ಪಿತೃಪಕ್ಷದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ..!

ಪಿತೃಪಕ್ಷ ಆರಂಭಗೊಂಡಿದೆ. ಹಿಂದೂ ಸಮುದಾಯದ ಮಂದಿ ಈ ಸಮಯದಲ್ಲಿ ಮನೆಯಲ್ಲಿ ಪೂರ್ವಜರಿಗೆ ಪೂಜೆ ನೆರವೇರಿಸಿ ಅನ್ನ ಆಹಾರ ನೀಡುವ ಸಂದರ್ಭವಾಗಿದೆ. ಹೀಗಾಗಿ 16 ದಿನಗಳ ಕಾಲ ಪಿತೃಪಕ್ಷದಲ್ಲಿ ಹಲವು ರೀತಿಯ ನೀತಿ ನಿಯಮಗಳಿ, ಆಚರಣೆಗಳು ನಡೆಯುವುದನ್ನು ನಾವು ನೋಡಬಹುದು. ಹಾಗಾದ್ರೆ ಈ ಪಿತೃ ಪಕ್ಷ ಆರಂಭವಾಗಿದ್ದಾದರು ಏಕೆ?

ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಆಹಾರ ನೀಡುವ ಸಂಪ್ರದಾಯವಿದೆ. ಹಲವು ಅವರಿಗೆ ಇಷ್ಟವಾದ ತಿಂಡಿ, ತಿನಿಸುಗಳು, ಮಾಂಸಹಾರದ ಖಾದ್ಯ ಮಾಡಿ ಬಡಿಸುತ್ತಾರೆ. ಹಾಗೆ ಈ ವೇಳೆ ಅವರ ಮನೆಯಲ್ಲಿರುವ ಹಿರಿಯರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸುತ್ತಾರೆ. ಪೂರ್ವಜರ ಇಷ್ಟಾರ್ಥ ದೇವರ ದರ್ಶನ ಮಾಡಿ ಅಲ್ಲಿನ ಪ್ರಸಾದ ತಂದು ಅರ್ಪಿಸುತ್ತಾರೆ.

Pitru Paksha 2024 Don t Do These Mistakes On This Day

ಹಿಂದೂ ನಂಬಿಕೆಗಳ ಪ್ರಕಾರ ದೇಹಕ್ಕೆ ಸಾವಿದೆ ಆದರೆ ಆತ್ಮಕ್ಕೆ ಸಾವಿಲ್ಲ ಎಂಬುದನ್ನು ಹೇಳುತ್ತದೆ. ಹೀಗಾಗಿ ವ್ಯಕ್ತಿ ವೃತಪಟ್ಟರು ಆತನ ಆತ್ಮ ಬದುಕಿರುತ್ತೆ ಅನ್ನೋ ನಂಬಿಕೆ. ಅಲ್ಲದೆ ಸತ್ತವರ ದೇವರಿಗೆ ಸಮಾನ ಸ್ಥಾನ ಪಡೆಯುತ್ತಾರೆ. ಪಿತೃಪಕ್ಷದ ಕೊನೆಯ ದಿನವನ್ನು ಸರ್ವ ಪಿತೃ ಅಮವಾಸ್ಯೆ ಅಥವಾ ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುವುದು. ಈ ಮಹಾಲಯ ಅಮವಾಸ್ಯೆಯು ಪಿತೃ ಪಕ್ಷದ ಅತ್ಯಂತ ಮಹತ್ವದ ದಿನವಾಗಿರಲಿದೆ.

ಈ ವರ್ಷ ಅಂದರೆ 2024ರ ಪಿತೃಪಕ್ಷವು ಸೆಪ್ಟೆಂಬರ್ 17ರಿಂದ ಆರಂಭಗೊಂಡಿದೆ, ಇದು ಅಕ್ಟೋಬರ್ 02ರ ವರೆಗೂ ಇರಲಿದೆ. ಈ ನಡುವೆ ಒಂದು ದಿನ ಪೂರ್ವಜರಿಗೆ ಅನ್ನಾಹಾರ ನೀಡಲಾಗುತ್ತದೆ. ಈ ಸಮಯದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪೂಜೆ ಮಾಡಲಾಗುತ್ತದೆ ಮತ್ತು ತರ್ಪಣವನ್ನು ಅರ್ಪಿಸಲಾಗುತ್ತದೆ.

