Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಮನೆಯಲ್ಲೇ ಮುತ್ತು ಬೆಳೆದ ಸಾಹಸಿಗ: ವರ್ಷಕ್ಕೆ ₹10 ಲಕ್ಷ ಆದಾಯ..! ಬೆಳೆಯೋದು ಹೇಗೆ?
ಕಡಲ ಆಳದಲ್ಲಿ ಸಿಗುವ ಮುತ್ತು ಬಹಳ ದುಬಾರಿ. ಅದರಲ್ಲೂ ಮುತ್ತಿನ ಹಾರ, ಮುತ್ತಿನಿಂದ ಮಾಡಲಾದ ಆಭರಣಗಳ ಬೆಲೆಯಂತು ಸಾಮಾನ್ಯ ಆಭರಣಕ್ಕೆ ಹೋಲಿಸಿದರೆ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಮುತ್ತಿಗೆ ಬಹಳ ಬೇಡಿಕೆಯೂ ಇದೆ. ಹೈದರಾಬಾದ್ ನಗರವನ್ನ ಮುತ್ತಿನ ನಗರಿ ಎಂದು ಕರೆಯಲಾಗುತ್ತೆ. ಅಲ್ಲಿ ಮುತ್ತಿನಿಂದ ಮಾಡಲಾದ ಅತ್ಯಂತ ಸುಂದರ ಆಭರಣಗಳು ಹಾಗೆ ಪರಿಶುದ್ಧ ಮುತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಮುತ್ತಿನಲ್ಲಿ ಹಲವು ರೀತಿಯ ಗುಣಮಟ್ಟ ನಾವು ನೋಡಬಹುದು. ಕೆಲವೊಂದು ಮುತ್ತು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹಾಗೆ ಕೆಲವು ದುಬಾರಿ ಅಲ್ಲದೆ ಅವುಗಳ ಗಾತ್ರ ಹಾಗೂ ತೂಕದ ಮೇಲೂ ಅವುಗಳ ಬೆಲೆ ನಿಗಧಿಯಾಗುತ್ತೆ. ಇನ್ನು ಮುತ್ತಿನ ಹಾರ, ಆಭರಣ ಧರಿಸೋದು ಅಂದ್ರೆ ಮಹಿಳೆಯರಿಗೆ ಇನ್ನಿಲ್ಲದ ಇಷ್ಟವಿರುತ್ತೆ. ಆದರೆ ಅದರ ಹುಡುಕಿ ತರುವುದು ಕಷ್ಟವಾಗೋದ್ರಿಂದ ಬೆಲೆ ದುಬಾರಿಯಾಗಿರಲಿದೆ.

ಚಿನ್ನ ಬೆಳ್ಳಿಯನ್ನು ತಾವು ತಯಾರಿಸಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ಗಣಿಗಾರಿಕೆ ಮೂಲಕ ತೆಗೆಯಲಾಗುತ್ತದೆ. ಹಾಗೆ ಮುತ್ತು ಸಮುದ್ರದ ಆಳದಲ್ಲಿ ನಮಗೆ ಸಿಗುತ್ತದೆ. ಆದ್ರೆ ಮುತ್ತನ್ನು ಮನೆಯಲ್ಲೇ ಕೃಷಿ ಮಾಡಿದರೆ ಹೇಗೆ? ನಿಮ್ಮಲ್ಲಿ ಈ ರೀತಿಯ ಆಲೋಚನೆಯೂ ಬಂದಿರುವುದಿಲ್ಲ. ಆದ್ರೆ ಇಲ್ಲೊಬ್ಬರು ಈ ರೀತಿ ಮನೆಯಲ್ಲೇ ಮುತ್ತಿನ ಕೃಷಿ ಮಾಡಿ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಲಾಭ ಮಾಡುತ್ತಿದ್ದಾರೆ.
