Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಟನಟಿಯರ ಮಾತನ್ನ ಮಾತ್ರ ನಮ್ಮ ಜನ ತಪ್ಪದೇ ಕೇಳ್ತಾರೆ!
ಕೆಲವೊಂದು ಅಭಿಯಾನಗಳಿಗೆ ಚಿತ್ರನಟರನ್ನೇ ಸರಕಾರ ಆಯ್ಕೆಮಾಡುತ್ತಾರೆ. ಸಾಮಾನ್ಯ ವ್ಯಕ್ತಿ ಹೇಳಿದರೆ ಯಾರೂ ಕೂಡ ಕೇಳಲ್ಲ. ಅದೇ ಅಮಿತಾಭ್ ಬಚ್ಚನ್ ಅಥವಾ ಐಶ್ವರ್ಯ ರೈ ಹೇಳಿದರೆ ಅದನ್ನು ಜನರು ಕಿವಿಗೊಟ್ಟು ಕೇಳುತ್ತಾರೆ...
ನರೆಮನೆಯವರಿಗೆ ನೀವು ರಸ್ತೆಯಲ್ಲಿ ಕಸ ಹಾಕಬಾರದು. ಅದರಿಂದ ನಗರದ ಸೌಂದರ್ಯ ಹಾಳಾಗುತ್ತದೆ ಎಂದು ಹೇಳಿನೋಡಿ. ಆತ ನಿಮ್ಮ ಜತೆ ಜಗಳಕ್ಕೆ ನಿಲ್ಲುವುದು ಗ್ಯಾರಂಟಿ. ಹೆಚ್ಚು ಶಿಕ್ಷಿತ ಬಾಲಿವುಡ್ನ ಸೆಲೆಬ್ರಿಟಿ ಸ್ಟಾರ್ಗಳು
ನೀವು ಹೇಳಿದ ಮಾತನ್ನೇ ಯಾವುದೋ ನಟ ಅಥವಾ ನಟಿ ಬಂದು ಹೇಳಿದರೆ ಆಗ ಆತ ಖಂಡಿತವಾಗಿಯೂ ಕೇಳುತ್ತಾನೆ ಮತ್ತು ಅದನ್ನು ಶಿರಸವಹಿಸಿ ಪಾಲಿಸಿಕೊಂಡು ಹೋಗುತ್ತಾನೆ. ಸಾವು ಬದುಕಿನ ಹೋರಾಟದಲ್ಲಿ, ಗೆದ್ದು ಬಂದವರ ರಿಯಲ್ ಸ್ಟೋರಿ
ಇದಕ್ಕಾಗಿಯೇ ಸರಕಾರ ಕೂಡ ಕೆಲವೊಂದು ಅಭಿಯಾನಗಳಿಗೆ ಚಿತ್ರನಟರನ್ನು ಸೇರಿಸಿಕೊಳ್ಳುತ್ತಿರುವುದು. ಸಾಮಾನ್ಯ ವ್ಯಕ್ತಿ ಹೇಳಿದರೆ ಯಾರೂ ಕೂಡ ಕೇಳಲ್ಲ. ಅದೇ ಅಮಿತಾಭ್ ಬಚ್ಚನ್ ಅಥವಾ ಐಶ್ವರ್ಯ ರೈ ಹೇಳಿದರೆ ಅದನ್ನು ಜನರು ಕಿವಿಗೊಟ್ಟು ಕೇಳುತ್ತಾರೆ ಮತ್ತು ಪಾಲಿಸಿಕೊಂಡು ಹೋಗುತ್ತಾರೆ. ಪತ್ನಿಯರಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿರುವ ಸೆಲೆಬ್ರಿಟಿಗಳು
ಬಾಲಿವುಡ್ ನಟ ನಟಿಯರು ಕೆಲವೊಂದು ಅಭಿಯಾನಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕಳಕಳಿಯನ್ನು ತೋರಿಸುತ್ತಿರುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ, ಮುಂದೆ ಓದಿ...

