Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
5000 ವರ್ಷಗಳ ಹಿಂದೆ ನೀರಿನಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕಾ ನಗರದ ಕುರಿತ ಆಸಕ್ತಿಕರ ಸಂಗತಿಗಳು
ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದರೆ ಅದು ರಾಮಾಯಣ, ಮಹಾಭಾರತ.. ನಿಜವಾಗಲು ಆ ಪುಸ್ತಕಗಳು ಒಬ್ಬ ವ್ಯಕ್ತಿ ಮಧ್ಯಮದಿಂದ ಉತ್ತಮನಾಗಲು ಯಾವ ಗುಣಗಳನ್ನು ಹೊಂದಿರಬೇಕು ಎಂಬ ಮಾರ್ಗದರ್ಶನಗಳನ್ನು ಆ ಎರಡು ಪವಿತ್ರ ಗ್ರಂಥಗಳು ಮಾಡುತ್ತವೆ. ಕೆಲವರು ರಾಮಾಯಣ, ಮಹಾಭಾರತವನ್ನು ಕಾಲ್ಪನಿಕ ಕತೆ ಎಂದು ಹೇಳುತ್ತಾರೆ, ಆದರೆ ಹಿಂದೆ ಮಹಾಭಾರತ ಹಾಗೂ ರಾಮಾಯಣದ ಕತೆಗಳು ನಿಜವಾಗಿ ನಡೆದಿತ್ತು ಎಂಬುವುದಕ್ಕೆ ಈಗಲೂ ಹಲವಾರು ಸಾಕ್ಷಿಗಳು ದೊರೆಯುತ್ತದೆ.
ಅದಕ್ಕೆ ಪ್ರಮುಖ ಸಾಕ್ಷಿ ದ್ವಾರಕಾ ನಗರ. ಈ ದ್ವಾರಕಾ ನಗರ ಈಗಲೂ ಇದೆ, ಆದರೆ ಆಳ ಸಮುದ್ರದಲ್ಲಿ ಮುಳುಗಿ ಹೋಗಿದೆ, ಇದೀಗ ಪ್ರಧಾನು ಮೋದಿ ಆಳವಾದ ನೀರಿನಲ್ಲಿ ಸ್ಕೂಬಾ ಡೈವ್ ಮಾಡಿ ದ್ವಾರಕಾಧೀಶ ದೇವಾಲಯಕ್ಕೆ ಭಾನುವಾರ ಪ್ರಾರ್ಥನೆ ಸಲ್ಲಿಸಿದರು. ನಂತರ ದೈವಿಕ ಅನುಭವ ಎಂದು ಕೂಡ ಬಣ್ಣಿಸಿದ್ದಾರೆ.

ದ್ವಾರಕಾ ಶ್ರೀಕೃಷ್ಣನ ನಗರ, ಈ ನಗರದ ಬಗ್ಗೆ ಪುರಾತತ್ವ ಶಾಸ್ತ್ರಜ್ಞರು ಸಾಕಷ್ಟು ಬರಹ ಬರೆದಿದ್ದಾರೆ, ಆದರೆ ಅದನ್ನು ನೋಡುವ ಸೌಭಾಗ್ಯ ಪ್ರಧಾನಿಯವರಿಗೆ ಸಿಕ್ಕಿದೆ. 'ನಾನಿಂದು ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡಿದೆ. ಅದೀಗ ನೀರಿನಲ್ಲಿ ಮುಳುಗಿದೆ, ಆ ದೇವಾಲಯವನ್ನು ದರ್ಶನ ಮಾಡಿದ ಕ್ಷಣ ಪುರಾತನ ಕಾಲಕ್ಕೆ ಮರಳಿದೆ, ಭಕ್ತಿ ಭಾವ ನನ್ನಲ್ಲಿ ಉಕ್ಕಿ ಬಂತು, ಭಗವಂತ ಶ್ರೀ ಕೃಷ್ಣನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ' ಎಂದು ಹೇಳಿದ್ದಾರೆ.
ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದ ಬಗ್ಗೆ ಆಸಕ್ತಿಕರ ಸಂಗತಿಗಳೆಂದರೆ
5000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಿದೆ
ದ್ವಾರಕಾ ನಗರ ನಿರ್ಮಾಣವಾಗಿದ್ದು ದ್ವಾಪರ ಯುಗದಲ್ಲಿ. ಸುಮಾರು 5000 ವರ್ಷಗಳ ಹಿಂದೆಯೇ ಈ ದ್ವಾರಕಾ ನಗರ ಮುಳುಗಡೆಯಾಗಿದೆ. ಈ ದ್ವಾರಕಾ ನಗರದ ಅವಶೇಷಗಳು ಈಗಲೂ ಇದೆ ಎಂದು ಹೇಳಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಇಲ್ಲಿಯ ದೇವಾಲಯದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯುವ ಮೂಲಕ ಮತ್ತೆ ದ್ವಾರಕಾ ನಗರ ಟ್ರೆಂಡ್ನಲ್ಲಿದೆ.
