Just In
- 55 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 1 hr ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 4 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 13 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿವಾದಾತ್ಮಕ ಜಾಹೀರಾತು: ಗಣೇಶನಿಗೆ ಅಪಪ್ರಚಾರ ಮಾಡಿದ ದುಷ್ಟರು...
ಈ ಜಗತ್ತಿನಲ್ಲಿರುವ ಎಲ್ಲಾ ಧರ್ಮಗಳಿಗೂ ತಮ್ಮದೇ ಆದ ಕಟ್ಟುಪಾಡುಗಳಿದ್ದು ಇವುಗಳನ್ನು ಟೀಕಿಸುವುದು ಯಾರಿಗೂ ತರವಲ್ಲ. ಇಂದಿನ ದಿನಗಳಲ್ಲಿ ಒಂದು ಧರ್ಮದ ಯಾವುದೋ ಕಟ್ಟುಪಾಡನ್ನು ಇನ್ನೊಂದು ಧರ್ಮದಲ್ಲಿ ವಿರೋಧಿಸಿರುವುದನ್ನೇ ಕಾರಣವಾಗಿಸಿ ಕಾಲು ಕೆದಕಿ ಕಲಹವನ್ನು ಹುಟ್ಟು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಆಸ್ಟ್ರೇಲಿಯಾದ ಮಾಂಸದ ಉತ್ಪನ್ನಗಳ ಸಂಸ್ಥೆಯೊಂದು ಕುರಿಮಾಂಸದ ಸೇವನೆಯನ್ನು ಬೆಂಬಲಿಸಲು ಜಾಹೀರಾತೊಂದನ್ನು ಪ್ರಕಟಿಸಿದ್ದು ಇದರ ಮೂಲಕ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಮೂಡಿಸಿದೆ.
ಈ ಜಾಹೀರಾತಿನಲ್ಲಿ ಸ್ಪಷ್ಟವಾಗಿ ಕಾಣುವಂತೆ ಭಗವಂತ ಗಣೇಶನನ್ನು ಕುರಿಮಾಂಸದ ಊಟದ ಮೇಜಿನಲ್ಲಿ ಎಲ್ಲರೊಡನೆ ಬಾಡೂಟವನ್ನು ಆಸ್ವಾದಿಸುತ್ತಿರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಇದರೊಂದಿಗೆ ಮದ್ಯವನ್ನು ಗುಟುಕರಿಸುವುದನ್ನೂ ತೋರಿಸಲಾಗಿದೆ. ಹಿಂದೂಗಳಿಗೆ ಪವಿತ್ರವಾದ ಪುರಾಣಗಳಲ್ಲಿ ವಿವರಿಸಿರುವಂತೆ ಗಣೇಶ ಅಪ್ಪಟ ಸಸ್ಯಾಹಾರಿ ಹಾಗೂ ಎಂದಿಗೂ ಮದ್ಯ ಕುಡಿಯದವನಾಗಿದ್ದಾನೆ. ಬನ್ನಿ, ವಿವಾದ ಹುಟ್ಟು ಹಾಕಿದ ಈ ಜಾಹೀರಾತಿನ ಬಗ್ಗೆ ಕೆಲವು ಮಾಹಿತಿಗಳನ್ನು ಅರಿಯೋಣ....
ಈ ಜಾಹೀರಾತಿನಲ್ಲಿ ಏನಿದೆ?
ಊಟದ ಮೇಜಿನಲ್ಲಿ ಹಲವು ವ್ಯಕ್ತಿಗಳು ಊಟ ಮಾಡಲು ಆಗಮಿಸಿದ್ದಾರೆ. ಇವರಲ್ಲಿ ಅನ್ಯಗ್ರಹ ಜೀವಿ, ಬುದ್ದ ಹಾಗೂ ಇನ್ನೂ ಹಲವಾರು ಧರ್ಮಗಳ ದೇವ ದೇವತೆಗಳ ಜೊತೆಗೆ ಗಜಮುಖದ ಗಣೇಶನೂ ಭೂರಿ ಭೋಜನದ ಊಟ ಮಾಡುತ್ತಿರುವಂತೆ ಬಿಂಬಿಸಲಾಗಿದೆ.
ಈ ಜಾಹೀರಾತಿನಲ್ಲಿ ಏನಿದೆ?
ಈ ಜಾಹೀರಾತಿನಲ್ಲಿ ಬುದ್ದನು ಗಣೇಶನನ್ನು ಉದ್ದೇಶಿಸಿ "ನಾವು ಈ ಕೋಣೆಯಲ್ಲಿರುವ ಆನೆಯನ್ನು ಕರೆಯಬೇಕೇ"( "Should we address the elephant in the room?") ಎಂದು ಕೇಳುತ್ತಿರುವಂತೆ ಹೇಳಿಸಲಾಗಿದೆ. ಇದಕ್ಕುತ್ತರವಾಗಿ ಗಣೇಶನ ಮುಖವಾಡವನ್ನು ಧರಿಸಿದ ಹಾಗೂ ಹಲವು ಕೈಗಳಿರುವ ವ್ಯಕ್ತಿ "ಎರಡೂವರೆ ಸಾವಿರ ವರ್ಷಕ್ಕೂ ಹಿಂದೆಯೂ ಇದು ತಮಾಷೆಯ ವಿಷಯವಾಗಿರಲಿಲ್ಲ, ಇಂದಿಗೂ ಇಲ್ಲ" ("Not funny 2500 years ago, not funny now") ಎಂದು ಉತ್ತರಿಸುತ್ತಾನೆ.
ಈ ಜಾಹೀರಾತಿನಲ್ಲಿ ಏನಿದೆ?
ಬಳಿಕ ನಾಸ್ತಿಕನೊಬ್ಬ ಟೋಸ್ಟ್ ಒಂದನ್ನು ಮೇಲೆತ್ತಿ ಹೀಗೆನ್ನುತ್ತಾನೆ "ನಾವೆಲ್ಲಾ ಈಗ ಸೇವಿಸುತ್ತಿರುವ ಕುರಿಮಾಂಸದ ಬದಲಿಗೆ ಈ ಟೋಸ್ಟ್ ಏಕಾಗಬಾರದು?"ಎಂದು ಕೇಳುತ್ತಾನೆ.
ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...
ಧಾರ್ಮಿಕ ಭಾವನೆಯನ್ನು ಕೆದಕಿರುವ ಈ ಜಾಹೀರಾತು ಜಗತ್ತಿನಾದ್ಯಂತ ಹಿಂದೂ ಧರ್ಮೀಯರಿಗೆ ಆಘಾತವನ್ನುಂಟುಮಾಡಿದೆ. ಈ ಜಾಹೀರಾತನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಇವರು ಆಗ್ರಹಿಸುತ್ತಿದ್ದಾರೆ.
ಧಾರ್ಮಿಕ ಭಾವನೆಯನ್ನು ಕೆದಕಿರುವ ಜಾಹೀರಾತು ಇದು...
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.