ಹೌದು ರಾಜಸ್ಥಾನ ಮೂಲದ ಗೌರವ್ ಪಚೌರಿ ಎಂಬ ವ್ಯಕ್ತಿ ತಮ್ಮ ಕೆಲಸ ಬಿಟ್ಟು ತಮ್ಮ ಊರಿನಲ್ಲಿ ಮುತ್ತನ್ನೇ ಬೆಳೆಯುವ ಕೃಷಿ ಆರಂಭಿಸಲು ಮುಂದಾದರು. ಕೆಲವರಿಗೆ ಇದು ಅಚ್ಚರಿ ಎನಿಸಬಹುದು ಮುತ್ತು ಬೆಳೆಯುವುದು ಹೇಗೆ? ಎಂಬ ಪ್ರಶ್ನೆಯಂತು ಮೂಡುವುದು ಸಹಜ. ಆದ್ರೆ ಇಂತಹದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
2017 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಆದರೆ ಅವರು ಸರ್ಕಾರಿ ಹುದ್ದೆ ಪಡೆಯುವ ಉದ್ದೇಶದಿಂದ ಮತ್ತೆ ಓದಿಕೊಳ್ಳಲು ಆರಂಭಿಸಿದ್ದರು. ದೆಹಲಿಗೆ ತೆರಳಿ ತಯಾರಿ ನಡೆಸಿದರು. ಆದ್ರೆ ಯಶಸ್ಸು ಮಾತ್ರ ಸಿಗಲಿಲ್ಲ. ಹೀಗಾಗಿ ವಿಶೇಷವಾಗಿ ಏನಾದರು ಮಾಡಬೇಕು ಎಂದುಕೊಂಡಿದ್ದರು. ಒಂದು ದಿನ ಟಿವಿಯಲ್ಲಿ ಈ ಸಿಹಿ ನೀರಿನಲ್ಲಿಮ ಮುತ್ತು ಬೆಳೆಯುವ ಕುರಿತಂತೆ ಒಂದು ವಿಚಾರ ನೋಡಿದ್ದರಂತೆ. ಇದು ಅವರ ತಲೆಯಲ್ಲಿ ಹೊಸ ಐಡಿಯಾ ಹುಟ್ಟುಹಾಕಿತು.
ಮುತ್ತು ಕೃಷಿ ಎಂಬ ಹೊಸ ವಿಧವಾದ ಕೃಷಿ ಅವರ ಗಮನ ಸೆಳೆದಿತ್ತು. ತಡ ಮಾಡದೆ ಅವರು ಈ ಕೃಷಿಗೆ ಏನೆಲ್ಲಾ ತಯಾರಿ ಬೇಕು ಎಂಬುದನ್ನು ಹುಡುಕಾಡಿದರು. 2 ವರ್ಷಗಳ ಕಾಲ ಕುಟುಂಬಸ್ಥರ ಮನವೊಲಿಸಿದರು. ಬಳಿಕ 2022ರಲ್ಲಿ ಗೌರವ್ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮುತ್ತು ಕೃಷಿ ಕೊಳಗಳನ್ನು ವೀಕ್ಷಣೆಗೆಂದು ತೆರಳಿದ್ದರು. ಹಾಗೆ 5 ದಿನ ತರಬೇತಿ ಸಹ ಪಡೆದರು.
ಹೇಗೆ ಮುತ್ತುಗಳನ್ನು ಬಿತ್ತನೆ ಮಾಡಬೇಕು. ಅದಕ್ಕೆ ಏನೆಲ್ಲಾ ಚಿಕಿತ್ಸೆ ನೀಡಬೇಕು, ಆರೈಕೆ ಹೇಗೆ?, ಎಷ್ಟು ದಿನದಲ್ಲಿ ಮುತ್ತು ಬೆಳೆಯುತ್ತದೆ. ಹೀಗೆ ಹತ್ತಾರು ವಿಚಾರಗಳ ತರಬೇತಿ ಪಡೆದರು. ಸೆಪ್ಟೆಂಬರ್ 2022 ರ ಹೊತ್ತಿಗೆ ಭರತ್ಪುರ ಜಿಲ್ಲೆಯ ತನ್ನ ಗ್ರಾಮದಲ್ಲಿ 150 x 80 ಅಡಿಗಳ ಕೊಳವನ್ನು ಸಿದ್ಧಪಡಿಸಿ 1.15 ಲಕ್ಷ ಮಸ್ಸೆಲ್ಗಳನ್ನು ನೀರಿಗೆ ಬಿಟ್ಟರು. ಮಸ್ಸೆಲ್ಗಳೆಂದರೆ ಮುತ್ತುಗಳು ಬೆಳೆಯುವ ಕಪ್ಪೆ ಚಿಪ್ಪುಗಳಾಗಿವೆ.
ಅವುಗಳಿಗೆ ಆಹಾರ ನೀಡುವುದು, ನೀರು ಬದಲಾಯಿಸುವುದು, ತಾಪಮಾನ ಕಾಪಾಡುವುದು ಸೇರಿ ಎಲ್ಲಾ ಕ್ರಮ ತೆಗೆದುಕೊಂಡರು. ಒಟ್ಟಾರೆ ಅವರು 21 ಲಕ್ಷ ರೂಪಾಯಿ ಖರ್ಚು ಮಾಡಿ 55 ಲಕ್ಷ ರೂಪಾಯಿ ಆದಾಯ ಗಳಿಸಿದರಂತೆ. ಒಮ್ಮೆ ಮುತ್ತುಗಳು ಪಕ್ವವಾಗಲು ಸುಮಾರು 21 ತಿಂಗಳ ಕಾಲ ಬೇಕಾಗುತ್ತದೆಯಂತೆ. ಈಗ ಅವರು ವರ್ಷಕ್ಕೆ 10 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ.



Click it and Unblock the Notifications