Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಅಯ್ಯೋ, ಇವರಿಗೆ ಸ್ವಚ್ಛತೆ-ಅಸ್ವಚ್ಛತೆಯ ವ್ಯತ್ಯಾಸನೇ ಗೊತ್ತಿಲ್ಲ!
ಸುತ್ತಮುತ್ತಲಿನ ಪ್ರದೇಶವು ಸ್ವಚ್ಛವಾಗಿದ್ದರೆ ಮನಸ್ಸು ಕೂಡ ಸ್ವಚ್ಛವಾಗಿರುತ್ತದೆ ಎನ್ನುವ ಮಾತಿದೆ. ಇದು ನಿಜವೆನ್ನಬಹುದು. ಯಾಕೆಂದರೆ ಸ್ವಚ್ಛತೆ ಇಲ್ಲವೆಂದಾದರೆ ನಮ್ಮ ಮನಸ್ಸು ಕೆಡುವುದು ಮತ್ತು ಉದ್ವೇಗಗೊಳ್ಳುವುದು. ಇದರಿಂದಾಗಿಯೇ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಹೀಗಿನ ಕೇಂದ್ರ ಸರ್ಕಾರ ಕೂಡ ಸ್ವಚ್ಛತೆಯ ಬಗ್ಗೆ ಅಭಿಯಾನವನ್ನೇ ಆರಂಭಿಸಿದೆ. ಆದರೆ ಜನರು ಮಾತ್ರ ತಮಗಿದು ಸಂಬಂಧಿಸಿದಲ್ಲ ಎನ್ನುವಂತಿದ್ದಾರೆ. ಹಿಂದಿನ ಕಾಲದಿಂದಲೂ ಸ್ವಚ್ಛತೆ ಬಗ್ಗೆ ಜನರಲ್ಲಿ ಉತ್ತಮ ಭಾವನೆಯಿತ್ತು. ಯಾವಾಗ ಸ್ವಾಮಿ, ಇವರಿಗೆಲ್ಲಾ ಬುದ್ಧಿ ಬರೋದು..?
ರಾಜಮಹಾರಾಜರು ಕೂಡ ಸ್ವಚ್ಛತೆಗೆ ಗಮನ ಕೊಡುತ್ತಿದ್ದರು. ಆದರೆ ಕೆಲವು ದೇಶಗಳಲ್ಲಿ ಜನರು ಮತ್ತು ರಾಜಮನೆತವರು ಕೂಡ ವಿಲಕ್ಷಣವಾಗಿ ಸ್ವಚ್ಛತೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದರು. ದಿನಾಲೂ ಸ್ನಾನ ಮಾಡುವುದು, ಹಲ್ಲುಜ್ಜುವುದು, ಶೌಚಾಲಯಕ್ಕೆ ಹೋದರೆ ಕೈ ತೊಳೆದುಕೊಳ್ಳುವುದು ಪ್ರಮುಖವಾಗಿರುವ ಸ್ವಚ್ಛತಾ ಕ್ರಮಗಳಾಗಿದೆ. ಈ ಲೇಖನದಲ್ಲಿ ವಿಚಿತ್ರವಾಗಿರುವ ಕೆಲವೊಂದು ಅಸ್ವಚ್ಛತಾ ಕ್ರಮಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಓದಿ ಆದರೆ ಪಾಲಿಸಬೇಡಿ!

ರೋಮನ್ನರ ಕಾಲದಲ್ಲಿ...
ಹಲ್ಲುಜ್ಜಲು ಇಲಿಯ ಮೆದುಳನ್ನು ಬಳಸುತ್ತಿದ್ದರು ಎಂದರೆ ಖಂಡಿತವಾಗಿಯೂ ತಿಂದಿದೆಲ್ಲವೂ ವಾಂತಿ ಮಾಡಿಕೊಳ್ಳಬೇಕಾಗಬಹುದು. ಆದರೆ ನಿಜವಾಗಿಯೂ ಹಲವಾರು ವರ್ಷಗಳ ಹಿಂದೆ ರೋಮನ್ನರು ಇದನ್ನು ಮಾಡುತ್ತಿದ್ದರು. ಈಗ ಯೋಚನೆ ಮಾಡಿದರೆ ವಾಕರಿಕೆ ಬರುತ್ತದೆ.

