Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಮುದ್ರದಲ್ಲಿ ಮೂತ್ರ ಮಾಡಿದರೆ ಬೀಳುತ್ತೆ67,000 ದಂಡ: ಹೇಗೆ ಗೊತ್ತಾಗುತ್ತೆ ಎಂಬುವುದೇ ಯಕ್ಷ ಪ್ರಶ್ನೆ
ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಬೀಳುತ್ತಂತೆ ಬರೋಬರಿ ರುಪಾಯಿ 67,000 ದಂಡ, ಅಷ್ಟಕ್ಕೂ ಈಗ ದಂಡದ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಸಮುದ್ರದ ಉಪ್ಪು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಗೊತ್ತಾಗುವುದು ಹೇಗೆ ಎಂಬುವುದೇ ಯಕ್ಷ ಪ್ರಶ್ನೆ!

ಕೆಲವೊಮ್ಮೆ ಅಧಿಕಾರಿ ತಲೆಬುಡ ಇಲ್ಲದೆ ದಂಡ ಹಾಕುತ್ತಾರೆ, ಅದರ ಹಿಂದೆ ಯಾವ ಲಾಜಿಕ್ ಕೂಡ ಇರಲ್ಲ, ನಮ್ಮಲ್ಲಿ ಕಾರಿನಲ್ಲಿ, ಲಾರಿನಲ್ಲಿ ಹೋದವರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ನೀಡಲಾಗಿತ್ತು ಅಲ್ವಾ? ಅದೇ ರೀತಿ ಇದು ಕೂಡ, ಸಮುದ್ರದ ಉಪ್ಪು ನೀರಿಗೆ ಮನುಷ್ಯ ತನ್ನ ದೇಹದ ಉಪ್ಪು ನೀರು ಬಿಟ್ಟರೆ ತಿಳಿಯುವುದಾದರೂ ಹೇಗೆ? ನಗು ಬರುತ್ತಿರಬಹುದು ಅಲ್ವಾ? ಆದರೆ ಇಂಥದ್ದೊಂದು ಸಂಗತಿ ಇದೆ, ಒಂದು ಸಮಧಾನಕರ ಸಂಗತಿ ಎಂದರೆ ಈ ರೀತಿ ಫೈನ್ ಹಾಕಿರುವುದು ಸ್ಪೇನ್ನ ಮಾರ್ಬೆಲ್ಲಾದಲ್ಲಿ.
ಹಾಗಾಗಿ ನೀವು ಮಲ್ಪೆ ಬೀಚ್ಗೆ , ಗೋರ್ಕಣ ಬೀಚ್ಗೆ, ಗೋವಾದ ಬೀಚ್ಗಳಿಗೆ ಹೋದಾಗ ಧೈರ್ಯದಿಂದ ಆಟ ಆಡಬಹುದು, ಆದರೆ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳುತ್ತಿಲ್ಲ, ಪಾಪ ಆ ನೀರಿನಲ್ಲಿ ನಿಮ್ಮ ಅಕ್ಕ-ಪಕ್ಕ ಎಷ್ಟೊಂದು ಜನ ಆಡುತ್ತಿರುತ್ತಾರೆ, ಹಾಗಾಗಿ ಆ ರೀತಿ ಮಾಡಲು ನಿಮಗೆ ಮನಸ್ಸು ಬರಲ್ಲ ಇರಲಿ, ಅದೇನೇ ಇರಲಿ ಈಗ ನಾವು ಈ ಪ್ರಕರಣ ಬಗ್ಗೆ ನೋಡುವುದಾದರೆ
ಸ್ಪೇನ್ನ ಮಾರ್ಬೆಲ್ಲಾದಲ್ಲಿ ಈ ರೀತಿಯ ಹೊಸ ನಿಯಮ ಬಂದಿದೆ
ಬೀಚ್ನಲ್ಲಿ ಆಟ ಆಡುವಾಗ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ 67,000 ದಂಡ ಪಾವತಿಸಬೇಕೆಂದು ಹೇಳಿದೆ, ಆದರೆ ಮೂತ್ರ ವಿಸರ್ಜನೆ ಮಾಡಿದರೆ ಇವರಿಗೆ ಗೊತ್ತಾಗುವುದಾದರೂ ಹೇಗೆ ಅಂತ? ಡಯಾಪರ್ ಬಿಸಾಡಬೇಡಿ, ಪ್ಲಾಸ್ಟಿಕ್ ಬಾಟಲಿ ಬಿಸಾಡಿ ಬೇಡಿ ಎಂದರೆ ಒಂದು ಲೆಕ್ಕ, ಇಲ್ಲಿ ನೋಡಿದರೆ ಮೂತ್ರನೇ ಮಾಡಬಾರದು ಎಂದು ಹೇಳಿದೆ, ಉಪ್ಪು ನೀರಿನಲ್ಲಿ ಸ್ವಲ್ಪ ಉಪ್ಪು ನೀರು ಬೆರೆತರೆ ಅದನ್ನು ತಿಳಿಯುವುದು ಹೇಗೆ, ಅವರ ಅಲ್ಲಿ ಬೀಚ್ನಲ್ಲಿ ಆಡುವವರ ದೇಹಕ್ಕೆ ಏನಾದರೂ ಡಿವೈಸ್ ಫಿಕ್ಸ್ ಮೂತ್ರ ಮಾಡಿದ್ದಾರಾ? ಎಂದು ತಿಳಿಯುತ್ತಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ, ಒಟ್ಟಿನಲ್ಲಿ ಸಕತ್ ನಗೆಪಾಟಲಿಗೆ ಗುರಿಯಾಗಿದೆ ಈ ಹೊಸ ನಿಯಮ.
