Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ: ಹೀಗೆ ಮಾಡಿದರೆ ಪೂಜ್ಯ ಫಲ ಹೆಚ್ಚುತ್ತೆ
ಹಿಂದೂಗಳಿಗೆ ಏಕಾದಶಿಯ ದಿನ ತುಂಬಾ ಮಹತ್ವವಾದ ದಿನ. ಈ ದಿನ ಯಾರು ಶ್ರೀವಿಷ್ಣುವನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರ ಇಷ್ಟಾರ್ಥಗಳು ನೆರವಾಗುವುದು ಎಂದು ಹೇಳಲಾಗುವುದು. ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಆಗಸ್ಟ್ 12ಕ್ಕೆ ಪರಮ ಏಕಾದಶಿಯನ್ನು ಆಚರಿಸಲಾಗುವುದು. ಈ ಪರಮ ಏಕಾದಶಿಯನ್ನು ಆಚರಿಸುವುದರಿಂದ ಪರಮಾತ್ಮನ ಕೃಪೆಗೆ ಪಾತ್ರರಾಗಬಹುದು, ಆದ್ದರಿಂದ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು ಎಂಬುವುದು ಶ್ರೀ ವಿಷ್ಣುವಿನ ಬಲವಾದ ನಂಬಿಕೆ.

ಏಕಾದಶಿ ತಿಥಿ ಪ್ರಾರಂಭ" ಆಗಸ್ಟ್ 11 ಸಂಜೆ 05:06ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಆಗಸ್ಟ್ 12 ಸಂಜೆ 06:01ಕ್ಕೆ
ವ್ರತ ಪಾರಣ ಸಮಯ: ಆಗಸ್ಟ್ 13 ಬೆಳಗ್ಗೆ 05:49ರಿಂದ 08:19ರವರೆಗೆ
ತುಂಬಾ ಶುಭ ಯೋಗದಲ್ಲಿ ಬಂದಿದೆ ಪರಮ ಏಕಾದಶಿ
ಈ ವರ್ಷ ಪರಮ ಏಕಾದಶಿ ತುಂಬಾನೇ ಶುಭಯೋಗವಾದ ಹರ್ಷಣ ಯೋಗದಲ್ಲಿ ಬಂದಿದೆ
ಹರ್ಷಣ ಯೋಗ ಎಂದರೇನು?
ಜ್ಯೋತಿಷ್ಯ ಪ್ರಕಾರ 27 ಯೋಗಗಳಲ್ಲಿ ಹರ್ಷಣ ಯೋಗ ಕೂಡ ಒಂದಾಗಿದೆ. ಸೂರ್ಯ, ಚಂದ್ರ ಅಶ್ವಿನಿ ನಕ್ಷತ್ರದಲ್ಲಿದ್ದಾಗ ಹರ್ಷಣ ಯೋಗ ಉಂಟಾಗುವುದು. ಇದು ತುಂಬಾ ಶುಭ ಯೋಗವಾಗಿದೆ. ಹರ್ಷಣ ಯೋಗದಲ್ಲಿ ಜನಿಸಿದರೆ ತುಂಬಾ ಶುಭ ಎಂದು ಪರಿಗಣಿಸಲಾಗುವುದು.
ಪರಮ ಏಕಾದಶಿಯಂದು ಈ ಕಾರ್ಯಗಳನ್ನು ಮಾಡುವುದರಿಂದ ಪೂಜ್ಯ ಫಲ ಹೆಚ್ಚಾಗುವುದು
ಉಪವಾಸವಿದ್ದು ಪರಮ ಏಕಾದಶಿಯನ್ನು ಆಚರಿಸಬೇಕು
ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ, ಕೀರ್ತಿ ಹೆಚ್ಚಾಗಲಿದೆ. ಈ ದಿನ ಭಕ್ತಿಯಿಂದ ಶ್ರೀ ವಿಷ್ಣುವಿನ ಪೂಜೆ ಮಾಡಿ. ಪೂಜೆಯಲ್ಲಿ ಹಳದಿ ಹೂಗಳು, ಹಣ್ಣುಗಳನ್ನು ಸೇರಿಸಿ. ಪೂಜೆಯಲ್ಲಿ ತುಳಸಿ ಕಡ್ಡಾಯವಾಗಿ ಬಳಸಿ, ಶ್ರೀ ವಿಷ್ಣುವಿಗೆ ಪಂಚಾಮೃತ ಅರ್ಪಿಸಿ.
