Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
'ಗಗನ್ಯಾನ್ ಮಿಷನ್: ನಾಲ್ವರು ಗಗನಯಾತ್ರಿಗಳ ಹೆಸರು ತಿಳಿಸಿದ ಪ್ರಧಾನಿ ಮೋದಿ.!
ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಲ್ಲಿಲ್ಲದ ಸಾಧನೆ ಮಾಡುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳೇ ಭಾರತದತ್ತ ತಿರುಗಿ ನೋಡುವಂತ ಸಾಧನೆಗಳ ಮಾಡಿದೆ. ಇದಕ್ಕೆ ಸಾಕ್ಷಿಯಾಗಿದ್ದು, ಚಂದ್ರಯಾನ್ ಎಂಬ ಯೋಜನೆ. ಚಂದ್ರಯಾನ್ ಯೋಜನೆಗಳು ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದವು. ಆದರೆ ಭಾರತದ ಸಾಧನೆ ಇಷ್ಟಕ್ಕೆ ನಿಂತಿಲ್ಲ. ಬಾಹ್ಯಾಕಾಶದಲ್ಲಿ ಮತ್ತಷ್ಟು ಸಾಧನೆ ಮಾಡಲು ಈಗ ಮುಂದಾಗಿದೆ.
ದೇಶದ ಬಾಹ್ಯಾಕಾಶ ಸಂಶೋದನಾ ಸಂಸ್ಥೆ ಇಸ್ರೋ ಈಗ 'ಗಗನ್ಯಾನ್ ಮಿಷನ್ಗೆ' ಭರದ ಸಿದ್ಧತೆ ನಡೆಸಿದೆ. ಇದು ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸಲು ಭಾರತದ ಮೊಟ್ಟ ಮೊದಲ ಯೋಜನೆಯಾಗಿದ್ದು, ಭಾರತದ ಪಾಲಿಗೆ ಇದೊಂದು ಸಾಹಸವಾಗಿದೆ. ಹೀಗಾಗಿ ಈ ಗಗನ್ಯಾನ್ ಯಾತ್ರೆಗೆ ಯಾರೆಲ್ಲಾ ತೆರಳಲಿದ್ದಾರೆ. ಈ ಸಾಹಸಮಯ ಯಾತ್ರೆ ಆರಂಭಿಸುವ ಗಗನಯಾತ್ರಿಗಳು ಯಾರು ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

ಹೌದು ಪ್ರಧಾನಿ ನರೇಂದ್ರ ಮೋದಿ ಅವರೇ ಗಗನಯಾತ್ರೆ ಕೈಗೊಳ್ಳಲಿರುವ ನಾಲ್ಕು ಮಂದಿ ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ್ದಾರೆ. ದೇಶದ ಚೊಚ್ಚಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ಗಗನಯಾತ್ರಿಗಳು ತರಬೇತಿ ಪಡೆಯುತ್ತಿದ್ದಾರೆ. ನಾಲ್ಕು ಗಗನಯಾತ್ರಿಗಳೆಂದರೆ - ಪ್ರಶಾಂತ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ.
ಗಗನ್ಯಾನ್ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾಗಿದ್ದು, ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.ಗಗನ್ಯಾನ್ ಯೋಜನೆಯು ಮೂರು ದಿನಗಳ ಕಾರ್ಯಾಚರಣೆಗಾಗಿ ಸಿಬ್ಬಂದಿ ಸದಸ್ಯರನ್ನು 400 ಕಿ.ಮೀ ಕಕ್ಷೆಗೆ ಉಡಾಯಿಸುವ ಮೂಲಕ ಮತ್ತು ಇಂಡಿಯನ್ ಸಮುದ್ರದಲ್ಲಿ ಇಳಿಯುವ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಮೂಲಕ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಲು ಭಾರತ ಮುಂದಾಗಿದೆ.