ಪ್ರವಾಸಿಗರು ತಮ್ಮ ಮೋಜಿನ ಜೊತೆಗೆ ಪ್ರಕೃತಿ ಕಡೆಗೆ ಗಮನಹರಿಸಬೇಕು
ಹೌದು ಪ್ರವಾಸಿಗರು ಮೋಜು ಮಸ್ತಿಗೆ ಅಂತ ಸುಂದರ ತಾಣಗಳಿಗೆ ಬರ್ತಾರೆ, ನಂತರ ಅಲ್ಲಿ ತಿಂದಿದ್ದು ಕುಡಿದಿದ್ದು ಎಲ್ಲಾ ಎಸೆದು ಹೋಗುತ್ತಾರೆ, ಮಕ್ಕಳಿಗೆ ಹಾಕಿರುವ ಡಯಾಪರ್ ಕೂಡ ರಸ್ತೆಯಲ್ಲಿ ಅಥವಾ ನದಿಯೊಳಗಡೆ ಹಾಕಿ ಹೋಗುವ ದುಷ್ಟರೇನು ಕಡಿಮೆಯಿಲ್ಲ, ಇವರ ತಲೆಯಲ್ಲಿ ಬುದ್ಧಿ ಇದೆಯೋ ಸಗಣಿ ಇದೆಯೋ ಎಂದನಿವಷ್ಟು ಬೇಜಾವಬ್ದಾರಿಯಿಂದ ವರ್ತಿಸುತ್ತಾರೆ.
ಎಲ್ಲೇ ಹೋಗಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ
ಸುಂದರ ತಾಣಗಳಿಗೆ ಹೋಗಿ ಅಲ್ಲಿ ಕಸದ ರಾಶಿಯನ್ನೇ ಹಾಕಿ ಬರುತ್ತಾರೆ, ಇಂಥವರ ವಿರುದ್ಧ ಕಠಿಣ ಕ್ರಮ ತೆಗೆವಿದೇಶದಲ್ಲಿ ತುಂಬಾನೇ ಕಟ್ಟುನಿಟ್ಟಿನ ಕಾನೂನು ಇದೆ, ನಮ್ಮಲ್ಲಿ ಸ್ವಲ್ಪ ಸಡಿಲವಿದೆ, ಹಾಗಾಗಿ ಜನರು ಸುಂದುಕೊಳ್ಳಬೇಕು. ಕ ರಸ್ತೆಯಲ್ಲ ಕಸ ಎಸೆದವರನ್ನು ತಡೆದು ನಿಲ್ಲಿಸಿ ಕಸ ಎತ್ತಿಸಿರುವ ಹಲವು ಪ್ರಕರಣ ನೋಡಿದ್ದೇವೆ, ಪ್ರತಿಯೊಬ್ಬ ನಾಗರಿಕನು ಇಂಥ ವ್ಯಕ್ತಿಗಳನ್ನು ಕಂಡಾಗ ಅವರ ಕೈಯಿಂದಲೇ ಕಸ ಎತ್ತಿಸಬೇಕು, ಆವಾಗಲೇ ಬುದ್ಧಿ ಬರುವುದು. ಹೊರಗಡೆ ಹೋದಾಗ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.



Click it and Unblock the Notifications











