Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಸಮುದ್ರದಲ್ಲಿ ಮೂತ್ರ ಮಾಡಿದರೆ ಬೀಳುತ್ತೆ67,000 ದಂಡ: ಹೇಗೆ ಗೊತ್ತಾಗುತ್ತೆ ಎಂಬುವುದೇ ಯಕ್ಷ ಪ್ರಶ್ನೆ
ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಬೀಳುತ್ತಂತೆ ಬರೋಬರಿ ರುಪಾಯಿ 67,000 ದಂಡ, ಅಷ್ಟಕ್ಕೂ ಈಗ ದಂಡದ ಬಗ್ಗೆ ಚರ್ಚೆ ನಡೆಯುತ್ತಿಲ್ಲ, ಸಮುದ್ರದ ಉಪ್ಪು ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಗೊತ್ತಾಗುವುದು ಹೇಗೆ ಎಂಬುವುದೇ ಯಕ್ಷ ಪ್ರಶ್ನೆ!

ಕೆಲವೊಮ್ಮೆ ಅಧಿಕಾರಿ ತಲೆಬುಡ ಇಲ್ಲದೆ ದಂಡ ಹಾಕುತ್ತಾರೆ, ಅದರ ಹಿಂದೆ ಯಾವ ಲಾಜಿಕ್ ಕೂಡ ಇರಲ್ಲ, ನಮ್ಮಲ್ಲಿ ಕಾರಿನಲ್ಲಿ, ಲಾರಿನಲ್ಲಿ ಹೋದವರಿಗೆ ಹೆಲ್ಮೆಟ್ ಹಾಕಿಲ್ಲ ಎಂದು ಫೈನ್ ನೀಡಲಾಗಿತ್ತು ಅಲ್ವಾ? ಅದೇ ರೀತಿ ಇದು ಕೂಡ, ಸಮುದ್ರದ ಉಪ್ಪು ನೀರಿಗೆ ಮನುಷ್ಯ ತನ್ನ ದೇಹದ ಉಪ್ಪು ನೀರು ಬಿಟ್ಟರೆ ತಿಳಿಯುವುದಾದರೂ ಹೇಗೆ? ನಗು ಬರುತ್ತಿರಬಹುದು ಅಲ್ವಾ? ಆದರೆ ಇಂಥದ್ದೊಂದು ಸಂಗತಿ ಇದೆ, ಒಂದು ಸಮಧಾನಕರ ಸಂಗತಿ ಎಂದರೆ ಈ ರೀತಿ ಫೈನ್ ಹಾಕಿರುವುದು ಸ್ಪೇನ್ನ ಮಾರ್ಬೆಲ್ಲಾದಲ್ಲಿ.
ಹಾಗಾಗಿ ನೀವು ಮಲ್ಪೆ ಬೀಚ್ಗೆ , ಗೋರ್ಕಣ ಬೀಚ್ಗೆ, ಗೋವಾದ ಬೀಚ್ಗಳಿಗೆ ಹೋದಾಗ ಧೈರ್ಯದಿಂದ ಆಟ ಆಡಬಹುದು, ಆದರೆ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳುತ್ತಿಲ್ಲ, ಪಾಪ ಆ ನೀರಿನಲ್ಲಿ ನಿಮ್ಮ ಅಕ್ಕ-ಪಕ್ಕ ಎಷ್ಟೊಂದು ಜನ ಆಡುತ್ತಿರುತ್ತಾರೆ, ಹಾಗಾಗಿ ಆ ರೀತಿ ಮಾಡಲು ನಿಮಗೆ ಮನಸ್ಸು ಬರಲ್ಲ ಇರಲಿ, ಅದೇನೇ ಇರಲಿ ಈಗ ನಾವು ಈ ಪ್ರಕರಣ ಬಗ್ಗೆ ನೋಡುವುದಾದರೆ
ಸ್ಪೇನ್ನ ಮಾರ್ಬೆಲ್ಲಾದಲ್ಲಿ ಈ ರೀತಿಯ ಹೊಸ ನಿಯಮ ಬಂದಿದೆ
ಬೀಚ್ನಲ್ಲಿ ಆಟ ಆಡುವಾಗ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ 67,000 ದಂಡ ಪಾವತಿಸಬೇಕೆಂದು ಹೇಳಿದೆ, ಆದರೆ ಮೂತ್ರ ವಿಸರ್ಜನೆ ಮಾಡಿದರೆ ಇವರಿಗೆ ಗೊತ್ತಾಗುವುದಾದರೂ ಹೇಗೆ ಅಂತ? ಡಯಾಪರ್ ಬಿಸಾಡಬೇಡಿ, ಪ್ಲಾಸ್ಟಿಕ್ ಬಾಟಲಿ ಬಿಸಾಡಿ ಬೇಡಿ ಎಂದರೆ ಒಂದು ಲೆಕ್ಕ, ಇಲ್ಲಿ ನೋಡಿದರೆ ಮೂತ್ರನೇ ಮಾಡಬಾರದು ಎಂದು ಹೇಳಿದೆ, ಉಪ್ಪು ನೀರಿನಲ್ಲಿ ಸ್ವಲ್ಪ ಉಪ್ಪು ನೀರು ಬೆರೆತರೆ ಅದನ್ನು ತಿಳಿಯುವುದು ಹೇಗೆ, ಅವರ ಅಲ್ಲಿ ಬೀಚ್ನಲ್ಲಿ ಆಡುವವರ ದೇಹಕ್ಕೆ ಏನಾದರೂ ಡಿವೈಸ್ ಫಿಕ್ಸ್ ಮೂತ್ರ ಮಾಡಿದ್ದಾರಾ? ಎಂದು ತಿಳಿಯುತ್ತಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ, ಒಟ್ಟಿನಲ್ಲಿ ಸಕತ್ ನಗೆಪಾಟಲಿಗೆ ಗುರಿಯಾಗಿದೆ ಈ ಹೊಸ ನಿಯಮ.
