ರಾಮಸೇತು ನಿರ್ಮಿಸಿದ್ದ ಸ್ಥಳದಲ್ಲಿ ಪ್ರಧಾನಿ ಮೋದಿ ಪೂಜೆ..!

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭಾಗಿದೆ. ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಗಳು ಸಾಗಿದ್ದು, ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈಗಾಗಲೇ ರಾಮನ ವಿಗ್ರಹವು ದೇವಾಲಯ ಸೇರಿದ್ದು, ನೋಡುಗರ ಗಮನ ಸೆಳೆದಿದೆ. ಇತ್ತ ಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾನಾ ಭಾಗಗಳಲ್ಲಿರುವ ರಾಮನ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

ದೇಶದ ವಿವಿಧ ಭಾಗದಲ್ಲಿರುವ ರಾಮನ ದೇವಾಲಯವೂ ಸೇರಿದಂತೆ ರಾಮಾಯಣಕ್ಕೆ ಸಂಬಂಧವಿರುವ ದೇವಾಲಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ತಮಿಳುನಾಡಿನ ಪ್ರವಾಸದಲ್ಲಿರುವ ಅವರು, ಅಲ್ಲಿರುವ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ತಮಿಳುನಾಡಿನ ರಾಮಾಯಣ-ಸಂಪರ್ಕ ಭೇಟಿಗಳ ಭಾಗವಾಗಿ ದಕ್ಷಿಣ ತುದಿಯಾದ ಅರಿಚಲಮುನೈಗೆ ಭೇಟಿ ನೀಡಿದರು ಮತ್ತು ಸಮುದ್ರ ತೀರದಲ್ಲಿ ಪುಷ್ಪ ನಮನ ಸಲ್ಲಿಸಿದರು.

Ram Setu

ಪ್ರಧಾನಿ ಅಲ್ಲಿ 'ಪ್ರಾಣಾಯಾಮ' ಕೂಡ ಮಾಡಿದರು. ಸಮುದ್ರದ ನೀರನ್ನು ಬಳಸಿ ಪ್ರಾರ್ಥನೆಯನ್ನೂ ಸಲ್ಲಿಸಿದರು. ರಾತ್ರಿ ರಾಮೇಶ್ವರಂನಲ್ಲಿ ತಂಗಿದ್ದ ಪ್ರಧಾನಿ ಮೋದಿ ಅವರು ರಾಮಸೇತು ನಿರ್ಮಿಸಿದ ಸ್ಥಳವೆಂದು ಹೇಳಲಾದ ಅರಿಚಲಮುನೈಗೆ ತೆರಳಿದರು. ಸೇತುವನ್ನು ಆಡಮ್ ಸೇತುವೆ ಎಂದೂ ಕರೆಯುತ್ತಾರೆ, ಇದನ್ನು ರಾವಣನ ವಿರುದ್ಧ ಯುದ್ಧ ಮಾಡಲು ಲಂಕಾಕ್ಕೆ ಪ್ರಯಾಣಿಸಲು 'ವಾನರ ಸೇನೆ'ಯ ಸಹಾಯದಿಂದ ರಾಮನು ನಿರ್ಮಿಸಿದನೆಂದು ಹೇಳಲಾಗುತ್ತದೆ.

ಭಾನುವಾರ, ಪ್ರಧಾನಮಂತ್ರಿಯವರು ಕಡಲತೀರದಲ್ಲಿ ಪುಷ್ಪಾರ್ಚನೆ ಮಾಡಿದರು ಮತ್ತು ರಾಷ್ಟ್ರೀಯ ಲಾಂಛನದೊಂದಿಗೆ ಅಲ್ಲಿ ನಿರ್ಮಿಸಲಾದ ಸ್ತಂಭಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ತಮಿಳುನಾಡು ತನ್ನ 3 ದಿನಗಳ ಪ್ರವಾಸವನ್ನು ಕೊನೆಗೊಳಿಸಲಿದ್ದಾರೆ, ಈ ಸಂದರ್ಭದಲ್ಲಿ ಅವರು ಶುಕ್ರವಾರ ಚೆನ್ನೈನಲ್ಲಿ ಖೇಲೋ ಇಂಡಿಯಾ ಗೇಮ್ಸ್ 2023 ಅನ್ನು ಉದ್ಘಾಟಿಸಿದರು.