ಅಕ್ಷಯ್ ಕುಮಾರ್
ಬಾಲಿವುಡ್ನಲ್ಲಿ ತುಂಬಾ ಫಿಟ್ ಎಂದು ಪರಿಗಣಿಸಲಾಗಿರುವ ಅಕ್ಷಯ್ ಕುಮಾರ್ ಅವರು ಮುಂಬಯಿ ಮಹಾನಗರ ಪಾಲಿಕೆಯ `ಜಾನ್ ಬಚಾವೋ' ಅಭಿಯಾನದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯಕರ ಆಹಾರ ಸೇವನೆ ಮತ್ತು ಜೀವನಶೈಲಿಯಿಂದ ಮಧುಮೇಹ, ರಕ್ತದೊತ್ತಡ ಮತ್ತು ಹೃದಯದ ಕಾಯಿಲೆಗಳನ್ನು ತಡೆಯಬಹುದು ಎನ್ನುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಸೋನಂ ಕಪೂರ್
ಬಾಲಿವುಡ್ನ ಸುಂದರಿ ಸೋನಂ ಕಪೂರ್ ಕೂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಸರಕಾರೇತರ ಸಂಸ್ಥೆಗಳಾದ ಫೈಟ್ ಹಂಗರ್ ಫೌಂಡೇಶನ್ ಮತ್ತು ಕಡ್ಡಲ್ಸ್ ಫೌಂಡೇಶನ್ನ ರಾಯಭಾರಿಯಾಗಿ ಕೆಲಸ ಮಾಡುತ್ತಾ ಇದ್ದಾರೆ. ಪೌಷ್ಠಿಕಾಂಶಗಳ ಕೊರತೆ ಬಗ್ಗೆ ಇದು ಜಾಗೃತಿ ಮೂಡಿಸುತ್ತದೆ ಮತ್ತು ಕ್ಯಾನ್ಸರ್ ನಿಂದ ಬಳಲುತ್ತಿರುವಂತಹ ಅನಾಥ ಮಕ್ಕಳಿಗೆ ಪೋಷಕಾಂಶ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ಅವರು ಮಹಾನ್ ನಟ ಮಾತ್ರವಲ್ಲ ಅವರೊಬ್ಬ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ ಕೂಡ. ಪೋಲಿಯೋ ಮತ್ತು ಕ್ಷಯ ರೋಗದಂತಹ ಜಾಗೃತಿ ಅಭಿಯಾನಗಳಲ್ಲಿ ಭಾಗಿಯಾಗಿರುವ ಅಮಿತಾಬ್ ಬಚ್ಚನ್ ಅವರು ಹೆಪಟೈಟಿಸ್ ನಿಂದ ಆಗುವಂತಹ ಅಪಾಯದ ಬಗ್ಗೆ ಜನರನ್ನು ಎಚ್ಚರಿಸಿದ್ದಾರೆ. ದೇಶದಲ್ಲಿ ಸ್ವಚ್ಛತೆಯನ್ನು ಹೆಚ್ಚಿಸುವ ಕಾರಣದಿಂದ ಮೋದಿ ಸರಕಾರವು ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನದಲ್ಲಿ ಅವರು ರಾಯಭಾರಿಯಾಗಿದ್ದಾರೆ.

ಮಿಲಿಂದ್ ಸೋಮನ್
ಹಲವಾರು ಮ್ಯಾರಥಾನ್ಗಳಲ್ಲಿ ಸ್ಪರ್ಧಿಸಿ ಈಗಲೂ ಹಿಂದಿನ ಫಿಟ್ ನೆಸ್ ಅನ್ನು ಕಾಯ್ದುಕೊಂಡಿರುವ ಮಿಲಿಂದ್ ಸೋಮನ್ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಹೇಳಿದ್ದಾರೆ. ಮಹಿಳೆಯರ ಆರೋಗ್ಯಕರ ಜೀವನಶೈಲಿ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಸೋಮನ್ ಜಾಗೃತಿ ಮೂಡಿಸುತ್ತಾರೆ.

ಅಮೀರ್ ಖಾನ್
ನೀರಿಲ್ಲದೆ ಹಲವಾರು ರೈತರು ಕೃಷಿಯಲ್ಲಿ ಕೈ ಸುಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಲವಾರು ಘಟನೆಗಳು ನಮ್ಮ ಮುಂದಿದೆ. ಇದನ್ನು ಹೋಗಲಾಡಿಸಲು ಬಾಲಿವುಡ್ ನಟ ಅಮೀರ್ ಖಾನ್ ಪಾನಿ ಫೌಂಡೇಶನ್ ಅನ್ನು ಆರಂಭಿಸಿದ್ದಾರೆ. ಇದರಿಂದ ಭಾರತದಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.



Click it and Unblock the Notifications