ಈ ದ್ವಾರಕಾ ಎಲ್ಲಿದೆ?
ಗುಜರಾತ್ನ ಜಾಮ್ ನಗರದ ಅರೇಬಿಯಾ ಮಹಾಸಮುದ್ರದಲ್ಲಿ ಸುಮಾರು 150 ಅಡಿ ಆಳದಲ್ಲಿ ಈ ದ್ವಾರಕಾ ನಗರವಿದೆ.
ಪುರಾತನ ನಗರಗಳಲ್ಲಿ ಈ ದ್ವಾರಕಾ ನಗರವೂ ಒಂದಾಗಿದೆ. ಇದು ಶ್ರೀಕೃಷ್ಣನ ಚಾರ್ಧಾಮ(ನಾಲ್ಕು ಧಾಮ)ಗಳಲ್ಲಿ ಒಂದಾಗಿದೆ. ಕೃಷ್ಣನು ಮಥುರೆಯಲ್ಲಿ ಯುದ್ಧವನ್ನು ಪರಿತ್ಯಜಿಸಿ ಮಥುರಾದಿಂದ ಬಿಟ್ಟು ದ್ವಾರಕೆಗೆ ಬಂದು ನೆಲೆಸಿದನು. ಇದು ಒಕಾ ಮಂದಿರಿನ ಸಮೀಪದಲ್ಲಿದೆ. ಇಲ್ಲಿಯ ಶ್ರೀ ಕೃಷ್ಣ ತನ್ನ ಜೀವನದ ಉಳಿದ ಸಮಯವನ್ನು ಕಳೆದನು, ಶ್ರೀ ಕೃಷ್ಣನ ಈ ಭೂಮಿ ವಾಸ ಅಂತ್ಯವಾದ ಬಳಿಕ ಈ ನಗರ ಮುಳುಗಿತು ಎಂದು ಹೇಳಲಾಗುವುದು.
ದ್ವಾರಕಾ ಎಂದರೆ ಅರ್ಥವೇನು?
ದ್ವಾರಕಾ ಎಂಬುವುದು ಸಂಸ್ಕೃತದ ದ್ವಾರ್ ಎಂಬ ಪದದಿಂದ ಬಂದಿದೆ. ದ್ವಾರ್ ಎಂದರೆ ಬಾಗಿಲು, ಇದು ಬ್ರಹ್ಮನ ಬಾಗಿಲು ಎಂದು ಕರೆಯಲಾಗುವುದು. ಈ ದ್ವಾರಕಾ ಶ್ರೀಕೃಷ್ಣನ ಸ್ಥಳವಾಗಿದ್ದು ಹಲವು ಅದ್ಭುತ ಧಾರ್ಮಿಕ ರಹಸ್ಯಗಳನ್ನು ಹೊಂದಿದ ಸ್ಥಳವಾಗಿದೆ. ದ್ವಾರಕಾದ ಶ್ರೀಕೃಷ್ಣನಲ್ಲಿ ಎರಡು ದ್ವಾರಗಳಿವೆ. ಗೋಮತಿ ನದಿಯ ಸಮುದ್ರದೆಡೆಗೆ ಹರಿದು ಸೇರುವ ಸಂಗಮವನ್ಉ ಈ ದೇವಾಲಯದಲ್ಲಿ ಕಾಣಬಹುದು. ಈ ದ್ವಾರಕಾದಲ್ಲಿ ವಸುದೇವ, ದೇವಕಿ, ಬಲರಾಮ, ರೇವತಿ ಸುಭದ್ರ, ರುಕ್ಮಿಣಿ, ಜಾಂಬಾವತಿ ಹಾಗೂ ಸತ್ಯಾಭಾಮರ ಮೂರ್ತಿಗಳು ಈ ದ್ವಾರಕಾದಲ್ಲಿದೆ.
ಇದೀಗ ಪ್ರಧಾನಿ ಮೋದಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿಗೆ ಬಂದು ಕೃಷ್ಣ ಭಕ್ತರು ಈ ದೇವಾಲಯ ದರ್ಶನ ಪಡೆಯುವವರ ಸಂಖ್ಯೆ ಖಂಡಿತ ಹೆಚ್ಚಾಗಲಿದೆ.



Click it and Unblock the Notifications