ಬಟ್ಟೆ ಬದಲಾಯಿಸುವುದೇ ಇಲ್ಲ!
ಸ್ವಚ್ಛತೆ ಕಾರಣದಿಂದಾಗಿ ನಾವೀಗ ದಿನಕ್ಕೊಂದು ಬಟ್ಟೆ ಧರಿಸುತ್ತೇವೆ. ಆದರೆ ಒಂದು ಕಾಲದಲ್ಲಿ ರಾಜರು ಕೂಡ ಬಟ್ಟೆ ಬದಲಾಯಿಸುತ್ತಲೇ ಇರಲಿಲ್ಲ. ಅವರಿಗೆ ಪ್ರತಿಯೊಂದು ಋತುವಿಗೆ ಒಂದೊಂದು ರೀತಿಯ ಬಟ್ಟೆಯಿರುತ್ತಿತ್ತು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕಸ ಬಿಸಾಡುವುದು
ಮನೆಯ ಹಿಂದುಗಡೆ ಕಸ ಬಿಸಾಡಲು ಹಲವಾರು ತಿಪ್ಪೆಗುಂಡಿಗಳನ್ನು ತೋಡಲಾಗುತ್ತಿತ್ತು. ಈ ಗುಂಡಿಗಳಲ್ಲಿ ಕಸವನ್ನು ಹಾಕುತ್ತಲಿದ್ದ ಕಾರಣದಿಂದಾಗಿ ಹಲವಾರು ರೀತಿಯ ಸೋಂಕು ರೋಗಗಳು ಮನೆಯವರನ್ನು ಭಾದಿಸುತ್ತಿತ್ತು.

ಮುಖ ತೊಳೆಯಲು ಮೂತ್ರ!
ಇದನ್ನು ಯಾರು ಯೋಚಿಸಿದ್ದಾರೆಯಾ ಗೊತ್ತಿಲ್ಲ. ತಾಜಾ ಮೂತ್ರವನ್ನು ಮುಖವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಬಳಸಲಾಗುತ್ತದೆ. ಇಂದಿನ ದಿನಗಳಲ್ಲಿಯೂ ಕೆಲವೊಂದು ಜನರು ಈಗಲೂ ಇದನ್ನು ಬಳಸುತ್ತಾರೆ. ಛೀ...ಗಲೀಜು.

ಕೂದಲು ಉದುರುವಿಕೆಗೆ ಕೋಳಿ ಹಿಕ್ಕೆ!
ಸಂಪೂರ್ಣವಾಗಿ ಬೋಳಾಗಿರುವ ತಲೆಗೆ ಕೋಳಿ ಹಿಕ್ಕೆಯನ್ನು ಪೊಟಾಶಿಯಂಗೆ ಸೇರಿಸಿಕೊಂಡು ತಲೆಬುರುಡೆಗೆ ಉಜ್ಜಿಕೊಳ್ಳಬೇಕು. ಇದರಿಂದ ಬೋಳು ತಲೆ ನಿವಾರಣೆಯಾಗುತ್ತದೆ. ಬೋಳು ತಲೆಯಲ್ಲಿ ಕೂದಲು ಬರಬೇಕಾದರೆ ಈ ರೀತಿಯೂ ಮಾಡಬೇಕೇ?

ತಿನ್ನುವಾಗ ಮಾತ್ರ ಕೈ ತೊಳೆಯುವುದು
ಊಟಕ್ಕೆ ಮೊದಲು ಕೈ ತೊಳೆಯುವುದು ಈಗಲೂ ತುಂಬಾ ಅಪರೂಪವಾಗಿದೆ. ಕೆಲವರು ಮಾತ್ರ ಆಹಾರ ತಿನ್ನುವ ಮೊದಲು ಕೈ ತೊಳೆಯುತ್ತಾರೆ. ಈ ಅಭ್ಯಾಸವನ್ನು ಕಡಿಮೆ ಜನರು ಪಾಲಿಸುತ್ತಾರೆ. ಕೇವಲ ಊಟಕ್ಕೆ ಮೊದಲು ಮಾತ್ರ ಕೈ ತೊಳೆಯುವುದು ಒಳ್ಳೆಯ ಕ್ರಮ. ಇದನ್ನು ಪಾಲಿಸಿಕೊಂಡು ಹೋಗಿ.



Click it and Unblock the Notifications