ರಾಮನಿಗಾಗಿ ಪ್ರಧಾನಿ ಮೋದಿ ಇಂದಿನಿಂದ ಕಠಿಣ ಉಪವಾಸ ವ್ರತಾಚರಣೆ..!

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿ 16ರಿಂದ ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತಿವೆ. ಈ ನಡುವೆ ರಾಮನ ಕಾಣಲು ಕೋಟ್ಯಂತರ ಭಕ್ತರು ಕಾದು ಕುಳಿತಿದ್ದಾರೆ. ಲಕ್ಷಾಂತರ ಮಂದಿ ಇದಕ್ಕಾಗಿ ನೂರಾರು ರೀತಿಯ ವ್ರತ ಕೈಗೊಂಡಿದ್ದಾರೆ. ಇದೀಗ ಈ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸೇರಿಕೊಂಡಿದ್ದಾರೆ.

ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿದ್ದು, ಹೀಗಾಗಿ ಪ್ರಧಾನಿ ಮೋದಿ ವಿಶೇಷ ಅನುಷ್ಠಾನ ನಡೆಸುವುದಾಗಿ ತಿಳಿಸಿದ್ದಾರೆ. ಈ ವ್ರತವು ರಾಮನಿಗಾಗಿ ಎಂದಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ವಿಶೇಷ ಅನುಷ್ಠಾನ ನಡೆಸುತ್ತಿರುವ ಕುರಿತು ವಿಶೇಷ ಸಂದೇಶವನ್ನು ನೀಡಿದ್ದಾರೆ.

"ಅಯೋಧ್ಯೆಯ ರಾಮಲಲಾನ ಪ್ರಾಣಪ್ರತಿಷ್ಠೆಗೆ ಇನ್ನು ಕೇವಲ 11 ದಿನಗಳು ಬಾಕಿ ಇವೆ. ಈ ಪುಣ್ಯ ಸಂದರ್ಭಕ್ಕೆ ನಾನೂ ಸಾಕ್ಷಿಯಾಗುತ್ತಿರುವುದು ನನ್ನ ಅದೃಷ್ಟ. ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ದೇಶದ ಎಲ್ಲ ನಾಗರಿಕರ ಪ್ರತಿನಿಧಿಯಾಗಿ ಭಾಗವಹಿಸುವುದಕ್ಕೆ ಪ್ರಭು ಶ್ರೀರಾಮಚಂದ್ರನು ನನಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳ ವಿಶೇಷ ಅನುಷ್ಠಾನವನ್ನು ಶುರುಮಾಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ (ಎಕ್ಸ್‌)ನಲ್ಲಿ ಬರೆದುಕೊಂಡಿದ್ದಾರೆ.

Ram Mandir

"ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಶಾಸ್ತ್ರಗಳಲ್ಲಿ ವಿವರಿಸಿರುವಂತೆ ವಿಸ್ತೃತ ಮತ್ತು ಸಮಗ್ರ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಅನುಸರಿಸಬೇಕಾದ ವಿಸ್ತೃತ ನಿಯಮಾನುಷ್ಠಾನಗಳನ್ನು ಶಾಸ್ತ್ರಗಳಲ್ಲಿ ನೀಡಲಾಗಿದೆ. ಇದನ್ನು ಪ್ರಾಣಪ್ರತಿಷ್ಠಾನ ಮಹೋತ್ಸವದ ಹಲವು ದಿನಗಳ ಮೊದಲೇ ಶುರುಮಾಡಬೇಕು. ರಾಮ ಭಕ್ತನಾಗಿ ರಾಮ ಮಂದಿರವನ್ನು ನಿರ್ಮಿಸುವ ಮತ್ತು ಜೀವನವನ್ನು ಪವಿತ್ರಗೊಳಿಸುವ ಆಧ್ಯಾತ್ಮದ ಕೆಲಸಕ್ಕಾಗಿ ಸಮರ್ಪಿಸಿದ್ದೇನೆ. ಎಲ್ಲ ಕಾರ್ಯಗಳು ಮತ್ತು ಜವಾಬ್ದಾರಿಗಳ ಹೊರತಾಗಿಯೂ, ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗಾಗಿ ಅಗತ್ಯವಾದ ಎಲ್ಲ ನಿಯಮಗಳನ್ನು ಪಾಲಿಸಲು ಮುಂದಾಗಿದ್ದೇನೆ"ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶದಲ್ಲಿ ತಿಳಿಸಿದ್ದಾರೆ.

