny now") ಎಂದು ಉತ್ತರಿಸುತ್ತಾನೆ.

ಈ ಜಾಹೀರಾತಿನಲ್ಲಿ ಏನಿದೆ?
ಬಳಿಕ ನಾಸ್ತಿಕನೊಬ್ಬ ಟೋಸ್ಟ್ ಒಂದನ್ನು ಮೇಲೆತ್ತಿ ಹೀಗೆನ್ನುತ್ತಾನೆ "ನಾವೆಲ್ಲಾ ಈಗ ಸೇವಿಸುತ್ತಿರುವ ಕುರಿಮಾಂಸದ ಬದಲಿಗೆ ಈ ಟೋಸ್ಟ್ ಏಕಾಗಬಾರದು?"ಎಂದು ಕೇಳುತ್ತಾನೆ.

ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...
ಧಾರ್ಮಿಕ ಭಾವನೆಯನ್ನು ಕೆದಕಿರುವ ಈ ಜಾಹೀರಾತು ಜಗತ್ತಿನಾದ್ಯಂತ ಹಿಂದೂ ಧರ್ಮೀಯರಿಗೆ ಆಘಾತವನ್ನುಂಟುಮಾಡಿದೆ. ಈ ಜಾಹೀರಾತನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಇವರು ಆಗ್ರಹಿಸುತ್ತಿದ್ದಾರೆ.
ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.



Click it and Unblock the Notifications