ಶನಿವಾರ ಅವರು ಶ್ರೀರಂಗಂ ಮತ್ತು ರಾಮೇಶ್ವರಂನಲ್ಲಿರುವ ಶ್ರೀ ರಂಗನಾಥಸ್ವಾಮಿ ಮತ್ತು ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರು. ಸೋಮವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರದ ಶಂಕುಸ್ಥಾಪನೆಗೆ ಮುನ್ನ ರಾಮಾಯಣ ಸಂಪರ್ಕದೊಂದಿಗೆ ತಮಿಳುನಾಡಿನ ದೇವಾಲಯಗಳಿಗೆ ಅವರು ಭೇಟಿ ನೀಡುತ್ತಿದ್ದಾರೆ.

ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಮೋದಿ

ನಿನ್ನೆ ಪ್ರಧಾನಿ ಮೋದಿ ಅವರು, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಅಚ್ಚರಿ ಎಂದರೆ ಈ ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ಆನೆ ಪ್ರಧಾನಿ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದಲ್ಲದೆ ಮೌತ್ ಆರ್ಗನ್ ಸಹ ನುಡಿಸುತ್ತದೆ. ಹೌದು ತಮಿಳುನಾಡಿನ ಈ ಪ್ರಸಿದ್ಧ ದೇವಾಲಯದಲ್ಲಿ ಈ ಆನೆ ಸಂಗೀತ ನುಡಿಸುವುದನ್ನು ಕಲಿತಿದೆ. ಈ ವೇಳೆ ದೇವಸ್ಥಾನದ ಆನೆಯಾದ ಆಂಡಾಲ್ ಎಂದು ಕರೆಯಲ್ಪಡುವ ಆನೆಯು ಪ್ರಧಾನಿ ಮೋದಿ ಅವರಿಗೆ ಆರ್ಶಿವದಿಸಿದೆ. ಜೊತೆಗೆ ಮೌತ್ ಆರ್ಗನ್ ನುಡಿಸುವ ಮೂಲಕ ಪ್ರಧಾನಿ ಮೋದಿ ಅವರ ಅಚ್ಚರಿಗೂ ಕಾರಣವಾಗಿತ್ತು.

ಈ ದೇವಾಲಯವು 5000 ವರ್ಷಗಳಿಗಿಂತಲೂ ಹಳೆಯದಾಗಿದೆ ಮತ್ತು ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ದೇವಾಲಯವನ್ನು "ಚೋಳರು, ಪಾಂಡ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ರಾಜರು ಮುಂತಾದ ಅನೇಕ ರಾಜ ಮನೆತನಗಳು ದುರಸ್ತಿ ಮಾಡಿ ನಿರ್ಮಿಸಿದ್ದಾರೆ. ಈ ರಂಗನಾಥ ದೇವಾಲಯವನ್ನು 14 ನೇ ಶತಮಾನದಲ್ಲಿ ದೆಹಲಿ ಸುಲ್ತಾನರು ಲೂಟಿ ಮಾಡಿದರು. ಶ್ರೀರಂಗಂ ರಂಗನಾಥ ದೇವಾಲಯವು ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ದೇವಾಲಯವಾಗಿದೆ. ನಿಮ್ಮಲ್ಲಿ ಎರಡನೇ ಅತಿ ದೊಡ್ಡ ವಿಷ್ಣು ದೇವಾಲಯ ಎನಿಸಿದೆ.

ಸರ್ಕಾರಿ ಉದ್ಯೋಗಿಗಳಿಗೂ ಅರ್ಧ ದಿನ ರಜೆ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈ ದಿನ ಅರ್ಧ ದಿನ ರಜೆ ನೀಡಲಾಗಿದೆ. ರಜೆ ಬೇಕೆಂದು ಕೋರಿ ಸಾರ್ವಜನಿಕ ವಯಲದಲ್ಲಿ ತುಂಬಾನೇ ಬೇಡಿಕೆ ಬಂದಿತ್ತು, ಜನರ ಬೇಡಿಕೆಯನ್ನು ಪರಿಗಣಿಸಿ, ಈ ದಿನದ ಸಂಭ್ರಮ ಕಣ್ತುಂಬಿಕಳ್ಳಲು ಅರ್ಧ ದಿನ ರಜೆ ನೀಡಲಾಗಿದೆ.

English summary

Prime Minister Modi Worship At The Place Where Ram Setu Was Built..!

Prime Minister Narendra Modi offered prayers at temples related to Ramayana, including Rama temples in various parts of the country. He is currently on a tour of Tamil Nadu and has visited important temples there.
Story first published: Sunday, January 21, 2024, 14:35 [IST]
X
Desktop Bottom Promotion