Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ನವೆಂಬರ್ 30 ಜೀವನ್ ಪ್ರಮಾಣ್ ಪತ್ರ ಸಲ್ಲಿಸಲು ಕೊನೆ ದಿನ: ಇಲ್ಲದಿದ್ದರೆ ಪಿಂಚಣಿ ಬಂದ್!!
ಸರ್ಕಾರಿ ನೌಕರರು ನಿವೃತ್ತಿಯ ಬಳಿಕ ಪಿಂಚಣಿ ಪಡೆಯುವುದು ನೋಡಬಹುದು. ಅದ್ರಲ್ಲೂ ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ದಾಖಲೆಗಳ ನೀಡುವುದು ಸಾಮಾನ್ಯ. ಆದ್ರೆ ಪಿಂಚಣಿ ಪಡೆಯಲು ನೀವು ನೀಡಬೇಕಾದ ಹಲವು ದಾಖಲೆಗಳ ಪೈಕಿ ಜೀವನ್ ಪ್ರಮಾಣ್ ಪತ್ರ ಕೂಡ ಒಂದಾಗಿದೆ.
ನೀವು ಜೀವಂತವಾಗಿದ್ದೀರಿ ಎಂಬ ದಾಖಲೆಯೇ ಈ ಜೀವನ್ ಪ್ರಮಾಣ್ ಪತ್ರವಾಗಿದೆ. ಸದ್ಯ ಪ್ರತಿ ವರ್ಷ ನೀವು ಈ ಪ್ರಮಾಣ ಪತ್ರವನ್ನು ಆಯಾ ಬ್ಯಾಂಕ್, ಅಂಚೆ ಕಚೇರಿಗೆ ನೀಡಬೇಕಾಗುತ್ತದೆ. ಈ ರೀತಿಯ ಪ್ರಮಾಣ ಪತ್ರ ನೀಡಿದಿದ್ದರೆ ನಿಮ್ಮ ಪಿಂಚಣಿ ಅಂತ್ಯವಾಗಲಿದೆ. ಹಾಗೆ ಈ ಬಾರಿ ನವೆಂಬರ್ 30ರ ಒಳಗೆ ಈ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ.

ಭಾರತದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಕುಟುಂಬದಲ್ಲಿ ಕೇಂದ್ರ ಪಿಂಚಣಿ ಯೋಜನೆಯಲ್ಲಿದ್ದಾರೆ. ಪಿಂಚಣಿದಾರರು ಪಿಂಚಣಿ ವಿತರಣಾ ಅಧಿಕಾರಿಯ ಮುಂದೆ ವೈಯಕ್ತಿಕವಾಗಿ ಹಾಜರಾಗಬೇಕಾಗುತ್ತದೆ. ಈ ಸಮಯದಲ್ಲಿ ಸರ್ಕಾರ ಜೀವನ್ ಪ್ರಮಾಣ (DLC) ಅನ್ನು ಜಾರಿಗೆ ತಂದಿತು. ಇದರಿಂದ ವ್ಯಕ್ತಿ ಖುದ್ದು ಅಧಿಕಾರಿ ಮುಂದೆ ಹಾಜರಾಗುವ ಅಗತ್ಯವಿಲ್ಲ. ಹಾಗೆ ಇದು ಡಿಜಿಟಲ್ ಪ್ರಮಾಣ ಪತ್ರದ ಮೂಲಕ ಎಲ್ಲಾ ಸಮಸ್ಯೆಗಳ ನಿವಾರಣೆ ಮಾಡಲಾಗಿದೆ.
ಜೀವನ್ ಪ್ರಮಾಣ್ ಡಿಜಿಟಲ್ ಪತ್ರ ಎಂದರೇನು? ಪಡೆಯುವುದು ಹೇಗೆ?
ಜೀವನ್ ಪ್ರಮಾಣ್ ಪತ್ರವು ಆಧಾರ್ ಕಾರ್ಡ್ ಆಧಾರಿತವಾಗಿ ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ಪ್ರಮಾಣ ಪತ್ರವಾಗಿದೆ. ಇದನ್ನು ಪಿಂಚಣಿ ವಿತರಿಸುವ ಸಂಸ್ಥೆಯು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಿದೆ. ಇದರಲ್ಲಿ ಆಧಾರ್ ಕಾರ್ಡ್ ಹಾಗೆ ಇತರೆ ಕಾರ್ಡ್ಗಳಲ್ಲಿ ಇರುವಂತೆ ವಿಭಿನ್ನ ಹಾಗೆ ವಿಶಿಷ್ಟ ಐಡಿ ನಂಬರ್ ಸಹ ಇರಲಿದೆ.
