Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಈಕೆಯ ವಯಸ್ಸು ಕೇವಲ ಹದಿನಾರು, ಆದರೆ ಇವಳು ಮಾಡಿದ್ದೇನು ಗೊತ್ತೇ?
ಇಂದು ಕ್ರೈಂ ಅಥವಾ ಅಪರಾಧ ಎಂಬ ಪದ ನಮಗೆ ಇಷ್ಟೊಂದು ಸಾಮಾನ್ಯವಾಗಿ ಹೋಗಿದೆ ಎಂದರೆ ನಿತ್ಯವೂ ವೃತ್ತಪತ್ರಿಕೆಗಳಲ್ಲಿ ಒಳ್ಳೆಯ ಸುದ್ದಿಗಳಿಗಿಂತಲೂ ಅಪರಾಧ ಸುದ್ದಿಗಳನ್ನೇ ಓದಿ, ಟೀವಿಯಲ್ಲಿ ಇಂತಹದ್ದೇ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿಬಿಟ್ಟಿದೆ. ಅದರಲ್ಲೂ ಚಿಕ್ಕವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯರಾಗುವುದು, ಮಾತ್ರೆ ತಿಂದು ಗರ್ಭಪಾತದ ಸಮಯದಲ್ಲಿ ಪ್ರಾಣ ಕಳೆದುಕೊಳ್ಳುವುದು ಇತ್ಯಾದಿ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಸುಲಭವಾಗಿ ಸಿಗುವ ಗರ್ಭನಿರೋಧಕ ಗುಳಿಗೆಗಳನ್ನು ನಂಬಿ ಮುಂದುವರೆಯುವ ಹದಿಹರೆಯದವರು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ದಿಗ್ಭ್ರಾಂತಿ ಮೂಡಿಸುವ ಇನ್ನೊಂದು ಸುದ್ದಿಯ ಪ್ರಕಾರ ಹದಿನಾರರ ಯುವತಿಯೊಬ್ಬಳು ಈಗತಾನೇ ಜನ್ಮ ನೀಡಿದ ಮಗುವನ್ನು ಎರಡನೆಯ ಮಹಡಿಯಿಂದ ಕೆಳಕ್ಕೆಸೆದು ಸುದ್ದಿ ಮಾಡಿದ್ದಾಳೆ. ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್ ಅನ್ನುತ್ತದೆ...
ಲೈಂಗಿಕ ಜೀವನದ ಬಗ್ಗೆ ಅರಿವು ಮೂಡಿಸಲು ಆಗಿರುವ ಮಾಹಿತಿಯ ಕೊರತೆಯ ನೇರ ಪರಿಣಾಮ ಇದಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಜನಜಾಗೃತಿಯ ಅಗತ್ಯವಿದೆ. ಅನಗತ್ಯ ಬಸುರಿನಿಂದ ಹುಟ್ಟಿದ ಮಗುವನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿ ಚಿಂತಾಕ್ರಾಂತಳಾಗಿದ್ದ ಈ ಯುವತಿಗೆ ಹೀಗೆ ಮಾಡಲು ಏಕಾಗಿ ಹೊಳೆಯಿತು ಎಂಬುದನ್ನು ಈಗ ನೋಡೋಣ....

ವಾಸ್ತವದಲ್ಲಿ ಏನಾಯಿತು?
ಈ ಬಗ್ಗೆ ಮಾಹಿತಿ ನೀಡಿದ ವರದಿಗಳ ಪ್ರಕಾರ ತನ್ನ ಮಗುವನ್ನು ನೋಡಿದ ತಕ್ಷಣ ಈಕೆಗೆ ಭಯಾನಕವಾದ ಶಾಕ್ ಅಥವಾ ಆಘಾತ ಹೊಡೆದಂತಾಗಿದೆ. ತಕ್ಷಣ ಏನು ಮಾಡಬೇಕೆಂದು ಅರಿಯದೇ ಈ ಮಗುವನ್ನು ನೇರವಾಗಿ ಕಿಟಕಿಯಿಂದ ಹೊರಗೆಸೆದಿದ್ದಾಳೆ.

