Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪಿತೃಪಕ್ಷ: ಮಹಿಳೆಯರಿಗೆ ಯಾವ ದಿನ ಶ್ರಾದ್ಧ ಮಾಡಬೇಕು, ಚಿಕ್ಕ ಪ್ರಾಯದಲ್ಲಿ ಮರಣವೊಂದಿದ್ದರೆ ಯಾವ ದಿನ ತರ್ಪಣ ನೀಡಬೇಕು?
ಪಿತೃಪಕ್ಷ ಸೆಪ್ಟೆಂಬರ್ 17ರಿಂದ ಶುರುವಾಗಿದೆ, ಅಕ್ಟೋಬರ್2ಕ್ಕೆ ಮುಕ್ತಾಯವಾಗಲಿದೆ, ಈ ಕಾರ್ಯಗಳಲ್ಲಿ ಶ್ರಾದ್ಧವನ್ನು ಮಾಡಿದರೆ ಪಿತೃದೋಷದಿಂದ ಮುಕ್ತರಾಗುತ್ತಾರೆ.
ಕೆಲವರು ಚಿಕ್ಕ ಪ್ರಾಯದಲ್ಲಿಯೇ ಅಂಥವರಿಗೆ ಈ ಸಮಯದಲ್ಲಿ ಶ್ರಾದ್ಧ ಮಾಡಬಹುದೇ? ರ್ದುಮರಣವನ್ನಪ್ಪಿದ್ದರೆ ಅ ವರಿಗೆ ತರ್ಪಣ ನೀಡಲು ಯಾವ ದಿನ ಸೂಕ್ತವಾಗಿದೆ? ಮಹಿಳೆಯರಿಗೆ ಯಾವ ದಿನದಂದು ಶ್ರಾದ್ಧ ಮಾಡಲಾಗುವುದು ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ಸೆಪ್ಟೆಂಬರ್ 19 ತೃತೀಯಾ ಶ್ರಾದ್ಧ
ಸೆಪ್ಟೆಂಬರರ್ 21: ಚತುರ್ಥಿ ಶ್ರಾದ್ಧ
ಸೆಪ್ಟೆಂಬರ್ 21: ಮಹಾಭರಣಿ ಶ್ರಾದ್ಧ
ಸೆಪ್ಟೆಂಬರ್ 22, ಭಾನುವಾರ: ಪಂಚಮಿ ಶ್ರಾದ್ಧ
ಸೆಪ್ಟೆಂಬರ್ 23, ಸೋಮವಾರ: ಷಷ್ಠಿ ಶ್ರಾದ್ಧ
ಸೆಪ್ಟೆಂಬರ್ 23, ಸೋಮವಾರ: ಸಪ್ತಮಿ ಶ್ರಾದ್ಧ
ಸೆಪ್ಟೆಂಬರ್ 24, ಮಂಗಳವಾರ: ಅಷ್ಟಮಿ ಶ್ರಾದ್ಧ
ಸೆಪ್ಟೆಂಬರ್ 25, ಬುಧವಾರ: ನವಮಿ ಶ್ರಾದ್ಧ
ಸೆಪ್ಟೆಂಬರ್ 26, ಗುರುವಾರ: ದಶಮಿ ಶ್ರಾದ್ಧ
ಸೆಪ್ಟೆಂಬರ್ 27, ಶುಕ್ರವಾರ: ಏಕಾದಶಿ ಶ್ರಾದ್ಧ
ಸೆಪ್ಟೆಂಬರ್ 29, ಭಾನುವಾರ: ದ್ವಾದಶಿ ಶ್ರಾದ್ಧ
ಸೆಪ್ಟೆಂಬರ್ 29, ಭಾನುವಾರ: ಮಘಾ ಶ್ರಾದ್ಧ
ಸೆಪ್ಟೆಂಬರ್ 30, ಸೋಮವಾರ: ತ್ರಯೋದಶಿ ಶ್ರಾದ್ಧ
ಅಕ್ಟೋಬರ್ 1, ಮಂಗಳವಾರ: ಚತುರ್ದಶಿ ಶ್ರಾದ್ಧ
ಅಕ್ಟೋಬರ್ 2, ಬುಧವಾರ: ಸರ್ವ ಪಿತೃ ಅಮವಾಸ್ಯೆ
ಯಾರು ಯಾವಾಗ ಶ್ರಾದ್ಧ ಮಾಡಬೇಕು?
ಮುತ್ತೈದೆ ಸಾವಾಗಿದ್ದರೆ (ಗಂಡ ಜೀವಂತವಾಗಿದ್ದು, ಹೆಂಡತಿ ತೀರಿ ಹೋಗಿದ್ದರೆ) ಅವರಿಗೆ ನವಮಿ ತಿಥಿಯಂದು ಶ್ರಾದ್ಧವನ್ನು ಮಾಡಲಾಗುವುದು.
ತೀರಿ ಹೋದವರು ಅವರ ಹಿರಿಯರ ಜೊತೆ ಸೇರಲಿ ಎಂದು ಏಕಾದಶಿಯಂದು ಶ್ರಾದ್ದ ಮಾಡಲಾಗುವುದು.
ಮಹಿಳೆ ತೀರಿ ಹೋದ ದಿನಾಂಕ ತಿಳಿಯದಿದ್ದರೆ ನವಮಿಯಂದು ಶ್ರಾದ್ಧ ಮಾಡಲಾಗುವುದು
ಆಯುಧ ತಾಗಿ ಅಥವಾ ಅಪಘಾತ, ಅತ್ಮಹತ್ಯೆ ಈ ರೀತಿ ಆಯುಸ್ಸು ಮುಗಿಯುವ ಮುನ್ನ ಸಾವನ್ನಪ್ಪಿದರೆ ನಾಲ್ಕನೇ ದಿನ ಅಂದರೆ ಚತುರ್ದಶಿಯಂದು ಆಚರಿಸಲಾಗುವುದು.