ಈ ಪ್ರಮಾಣ ಪತ್ರವನ್ನು ಹೊಸದಾಗಿ ಮಾಡಿಸಿಕೊಳ್ಳಲು ಕೇಂದ್ರ ಸರ್ಕಾರವೇ ತಮ್ಮ ಇಲಾಖಾವಾರು ಪಿಂಚಣಿ ಹಂಚಿಕೆಯಲ್ಲಿ ವ್ಯವಸ್ಥೆ ಮಾಡಿರಲಿದೆ. ನೀವು ಬ್ಯಾಂಕ್ಗಳು, ಸರ್ಕಾರಿ ಕಚೇರಿಗಳು ನಿರ್ವಹಿಸುತ್ತಿರುವ ವಿವಿಧ ಜೀವನ್ ಪ್ರಮಾಣ ಕೇಂದ್ರಗಳ ಮೂಲಕ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕವು ಪಡೆಯಬಹುದು.
ಜೀವನ ಪ್ರಮಾಣ್ ಪತ್ರವನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಮನೆಯಲ್ಲಿ ಕುಳಿತಲ್ಲೇ ಸಲ್ಲಿಸಬಹುದು. ಜೀವನ ಪ್ರಮಾಣಪತ್ರ ಸಲ್ಲಿಸಲು ಸೂಪರ್ ಸೀನಿಯರ್ ಪಿಂಚಣಿದಾರರು, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪ್ರತಿ ವರ್ಷ ಅಕ್ಟೋಬರ್ 1 ರಿಂದ ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಬಹುದು.
80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ತಮ್ಮ ಪ್ರಮಾಣಪತ್ರವನ್ನು ಸಲ್ಲಿಸಲು ನವೆಂಬರ್ 1ರ ವರೆಗೆ ಕಾಯಬೇಕು. ಹಾಗೆ 30 ಕೊನೆಯ ದಿನವಾಗುತ್ತದೆ. ಪ್ರತಿ ವರ್ಷ ಪಿಂಚಣಿದಾರರಿಗೆ ಇದು ಕಡ್ಡಾಯವಾಗಿದೆ.
ಈ ನಿಮಯ ಜಾರಿ ಮಾಡಿದ್ದು ಏಕೆ?
ಈ ಹಿಂದೆ ಡಿಜಿಟಲ್ ಅನುಮೋದನೆಗಳು ಇರದ ಕಾರಣ ಎಲ್ಲವು ದಾಖಲೆ ಪತ್ರಗಳ ಮೂಲಕ ಪಿಂಚಣಿ ಸೇವೆ ನಡೆಯುತ್ತಿತ್ತು. ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟರು ಅವರ ಹೆಸರಿನಲ್ಲಿ ಪಿಂಚಣಿ ಸೌಲಭ್ಯವನ್ನು ಅಕ್ರಮವಾಗಿ ಅನುಭವಿಸುತ್ತಿದ್ದ ಹಲವು ಪ್ರಕರಣಗಳು ವರದಿಯಾಗುತ್ತಿದ್ದವು. ಈ ಪಿಂಚಣಿ ವ್ಯವಸ್ಥೆ ದುರುಪಯೋಗ ತಡೆಯವ ಉದ್ದೇಶದಿಂದ ಈ ಡಿಜಿಟಲ್ ಪ್ರಮಾಣ ಪತ್ರ ಯೋಜನೆ ಜಾರಿ ಮಾಡಲಾಗಿತ್ತು. ವ್ಯಕ್ತಿ ತಾವು ಬದುಕಿರುವ ಕುರಿತು ದೃಢೀಕರಣ ಪ್ರಮಾಣ ಪತ್ರ ಸಲ್ಲಿಸದೆ ಇದ್ದರೆ ಪಿಂಚಣಿ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಸದ್ಯ ಕೇಂದ್ರ ಸರ್ಕಾರದ ಪಿಂಚಣಿ ಪಡೆಯುವ ಮಂದಿಗೆ ಇದು ಬಹಳ ಅನುಕೂಲಕರವಾಗಿದೆ.



Click it and Unblock the Notifications