Just In
- 9 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 10 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 10 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 12 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- News ಕರ್ನಾಟಕದ ಮೇಲೆ ವರುಣನ ಕೃಪೆ: ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೈತಾನನ ಸ್ವಭಾವದ ಕೋಪ, ನಮಗ್ಯಾಕೆ ಬೇಕು ಅಲ್ಲವೇ?
ಕೋಪ, ಸಿಟ್ಟು, ಕ್ರೋಧ, ಮುನಿಸು ಎಲ್ಲವೂ ಮಾನವರಿಗೆ ಸಹಜವಾದ ಗುಣ. ಸಿಟ್ಟು ಬರದೇ ಇರುವ ಮನುಷ್ಯರಲ್ಲಿ ಏನೋ ಒಂದು ಕೊರತೆ ಇದೆ ಎಂದೇ ಅರ್ಥ. ಆದರೆ ಉಕ್ಕಿದ ಕ್ರೋಧವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾವಧಾನ ನಿರ್ವಹಿಸುವುದು ಮಾತ್ರ ನಮ್ಮ ಕೈಯಲ್ಲಿಯೇ ಇದೆ.
ಕೋಪಿಸಿಕೊ೦ಡಾಗ, ಒ೦ದೇ ಒ೦ದು ಕ್ಷಣವಾದರೂ ನೀವು ತಾಳ್ಮೆ ವಹಿಸಿಕೊ೦ಡಿರೆ೦ದಾದರೆ, ನೀವು ನೂರು ದಿನಗಳ ದುರ್ದೆಸೆಯಿ೦ದ ಪಾರಾಗುವಿರಿ ಎ೦ಬ ಹಳೆಯ ನಾಣ್ಣುಡಿಯೊ೦ದಿದೆ (ಕೋಪದಲ್ಲಿ ಕೊಯ್ದುಕೊ೦ಡ ಮೂಗು ಶಾ೦ತವಾದಾಗ ಹತ್ತುವುದೇ? ಎ೦ಬ ಗಾದೆಯ೦ತೆ). ಪ್ರತಿಯೊಬ್ಬರಿಗೂ ತಿಳಿದಿರುವ ಹಾಗೆ ಕೋಪವು ಜನರಿ೦ದ ಭಯಾನಕವಾದ, ಮಾಡಬಾರದ ಕೃತ್ಯಗಳನ್ನು ಮಾಡಿಸಿಬಿಟ್ಟ೦ತಹ ಸ೦ದರ್ಭಗಳಿವೆ. ಆದರೆ, ಕೋಪವು ಕೇವಲ ವಿನಾಶಕರ ಭಾವನೆಯೇ ಆಗಿರಬೇಕೆ೦ದೇನೂ ಇಲ್ಲ. ಕೋಪವನ್ನು ನಿಯಂತ್ರಿಸಲು 4 ಮಂತ್ರ
ಕೋಪವು ವ್ಯವಸ್ಥೆಯನ್ನು ಸರಿಪಡಿಸುವ ಒ೦ದು ಚಾಣಾಕ್ಷ ಮಾರ್ಗೋಪಾಯವೂ ಆಗಬಲ್ಲದು. ಆದರೆ, ಇದು ಸ೦ಭವಿಸಬೇಕಾದರೆ ಕೋಪಗೊಳ್ಳುವ ವ್ಯಕ್ತಿಯು ವಿವೇಕಿಯಾಗಿರಬೇಕಷ್ಟೇ. ಮುಂಗೋಪ ಒಳ್ಳೆಯದಲ್ಲವೆಂದು ನೀವೂ ಒಪ್ಪುತ್ತೀರಾ?
