Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮನೆಯಲ್ಲೇ ಮುತ್ತು ಬೆಳೆದ ಸಾಹಸಿಗ: ವರ್ಷಕ್ಕೆ ₹10 ಲಕ್ಷ ಆದಾಯ..! ಬೆಳೆಯೋದು ಹೇಗೆ?
ಕಡಲ ಆಳದಲ್ಲಿ ಸಿಗುವ ಮುತ್ತು ಬಹಳ ದುಬಾರಿ. ಅದರಲ್ಲೂ ಮುತ್ತಿನ ಹಾರ, ಮುತ್ತಿನಿಂದ ಮಾಡಲಾದ ಆಭರಣಗಳ ಬೆಲೆಯಂತು ಸಾಮಾನ್ಯ ಆಭರಣಕ್ಕೆ ಹೋಲಿಸಿದರೆ ದುಪ್ಪಟ್ಟಾಗಿರುತ್ತೆ. ಭಾರತದಲ್ಲಿ ಮುತ್ತಿಗೆ ಬಹಳ ಬೇಡಿಕೆಯೂ ಇದೆ. ಹೈದರಾಬಾದ್ ನಗರವನ್ನ ಮುತ್ತಿನ ನಗರಿ ಎಂದು ಕರೆಯಲಾಗುತ್ತೆ. ಅಲ್ಲಿ ಮುತ್ತಿನಿಂದ ಮಾಡಲಾದ ಅತ್ಯಂತ ಸುಂದರ ಆಭರಣಗಳು ಹಾಗೆ ಪರಿಶುದ್ಧ ಮುತ್ತು ಸಿಗುತ್ತದೆ ಎಂದು ಹೇಳಲಾಗುತ್ತದೆ.
ಮುತ್ತಿನಲ್ಲಿ ಹಲವು ರೀತಿಯ ಗುಣಮಟ್ಟ ನಾವು ನೋಡಬಹುದು. ಕೆಲವೊಂದು ಮುತ್ತು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹಾಗೆ ಕೆಲವು ದುಬಾರಿ ಅಲ್ಲದೆ ಅವುಗಳ ಗಾತ್ರ ಹಾಗೂ ತೂಕದ ಮೇಲೂ ಅವುಗಳ ಬೆಲೆ ನಿಗಧಿಯಾಗುತ್ತೆ. ಇನ್ನು ಮುತ್ತಿನ ಹಾರ, ಆಭರಣ ಧರಿಸೋದು ಅಂದ್ರೆ ಮಹಿಳೆಯರಿಗೆ ಇನ್ನಿಲ್ಲದ ಇಷ್ಟವಿರುತ್ತೆ. ಆದರೆ ಅದರ ಹುಡುಕಿ ತರುವುದು ಕಷ್ಟವಾಗೋದ್ರಿಂದ ಬೆಲೆ ದುಬಾರಿಯಾಗಿರಲಿದೆ.

ಚಿನ್ನ ಬೆಳ್ಳಿಯನ್ನು ತಾವು ತಯಾರಿಸಲು ಸಾಧ್ಯವಿಲ್ಲ. ಈ ಭೂಮಿಯಲ್ಲಿ ಗಣಿಗಾರಿಕೆ ಮೂಲಕ ತೆಗೆಯಲಾಗುತ್ತದೆ. ಹಾಗೆ ಮುತ್ತು ಸಮುದ್ರದ ಆಳದಲ್ಲಿ ನಮಗೆ ಸಿಗುತ್ತದೆ. ಆದ್ರೆ ಮುತ್ತನ್ನು ಮನೆಯಲ್ಲೇ ಕೃಷಿ ಮಾಡಿದರೆ ಹೇಗೆ? ನಿಮ್ಮಲ್ಲಿ ಈ ರೀತಿಯ ಆಲೋಚನೆಯೂ ಬಂದಿರುವುದಿಲ್ಲ. ಆದ್ರೆ ಇಲ್ಲೊಬ್ಬರು ಈ ರೀತಿ ಮನೆಯಲ್ಲೇ ಮುತ್ತಿನ ಕೃಷಿ ಮಾಡಿ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಲಾಭ ಮಾಡುತ್ತಿದ್ದಾರೆ.