ಪ್ರವಾಸಿಗರು ತಮ್ಮ ಮೋಜಿನ ಜೊತೆಗೆ ಪ್ರಕೃತಿ ಕಡೆಗೆ ಗಮನಹರಿಸಬೇಕು
ಹೌದು ಪ್ರವಾಸಿಗರು ಮೋಜು ಮಸ್ತಿಗೆ ಅಂತ ಸುಂದರ ತಾಣಗಳಿಗೆ ಬರ್ತಾರೆ, ನಂತರ ಅಲ್ಲಿ ತಿಂದಿದ್ದು ಕುಡಿದಿದ್ದು ಎಲ್ಲಾ ಎಸೆದು ಹೋಗುತ್ತಾರೆ, ಮಕ್ಕಳಿಗೆ ಹಾಕಿರುವ ಡಯಾಪರ್ ಕೂಡ ರಸ್ತೆಯಲ್ಲಿ ಅಥವಾ ನದಿಯೊಳಗಡೆ ಹಾಕಿ ಹೋಗುವ ದುಷ್ಟರೇನು ಕಡಿಮೆಯಿಲ್ಲ, ಇವರ ತಲೆಯಲ್ಲಿ ಬುದ್ಧಿ ಇದೆಯೋ ಸಗಣಿ ಇದೆಯೋ ಎಂದನಿವಷ್ಟು ಬೇಜಾವಬ್ದಾರಿಯಿಂದ ವರ್ತಿಸುತ್ತಾರೆ.
ಎಲ್ಲೇ ಹೋಗಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ
ಸುಂದರ ತಾಣಗಳಿಗೆ ಹೋಗಿ ಅಲ್ಲಿ ಕಸದ ರಾಶಿಯನ್ನೇ ಹಾಕಿ ಬರುತ್ತಾರೆ, ಇಂಥವರ ವಿರುದ್ಧ ಕಠಿಣ ಕ್ರಮ ತೆಗೆವಿದೇಶದಲ್ಲಿ ತುಂಬಾನೇ ಕಟ್ಟುನಿಟ್ಟಿನ ಕಾನೂನು ಇದೆ, ನಮ್ಮಲ್ಲಿ ಸ್ವಲ್ಪ ಸಡಿಲವಿದೆ, ಹಾಗಾಗಿ ಜನರು ಸುಂದುಕೊಳ್ಳಬೇಕು. ಕ ರಸ್ತೆಯಲ್ಲ ಕಸ ಎಸೆದವರನ್ನು ತಡೆದು ನಿಲ್ಲಿಸಿ ಕಸ ಎತ್ತಿಸಿರುವ ಹಲವು ಪ್ರಕರಣ ನೋಡಿದ್ದೇವೆ, ಪ್ರತಿಯೊಬ್ಬ ನಾಗರಿಕನು ಇಂಥ ವ್ಯಕ್ತಿಗಳನ್ನು ಕಂಡಾಗ ಅವರ ಕೈಯಿಂದಲೇ ಕಸ ಎತ್ತಿಸಬೇಕು, ಆವಾಗಲೇ ಬುದ್ಧಿ ಬರುವುದು. ಹೊರಗಡೆ ಹೋದಾಗ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.



Click it and Unblock the Notifications