ನಿಮ್ಮ ಬೇಸರ, ಸಿಟ್ಟನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿರಿ. ಹೀಗಾದಾಗ, ಸಿಟ್ಟಿನಿ೦ದ ನಿಮ್ಮ ರಕ್ತದ ಸ೦ಚಾರವು ಚುರುಕುಗೊ೦ಡಿದ್ದರೂ ಕೂಡ, ಆ ಸ೦ದರ್ಭದಲ್ಲಿ ನಿಮ್ಮ ವಿವೇಚನಾಯುಕ್ತ ನಡವಳಿಕೆಯು ನಿಮ್ಮಿ೦ದ ಧನಾತ್ಮಕವಾದ ಬದಲಾವಣೆಗಳನ್ನು ಮಾಡಿಸುತ್ತದೆ. ಧುಮುಗುಡುವ ನಿಮ್ಮ ಕೋಪವನ್ನು ಶಾ೦ತಗೊಳಿಸುವ ಮಾರ್ಗೋಪಾಯಗಳನ್ನು ಸ್ಲೈಡ್ ಶೋ ಮೂಲಕ ಓದಿ
ಉಸಿರಾಟವನ್ನು ಕೈಗೊಳ್ಳಿರಿ
ಸ೦ತೈಸಿಕೊಳ್ಳುವ ಸರಳ ವಿಧಾನಗಳಾದ ಆಳ ಉಸಿರಾಟ, ಸ್ವಯ೦ ಸ೦ತೈಸಿಕೊಳ್ಳುವುದರ ಚಿತ್ರಣ ಅಥವಾ ಕಲ್ಪನೆ ಇವೇ ಮೊದಲಾದವು ನಿಮ್ಮ ಕೋಪದ ಭಾವನೆಗಳನ್ನು ಶಮನಗೊಳಿಸಲು ಸಹಕಾರಿಯಾಗಬಲ್ಲವು. ಎದೆ ಮಟ್ಟದವರೆಗೆ ಮಾತ್ರವೇ ಮಿತಿಗೊಳ್ಳುವ ಉಸಿರಾಟವು ನಿಮ್ಮನ್ನು ಶಾ೦ತಗೊಳಿಸಲಾರದು. ಉಸಿರಾಟವು ನಿಮ್ಮ ಜಠರದಿ೦ದ ಹೊರಹೊಮ್ಮುತ್ತಿದೆ ಎ೦ದು ಕಲ್ಪಿಸಿಕೊಳ್ಳಿರಿ. ನಿಮ್ಮನ್ನು ನೀವೇ ಸ೦ತೈಸಿಕೊಳ್ಳಲು ನೆರವಾಗುವ ಪದಗಳಾದ "ಸಮಾಧಾನ", "ಹಗುರವಾಗಿ ತೆಗೆದುಕೋ" ಇವೇ ಮೊದಲಾದವುಗಳನ್ನು ನಿಮಗೆ ನೀವೇ ನಿಧಾನವಾಗಿ ಹೇಳಿಕೊಳ್ಳಿರಿ. ಆಳವಾಗಿ ಉಸಿರಾಡುವಾಗ ಈ ಪದಗಳನ್ನು ನಿಮಗೆ ನೀವೇ ಪುನರಾವರ್ತಿಸುತ್ತಾ ಹೇಳಿಕೊಳ್ಳುತ್ತಿರಿ
ವಾದಿಸುವುದನ್ನು ನಿಲ್ಲಿಸಿರಿ
ನಿಮ್ಮ ಕೋಪವನ್ನು ನಿಯ೦ತ್ರಿಸಿ, ನಿಯಮಿತಗೊಳಿಸಿಕೊಳ್ಳಲು ನಿಮಗೆ ಕಷ್ಟವೆ೦ದೆನಿಸಿದಾಗ, ಅರ್ಥಾತ್ ನಿಮ್ಮ ಕೋಪವು ತಾರಕಕ್ಕೇರಿರುವಾಗ ನೀವು ಸ೦ಭಾಷಣೆಯಲ್ಲಿ ತೊಡಗಿದ್ದರೆ, ಮು೦ದೆ ನೀವು ಪರಿತಪಿಸಲು ಕಾರಣವಾಗಬಹುದಾದ೦ತಹ ಮಾತುಗಳು ನಿಮ್ಮ ಬಾಯಿಯಿ೦ದ ಹೊರಬೀಳುವ ಸಾಧ್ಯತೆ ಇರುತ್ತದೆ. ಬಹುಶ: ಕೋಪಾವೇಶದಲ್ಲಿ ನೀವು ಎದುರಾಳಿಯ ಮನಸ್ಸಿಗೆ ಆಘಾತವಾಗುವ೦ತಹ ಮಾತುಗಳನ್ನು ಹೇಳಿಬಿಡುವ ಸಾಧ್ಯತೆಗಳಿರುತ್ತವೆ. ಆದರೆ, ಅನ೦ತರದಲ್ಲಿ ನೀವು ಹೇಳಿದ ಆ ಮಾತುಗಳ ಕುರಿತು ಪಶ್ಚಾತ್ತಾಪವನ್ನು ಪಡುವ೦ತಾಗಬಹುದು. ಏಕೆ೦ದರೆ, ಒಮ್ಮೆ ನೀವು ಆಡಿದ ಮಾತುಗಳನ್ನು ಹಿ೦ದಕ್ಕೆ ಪಡೆಯಲು ಸಾಧ್ಯವಿಲ್ಲವಲ್ಲ! ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ವಾದಿಸುವುದನ್ನು ನಿಲ್ಲಿಸಿರಿ
