Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ: ಹೀಗೆ ಮಾಡಿದರೆ ಪೂಜ್ಯ ಫಲ ಹೆಚ್ಚುತ್ತೆ
ಹಿಂದೂಗಳಿಗೆ ಏಕಾದಶಿಯ ದಿನ ತುಂಬಾ ಮಹತ್ವವಾದ ದಿನ. ಈ ದಿನ ಯಾರು ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರ ಇಷ್ಟಾರ್ಥಗಳು ನೆರವಾಗುವುದು ಎಂದು ಹೇಳಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಆಗಸ್ಟ್ 12ಕ್ಕೆ ಪರಮ ಏಕಾದಶಿಯನ್ನು ಆಚರಿಸಲಾಗುವುದು. ಈ ಪರಮ ಏಕಾದಶಿಯನ್ನು ಆಚರಿಸುವುದರಿಂದ ಪರಮಾತ್ಮನ ಕೃಪೆಗೆ ಪಾತ್ರರಾಗಬಹುದು, ಆದ್ದರಿಂದ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಶ್ರೀ ವಿಷ್ಣುವಿನ ಬಲವಾದ ನಂಬಿಕೆ.

ಏಕಾದಶಿ ತಿಥಿ ಪ್ರಾರಂಭ" ಆಗಸ್ಟ್ 11 ಸಂಜೆ 05:06ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಆಗಸ್ಟ್ 12 ಸಂಜೆ 06:01ಕ್ಕೆ
ವ್ರತ ಪಾರಣ ಸಮಯ: ಆಗಸ್ಟ್ 13 ಬೆಳಗ್ಗೆ 05:49ರಿಂದ 08:19ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ
ಈ ವರ್ಷ ಪರಮ ಏಕಾದಶಿ ತುಂಬಾನೇ ಶುಭಯೋಗವಾದ ಹರ್ಷಣ ಯೋಗದಲ್ಲಿ ಬಂದಿದೆ
ಹರ್ಷಣ ಯೋಗ ಎಂದರೇನು?
ಜ್ಯೋತಿಷ್ಯ ಪ್ರಕಾರ 27 ಯೋಗಗಳಲ್ಲಿ ಹರ್ಷಣ ಯೋಗ ಕೂಡ ಒಂದಾಗಿದೆ. ಸೂರ್ಯ, ಚಂದ್ರ ಅಶ್ವಿನಿ ನಕ್ಷತ್ರದಲ್ಲಿದ್ದಾಗ ಹರ್ಷಣ ಯೋಗ ಉಂಟಾಗುವುದು. ಇದು ತುಂಬಾ ಶುಭ ಯೋಗವಾಗಿದೆ. ಹರ್ಷಣ ಯೋಗದಲ್ಲಿ ಜನಿಸಿದರೆ ತುಂಬಾ ಶುಭ ಎಂದು ಪರಿಗಣಿಸಲಾಗುವುದು.
ಪರಮ ಏಕಾದಶಿಯಂದು ಈ ಕಾರ್ಯಗಳನ್ನು ಮಾಡುವುದರಿಂದ ಪೂಜ್ಯ ಫಲ ಹೆಚ್ಚಾಗುವುದು
ಉಪವಾಸವಿದ್ದು ಪರಮ ಏಕಾದಶಿಯನ್ನು ಆಚರಿಸಬೇಕು
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಕೀರ್ತಿ ಹೆಚ್ಚಾಗಲಿದೆ. ಈ ದಿನ ಭಕ್ತಿಯಿಂದ ಶ್ರೀ ವಿಷ್ಣುವಿನ ಪೂಜೆ ಮಾಡಿ. ಪೂಜೆಯಲ್ಲಿ ಹಳದಿ ಹೂಗಳು, ಹಣ್ಣುಗಳನ್ನು ಸೇರಿಸಿ. ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿ ಬಳಸಿ, ಶ್ರೀ ವಿಷ್ಣುವಿಗೆ ಪಂಚಾಮೃತ ಅರ್ಪಿಸಿ.
ಶನಿವಾರದಂದು ಬಂದಿದೆ ಏಕಾದಶಿ
ಶನಿವಾರ ಶನಿದೇವನ ಆರಾಧನೆಗೆ ಮೀಸಲಾಗಿರುವ ದಿನ. ಈ ದಿನ ಏಕಾದಶಿ ಬಂದಿದೆ, ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಮಾಡಿ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶನಿಕೃಪೆಗೆ ಪಾತ್ರರಾಗುವಿರಿ.
ಹರಿಹರನ ಅನುಗ್ರಹಕ್ಕೆ
ಶ್ರಾವಣ ಮಾಸ, ಈ ದಿನ ಹರಿಹರನ ಆಶೀರ್ವಾದ ಪಡೆಯಲು ಶ್ರೀ ವಿಷ್ಣು ಹಾಗೂ ಶಿವನನ್ನು ಆರಾಧಿಸಿ. ಶಿವನಿಗೆ ಹಾಲಿನೊಂದಿಗೆ ಕುಂಕುಮವನ್ನು ಅರ್ಪಿಸಿ. ಹರಿಹರನ ಪೂಜೆ ಮಾಡುವುದರಿಂದ ವೈವಾಹಿಕ ಜೀವನ ಚೆನ್ನಾಗಿರಲಿದೆ, ಅಲ್ಲದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರಾಗುವುದು.
ಹನುಮಂತನ ಪೂಜೆ ಮಾಡಿ
ಶನಿವಾರದ ಪರಮ ಏಕಾದಶಿಯಂದು ಹನುಮಂತನ ದೇಗುಲಕ್ಕೂ ಭೇಟಿ ನೀಡಿ, ದೇವರಿಗೆ ಸಿಂಧೂರ ಅರ್ಪಿಸಿ, ಹನುಮಾನ್ ಚಾಲೀಸ ಪಠಿಸಿ.
ಸಂಜೆ ಹೊತ್ತು ತುಳಸಿಗೆ ಪೂಜೆ ಮಾಡಿ
ಈ ದಿನ ಸಂಜೆ ತುಳಸಿ ಗಿಡದ ಕೆಳಗಡೆ ತುಪ್ಪದ ದೀಪ ಹಚ್ಚಿ ತುಳಸಿಯನ್ನು ಪೂಜಿಸಿ.
ದಾನಧರ್ಮದ ಮಹತ್ವ
ಈ ದಿನ ಮಾಡುವ ಧಾನಧರ್ಮದಿಂದ ಪೂಜೆಯ ಫಲ ಹೆಚ್ಚಾಗಲಿದೆ. ನಿಮಗೆ ಕೈಯಲ್ಲಾದಂತೆ ಬಡ ಬಗ್ಗರಿಗೆ ಸಹಾಯ ಮಾಡಿ, ನಿರ್ಗತಿಕರಿಗೆ ಆಹಾರವನ್ನು ನೀಡಿ.



Click it and Unblock the Notifications