Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗ್ರಹಗತಿಗಳ ಆಧಾರ ಮೇಲೆ ಸಿದ್ದರಾಮಯ್ಯ ರಾಜಕೀಯ ವೃತ್ತಿ ಜೀವನ ಭವಿಷ್ಯ
ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರಾಗುತ್ತಾರೆ? ಎಂಬ ಪ್ರಶ್ನೆಗೆ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡೆಯುತ್ತಿರುವ ಸ್ಪರ್ಧೆ ತುಂಬಾನೇ ರೋಚಕವಾಗಿದೆ. ಇವರಿಬ್ಬರ ರಾಶಿಭವಿಷ್ಯ ನೋಡಿದರೆ ಸಿದ್ಧರಾಮಯ್ಯ ಕಡೆ ಗ್ರಹಗತಿಗಳ ಪ್ರಭಾವ ಅನುಕೂಲಕರವಾಗಿದೆ.

ಸಿದ್ಧರಾಮಯ್ಯರವರ ಜನನ ಜನ್ಮ ದಿನಾಂಕ
ಆಗಸ್ಟ್ 3 1947 (ಕೆಲವು ಕಡೆ ಆಗಸ್ಟ್ 12 ಎಂಬುದಿದೆ, ಆದರೆ ಸಿದ್ಧರಾಮೋತ್ಸವ ಕಾರ್ಯಕ್ರಮವನ್ನು ಆಗಸ್ಟ್ 3ರಂದು ಆಯೋಜಿಸಲಾಗಿತ್ತು)
ಇದರ ಪ್ರಕಾರ ಜನ್ಮ ನಕ್ಷತ್ರ ಧನಿಷ್ಠ
ರಾಶಿ: ವೃಶ್ಚಿಕ ರಾಶಿ
ಜನನ ಸ್ಥಳ: ಮೈಸೂರು
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಸೂರ್ಯ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪಾಲುದಾರರ ಜೊತೆಗಿನ ಸಂಬಂಧ ಹಾಳಾಗಬಹುದು. ಮುಖ್ಯಮಂತ್ರಿ ಪಟ್ಟ ಸಿದ್ಧರಾಮಯ್ಯರವರಿಗೆ ದೊರಕಿದರೆ ಡಿಕೆಶಿಗೆ ಅಸಮಧಾನ ಹೆಚ್ಚಾಗಲಿದೆ, ಈ ಅವಧಿಯಲ್ಲಿ ವೃತ್ತಿಪರ ಜೀವನದಲ್ಲಿ ಹಲವು ತೊಂದರೆಗಳು ಎದುರಾಗುವುದು. ಆದರೆ ಸ್ಥಾನಮಾನ ಹೆಚ್ಚಾಗಲಿದೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ವೃತ್ತಿ ಜೀವನದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ.
ವೃಶ್ಚಿಕ ರಾಶಿ ಮೇಲೆ ಗುರುವಿನ ಪ್ರಭಾವ ಹೇಗಿದೆ?
ಗುರು ವೃಶ್ಚಿಕ ರಾಶಿಯವರ 6ನೇ ಮನೆಯಲ್ಲಿರುವುದರಿಂದ ಈ ಅವಧಿ ಸಿದ್ಧರಾಮಯ್ಯ ಅವರಿಗೆ ಅನುಕೂಲಕರವಾಗಿದೆ. ಹಾಗಂತ ತುಂಬಾ ಅನುಕೂಲಕರ ಎಂದು ಹೇಳಲು ಸಾಧ್ಯವಿಲ್ಲ, ಕೆಲವು ಅಡೆತಡೆ ಎದುರಾಗುವುದು. ಆದರೂ ಖಂಡಿತವಾಗಿಯೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್ನಿಂದ, ಕ್ರಮೇಣ ಪರಿಸ್ಥಿತಿಯು ನಿಮ್ಮ ಪರವಾಗಿ ತಿರುಗುತ್ತದೆ ಮತ್ತು ನವೆಂಬರ್-ಡಿಸೆಂಬರ್ನಲ್ಲಿ ರಾಜಕೀಯದಲ್ಲಿ ಮತ್ತಷ್ಟು ಹೆಸರು ಗಳಿಸಲು ಸಾಧ್ಯವಾಗುವುದು.
ಕುಂಭ ರಾಶಿಯಲ್ಲಿ ಶನಿ ಸಂಚಾರ
ಇನ್ನು ಶನಿಯ ಸ್ಥಾನ ನೋಡುವುದಾದರೆ ಶನಿ ನಾಲ್ಕನೇ ಮನೆಯಲ್ಲಿ ಇರುವುದರಿಂದ ಈ ಸಂಚಾರ ನಿಮಗೆ ಅಷ್ಟು ಅನುಕೂಲಕರವಾಗಿಲ್ಲ.ಶನಿ ದೆಸೆಯಿಂದ ಮಾನಸಿಕ ಒತ್ತಡ ಹೆಚ್ಚಿರಲಿದೆ. ಚುನಾವಣೆ ಫಲಿತಾಂಶ ಖುಷಿ ನೀಡಿದರೂ ಸಿಎಂ ಪಟ್ಟದ ಹೋರಾಟದಿಂದಾಗಿ ಸಿದ್ಧರಾಮಯ್ಯರವರ ಮಾನಸಿಕ ಒತ್ತಡ ಹೆಚ್ಚಾಗಿದೆ. ಶನಿಯ ಈ ಸ್ಥಾನದಿಂದಾಗಿ ತುಂಬಾ ಮಾನಸಿಕ ಒತ್ತಡ ಅನುಭವಇಸಬೇಕಾಗುತ್ತದೆ. ಕಾರ್ಯಗಳಲ್ಲಿ ವಿಳಂಬದಿಂದಾಗಿ ನಿಮ್ಮ ಮನಸ್ಸು ಕಿರಿಕಿರಿಯುಂಟುಮಾಡುತ್ತದೆ.
ಈ ಮೂರು ಪ್ರಮುಖ ಗ್ರಹಗತಿಗಳ ಆಧಾರದ ಮೇಲೆ ಹೇಳುವುದಾದರೆ ಸಿದ್ಧರಾಮಯ್ಯರವರ ರಾಜಕೀಯ ಭವಿಷ್ಯದಲ್ಲಿ ಮಿಶ್ರಫಲ. ರಾಜಕೀಯವಾಗಿ ಬೆಳೆಯಲು ಸಾಕಷ್ಟು ಅಡೆತಡೆಗಳು ಉಂಟಾಗುವುದು. ಆದರೂ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಗಲಿದೆ, ಸಿದ್ಧರಾಮಯ್ಯ ರಾಶಿಫಲ ನೋಡುವುದಾದರೆ ಅವರಿಗೆ ಸಿಎಂ ಪಟ್ಟ ಒಲಿದು ಬರಲಿದೆ, ಆದರೆ ಸವಾಲುಗಳು ತುಂಬಾನೇ ಇದೆ.



Click it and Unblock the Notifications