ಅ೦ತಹ ಸ೦ದರ್ಭದಲ್ಲಿ ಸ೦ಭಾಷಣೆಯನ್ನು ಅಲ್ಲಿಗೇ ನಿಲ್ಲಿಸಿ, ಪುನ: ಸ೦ಭಾಷಣೆಯಲ್ಲಿ ತೊಡಗಿಕೊಳ್ಳುವ ಉದ್ದೇಶದಿ೦ದ ಕ್ಷಣಕಾಲ ಹೊರಹೋಗಿ ಬರುವೆನೆ೦ದು ಕೇಳಿಕೊಳ್ಳಿರಿ. ನೀವು ಸ೦ಭಾಷಣೆಯಿ೦ದ ಹೊರಬ೦ದ ಈ ಸಮಯವನ್ನು ಕ್ರಿಯಾತ್ಮಕವಾಗಿ ನಿಮ್ಮ ತನು, ಮನವನ್ನು ಶಾ೦ತಗೊಳಿಸಿಕೊಳ್ಳಲು ಬಳಸಿರಿ. ಹೀಗೆ ಮಾಡಿದಲ್ಲಿ, ಪುನ: ನೀವು ಸ೦ಭಾಷಣೆಗೆ ಹಿ೦ತಿರುಗಿದಾಗ ನೀವು ಹೆಚ್ಚು ವಿವೇಚನಾಯುಕ್ತವಾಗಿ, ಸಕಾರಾಣಾತ್ಮಕವಾಗಿ, ಸರಿಯಾದ ಉದ್ದೇಶದೊಡನೆ ನಿಮ್ಮನ್ನು ನೀವು ವ್ಯಕ್ತಪಡಿಸಿಕೊಳ್ಳುವ೦ತಾಗುತ್ತದೆ.
ಕೋಪದಲ್ಲಿದ್ದಾಗ ಯಾವುದೇ ಪ್ರತಿಕ್ರಿಯೆ ನೀಡಬೇಡಿ
ಕೋಪದಲ್ಲಿ ಕೈಗೊಳ್ಳುವ ತೀರ್ಮಾನಗಳು ಬಳಿಕ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಕೋಪದ ಸಮಯದಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದೇ ಕೊಂಚ ವೇಳೆಯ ಬಳಿಕ ಶಾಂತಗೊಂಡ ಮನಸ್ಸಿನಿಂದ ಸಾವಧಾನವಾಗಿ ಸಮಸ್ಯೆಯನ್ನು ಅವಲೋಕಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಒಳಿತು. ತೀರ್ಮಾನಕ್ಕೆ ತಡ ಮಾಡಿದಷ್ಟೂ ಉತ್ತಮ ತೀರ್ಮಾನಕ್ಕೆ ಬರಲು ಮನಸ್ಸು ಅನುವಾಗುತ್ತದೆ.
ಕೊಂಚಕಾಲ ಧ್ಯಾನಾಸಕ್ತರಾಗಿ
ಕೋಪಕ್ಕೆ ಹೆಸರಾದ ಋಷಿಮುನಿಗಳು ತಮ್ಮ ಕೋಪಶಮನಕ್ಕೆ ಧ್ಯಾನ ಮತ್ತು ತಪಸ್ಸಿನ ಮೊರೆ ಹೋಗುತ್ತಿದ್ದರು. ಈ ವಿಧಾನ ಇಂದಿಗೂ ಪ್ರಸ್ತುತವಾಗಿದ್ದು ಕೋಪ ನಿಗ್ರಹಕ್ಕೆ ಉತ್ತಮವಾಗಿದೆ. ಕೋಪ ಉಲ್ಬಣಗೊಂಡಾಕ್ಷಣ ಕೊಂಚ ಕಾಲ ಏಕಾಂತಕ್ಕೆ ಸರಿದು ಧ್ಯಾನಕ್ಕೆ ಅನುಕೂಲವಾದ ಭಂಗಿಯಲ್ಲಿ ಕುಳಿತು ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸಿ ಧ್ಯಾನಿಸಿ. ಕೆಲ ನಿಮಿಷಗಳಲ್ಲಿಯೇ ಮನಸ್ಸು ಹತೋಟಿಗೆ ಬಂದು ಕ್ರೋಧಕ್ಕೆ ಕಾರಣವಾದ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮರ್ಥರಾಗುತ್ತೀರಿ.
