Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಮುದ್ರದಲ್ಲಿ ಮೂತ್ರ ಮಾಡಿದರೆ ಬೀಳುತ್ತೆ67,000 ದಂಡ: ಹೇಗೆ ಗೊತ್ತಾಗುತ್ತೆ ಎಂಬುವುದೇ ಯಕ್ಷ ಪ್ರಶ್ನೆ
ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಬೀಳುತ್ತಂತೆ ಬರೋಬರಿ ರುಪಾಯಿ 67,000 ದಂಡ, ಅಷ್ಟಕ್ಕೂ ಈಗ ದಂಡದ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಸಮುದ್ರದ ಉಪ್ಪು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಗೊತ್ತಾಗುವುದು ಹೇಗೆ ಎಂಬುವುದೇ ಯಕ್ಷ ಪ್ರಶ್ನೆ!

ಕೆಲವೊಮ್ಮೆ ಅಧಿಕಾರಿ ತಲೆಬುಡ ಇಲ್ಲದೆ ದಂಡ ಹಾಕುತ್ತಾರೆ, ಅದರ ಹಿಂದೆ ಯಾವ ಲಾಜಿಕ್ ಕೂಡ ಇರಲ್ಲ, ನಮ್ಮಲ್ಲಿ ಕಾರಿನಲ್ಲಿ, ಲಾರಿನಲ್ಲಿ ಹೋದವರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ನೀಡಲಾಗಿತ್ತು ಅಲ್ವಾ? ಅದೇ ರೀತಿ ಇದು ಕೂಡ, ಸಮುದ್ರದ ಉಪ್ಪು ನೀರಿಗೆ ಮನುಷ್ಯ ತನ್ನ ದೇಹದ ಉಪ್ಪು ನೀರು ಬಿಟ್ಟರೆ ತಿಳಿಯುವುದಾದರೂ ಹೇಗೆ? ನಗು ಬರುತ್ತಿರಬಹುದು ಅಲ್ವಾ? ಆದರೆ ಇಂಥದ್ದೊಂದು ಸಂಗತಿ ಇದೆ, ಒಂದು ಸಮಧಾನಕರ ಸಂಗತಿ ಎಂದರೆ ಈ ರೀತಿ ಫೈನ್ ಹಾಕಿರುವುದು ಸ್ಪೇನ್ನ ಮಾರ್ಬೆಲ್ಲಾದಲ್ಲಿ.
ಹಾಗಾಗಿ ನೀವು ಮಲ್ಪೆ ಬೀಚ್ಗೆ , ಗೋರ್ಕಣ ಬೀಚ್ಗೆ, ಗೋವಾದ ಬೀಚ್ಗಳಿಗೆ ಹೋದಾಗ ಧೈರ್ಯದಿಂದ ಆಟ ಆಡಬಹುದು, ಆದರೆ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳುತ್ತಿಲ್ಲ, ಪಾಪ ಆ ನೀರಿನಲ್ಲಿ ನಿಮ್ಮ ಅಕ್ಕ-ಪಕ್ಕ ಎಷ್ಟೊಂದು ಜನ ಆಡುತ್ತಿರುತ್ತಾರೆ, ಹಾಗಾಗಿ ಆ ರೀತಿ ಮಾಡಲು ನಿಮಗೆ ಮನಸ್ಸು ಬರಲ್ಲ ಇರಲಿ, ಅದೇನೇ ಇರಲಿ ಈಗ ನಾವು ಈ ಪ್ರಕರಣ ಬಗ್ಗೆ ನೋಡುವುದಾದರೆ
ಸ್ಪೇನ್ನ ಮಾರ್ಬೆಲ್ಲಾದಲ್ಲಿ ಈ ರೀತಿಯ ಹೊಸ ನಿಯಮ ಬಂದಿದೆ
ಬೀಚ್ನಲ್ಲಿ ಆಟ ಆಡುವಾಗ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ 67,000 ದಂಡ ಪಾವತಿಸಬೇಕೆಂದು ಹೇಳಿದೆ, ಆದರೆ ಮೂತ್ರ ವಿಸರ್ಜನೆ ಮಾಡಿದರೆ ಇವರಿಗೆ ಗೊತ್ತಾಗುವುದಾದರೂ ಹೇಗೆ ಅಂತ? ಡಯಾಪರ್ ಬಿಸಾಡಬೇಡಿ, ಪ್ಲಾಸ್ಟಿಕ್ ಬಾಟಲಿ ಬಿಸಾಡಿ ಬೇಡಿ ಎಂದರೆ ಒಂದು ಲೆಕ್ಕ, ಇಲ್ಲಿ ನೋಡಿದರೆ ಮೂತ್ರನೇ ಮಾಡಬಾರದು ಎಂದು ಹೇಳಿದೆ, ಉಪ್ಪು ನೀರಿನಲ್ಲಿ ಸ್ವಲ್ಪ ಉಪ್ಪು ನೀರು ಬೆರೆತರೆ ಅದನ್ನು ತಿಳಿಯುವುದು ಹೇಗೆ, ಅವರ ಅಲ್ಲಿ ಬೀಚ್ನಲ್ಲಿ ಆಡುವವರ ದೇಹಕ್ಕೆ ಏನಾದರೂ ಡಿವೈಸ್ ಫಿಕ್ಸ್ ಮೂತ್ರ ಮಾಡಿದ್ದಾರಾ? ಎಂದು ತಿಳಿಯುತ್ತಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ, ಒಟ್ಟಿನಲ್ಲಿ ಸಕತ್ ನಗೆಪಾಟಲಿಗೆ ಗುರಿಯಾಗಿದೆ ಈ ಹೊಸ ನಿಯಮ.
