Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಕಾರಾತ್ಮಕ ಮನೋಭಾವವೇ ಜೀವನದ ಸಾಕ್ಷಾತ್ಕಾರ
ಜೀವನದಲ್ಲಿ ನಾವು ಹಲವಾರು ಸಂದರ್ಭದಲ್ಲಿ ನಕಾರಾತ್ಮಕವಾಗಿ ಆಲೋಚಿಸುತ್ತೇವೆ. ಅಲ್ಲದೆ ನಮ್ಮ ಸುತ್ತ ಇರುವವರು ಸಹ ನಮ್ಮನ್ನು ನಕಾರಾತ್ಮಕವಾಗಿ ಚಿಂತಿಸುವಂತೆ ಮಾಡುವಲ್ಲಿ ತಮ್ಮ ಪಾಲಿನ ಕರ್ತವ್ಯವನ್ನು ಮಾಡುತ್ತಾರೆ. ಕೆಲವೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ನಾವು ನಕಾರಾತ್ಮಕವಾಗಿ ಚಿಂತಿಸಲು ಆರಂಭಿಸಿಬಿಟ್ಟಿರುತ್ತೇವೆ. ಒಮ್ಮೊಮ್ಮೆ ಪರಿಸ್ಥಿತಿಗಳು ನಮ್ಮನ್ನು ನಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತವೆ. "ಚಿತೆಗಿಂತ ಚಿಂತೆಯೇ ಮನುಷ್ಯನನ್ನು ಹೆಚ್ಚು ಸುಡುತ್ತದೆ" ಎಂಬ ಮಾತು ಇದಕ್ಕಾಗಿಯೇ ಜನಸಿರಬೇಕು.
ಕೆಲವೊಮ್ಮೆ ನಕಾರಾತ್ಮಕವಾಗಿ ನಮ್ಮ ಜೀವನದಲ್ಲಿ ನಡೆದಾಗ ಅದನ್ನು ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತದೆ. ಇದರ ಬಗ್ಗೆ ನಿಮಗೆ ಅನುಮಾನಗಳಿದ್ದಲ್ಲಿ, ಒಮ್ಮೆ ಟಿವಿ ಆನ್ ಮಾಡಿ ನೋಡಿ, ಅತ್ಯಾಚಾರ, ಸುಲಿಗೆ, ಭಯೋತ್ಪಾದನೆ ಇತ್ಯಾದಿಗಳ ಸುದ್ದಿಯು ನಿಮಗೆ ಬೇಡ ಬೇಡವೆಂದರು ಕಣ್ಣಿಗೆ ಬೀಳುತ್ತದೆ. ಕಚೇರಿಯಲ್ಲಿ ನೀವು ಎಷ್ಟೇ ಕಷ್ಟಪಟ್ಟರು ನಮ್ಮ ಮೇಲೆ ನಕಾರಾತ್ಮಕ ಅಭಿಪ್ರಾಯಗಳು ಬರುತ್ತವೆ. ಜೀವನದಲ್ಲಿ ಗುರಿ ಎಂಬುದು ದಾರಿ ತೋರುವ ಗುರುವಿನಂತೆ
ಇವೆಲ್ಲ ಘಟನೆಗಳು ಮತ್ತು ಅಭಿಪ್ರಾಯಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಕೆಲವೊಂದು ಸನ್ನಿವೇಶಗಳಲ್ಲಿ ನಮ್ಮ ಮನಸ್ಸಿಗೆ ಘಾಸಿಯಾಗುವಂತಹ ಘಟನೆಗಳು ನಡೆದು ಬಿಡುತ್ತವೆ ಮತ್ತು ಅಭಿಪ್ರಾಯಗಳು ಬರುತ್ತವೆ. ಆಗ ಅವುಗಳಿಂದ ಚೇತರಿಸಿಕೊಳ್ಳುವುದು ಕಷ್ಟವಾಗುತ್ತದೆ. ಅದಕ್ಕಾಗಿ ಇಂತಹ ಸನ್ನಿವೇಶಗಳಿಂದ ನಾವು ಪಾರಾಗಬೇಕಾಗುತ್ತದೆ.