ಎಣಿಕೆ
ಒರಟಾಗಿ ವಾಹನವನ್ನು ಚಲಾಯಿಸುವ ಚಾಲಕರಿ೦ದ ಆರ೦ಭಿಸಿ ಅಪರಿಚಿತ ಹ್ಯಾಕರ್ಗಳು ಹಾಗೂ ನಿಮ್ಮ ಕೆಲಸವನ್ನು ಅದು ನೈಜವಾಗಿರುವುದಕ್ಕಿ೦ತಲೂ ಹೆಚ್ಚು ಕಷ್ಟವಾಗುವ೦ತೆ ಮಾಡುವ ಸಹೋದ್ಯೋಗಿಗಳವರೆಗೂ ಪ್ರತಿಯೊಬ್ಬರೂ ಕೂಡ ನೇರ ನಿಮ್ಮ ನರಮ೦ಡಲಕ್ಕೇ ಕೈಹಾಕುತ್ತಿರುವ೦ತೆ ಅನಿಸುತ್ತದೆ ಹಾಗೂ ತನ್ಮೂಲಕ ನಿಮ್ಮ ತಾಳ್ಮೆಯ ಕಟ್ಟೆಯೊಡೆಯುವ೦ತೆ ಮಾಡಿಬಿಡುತ್ತಾರೆ. ಏನು ಮಾಡುವುದು ಹೇಳಿ...?! ಇ೦ತಹ ಸ೦ದರ್ಭಗಳಲ್ಲಿ ನೀವು ಏನನ್ನೇ ಮಾತನಾಡುವುದಕ್ಕೆ ಮೊದಲು ಒ೦ದರಿ೦ದ ಹತ್ತರವರೆಗೆ ಎಣಿಕೆಯನ್ನು ಕೈಗೊಳ್ಳಿರಿ. ಕೋಪವನ್ನು ಮಿತಿಮೀರಿದ್ದರೆ, ಎಣಿಕೆಯನ್ನು ನೂರರವರೆಗೂ ಮು೦ದುವರಿಸಿರಿ...!!
ಕೋಪದಲ್ಲಿದ್ದಾಗ ಹಾಸ್ಯ ಸನ್ನಿವೇಶವನ್ನು ಕಲ್ಪಿಸಿ ನಕ್ಕುಬಿಡಿ
ಈ ಸಲಹೆ ಹೇಳುವುದು ಸುಲಭ ಆದರೆ ಪಾಲನೆ ಮಾತ್ರ ಕಷ್ಟ. ಆದರೆ ಸತತ ಪ್ರಯತ್ನದ ಬಳಿಕ ಹಾಸ್ಯ ಕೋಪಶಮನಕ್ಕೆ ಎಷ್ಟು ಉತ್ತಮ ಎಂದು ನೀವೇ ಕಂಡುಕೊಳ್ಳುವಿರಿ. ಸುಲಭವಾದ ಮಾರ್ಗವೆಂದರೆ ನಮ್ಮ ಮೇಲೇ ನಾವು ಹಾಸ್ಯಪಟ್ಟುಕೊಳ್ಳುವುದು. ಶಾರೀರಿಕ ಲಕ್ಷಣಗಳಾದ ಸ್ಥೂಲಕಾಯ, ವಿಶಾಲವಾದ ಹಣೆ, ಹೂಟ್ಟೆ, ಚರ್ಮದ ಬಣ್ಣ ಮೊದಲಾದವನ್ನೇ ನೆಪವಾಗಿಟ್ಟುಕೊಂಡು ಪಡೆಯುವ ಹಾಸ್ಯ ಕೋಪಶಮನಕ್ಕೆ ಉತ್ತಮ ಮಾರ್ಗವಾಗಿದೆ.