ಹೌದು ರಾಜಸ್ಥಾನ ಮೂಲದ ಗೌರವ್ ಪಚೌರಿ ಎಂಬ ವ್ಯಕ್ತಿ ತಮ್ಮ ಕೆಲಸ ಬಿಟ್ಟು ತಮ್ಮ ಊರಿನಲ್ಲಿ ಮುತ್ತನ್ನೇ ಬೆಳೆಯುವ ಕೃಷಿ ಆರಂಭಿಸಲು ಮುಂದಾದರು. ಕೆಲವರಿಗೆ ಇದು ಅಚ್ಚರಿ ಎನಿಸಬಹುದು ಮುತ್ತು ಬೆಳೆಯುವುದು ಹೇಗೆ? ಎಂಬ ಪ್ರಶ್ನೆಯಂತು ಮೂಡುವುದು ಸಹಜ. ಆದ್ರೆ ಇಂತಹದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
2017 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಆದರೆ ಅವರು ಸರ್ಕಾರಿ ಹುದ್ದೆ ಪಡೆಯುವ ಉದ್ದೇಶದಿಂದ ಮತ್ತೆ ಓದಿಕೊಳ್ಳಲು ಆರಂಭಿಸಿದ್ದರು. ದೆಹಲಿಗೆ ತೆರಳಿ ತಯಾರಿ ನಡೆಸಿದರು. ಆದ್ರೆ ಯಶಸ್ಸು ಮಾತ್ರ ಸಿಗಲಿಲ್ಲ. ಹೀಗಾಗಿ ವಿಶೇಷವಾಗಿ ಏನಾದರು ಮಾಡಬೇಕು ಎಂದುಕೊಂಡಿದ್ದರು. ಒಂದು ದಿನ ಟಿವಿಯಲ್ಲಿ ಈ ಸಿಹಿ ನೀರಿನಲ್ಲಿಮ ಮುತ್ತು ಬೆಳೆಯುವ ಕುರಿತಂತೆ ಒಂದು ವಿಚಾರ ನೋಡಿದ್ದರಂತೆ. ಇದು ಅವರ ತಲೆಯಲ್ಲಿ ಹೊಸ ಐಡಿಯಾ ಹುಟ್ಟುಹಾಕಿತು.
ಮುತ್ತು ಕೃಷಿ ಎಂಬ ಹೊಸ ವಿಧವಾದ ಕೃಷಿ ಅವರ ಗಮನ ಸೆಳೆದಿತ್ತು. ತಡ ಮಾಡದೆ ಅವರು ಈ ಕೃಷಿಗೆ ಏನೆಲ್ಲಾ ತಯಾರಿ ಬೇಕು ಎಂಬುದನ್ನು ಹುಡುಕಾಡಿದರು. 2 ವರ್ಷಗಳ ಕಾಲ ಕುಟುಂಬಸ್ಥರ ಮನವೊಲಿಸಿದರು. ಬಳಿಕ 2022ರಲ್ಲಿ ಗೌರವ್ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮುತ್ತು ಕೃಷಿ ಕೊಳಗಳನ್ನು ವೀಕ್ಷಣೆಗೆಂದು ತೆರಳಿದ್ದರು. ಹಾಗೆ 5 ದಿನ ತರಬೇತಿ ಸಹ ಪಡೆದರು.
ಹೇಗೆ ಮುತ್ತುಗಳನ್ನು ಬಿತ್ತನೆ ಮಾಡಬೇಕು. ಅದಕ್ಕೆ ಏನೆಲ್ಲಾ ಚಿಕಿತ್ಸೆ ನೀಡಬೇಕು, ಆರೈಕೆ ಹೇಗೆ?, ಎಷ್ಟು ದಿನದಲ್ಲಿ ಮುತ್ತು ಬೆಳೆಯುತ್ತದೆ. ಹೀಗೆ ಹತ್ತಾರು ವಿಚಾರಗಳ ತರಬೇತಿ ಪಡೆದರು. ಸೆಪ್ಟೆಂಬರ್ 2022 ರ ಹೊತ್ತಿಗೆ ಭರತ್ಪುರ ಜಿಲ್ಲೆಯ ತನ್ನ ಗ್ರಾಮದಲ್ಲಿ 150 x 80 ಅಡಿಗಳ ಕೊಳವನ್ನು ಸಿದ್ಧಪಡಿಸಿ 1.15 ಲಕ್ಷ ಮಸ್ಸೆಲ್ಗಳನ್ನು ನೀರಿಗೆ ಬಿಟ್ಟರು. ಮಸ್ಸೆಲ್ಗಳೆಂದರೆ ಮುತ್ತುಗಳು ಬೆಳೆಯುವ ಕಪ್ಪೆ ಚಿಪ್ಪುಗಳಾಗಿವೆ.
ಅವುಗಳಿಗೆ ಆಹಾರ ನೀಡುವುದು, ನೀರು ಬದಲಾಯಿಸುವುದು, ತಾಪಮಾನ ಕಾಪಾಡುವುದು ಸೇರಿ ಎಲ್ಲಾ ಕ್ರಮ ತೆಗೆದುಕೊಂಡರು. ಒಟ್ಟಾರೆ ಅವರು 21 ಲಕ್ಷ ರೂಪಾಯಿ ಖರ್ಚು ಮಾಡಿ 55 ಲಕ್ಷ ರೂಪಾಯಿ ಆದಾಯ ಗಳಿಸಿದರಂತೆ. ಒಮ್ಮೆ ಮುತ್ತುಗಳು ಪಕ್ವವಾಗಲು ಸುಮಾರು 21 ತಿಂಗಳ ಕಾಲ ಬೇಕಾಗುತ್ತದೆಯಂತೆ. ಈಗ ಅವರು ವರ್ಷಕ್ಕೆ 10 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರಂತೆ.



Click it and Unblock the Notifications