ಪ್ರವಾಸಿಗರು ತಮ್ಮ ಮೋಜಿನ ಜೊತೆಗೆ ಪ್ರಕೃತಿ ಕಡೆಗೆ ಗಮನಹರಿಸಬೇಕು
ಹೌದು ಪ್ರವಾಸಿಗರು ಮೋಜು ಮಸ್ತಿಗೆ ಅಂತ ಸುಂದರ ತಾಣಗಳಿಗೆ ಬರ್ತಾರೆ, ನಂತರ ಅಲ್ಲಿ ತಿಂದಿದ್ದು ಕುಡಿದಿದ್ದು ಎಲ್ಲಾ ಎಸೆದು ಹೋಗುತ್ತಾರೆ, ಮಕ್ಕಳಿಗೆ ಹಾಕಿರುವ ಡಯಾಪರ್ ಕೂಡ ರಸ್ತೆಯಲ್ಲಿ ಅಥವಾ ನದಿಯೊಳಗಡೆ ಹಾಕಿ ಹೋಗುವ ದುಷ್ಟರೇನು ಕಡಿಮೆಯಿಲ್ಲ, ಇವರ ತಲೆಯಲ್ಲಿ ಬುದ್ಧಿ ಇದೆಯೋ ಸಗಣಿ ಇದೆಯೋ ಎಂದನಿವಷ್ಟು ಬೇಜಾವಬ್ದಾರಿಯಿಂದ ವರ್ತಿಸುತ್ತಾರೆ.
ಎಲ್ಲೇ ಹೋಗಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ
ಸುಂದರ ತಾಣಗಳಿಗೆ ಹೋಗಿ ಅಲ್ಲಿ ಕಸದ ರಾಶಿಯನ್ನೇ ಹಾಕಿ ಬರುತ್ತಾರೆ, ಇಂಥವರ ವಿರುದ್ಧ ಕಠಿಣ ಕ್ರಮ ತೆಗೆವಿದೇಶದಲ್ಲಿ ತುಂಬಾನೇ ಕಟ್ಟುನಿಟ್ಟಿನ ಕಾನೂನು ಇದೆ, ನಮ್ಮಲ್ಲಿ ಸ್ವಲ್ಪ ಸಡಿಲವಿದೆ, ಹಾಗಾಗಿ ಜನರು ಸುಂದುಕೊಳ್ಳಬೇಕು. ಕ ರಸ್ತೆಯಲ್ಲ ಕಸ ಎಸೆದವರನ್ನು ತಡೆದು ನಿಲ್ಲಿಸಿ ಕಸ ಎತ್ತಿಸಿರುವ ಹಲವು ಪ್ರಕರಣ ನೋಡಿದ್ದೇವೆ, ಪ್ರತಿಯೊಬ್ಬ ನಾಗರಿಕನು ಇಂಥ ವ್ಯಕ್ತಿಗಳನ್ನು ಕಂಡಾಗ ಅವರ ಕೈಯಿಂದಲೇ ಕಸ ಎತ್ತಿಸಬೇಕು, ಆವಾಗಲೇ ಬುದ್ಧಿ ಬರುವುದು. ಹೊರಗಡೆ ಹೋದಾಗ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.



Click it and Unblock the Notifications