ಮೊದಲ ಮಾನವರಹಿತ ಗಗನ್ಯಾನ್ (G1) ಮಿಷನ್ಗಾಗಿ ಗುರುತಿಸಲಾದ ಫ್ಲೈಟ್ ಎಂಜಿನ್ನ ಸ್ವೀಕಾರ ಪರೀಕ್ಷೆಗಳನ್ನು ISRO ಯಶಸ್ವಿಯಾಗಿ ಪೂರ್ಣಗೊಳಿಸಿದೆ, ತಾತ್ಕಾಲಿಕವಾಗಿ 2024ರ ದ್ವಿತಿಯಾರ್ಧದಲ್ಲಿ ನಿಗದಿಪಡಿಸಲಾಗಿದೆ. ಈ ಎಂಜಿನ್ ಮಾನವ-ರೇಟೆಡ್ LVM3 ವಾಹನದ ಮೇಲಿನ ಹಂತಕ್ಕೆ ಶಕ್ತಿ ನೀಡುತ್ತದೆ. 442.5 ಸೆಕೆಂಡುಗಳ ನಿರ್ದಿಷ್ಟ ಪ್ರಚೋದನೆಯೊಂದಿಗೆ 22 ಟನ್ ತೂಕ ಹೊತ್ತೊಯ್ಯುವ ಸಾರ್ಥ್ಯವಿದೆ.
ಬೆಂಗಳೂರಲ್ಲಿ ಗಗನಯಾತ್ರಿಗಳಿಗೆ ತರಬೇತಿ
2024-2025 ರಲ್ಲಿ ಗಗನ್ಯಾನ್ ಮಿಷನ್, 2035ರ ವೇಳೆಗೆ 'ಭಾರತೀಯ ಅಂತರಿಕ್ಷಾ ಸ್ಟೇಷನ್' ಅನ್ನು ಸ್ಥಾಪಿಸುವುದು ಮತ್ತು 2040ರ ವೇಳೆಗೆ ಮೊದಲ ಭಾರತೀಯನನ್ನು ಚಂದ್ರನಿಗೆ ಕಳುಹಿಸುವುದು ಇಸ್ರೋದ ಇತರೆ ಯೋಜನಾ ಕಾರ್ಯಕ್ರಮಗಳಾಗಿವೆ. ಆದರೆ ಮೊಟ್ಟ ಮೊದಲ ಬಾರಿಗೆ ಅಂತರಿಕ್ಷಕ್ಕೆ ಮಾನವರ ಕಳುಹಿಸುವ ಇಸ್ರೋದ ಯೋಜನೆ ಕುರಿತು ಭಾರೀ ಕುತೂಹಲವಂತು ಮನೆ ಮಾಡಿದೆ.
ನಾಲ್ವರು ಗಗನಯಾತ್ರಿಗಳು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಐಎಎಫ್ನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನಲ್ಲಿ ಗಗನಯಾತ್ರಿಗಳ ಆಯ್ಕೆ ನಡೆದಿದೆ.
ISRO ಮತ್ತು Glavkosmos (ರಷ್ಯಾದ ಬಾಹ್ಯಾಕಾಶ ಸಂಸ್ಥೆ Roscosmos ನ ಅಂಗಸಂಸ್ಥೆ) ಜೂನ್ 2019 ರಲ್ಲಿ ನಾಲ್ಕು ಗಗನಯಾತ್ರಿಗಳ ತರಬೇತಿಗಾಗಿ ತಿಳುವಳಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದವು. ನಾಲ್ಕು ಗಗನಯಾತ್ರಿಗಳು ಫೆಬ್ರವರಿ 2020 ರಲ್ಲಿ ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಮಾರ್ಚ್ 2021 ರವರೆಗೆ ತರಬೇತಿ ಪಡೆದರು.
2024 ರ ಅಂತ್ಯದ ವೇಳೆಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತೀಯ ಗಗನಯಾತ್ರಿಗಳಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಿಷನ್ಗಾಗಿ ತರಬೇತಿ ನೀಡಲಿದೆ ಎಂದು ಸಂಸ್ಥೆಯ ನಿರ್ವಾಹಕ ಬಿಲ್ ನೆಲ್ಸನ್ 2023 ರಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿದ್ದರು. ಭಾರತ ಒಂದೊಂದೆ ಬಾಹ್ಯಾಕಾಶ ಯೋಜನೆಗಾಗಿ ಸಿದ್ಧತೆ ನಡೆಸುತ್ತಿದೆ.



Click it and Unblock the Notifications