Latest Updates
-
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ!
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ: ಹೀಗೆ ಮಾಡಿದರೆ ಪೂಜ್ಯ ಫಲ ಹೆಚ್ಚುತ್ತೆ
ಹಿಂದೂಗಳಿಗೆ ಏಕಾದಶಿಯ ದಿನ ತುಂಬಾ ಮಹತ್ವವಾದ ದಿನ. ಈ ದಿನ ಯಾರು ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರ ಇಷ್ಟಾರ್ಥಗಳು ನೆರವಾಗುವುದು ಎಂದು ಹೇಳಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಆಗಸ್ಟ್ 12ಕ್ಕೆ ಪರಮ ಏಕಾದಶಿಯನ್ನು ಆಚರಿಸಲಾಗುವುದು. ಈ ಪರಮ ಏಕಾದಶಿಯನ್ನು ಆಚರಿಸುವುದರಿಂದ ಪರಮಾತ್ಮನ ಕೃಪೆಗೆ ಪಾತ್ರರಾಗಬಹುದು, ಆದ್ದರಿಂದ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಶ್ರೀ ವಿಷ್ಣುವಿನ ಬಲವಾದ ನಂಬಿಕೆ.

ಏಕಾದಶಿ ತಿಥಿ ಪ್ರಾರಂಭ" ಆಗಸ್ಟ್ 11 ಸಂಜೆ 05:06ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಆಗಸ್ಟ್ 12 ಸಂಜೆ 06:01ಕ್ಕೆ
ವ್ರತ ಪಾರಣ ಸಮಯ: ಆಗಸ್ಟ್ 13 ಬೆಳಗ್ಗೆ 05:49ರಿಂದ 08:19ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ
ಈ ವರ್ಷ ಪರಮ ಏಕಾದಶಿ ತುಂಬಾನೇ ಶುಭಯೋಗವಾದ ಹರ್ಷಣ ಯೋಗದಲ್ಲಿ ಬಂದಿದೆ
ಹರ್ಷಣ ಯೋಗ ಎಂದರೇನು?
ಜ್ಯೋತಿಷ್ಯ ಪ್ರಕಾರ 27 ಯೋಗಗಳಲ್ಲಿ ಹರ್ಷಣ ಯೋಗ ಕೂಡ ಒಂದಾಗಿದೆ. ಸೂರ್ಯ, ಚಂದ್ರ ಅಶ್ವಿನಿ ನಕ್ಷತ್ರದಲ್ಲಿದ್ದಾಗ ಹರ್ಷಣ ಯೋಗ ಉಂಟಾಗುವುದು. ಇದು ತುಂಬಾ ಶುಭ ಯೋಗವಾಗಿದೆ. ಹರ್ಷಣ ಯೋಗದಲ್ಲಿ ಜನಿಸಿದರೆ ತುಂಬಾ ಶುಭ ಎಂದು ಪರಿಗಣಿಸಲಾಗುವುದು.
ಪರಮ ಏಕಾದಶಿಯಂದು ಈ ಕಾರ್ಯಗಳನ್ನು ಮಾಡುವುದರಿಂದ ಪೂಜ್ಯ ಫಲ ಹೆಚ್ಚಾಗುವುದು
ಉಪವಾಸವಿದ್ದು ಪರಮ ಏಕಾದಶಿಯನ್ನು ಆಚರಿಸಬೇಕು
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಕೀರ್ತಿ ಹೆಚ್ಚಾಗಲಿದೆ. ಈ ದಿನ ಭಕ್ತಿಯಿಂದ ಶ್ರೀ ವಿಷ್ಣುವಿನ ಪೂಜೆ ಮಾಡಿ. ಪೂಜೆಯಲ್ಲಿ ಹಳದಿ ಹೂಗಳು, ಹಣ್ಣುಗಳನ್ನು ಸೇರಿಸಿ. ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿ ಬಳಸಿ, ಶ್ರೀ ವಿಷ್ಣುವಿಗೆ ಪಂಚಾಮೃತ ಅರ್ಪಿಸಿ.
ಶನಿವಾರದಂದು ಬಂದಿದೆ ಏಕಾದಶಿ
ಶನಿವಾರ ಶನಿದೇವನ ಆರಾಧನೆಗೆ ಮೀಸಲಾಗಿರುವ ದಿನ. ಈ ದಿನ ಏಕಾದಶಿ ಬಂದಿದೆ, ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಮಾಡಿ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶನಿಕೃಪೆಗೆ ಪಾತ್ರರಾಗುವಿರಿ.
ಹರಿಹರನ ಅನುಗ್ರಹಕ್ಕೆ
ಶ್ರಾವಣ ಮಾಸ, ಈ ದಿನ ಹರಿಹರನ ಆಶೀರ್ವಾದ ಪಡೆಯಲು ಶ್ರೀ ವಿಷ್ಣು ಹಾಗೂ ಶಿವನನ್ನು ಆರಾಧಿಸಿ. ಶಿವನಿಗೆ ಹಾಲಿನೊಂದಿಗೆ ಕುಂಕುಮವನ್ನು ಅರ್ಪಿಸಿ. ಹರಿಹರನ ಪೂಜೆ ಮಾಡುವುದರಿಂದ ವೈವಾಹಿಕ ಜೀವನ ಚೆನ್ನಾಗಿರಲಿದೆ, ಅಲ್ಲದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರಾಗುವುದು.
ಹನುಮಂತನ ಪೂಜೆ ಮಾಡಿ
ಶನಿವಾರದ ಪರಮ ಏಕಾದಶಿಯಂದು ಹನುಮಂತನ ದೇಗುಲಕ್ಕೂ ಭೇಟಿ ನೀಡಿ, ದೇವರಿಗೆ ಸಿಂಧೂರ ಅರ್ಪಿಸಿ, ಹನುಮಾನ್ ಚಾಲೀಸ ಪಠಿಸಿ.
ಸಂಜೆ ಹೊತ್ತು ತುಳಸಿಗೆ ಪೂಜೆ ಮಾಡಿ
ಈ ದಿನ ಸಂಜೆ ತುಳಸಿ ಗಿಡದ ಕೆಳಗಡೆ ತುಪ್ಪದ ದೀಪ ಹಚ್ಚಿ ತುಳಸಿಯನ್ನು ಪೂಜಿಸಿ.
ದಾನಧರ್ಮದ ಮಹತ್ವ
ಈ ದಿನ ಮಾಡುವ ಧಾನಧರ್ಮದಿಂದ ಪೂಜೆಯ ಫಲ ಹೆಚ್ಚಾಗಲಿದೆ. ನಿಮಗೆ ಕೈಯಲ್ಲಾದಂತೆ ಬಡ ಬಗ್ಗರಿಗೆ ಸಹಾಯ ಮಾಡಿ, ನಿರ್ಗತಿಕರಿಗೆ ಆಹಾರವನ್ನು ನೀಡಿ.



Click it and Unblock the Notifications