ಇನ್ನು ಈ ಪಿತೃಪಕ್ಷದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು? ಮಾಡಿದರೆ ಯಾವ ದೋಷ ಉಂಟಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪೂರ್ವಜರ ಭಾವಚಿತ್ರ ದೇವರ ಫೋಟೋ ಜೊತೆ ಇಡುವುದು

ಹಲವರ ಮನೆಯಲ್ಲಿ ಪೂರ್ವಜರ ಫೋಟೋವನ್ನು ದೇವರ ಫೋಟೋಗಳ ಜೊತೆ ಹಾಗೂ ದೇವರ ಕೋಣೆಯಲ್ಲಿ ಇಡುವುದನ್ನು ನಾವು ನೋಡಿರುತ್ತೇವೆ. ಆದರೆ ಈ ರೀತಿ ಮಾಡಬಾರದು. ಅದರಲ್ಲೂ ಈ ಪಿತೃ ಪಕ್ಷದಲ್ಲಿ ಪೂಜೆ ಮಾಡುವ ದಿನದಂದು ಈ ರೀತಿ ತಪ್ಪು ಮಾಡಬಾರದು. ಹಾಗೆ ಪೂರ್ವಜರ ಫೋಟೋವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬೇಕು. ಬೇರೆ ದಿಕ್ಕಿನೆಡೆಗೆ ಇಡಬಾರದು ಎಂದು ಹೇಳಲಾಗಿದೆ.

ಕಾಗೆಗೆ ಆಹಾರ ನೀಡದೆ ಇರುವುದು

ಈ ದಿನ ಪೂರ್ವಜರಿಗೆ ಪೂಜೆ ಸಲ್ಲಿಸಿದ ಬಳಿಕ ಅವರ ಇಷ್ಟದ ಆಹಾರ ಖಾದ್ಯಗಳ ಮಾಡಿರುತ್ತಾರೆ. ಹೀಗಾಗಿ ಈ ದಿನ ಗೋವುಗಳಿಗೆ, ಪಕ್ಷಿಗಳಿಗೆ ಮುಖ್ಯವಾಗಿ ಕಾಗೆಗೆ ಆಹಾರ ನೀಡಬೇಕು. ಅಪ್ಪಿತಪ್ಪಿಯೂ ಈ ಕೆಲಸ ಮಾಡುವುದನ್ನು ನೀಡು ಮರೆಯಬಾರದಂತೆ. ಕಾಗೆಗಳಿಗೆ ಆಹಾರ ನೀಡಿದರೆ ಪೂರ್ವಜನರ ಆಶೀರ್ವಾದ ಲಭಿಸಲಿದೆ ಎಂದು ನಂಬಲಾಗಿದೆ.

ಏನು ಮಾಡಬೇಕು?

ಫೋಟೋ ಎದುರು ಸಾಸಿವೆ ಎಣ್ಣೆಯ ದೀಪ ಹಚ್ಚಬೇಕು. ಪೂರ್ವಜರ ಫೋಟೋವನ್ನು ಚೆನ್ನಾಗಿ ಒರೆಸಿ ಅದರ ಎದುರಿಗೆ ಹಣತೆಯಲ್ಲಿ ಹಾಕಿ ಹಚ್ಚಿಡಬೇಕು. ಜೊತೆಗೆ ಈ ದಿನ ಹೊಸ ಬಟ್ಟೆ ಧರಿಸದೆ ಶುದ್ಧ ಬಟ್ಟೆ ಧರಿಸಿರಬೇಕು. ಶಾಸ್ತ್ರಗಳಲ್ಲಿ ನಮ್ಮ ಪೂರ್ವಜರ ವಾಸಸ್ಥಾನವು ಚಂದ್ರನ ಮೇಲ್ಭಾಗದಲ್ಲಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನೀವು ಸತ್ತ ಪೂರ್ವಜರ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ದಾನ ಮಾಡಬೇಕು ಎಂದು ಹೇಳಲಾಗಿದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ವೃತ್ತಿಪರರನ್ನು ಸಂಪರ್ಕಿಸಿ.)

English summary

Pitru Paksha 2024: Don't Do These Mistakes On This Day

According to Hindu beliefs, the body dies but the soul never dies. Thus, it is believed that if a person is circumcised, his soul will be alive. Also they get equal status with the god of the dead.
Story first published: Wednesday, September 18, 2024, 15:35 [IST]
X
Desktop Bottom Promotion