ಇದಕ್ಕೆ
ಇರುವುದು
ಒಂದೇ
ಮಾರ್ಗ
ನಾವು
ಧನಾತ್ಮಕವಾಗಿ
ಬದುಕುವುದು.
ಏಕೆಂದರೆ
ಪ್ರಪಂಚದಲ್ಲಿ
ಅಸಾಧ್ಯವೆನ್ನುವುದು
ಯಾವುದು
ಇಲ್ಲ.
ಧನಾತ್ಮಕವಾಗಿ
ಇರುವುದರಿಂದ
ಅದರದೇ
ಆದ
ಪ್ರಯೋಜನಗಳು
ನಮಗೆ
ಲಭಿಸುತ್ತವೆ.
ನೀವು
ಧನಾತ್ಮಕವಾಗಿ
ಇದ್ದಲ್ಲಿ,
ನಕಾರಾತ್ಮಕವಾಗಿ
ಇರುವವರಿಗಿಂತ
ಚೆನ್ನಾಗಿ
ಬಾಳಬಹುದು.
ಅದರ
ಜೊತೆಗೆ
ನಿಮ್ಮ
ಜೀವನದಲ್ಲಿ
ನೀವು
ಉತ್ತಮವಾದ
ಬದಲಾವಣೆಗಳನ್ನು
ಇದರಿಂದ
ನೀವು
ಕಾಣಬಹುದು.
ಬನ್ನಿ
ಇನ್ನಷ್ಟು
ಮಾಹಿತಿಯನ್ನು
ಮುಂದೆ
ಓದಿ...
ಸಂಪರ್ಕ ಕಡಿದು ಕೊಳ್ಳಿ
ಇದು ತುಂಬಾ ಒಳ್ಳೆಯ ಮಾರ್ಗ, ಎಲ್ಲಿ ನಕಾರಾತ್ಮಕತೆ ಇರುತ್ತದೆಯೋ ಅದರೊಂದಿಗೆ ಸಂಪರ್ಕವನ್ನು ಕಡಿದುಕೊಳ್ಳಿ. ಜೀವನದ ಕಷ್ಟಗಳು ಇದ್ದಿದ್ದೆ, ಅದರಿಂದ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ನಿಮಗೆ ತೀರಾ ಕಾಟವಿದ್ದಲ್ಲಿ ಮೊಬೈಲ್ ಇನ್ನಿತರ ಗ್ಯಾಡ್ಜೆಟ್ಗಳನ್ನು ಆಫ್ ಮಾಡಿ. ಈ ಯೋಜನೆಯು ನಿಮ್ಮನ್ನು ಧನಾತ್ಮಕಗೊಳಿಸುವುದರ ಜೊತೆಗೆ ನಿಮ್ಮ ಪ್ರೀತಿ ಪಾತ್ರರ ಜೊತೆಗೆ ನಿಮ್ಮ ಭಾಂದವ್ಯವನ್ನು ಹೆಚ್ಚಿಸುತ್ತದೆ. ಇದನ್ನು ಪ್ರತಿದಿನ ಒಂದು ಗಂಟೆಯವರೆಗೆ ಪಾಲಿಸಿ, ಆಗ ನೋಡಿ ಅದರ ಪವಾಡವನ್ನು!.
ನಕಾರಾತ್ಮಕ ಸುದ್ದಿಗಳನ್ನು ನೋಡಬೇಡಿ
ನಿಮ್ಮ ಸೋಶಿಯಲ್ ನೆಟ್ವರ್ಕ್ ಸೈಟ್ ನೋಡಿ. ಅದರಲ್ಲಿ ಯಾವಾಗಲು ಧನಾತ್ಮಕ ಅಂಶಗಳ ಕುರಿತು ಹೆಚ್ಚಿಗೆ ಹಾಕಿರುತ್ತಾರೆ, ಇಲ್ಲವೇ ಚಿತ್ರ-ವಿಚಿತ್ರ ಸುದ್ದಿಗಳ ಕುರಿತು ಮಾಹಿತಿ ಇರುತ್ತದೆ. ಅವು ನಿಮ್ಮನ್ನು ನಕಾರಾತ್ಮಕ ಚಿಂತನೆಯಿಂದ ದೂರವಿರಿಸಿ, ಸಂತೋಷಗೊಳಿಸುತ್ತದೆ. ಹಾಗೆಂದು ನಿಮ್ಮ ಸುತ್ತ ನಡೆಯುತ್ತಿರುವ ಕೆಟ್ಟ ಸಂಗತಿಗಳನ್ನು ನೀವು ಕಣ್ಣೆತ್ತಿ ಸಹ ನೋಡಬೇಡಿ ಎಂದು ನಾವು ಹೇಳುತ್ತಿಲ್ಲ. ಆದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಎಂದು ಹೇಳುತ್ತಿದ್ದೇವೆ.