ಹಾವು ಕಡಿತ, ಪರಿಸರ ವಿಕೋಪ, ಸಿಡಿಲು ಬಡಿದು, ಪ್ರಾಣಿಗಳ ದಾಳಿಯಿಂದ ಅಥವಾ ಮಾರಾಣಾಂತಿಕ ಸೋಂಕು, ಕಾಯಿಲೆಯಿಂದ ಸಾವನ್ನಪ್ಪಿದ್ದರೆ ಚತುರ್ದಶಿ ಅಥವಾ ಅಮವಾಸ್ಯೆಯಂದು ಶ್ರಾದ್ಧ ಮಾಡಲಾಗುವುದು.
ಅಲ್ಲದೆ ಸಾವಿನ ಬಳಿಕ ಶ್ರಾದ್ಧ ಕಾರ್ಯ ಮಾಡದೇ ಇದ್ದರೆ ಅಥವಾ ನಮ್ಮ ಕುಟುಂಬದಲ್ಲಿ ಶ್ರಾದ್ಧ ಮಾಡದೆ ಮೋಕ್ಷ ಸಿಗದೆ ಇರುವವರು ಇದ್ದರೆ ಶ್ರಾದ್ಧವನ್ನು ಅಮವಾಸ್ಯೆಯಂದು ಮಾಡಿದರೆ ಮೋಕ್ಷ ಸಿಗುವುದು.
ಶ್ರಾದ್ಧ ಕಾರ್ಯವನ್ನು ಯಾವಾಗ ಮಾಡಬೇಕು?
ಶ್ರಾದ್ಧ ಕಾರ್ಯವನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಮಾಡಬೇಡಿ. ಮಧ್ಯಾಹ್ನ 12 ಗಂಟೆಯ ನಂತರ ಶ್ರಾದ್ಧ ಕಾರ್ಯವನ್ನು ಮಾಡುವುದು ಒಳ್ಳೆಯದು ಎಂದು ಹೇಳಲಾಗುವುದು. ರೋಹಿಣಿ ಮುಹೂರ್ತ ಇನ್ನೂ ಒಳ್ಳೆಯದು.
ಶ್ರಾದ್ಧ ಕಾರ್ಯವನ್ನು ನದಿ ತೀರದಲ್ಲಿ ವಿಧಿ ವಿಧಾನಗಳ ಮೂಲಕ ಮಾಡಬೆಕು.
ಪಿತೃದೋಷವಿದ್ದಾಗ ಯಾವೆಲ್ಲಾ ತೊಂದರೆಗಳಾಗುವುದು?
ಪಿತೃದೋಷಿವಿದ್ದಾಗ ವೈವಾಹಿಕ ಬದುಕಿನಲ್ಲಿ ತೊಂದರೆಗಲಾಗುತ್ತದೆ, ಮನೆಯಲ್ಲಿ ನಿತ್ಯ ಜಗಳ, ಗಂಡ-ಹೆಂಡತಿ ನಡುವೆ ತುಂಬಾನೇ ಭಿನ್ನಾಭಿಪ್ರಾಯ, ಗರ್ಭಧಾರಣೆಯಾಗದಿರುವುದು, ಅಂಗವೈಕಲ್ಯದ ಮಕ್ಕಳ ಜನನ, ಬಡತನ, ಆರ್ಥಿಕ ತೊಂದರೆಗಳು, ನಿರಂತವಾಗಿ ಕಾಡುವ ಆರೋಗ್ಯ ಸಮಸ್ಯೆ ಇವೆಲ್ಲಾ ಪಿತೃದೋಷವಿದ್ದರೆ ಉಂಟಾಗುವುದು.
ಈ ಪಿತೃಪಕ್ಷದಲ್ಲಿ ಶ್ರಾದ್ಧ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗುತ್ತಾರೆ, ಅವರ ಕುಟುಂಬದಲ್ಲಿ ಸಂತೋಷ, ನೆಮ್ಮದಿ ನೆಲೆಸುವುದು ಎಂದು ಹೇಳಲಾಗುವುದು.
ಯಾರಿಗೆ ಪಿತೃದೋಷ ಉಂಟಾಗುವುದು?
ಪೋಷಕರನ್ನು ಅವರ ಜೀವಿತಾವಧಿಯಲ್ಲಿ ಚೆನ್ನಾಗಿ ನೋಡಿಕೊಳ್ಳದೆ ಇದ್ದರೆ ಅಥವಾ ಪಾಪಕರ್ಮಗಳನ್ನು ಮಾಡಿದರೆ, ಕುಂಡಲಿಯಲ್ಲಿ ಪಿತೃದೊಷವಿದ್ದರೆ ಅವರು ಪಿತೃದೋಷದಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಪಿತೃಪಕ್ಷದಲ್ಲಿ ಪಿತೃಗಳಿಗೆ ಮೋಕ್ಷ ಸಿಕ್ಕರೆ ಪಿತೃದೋಷದಿಂದ ಮುಕ್ತಿಹೊಂದಬಹುದು.
ಈ ಸಮಯದಲ್ಲಿ ಮಾಡುವ ದಾನ ಧರ್ಮಕ್ಕೆ ಕೂಡ ತುಂಬಾನೇ ಮಹತ್ವವಿದೆ, ಈ ಸಮಯದಲ್ಲಿ ಪಿತೃತರ್ಪಣ ಮಾಡದೆ ಇರುವವರು ಮಹಾಲಯ ಅಮವಾಸ್ಯೆ ಸಮಯದಲ್ಲಿ ನೀಡುತ್ತಾರೆ.



Click it and Unblock the Notifications