ಏನಿದು ವಿಶೇಷ ಅನುಷ್ಠಾನ

ಯಾವುದೇ ದೇವರ ಮೂರ್ತಿ ಪ್ರತಿಷ್ಠಾಪನೆಗೂ ಮೊದಲು ಅದರ ನಿಯಮಾವಳಿಗಳ ನೀಡಲಾಗಿರುತ್ತದೆ. ಅಂದರೆ ಸಂಪ್ರದಾಯದಂತೆ ಹಲವು ನಿಯಮಗಳಿವೆ, ಆಚರಣೆಯ ಮೊದಲು ಉಪವಾಸದ ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ನೀಡಲಾಗಿದೆ. ಪ್ರಧಾನಮಂತ್ರಿ ಮೋದಿಯವರು ಇಂದಿನಿಂದ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಕಠಿಣ ತಪಸ್ಸಿನೊಂದಿಗೆ ಉಪವಾಸವನ್ನು ಆಚರಿಸಲಿದ್ದಾರೆ.

ಜನವರಿ 22 ರಂದು ಅಯೋಧ್ಯೆಯಲ್ಲಿನ ಭವ್ಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಿ ವಹಿಸಲಿದ್ದಾರೆ. ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಸಮಾರಂಭಕ್ಕೆ ಆಹ್ವಾನಗಳನ್ನು ಸ್ವೀಕರಿಸಿರುವುದರಿಂದ ಕಾರ್ಯಕ್ರಮಕ್ಕೆ ಸಿದ್ಧತೆಗಳು ಕೊನೆಯ ಹಂತದಲ್ಲಿವೆ. 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಾವಿರಾರು ಭಕ್ತರಿಗೆ ಅವಕಾಶ ಕಲ್ಪಿಸಲು ಅಯೋಧ್ಯೆಯಲ್ಲಿ ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ.

ಸ್ಥಳೀಯ ಅಧಿಕಾರಿಗಳು ಸಹ ಭವ್ಯ ಸಮಾರಂಭದ ಸುತ್ತಲೂ ಸಂದರ್ಶಕರ ನಿರೀಕ್ಷಿತ ಉಲ್ಬಣಕ್ಕೆ ಸಜ್ಜಾಗುತ್ತಿದ್ದಾರೆ ಮತ್ತು ಎಲ್ಲಾ ಪಾಲ್ಗೊಳ್ಳುವವರಿಗೆ ಸುಗಮ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧಗೊಳಿಸುವ ಅನುಭವವನ್ನು ಖಚಿತಪಡಿಸಿಕೊಳ್ಳಲು ವರ್ಧಿತ ಭದ್ರತಾ ಕ್ರಮಗಳನ್ನು ಮತ್ತು ಲಾಜಿಸ್ಟಿಕ್ ವ್ಯವಸ್ಥೆಗಳನ್ನು ಮಾಡುವ ಪ್ರಕ್ರಿಯೆಯಲ್ಲಿದ್ದಾರೆ.

ರಾಮ ಮಂದಿರದ ಕೆಲವು ವಿಶೇಷತೆಗಳು

* ಈ ಮಂದಿರ ನಿರ್ಮಾಣದಲ್ಲಿ ಕಬ್ಬಿಣ, ಸಿಮೆಂಟ್ ಬಳಕೆಯೇ ಆಗಿಲ್ಲ, ಇದರಿಂದಾಗಿ ಈ ದೇವಾಲು ಭೂಕಂಪಕ್ಕೆ ಬಗ್ಗಲ್ಲ, ಸಾವಿರ ವರ್ಷಗಳಿಗಿಂತಲೂ ಅಧಿಕ ಕಾಲ ಉತ್ತಮಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಲಾಗುವುದು.

* ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ಕಲ್ಲು ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು.

* ಈ ದೇವಾಲಯದಲ್ಲಿ ಕಲಶಾಭಿಷೇಕ ಮಾಡಲು 1 ಲಕ್ಷ ರುಪಾಯಿ ಪಾವತಿಸಬೇಕು, ಯಾರು ಸಮಾಜ ಸೇವೆ ಮಾಡಿದ್ದಾರೋ ಅವರಿಗೆ ಮಾತ್ರ ಈ ಪೂಜೆ ಮಾಡಿಸಲು ಅವಕಾಶ ಸಿಗುವುದು. ಈ ಹಣವನ್ನು ಕೂಡ ಬಡವರಿಗೆ ಮನೆ ನಿರ್ಮಿಸಲು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆ ಖರ್ಚುಗಳಿಗೆ ವಿನಿಯೋಗಲಾಗಿಸುವುದು.

English summary

PM Modi Begins 11 Day Anushthan For Ram Mandir Ceremony

There are only 11 days left for the installation of Ram's idol, so Prime Minister Modi has said that he will conduct a special implementation. Do you know what fasting is?
Story first published: Friday, January 12, 2024, 11:15 [IST]
X
Desktop Bottom Promotion