ಇದೊಂದು ಅಪಘಾತ ಎಂಬ ವಿವರಣೆ
ಈ ಬಗ್ಗೆ ತನಿಖೆ ನಡೆಸಿದಾಗ ಈಗ ತಾನು ಬೇಕೆಂದು ಮಾಡಿದ್ದಲ್ಲವೆಂದೂ ಇದೊಂದು ಅಕಸ್ಮಿಕವಾಗಿ ನಡೆದ ಘಟನೆ ಎಂದೂ, ಈ ಘಟನೆ ನಡೆದಾಗ ತಾನು ಅತ್ಯಂತ ಆಘಾತದಲ್ಲಿದ್ದು ಏಕಾಗಿ ಹೀಗೆ ಮಾಡಿದೆ ಎಂದು ತಿಳಿಯುತ್ತಿಲ್ಲವೆಂದೂ ಆಕೆ ತಿಳಿಸಿದ್ದಾಳೆ.

ಕೆಳಕ್ಕೆ ಬಿದ್ದ ಮಗುವಿಗೇನಾಯಿತು?
ಆರೋಗ್ಯವಂತರೇ ಎರಡನೇ ಮಹಡಿಯಿಂದ ಬಿದ್ದರೆ ಪ್ರಾಣಾಪಾಯವಿದೆ. ಅಂತಹದ್ದರಲ್ಲಿ ಇನ್ನೂ ಹುಟ್ಟಿದ ಎಳೆಯಕೂಸು ಆಘಾತವನ್ನು ಹೇಗೆ ತಡೆದೀತು? ವಿಪರೀತ ಗಾಯಗೊಂಡಿದ್ದ ಮಗು ಕೆಲವೇ ಹೊತ್ತು ಉಸಿರಾಡಿ ಬಳಿಕ ಜೀವನದ ಅಲ್ಪಯಾತ್ರೆಯನ್ನು ಮುಗಿಸಿತು.

ಈಕೆಯ ತಾಯಿ ಮಗುವನ್ನು ಬದುಕಿಸಲು ಯತ್ನಿಸಿದ್ದರು
ಮಗುವನ್ನು ಕೆಳಕ್ಕೆಸೆದ ಬಳಿಕ ಎಚ್ಚೆತ್ತ ಈ ಯುವತಿ ತಕ್ಷಣ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣವೇ ಕೆಳಕ್ಕೋಡಿದ ಈಕೆಯ ತಾಯಿ ಮಗುವನ್ನು ಎತ್ತಿಕೊಂಡು ಬದುಕಿಸಲು ತನ್ನಿಂದಾದ ಪ್ರಯತ್ನವನ್ನು ನಡೆಸಿದ್ದಾರೆ. ಆದರೆ ಮಗು ಕೊಂಚಕಾಲದ ಬಳಿಕ ತೀರಿಕೊಂಡಿದೆ.

ಕೊನೆಗೂ ಈ ಯುವತಿಯನ್ನು ಆರೋಪಿ ಸ್ಥಾನದಲ್ಲಿರಿಸಲಾಯಿತು
ಕಾರಣವೇನೇ ಇರಲಿ, ಒಂದು ಜೀವವನ್ನು ಬಲವಂತವಾಗಿ ಕೊನೆಗಾಣಿಸುವುದು ಕೊಲೆಯೇ ಎಂದು ಪರಿಗಣಿಸಿದ ಪೋಲೀಸರು ಈಕೆಯನ್ನು ಬಂಧಿಸಿ ಮಗುವಿನ ಕೊಲೆಯ ಆರೋಪವನ್ನು ಹೊರಿಸಿದ್ದಾರೆ. ನ್ಯಾಯಾಲಯದ ತೀರ್ಪು ಬರುವುದು ಇನ್ನೂ ಬಾಕಿ ಇದೆ.



Click it and Unblock the Notifications