ಶನಿವಾರದಂದು ಬಂದಿದೆ ಏಕಾದಶಿ
ಶನಿವಾರ ಶನಿದೇವನ ಆರಾಧನೆಗೆ ಮೀಸಲಾಗಿರುವ ದಿನ. ಈ ದಿನ ಏಕಾದಶಿ ಬಂದಿದೆ, ಈ ದಿನ ಶ್ರೀ ವಿಷ್ಣುವಿಗೆ ಪೂಜೆ ಮಾಡಿ ನಂತರ ಆಲದ ಮರದ ಕೆಳಗಡೆ ಎಳ್ಳೆಣ್ಣೆ ದೀಪ ಹಚ್ಚಿದರೆ ಶನಿಕೃಪೆಗೆ ಪಾತ್ರರಾಗುವಿರಿ.
ಹರಿಹರನ ಅನುಗ್ರಹಕ್ಕೆ
ಶ್ರಾವಣ ಮಾಸ, ಈ ದಿನ ಹರಿಹರನ ಆಶೀರ್ವಾದ ಪಡೆಯಲು ಶ್ರೀ ವಿಷ್ಣು ಹಾಗೂ ಶಿವನನ್ನು ಆರಾಧಿಸಿ. ಶಿವನಿಗೆ ಹಾಲಿನೊಂದಿಗೆ ಕುಂಕುಮವನ್ನು ಅರ್ಪಿಸಿ. ಹರಿಹರನ ಪೂಜೆ ಮಾಡುವುದರಿಂದ ವೈವಾಹಿಕ ಜೀವನ ಚೆನ್ನಾಗಿರಲಿದೆ, ಅಲ್ಲದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ದೂರಾಗುವುದು.
ಹನುಮಂತನ ಪೂಜೆ ಮಾಡಿ
ಶನಿವಾರದ ಪರಮ ಏಕಾದಶಿಯಂದು ಹನುಮಂತನ ದೇಗುಲಕ್ಕೂ ಭೇಟಿ ನೀಡಿ, ದೇವರಿಗೆ ಸಿಂಧೂರ ಅರ್ಪಿಸಿ, ಹನುಮಾನ್ ಚಾಲೀಸ ಪಠಿಸಿ.
ಸಂಜೆ ಹೊತ್ತು ತುಳಸಿಗೆ ಪೂಜೆ ಮಾಡಿ
ಈ ದಿನ ಸಂಜೆ ತುಳಸಿ ಗಿಡದ ಕೆಳಗಡೆ ತುಪ್ಪದ ದೀಪ ಹಚ್ಚಿ ತುಳಸಿಯನ್ನು ಪೂಜಿಸಿ.
ದಾನಧರ್ಮದ ಮಹತ್ವ
ಈ ದಿನ ಮಾಡುವ ಧಾನಧರ್ಮದಿಂದ ಪೂಜೆಯ ಫಲ ಹೆಚ್ಚಾಗಲಿದೆ. ನಿಮಗೆ ಕೈಯಲ್ಲಾದಂತೆ ಬಡ ಬಗ್ಗರಿಗೆ ಸಹಾಯ ಮಾಡಿ, ನಿರ್ಗತಿಕರಿಗೆ ಆಹಾರವನ್ನು ನೀಡಿ.



Click it and Unblock the Notifications