ನಕಾರಾತ್ಮಕ ಜನರ ಸಹವಾಸವನ್ನು ಬಿಡಿ
ಯಾವಾಗ ನೀವು ನಕಾರಾತ್ಮಕ ಜನರ ಮಾತುಗಳನ್ನು ಹೆಚ್ಚಿಗೆ ಕೇಳುತ್ತೀರೋ, ಆಗ ನೀವು ಸಹ ನಕಾರಾತ್ಮಕವಾಗಿ ಆಲೋಚಿಸಲು ಶುರು ಮಾಡುತ್ತೀರಿ. ಹೀಗೆ ನೀವು ಸಹ ನಕಾರಾತ್ಮಕವಾದಿಗಳಾಗಿಬಿಡುತ್ತೀರಿ. ಆದ್ದರಿಂದ ನಕಾರಾತ್ಮಕ ಜನರಿಂದ ದೂರವಿರಿ. ನಿಮ್ಮನ್ನು ನಕಾರಾತ್ಮಕತೆಗೆ ದೂಡಲು ಜನರಿಗೆ ಯಾವತ್ತಿಗು ಅವಕಾಶ ಮಾಡಿಕೊಡಬೇಡಿ. ಇದು ನಿಮ್ಮ ಪ್ರಗತಿಯನ್ನು ಹಾಳು ಮಾಡುತ್ತದೆ.
ಕೃತಜ್ಞತೆಯನ್ನು ಅಭ್ಯಾಸ ಮಾಡಿ
ನಿಮ್ಮ ಸುತ್ತ ಇರುವ ಜನರನ್ನು ಅಭಿನಂದಿಸಿ. ವಿಶೇಷವಾಗಿ ಅವರು ನಿಮಗೆ ಎಂದಾದರು ಸಹಾಯ ಮಾಡಿದ್ದಲ್ಲಿ, ತಪ್ಪದೆ ಅವರನ್ನು ಹೊಗಳಿ, ಧನ್ಯವಾದ ಹೇಳಿ. ನಿಮಗಾಗಿ ಬಾಗಿಲು ತೆಗೆದವರಿಗೆ, ಕಾಫಿಯನ್ನು ತಂದುಕೊಟ್ಟವರಿಗೆ, ನಿಮಗೆ ದಾರಿ ಮಾಡಿಕೊಟ್ಟವರಿಗೆ, ಹೀಗೆ ನಾನಾ ರೀತಿಯ ಸಣ್ಣ ಸಣ್ಣ ಸಹಾಯಕ್ಕೂ ಸಹ ಧನ್ಯವಾದ ತಿಳಿಸಿ.
ಕೃತಜ್ಞತೆಯನ್ನು ಅಭ್ಯಾಸ ಮಾಡಿ
ಆಗ ನೋಡಿ ನೀವು ಪ್ರಪಂಚದಲ್ಲಿ ಗುರುತು ಪರಿಚಯ ಇಲ್ಲದಿದ್ದವರಿಗೂ ಸಹ ಹೇಗೆ ಕೃತಜ್ಞರಾಗಿದ್ದೀರಿ ಎಂದು ತಿಳಿಯುತ್ತದೆ. ಈ ಅಂಶವು ನಿಮ್ಮಲ್ಲಿ ಧನಾತ್ಮಕ ಚಿಂತನೆಯನ್ನು ಹುಟ್ಟು ಹಾಕುತ್ತದೆ. ಇದರ ಕುರಿತಾಗಿ ನಿಮ್ಮ ಅಭಿಪ್ರಾಯಗಳಿದ್ದಲ್ಲಿ, ನಮಗೆ ಈ ಕೆಳಗೆ ಬರೆದು ತಿಳಿಸಿ.